<p>ಹುಬ್ಬಳ್ಳಿ: ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ ಎಂದು ಗಾಂಧೀಜಿ ಹೇಳಿದ್ದು, ಅವರ ಕನಸಿನಂತೆ ಗ್ರಾಮೀಣರ ಸಬಲೀಕರಣಕ್ಕೆ ಒತ್ತು ನೀಡುವುದು ಅಗತ್ಯವಾಗಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ ಹಾಗೂ ಜಿಲ್ಲಾ ವಿಜ್ಞಾನ ಸಮಿತಿ ಕಾರ್ಯದರ್ಶಿ ಸಂಜೀವಕುಮಾರ ಭೂಶೆಟ್ಟಿ ತಿಳಿಸಿದರು.<br /> <br /> ಕುಂದಗೋಳ ತಾಲ್ಲೂಕು ಯರೇಬೂದಿಹಾಳ್ನ ಸರ್ಕಾರಿ ಪ್ರೌಢಶಾಲೆಯಲ್ಲಿ `ಗ್ರಾಮ ಸ್ವಚ್ಛತಾ ಮಾಸಾಚರಣೆ~ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಸ್ವಾತಂತ್ರ್ಯ ಬಂದು 65 ವರ್ಷ ಕಳೆದರೂ ಗ್ರಾಮಗಳೇ ಅಭಿವೃದ್ಧಿಯತ್ತ ಮುಖ ಮಾಡಿಲ್ಲ. ಇಂದಿಗೂ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಇದೆ. ಇದಕ್ಕೆ ಗ್ರಾಮೀಣರಲ್ಲಿ ಆರೋಗ್ಯ ಜಾಗೃತಿ ಇಲ್ಲದಿರುವುದೇ ಮುಖ್ಯ ಕಾರಣ ಎಂದು ಹೇಳಿದರು.<br /> <br /> ನೋಡಲ್ ಅಧಿಕಾರಿ ಬಿ.ಸಿ. ಏರಲದಿನ್ನಿ ಮಾತನಾಡಿ, ಮಲ- ಮೂತ್ರ ವಿಸರ್ಜನೆಗಳಿಂದ ಗ್ರಾಮದಲ್ಲಿ ಕಾಲರಾದಂತಹ ಬೇನೆಗಳು ಲಗ್ಗೆ ಇಡುತ್ತವೆ ಹಾಗಾಗಿ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲು ಸಲಹೆ ನೀಡಿದರು.<br /> <br /> ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಜಿ.ಬೀಡಿಮಠ, ಗ್ರಾಮ ಪಂಚಾಯಿತಿ ಸದಸ್ಯ ಮಹದೇವಪ್ಪ ಪೂಜಾರ, ಸುಮಿತ್ರಾ ಕಂಬಿ, ಸ್ವಚ್ಛತಾ ಕಾರ್ಯ ತಂಡದ ಎಸ್.ಎಸ್.ನಾಗಶೆಟ್ಟಿ, ರೇಷ್ಮಾ, ಕಾರ್ಯದರ್ಶಿ ಆರ್.ಎಸ್. ಬುಕನಕಟ್ಟಿ ಪಾಲ್ಗೊಂಡಿದ್ದರು.ಎಸ್. ಎ.ಕಮತಿ ನಿರೂಪಿಸಿದರು. ಎಚ್. ಎಂ.ಪಾಟೀಲ ಸ್ವಾಗತಿಸಿದರು. ವಿ.ಆರ್. ಭಟ್ಟ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ ಎಂದು ಗಾಂಧೀಜಿ ಹೇಳಿದ್ದು, ಅವರ ಕನಸಿನಂತೆ ಗ್ರಾಮೀಣರ ಸಬಲೀಕರಣಕ್ಕೆ ಒತ್ತು ನೀಡುವುದು ಅಗತ್ಯವಾಗಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ ಹಾಗೂ ಜಿಲ್ಲಾ ವಿಜ್ಞಾನ ಸಮಿತಿ ಕಾರ್ಯದರ್ಶಿ ಸಂಜೀವಕುಮಾರ ಭೂಶೆಟ್ಟಿ ತಿಳಿಸಿದರು.<br /> <br /> ಕುಂದಗೋಳ ತಾಲ್ಲೂಕು ಯರೇಬೂದಿಹಾಳ್ನ ಸರ್ಕಾರಿ ಪ್ರೌಢಶಾಲೆಯಲ್ಲಿ `ಗ್ರಾಮ ಸ್ವಚ್ಛತಾ ಮಾಸಾಚರಣೆ~ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಸ್ವಾತಂತ್ರ್ಯ ಬಂದು 65 ವರ್ಷ ಕಳೆದರೂ ಗ್ರಾಮಗಳೇ ಅಭಿವೃದ್ಧಿಯತ್ತ ಮುಖ ಮಾಡಿಲ್ಲ. ಇಂದಿಗೂ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಇದೆ. ಇದಕ್ಕೆ ಗ್ರಾಮೀಣರಲ್ಲಿ ಆರೋಗ್ಯ ಜಾಗೃತಿ ಇಲ್ಲದಿರುವುದೇ ಮುಖ್ಯ ಕಾರಣ ಎಂದು ಹೇಳಿದರು.<br /> <br /> ನೋಡಲ್ ಅಧಿಕಾರಿ ಬಿ.ಸಿ. ಏರಲದಿನ್ನಿ ಮಾತನಾಡಿ, ಮಲ- ಮೂತ್ರ ವಿಸರ್ಜನೆಗಳಿಂದ ಗ್ರಾಮದಲ್ಲಿ ಕಾಲರಾದಂತಹ ಬೇನೆಗಳು ಲಗ್ಗೆ ಇಡುತ್ತವೆ ಹಾಗಾಗಿ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲು ಸಲಹೆ ನೀಡಿದರು.<br /> <br /> ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಜಿ.ಬೀಡಿಮಠ, ಗ್ರಾಮ ಪಂಚಾಯಿತಿ ಸದಸ್ಯ ಮಹದೇವಪ್ಪ ಪೂಜಾರ, ಸುಮಿತ್ರಾ ಕಂಬಿ, ಸ್ವಚ್ಛತಾ ಕಾರ್ಯ ತಂಡದ ಎಸ್.ಎಸ್.ನಾಗಶೆಟ್ಟಿ, ರೇಷ್ಮಾ, ಕಾರ್ಯದರ್ಶಿ ಆರ್.ಎಸ್. ಬುಕನಕಟ್ಟಿ ಪಾಲ್ಗೊಂಡಿದ್ದರು.ಎಸ್. ಎ.ಕಮತಿ ನಿರೂಪಿಸಿದರು. ಎಚ್. ಎಂ.ಪಾಟೀಲ ಸ್ವಾಗತಿಸಿದರು. ವಿ.ಆರ್. ಭಟ್ಟ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>