<p>ಕೂಡ್ಲಿಗಿ: ನಾವು ಖರೀದಿಸುವ ಪ್ರತಿಯೊಂದು ದುಬಾರಿ ವಸ್ತುಗಳಿಗೂ ವಿಮೆ ಮಾಡಿಸುತ್ತೇವೆ, ಆದರೆ ಅತಿ ಮುಖ್ಯವಾದ ಜೀವಕ್ಕೆ ಮಾತ್ರ ವಿಮೆ ಮಾಡಿಸುವುದನ್ನು ಮರೆಯುತ್ತೇವೆ ಎಂದು ಧಾರವಾಡ ಗ್ರಾಮೀಣ ಅಂಚೆ ಜೀವ ವಿಮೆಯ ಉಪನಿರ್ದೇಶಕ ನಾನಜಿಗಿ ತಿಳಿಸಿದರು.<br /> <br /> ಅವರು ಸೋಮವಾರ ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಗ್ರಾಮೀಣ ಅಂಚೆ ಜೀವ ವಿಮಾ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.<br /> <br /> ಜನರಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮೀಣ ಭಾಗದಲ್ಲೂ ಜೀವ ವಿಮೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಅವರು ತಿಳಿಸಿದರು.<br /> <br /> ಅಂಚೆ ಪಾಲಕರು ಗ್ರಾಮೀಣ ಜನತೆಗೆ ಈ ಕುರಿತು ತಿಳಿವಳಿಕೆ ಮೂಡಿಸುವಲ್ಲಿ ಶ್ರಮಿಸಬೇಕೆಂದು ಅವರು ಸಲಹೆ ನೀಡಿದರು. ಭಾರತದ ಜನಸಂಖ್ಯೆಯಲ್ಲಿ ಪ್ರತಿಶತ 24 ಜನ ಮಾತ್ರ ಈ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆಂದು ಅವರು ಹೇಳಿದರು.<br /> <br /> ಪ್ರತಿಯೊಬ್ಬ ಪ್ರಜೆಯೂ ಜೀವ ವಿಮೆಯ ಸೌಲಭ್ಯವನ್ನು ಪಡೆಯಬೇಕು ಎಂಬುದು ಅಂಚೆ ಇಲಾಖೆಯ ಉದ್ದೇಶವಾಗಿದೆ ಎಂದರು. <br /> <br /> ಬಳ್ಳಾರಿ ಜಿಲ್ಲಾ ಅಂಚೆ ಅಧೀಕ್ಷಕ ಶ್ರೀನಿವಾಸುಲು, ಸರ್ಕಾರ ಕೊಡುವ ಸೌಲಭ್ಯಗಳನ್ನು ತೆಗೆದುಕೊಳ್ಳಲು ಬಡವರು ಮತ್ತು ಕಡುಬಡವರು ಉಳಿತಾಯ ಖಾತೆ ತೆರೆಯುವಂತೆ ಮನವೊಲಿಸಬೇಕಾಗಿದೆ ಎಂದರು. <br /> <br /> ಬಿಪಿಎಲ್ ಪಡಿತರ ಚೀಟಿ ಇರುವವರಿಗೆ ಈ ಸೌಲಭ್ಯವನ್ನು ಕುರಿತು ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು. <br /> <br /> ವೇದಿಕೆಯಲ್ಲಿ ಅಂಚೆ ಜೀವ ವಿಮೆ ಅಧಿಕಾರಿ ರೆಡ್ಡಿ, ಅಂಚೆ ನಿರೀಕ್ಷಕ ಕೆಂಚಪ್ಪ, ಅಂಚೆ ಪಾಲಕ ಗೋವಿಂದ ರಾಜು, ಎಸ್.ಎ.ವೀರಣ್ಣ ಹಾಜರಿದ್ದರು.<br /> <br /> ಅಂಚೆ ಜೀವ ವಿಮೆಯ ಅಭಿವೃದ್ಧಿ ಅಧಿಕಾರಿ ಮಂಜುನಾಥ ಪ್ರಾಸ್ತಾವಿಕ ವಾಗಿ ಮಾತನಾಡಿದರು.