<p><strong>ರಿಪ್ಪನ್ಪೇಟೆ: </strong>ಬೇಸಿಗೆ ಬಂತೆಂದರೆ ಕುಡಿಯುವ ನೀರಿಗೆ ತತ್ವಾರ. ಎಲ್ಲೆಡೆ ಬತ್ತಿದ ಬಾವಿಯ ದರ್ಶನ ಇನ್ನೊಂದೆಡೆ ಹನಿ ನೀರಿಗೂ ಪರದಾಟ. ಆದರೆ, ವಿಪರ್ಯಾಸ ಎಂದರೆ ಇರುವ ನೀರನ್ನು ಸಮರ್ಪಕ ಆಗಿ ಬಳಕೆ ಮಾಡಬೇಕಾದ ಗ್ರಾಮಾಡಳಿತದ್ದು ಮಾತ್ರ ದಿವ್ಯ ನಿರ್ಲಕ್ಷ್ಯ. <br /> <br /> ಇಲ್ಲಿನ ಶಬರೀಶ ನಗರದಲ್ಲಿ ಕಳೆದ 6 ತಿಂಗಳಿಂದ ನೀರು ವ್ಯರ್ಥವಾಗಿ ಪೋಲಾಗುತ್ತಿದ್ದರೂ, ದುರಸ್ತಿ ಕಾರ್ಯ ಕೈಗೊಂಡಿಲ್ಲ.ಅಲ್ಲದೇ, ಸ್ಥಳೀಯವಾಗಿ ಗ್ರಾಮ ಪಂಚಾಯ್ತಿ ಸದಸ್ಯರು ಇಲ್ಲಿದ್ದರೂ ಈ ಬಗ್ಗೆ ಗಮನಹರಿಸದೇ ಇರುವುದು ಇವರ ಕಾರ್ಯ ವೈಖರಿ ಬಗ್ಗೆ ಜನತೆ ಮಾತನಾಡಿ ಕೊಳ್ಳುವಂತಾಗಿದೆ.<br /> <br /> ಈ ಸೋರಿಕೆಯ ನೀರಿನ ಗುಂಡಿಯಲ್ಲಿ ಚಪ್ಪಲಿ, ಕಸಕಡ್ಡಿ ಸೇರಿದಂತೆ ಕಲ್ಮಶಗಳಿಂದ ತುಂಬಿದ್ದು, ನಂತರ ಇದೇ ಕಲುಷಿತ ನೀರು ನಲ್ಲಿ ಮೂಲಕ ಸ್ಥಳೀಯ ನಿವಾಸಿಗಳಿಗೆ ನಿತ್ಯವೂ ಪೊರೈಕೆಯಾಗುತ್ತಿದೆ. <br /> <br /> ಇದೆ ನೀರನ್ನು ಸಾರ್ವಜನಿಕರು ಕುಡಿಯಲು ಹಾಗೂ ಇತರೆ ಬಳಕೆಗೆ ಬಳಸುತ್ತಿದ್ದು ತಕ್ಷಣವೇ ಈ ಬಗ್ಗೆ ಗ್ರಾಮಾಡಳಿತ ದುರಸ್ತಿ ಕಾರ್ಯ ನಿರ್ವಹಿಸಿ ಯೋಗ್ಯವಾದ ನೀರು ಪೊರೈಕೆಗೆ ಕ್ರಮ ಕೈಗೊಂಡು ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಿಪ್ಪನ್ಪೇಟೆ: </strong>ಬೇಸಿಗೆ ಬಂತೆಂದರೆ ಕುಡಿಯುವ ನೀರಿಗೆ ತತ್ವಾರ. ಎಲ್ಲೆಡೆ ಬತ್ತಿದ ಬಾವಿಯ ದರ್ಶನ ಇನ್ನೊಂದೆಡೆ ಹನಿ ನೀರಿಗೂ ಪರದಾಟ. ಆದರೆ, ವಿಪರ್ಯಾಸ ಎಂದರೆ ಇರುವ ನೀರನ್ನು ಸಮರ್ಪಕ ಆಗಿ ಬಳಕೆ ಮಾಡಬೇಕಾದ ಗ್ರಾಮಾಡಳಿತದ್ದು ಮಾತ್ರ ದಿವ್ಯ ನಿರ್ಲಕ್ಷ್ಯ. <br /> <br /> ಇಲ್ಲಿನ ಶಬರೀಶ ನಗರದಲ್ಲಿ ಕಳೆದ 6 ತಿಂಗಳಿಂದ ನೀರು ವ್ಯರ್ಥವಾಗಿ ಪೋಲಾಗುತ್ತಿದ್ದರೂ, ದುರಸ್ತಿ ಕಾರ್ಯ ಕೈಗೊಂಡಿಲ್ಲ.ಅಲ್ಲದೇ, ಸ್ಥಳೀಯವಾಗಿ ಗ್ರಾಮ ಪಂಚಾಯ್ತಿ ಸದಸ್ಯರು ಇಲ್ಲಿದ್ದರೂ ಈ ಬಗ್ಗೆ ಗಮನಹರಿಸದೇ ಇರುವುದು ಇವರ ಕಾರ್ಯ ವೈಖರಿ ಬಗ್ಗೆ ಜನತೆ ಮಾತನಾಡಿ ಕೊಳ್ಳುವಂತಾಗಿದೆ.<br /> <br /> ಈ ಸೋರಿಕೆಯ ನೀರಿನ ಗುಂಡಿಯಲ್ಲಿ ಚಪ್ಪಲಿ, ಕಸಕಡ್ಡಿ ಸೇರಿದಂತೆ ಕಲ್ಮಶಗಳಿಂದ ತುಂಬಿದ್ದು, ನಂತರ ಇದೇ ಕಲುಷಿತ ನೀರು ನಲ್ಲಿ ಮೂಲಕ ಸ್ಥಳೀಯ ನಿವಾಸಿಗಳಿಗೆ ನಿತ್ಯವೂ ಪೊರೈಕೆಯಾಗುತ್ತಿದೆ. <br /> <br /> ಇದೆ ನೀರನ್ನು ಸಾರ್ವಜನಿಕರು ಕುಡಿಯಲು ಹಾಗೂ ಇತರೆ ಬಳಕೆಗೆ ಬಳಸುತ್ತಿದ್ದು ತಕ್ಷಣವೇ ಈ ಬಗ್ಗೆ ಗ್ರಾಮಾಡಳಿತ ದುರಸ್ತಿ ಕಾರ್ಯ ನಿರ್ವಹಿಸಿ ಯೋಗ್ಯವಾದ ನೀರು ಪೊರೈಕೆಗೆ ಕ್ರಮ ಕೈಗೊಂಡು ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>