<p><strong>ಬೆಂಗಳೂರು:</strong> ಶಿಡ್ಲಘಟ್ಟ ತಾಲ್ಲೂಕು ಬೆಳ್ಳೂಟಿ ಗ್ರಾಮದ ಮನೆಗಳ ಪಟ್ಟಿಯನ್ನು ಅರ್ಜಿದಾರರಿಗೆ ಕೂಡಲೇ ನೀಡುವಂತೆ ರಾಜ್ಯ ಮಾಹಿತಿ ಆಯೋಗವು ಆನೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಂ.ಸೋಮಶೇಖರಯ್ಯ ಅವರಿಗೆ ಆದೇಶಿಸಿದೆ.<br /> <br /> ಎಂ.ಅಮರನಾರಾಯಣಸ್ವಾಮಿ ಎಂಬುವರು 2008ರ ನವೆಂಬರ್ 7ರಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿ 1976-2000 ವರೆಗಿನ ಮನೆಗಳ ಪಟ್ಟಿಯನ್ನು ದಾಖಲೆ ಸಮೇತ ನೀಡುವಂತೆ ಕೇಳಿದ್ದರು. ಆದರೆ ಕಾರ್ಯದರ್ಶಿ ಸೂಕ್ತ ಮಾಹಿತಿಯನ್ನು ನೀಡದ ಕಾರಣ ಅರ್ಜಿದಾರರು ಕಳೆದ ಮೇ 14ರಂದು ಆಯೋಗದ ಮೊರೆ ಹೋಗಿದ್ದರು.<br /> <br /> ಈ ಬಗ್ಗೆ ವಿಚಾರಣೆ ನಡೆಸಿದ ಮಾಹಿತಿ ಆಯೋಗದ ಆಯುಕ್ತ ಡಾ.ಎಚ್.ಎನ್.ಕೃಷ್ಣ ಅವರು ಅರ್ಜಿದಾರರಿಗೆ 30 ದಿನಗಳಲ್ಲಿ ಮಾಹಿತಿ ನೀಡುವಂತೆ ಕಳೆದ ನವೆಂಬರ್ 9ರಂದು ಆದೇಶಿಸಿದ್ದರು. ಇಷ್ಟಾದರೂ ಮಾಹಿತಿ ನೀಡದ ಕಾರಣ ಅರ್ಜಿದಾರರು ಆಕ್ಷೇಪಣೆ ವ್ಯಕ್ತಪಡಿಸಿ ಈ ವರ್ಷದ ಜ. 12ರಂದು ಮತ್ತೆ ಆಯೋಗಕ್ಕೆ ದೂರು ಸಲ್ಲಿಸಿದ್ದರು.<br /> <br /> ಇದನ್ನು ಸ್ಪೀಕರಿಸಿದ ಆಯೋಗವು ಅರ್ಜಿದಾರರಿಗೆ ದಾಖಲಾತಿಗಳನ್ನು ಒದಗಿಸಿ, ಆಯೋಗ ನೀಡಿದ ಆದೇಶವನ್ನು ಪಾಲಿಸಿದ ಬಗ್ಗೆ ಕೂಡಲೇ ವರದಿ ನೀಡುವಂತೆ ಜ.21ರಂದು ಮಾಹಿತಿ ಆಯೋಗದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಶಿಡ್ಲಘಟ್ಟ ತಾಲ್ಲೂಕು ಬೆಳ್ಳೂಟಿ ಗ್ರಾಮದ ಮನೆಗಳ ಪಟ್ಟಿಯನ್ನು ಅರ್ಜಿದಾರರಿಗೆ ಕೂಡಲೇ ನೀಡುವಂತೆ ರಾಜ್ಯ ಮಾಹಿತಿ ಆಯೋಗವು ಆನೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಂ.ಸೋಮಶೇಖರಯ್ಯ ಅವರಿಗೆ ಆದೇಶಿಸಿದೆ.<br /> <br /> ಎಂ.ಅಮರನಾರಾಯಣಸ್ವಾಮಿ ಎಂಬುವರು 2008ರ ನವೆಂಬರ್ 7ರಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿ 1976-2000 ವರೆಗಿನ ಮನೆಗಳ ಪಟ್ಟಿಯನ್ನು ದಾಖಲೆ ಸಮೇತ ನೀಡುವಂತೆ ಕೇಳಿದ್ದರು. ಆದರೆ ಕಾರ್ಯದರ್ಶಿ ಸೂಕ್ತ ಮಾಹಿತಿಯನ್ನು ನೀಡದ ಕಾರಣ ಅರ್ಜಿದಾರರು ಕಳೆದ ಮೇ 14ರಂದು ಆಯೋಗದ ಮೊರೆ ಹೋಗಿದ್ದರು.<br /> <br /> ಈ ಬಗ್ಗೆ ವಿಚಾರಣೆ ನಡೆಸಿದ ಮಾಹಿತಿ ಆಯೋಗದ ಆಯುಕ್ತ ಡಾ.ಎಚ್.ಎನ್.ಕೃಷ್ಣ ಅವರು ಅರ್ಜಿದಾರರಿಗೆ 30 ದಿನಗಳಲ್ಲಿ ಮಾಹಿತಿ ನೀಡುವಂತೆ ಕಳೆದ ನವೆಂಬರ್ 9ರಂದು ಆದೇಶಿಸಿದ್ದರು. ಇಷ್ಟಾದರೂ ಮಾಹಿತಿ ನೀಡದ ಕಾರಣ ಅರ್ಜಿದಾರರು ಆಕ್ಷೇಪಣೆ ವ್ಯಕ್ತಪಡಿಸಿ ಈ ವರ್ಷದ ಜ. 12ರಂದು ಮತ್ತೆ ಆಯೋಗಕ್ಕೆ ದೂರು ಸಲ್ಲಿಸಿದ್ದರು.<br /> <br /> ಇದನ್ನು ಸ್ಪೀಕರಿಸಿದ ಆಯೋಗವು ಅರ್ಜಿದಾರರಿಗೆ ದಾಖಲಾತಿಗಳನ್ನು ಒದಗಿಸಿ, ಆಯೋಗ ನೀಡಿದ ಆದೇಶವನ್ನು ಪಾಲಿಸಿದ ಬಗ್ಗೆ ಕೂಡಲೇ ವರದಿ ನೀಡುವಂತೆ ಜ.21ರಂದು ಮಾಹಿತಿ ಆಯೋಗದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>