<br /> ಅಂಚೆ ಅಧಿಕಾರಿ ಅಂಚೆ ಕೊಟ್ರೇಶ್ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮ ದಲ್ಲಿ ತಾಲ್ಲೂಕಿನ ಎಲ್ಲ ಗ್ರಾಮೀಣ ಅಂಚೆ ಪಾಲಕರು ಉಪಸ್ಥಿತರ್ದ್ದಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೂಡ್ಲಿಗಿ: ನಾವು ಖರೀದಿಸುವ ಪ್ರತಿಯೊಂದು ದುಬಾರಿ ವಸ್ತುಗಳಿಗೂ ವಿಮೆ ಮಾಡಿಸುತ್ತೇವೆ, ಆದರೆ ಅತಿ ಮುಖ್ಯವಾದ ಜೀವಕ್ಕೆ ಮಾತ್ರ ವಿಮೆ ಮಾಡಿಸುವುದನ್ನು ಮರೆಯುತ್ತೇವೆ ಎಂದು ಧಾರವಾಡ ಗ್ರಾಮೀಣ ಅಂಚೆ ಜೀವ ವಿಮೆಯ ಉಪನಿರ್ದೇಶಕ ನಾನಜಿಗಿ ತಿಳಿಸಿದರು.<br /> <br /> ಅವರು ಸೋಮವಾರ ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಗ್ರಾಮೀಣ ಅಂಚೆ ಜೀವ ವಿಮಾ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.<br /> <br /> ಜನರಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮೀಣ ಭಾಗದಲ್ಲೂ ಜೀವ ವಿಮೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಅವರು ತಿಳಿಸಿದರು.<br /> <br /> ಅಂಚೆ ಪಾಲಕರು ಗ್ರಾಮೀಣ ಜನತೆಗೆ ಈ ಕುರಿತು ತಿಳಿವಳಿಕೆ ಮೂಡಿಸುವಲ್ಲಿ ಶ್ರಮಿಸಬೇಕೆಂದು ಅವರು ಸಲಹೆ ನೀಡಿದರು. ಭಾರತದ ಜನಸಂಖ್ಯೆಯಲ್ಲಿ ಪ್ರತಿಶತ 24 ಜನ ಮಾತ್ರ ಈ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆಂದು ಅವರು ಹೇಳಿದರು.<br /> <br /> ಪ್ರತಿಯೊಬ್ಬ ಪ್ರಜೆಯೂ ಜೀವ ವಿಮೆಯ ಸೌಲಭ್ಯವನ್ನು ಪಡೆಯಬೇಕು ಎಂಬುದು ಅಂಚೆ ಇಲಾಖೆಯ ಉದ್ದೇಶವಾಗಿದೆ ಎಂದರು. <br /> <br /> ಬಳ್ಳಾರಿ ಜಿಲ್ಲಾ ಅಂಚೆ ಅಧೀಕ್ಷಕ ಶ್ರೀನಿವಾಸುಲು, ಸರ್ಕಾರ ಕೊಡುವ ಸೌಲಭ್ಯಗಳನ್ನು ತೆಗೆದುಕೊಳ್ಳಲು ಬಡವರು ಮತ್ತು ಕಡುಬಡವರು ಉಳಿತಾಯ ಖಾತೆ ತೆರೆಯುವಂತೆ ಮನವೊಲಿಸಬೇಕಾಗಿದೆ ಎಂದರು. <br /> <br /> ಬಿಪಿಎಲ್ ಪಡಿತರ ಚೀಟಿ ಇರುವವರಿಗೆ ಈ ಸೌಲಭ್ಯವನ್ನು ಕುರಿತು ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು. <br /> <br /> ವೇದಿಕೆಯಲ್ಲಿ ಅಂಚೆ ಜೀವ ವಿಮೆ ಅಧಿಕಾರಿ ರೆಡ್ಡಿ, ಅಂಚೆ ನಿರೀಕ್ಷಕ ಕೆಂಚಪ್ಪ, ಅಂಚೆ ಪಾಲಕ ಗೋವಿಂದ ರಾಜು, ಎಸ್.ಎ.ವೀರಣ್ಣ ಹಾಜರಿದ್ದರು.<br /> <br /> ಅಂಚೆ ಜೀವ ವಿಮೆಯ ಅಭಿವೃದ್ಧಿ ಅಧಿಕಾರಿ ಮಂಜುನಾಥ ಪ್ರಾಸ್ತಾವಿಕ ವಾಗಿ ಮಾತನಾಡಿದರು.<br /> ಅಂಚೆ ಅಧಿಕಾರಿ ಅಂಚೆ ಕೊಟ್ರೇಶ್ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮ ದಲ್ಲಿ ತಾಲ್ಲೂಕಿನ ಎಲ್ಲ ಗ್ರಾಮೀಣ ಅಂಚೆ ಪಾಲಕರು ಉಪಸ್ಥಿತರ್ದ್ದಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>