<p>ಚದುರಂಗ ಕಾವ್ಯನಾಮದಿಂದ ಪ್ರಸಿದ್ಧರಾದ ಸುಬ್ರಹ್ಮಣ್ಯರಾಜೇ ಅರಸ್ ಅವರು ಕಥೆ, ಕಾದಂಬರಿ, ಸಿನಿಮಾದ ಮೂಲಕ ಅನನ್ಯ ಸೃಜನಶೀಲ ಕವಿಯಾಗಿ ಹೆಸರಾದವರು. <br /> <br /> ಅವರ `ಸರ್ವಮಂಗಳ~, `ಉಯ್ಯೊಲೆ~, `ವೈಶಾಖ~, `ಹೆಜ್ಜಾಲ~ ಕಾದಂಬರಿಗಳು ಓದುಗರಲ್ಲಿ ಸಂಚಲನವನ್ನುಂಟು ಮಾಡಿದವು. `ಸರ್ವಮಂಗಳ~ ಮತ್ತು `ಉಯ್ಯೊಲೆ~ ಚಲನಚಿತ್ರಗಳಾಗಿಯೂ ಜನಮನ ಗೆದ್ದಿವೆ.<br /> <br /> ಚದುರಂಗರ ಕುರಿತು ಕಥೆಗಾರ ಕಾ.ತ. ಚಿಕ್ಕಣ್ಣ ರಚಿಸಿರುವ `ಚದುರಂಗ~ ನಾಟಕವನ್ನು `ಕರ್ನಾಟಕ ಕಲಾ ಸಂಭ್ರಮ~ ತಂಡ ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿತು.<br /> <br /> ಒಬ್ಬ ಕವಿಯನ್ನು ಕಂಡರೆ ಮತ್ತೊಬ್ಬ ಕವಿ ಮುನಿಯುವ, ಸಾಹಿತಿಗಳ ಗುಂಪುಗಾರಿಕೆಯ ನಡುವೆ ಒಬ್ಬ ಕವಿ ಮತ್ತೊಬ್ಬ ಕವಿಯನ್ನು ನಾಟಕದ ಮೂಲಕ ಅನುಸಂಧಾನ ಮಾಡುವುದು ನಿಜಕ್ಕೂ ಸಂತೋಷದ ಸಂಗತಿ. ಕನ್ನಡದಲ್ಲಿ ಪ್ರೊ. ಕಿ.ರಂ. ನಾಗರಾಜ ಅವರು ಸಂಸದ ಮೂಲಕ ಈ ರೀತಿಯ ಪ್ರಯೋಗವನ್ನು ಮಾಡಿದ್ದಾರೆ.<br /> <br /> ಇದೇ ರೀತಿಯಲ್ಲಿ ನರಸಿಂಹನ್ ಅವರು `ಟಿಪಿಕಲ್ ಕೈಲಾಸಂ~, ಸಿ.ಆರ್. ಸಿಂಹ ಅವರು `ರಸಋಷಿ ಕುವೆಂಪು~, ರಾಜೇಂದ್ರ ಕಾರಂತರವರು ಕೆ.ಎಸ್. ನರಸಿಂಹ ಸ್ವಾಮಿ ಅವರನ್ನು ಕುರಿತು `ಮೈಸೂರು ಮಲ್ಲಿಗೆ~ ನಾಟಕಗಳನ್ನು ಮಾಡಿದ್ದಾರೆ. ಇದೇ ಸಾಲಿನಲ್ಲಿ ಕಾ.ತ ಚಿಕ್ಕಣ್ಣ ಅವರ `ಚದುರಂಗ~ ನಾಟಕವು ಇತ್ತೀಚೆಗೆ ಸೇರ್ಪಡೆಗೊಂಡಿದೆ. <br /> <br /> ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಸಾಂಬಶಿವ, ವರದಪ್ಪ ಹಾಗೂ ಮಾದೇಗೌಡರೊಂದಿಗೆ ಸಂಶೋಧನ ವಿದ್ಯಾರ್ಥಿ ವೆಂಕಟಸ್ವಾಮಿ ತನ್ನ ಸಂಶೋಧನಾ ವಿಷಯವನ್ನು ಚರ್ಚಿಸುವುದರೊಂದಿಗೆ ಪ್ರಾರಂಭವಾಗುವ ನಾಟಕವು ಇತ್ತೀಚಿನ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಹಾಗೂ ಸಂಶೋಧನೆಯನ್ನು ಕುರಿತು ವಿಡಂಬಿಸುತ್ತಲೇ ಸಂಶೋಧನಾರ್ಥಿಗಳು ಎದುರಿಸುತ್ತಿರುವ ಸವಾಲುಗಳನ್ನು ತಿಳಿಸುತ್ತದೆ.<br /> <br /> ವೆಂಕಟಸ್ವಾಮಿ ತನ್ನ ಸಂಶೋಧನೆಯ ವಸ್ತುವಾದ ಚದುರಂಗರ ಬದುಕು-ಬರಹವನ್ನು ಕುರಿತು ಕ್ಷೇತ್ರಕಾರ್ಯಕ್ಕೆಂದು ಕಲ್ಲಹಳ್ಳಿಗೆ ಹೋದಾಗ ಚದುರಂಗರ ಕಥೆ-ಕಾದಂಬರಿಗಳ ಪಾತ್ರಧಾರಿಗಳಾದ ನಾಗಜ್ಜಿ, ಲಕ್ಕ, ಹಕಲಯ್ಯ, ಬೀರಲಿಂಗ, ರುಕ್ಮಿಣಿ, ನಟರಾಜ, ಸರ್ವಮಂಗಳ ಮೊದಲಾದವರನ್ನು ಮುಖಾಮುಖಿಯಾಗುತ್ತಾನೆ.<br /> <br /> ವೆಂಕಟಸ್ವಾಮಿಯ ಪುಸ್ತಕದ ತಿಳಿವಳಿಕೆಯ ಎದುರಿಗೆ ಲಕ್ಕನ ಅನುಭವದ ಜ್ಞಾನ ಮಾತನಾಡುತ್ತಾ ಹೋಗುತ್ತದೆ. ಲಕ್ಕನ ಅನುಭಾವಿಕ ಮಾತುಗಳಿಗೆ ವೆಂಕಟಸ್ವಾಮಿ ವಿದ್ವತ್ಲೋಕದ ಪರಿಭಾಷೆಗಳ ಉಪವ್ಯಾಖಾನ ನಡೆಯುತ್ತದೆ. <br /> <br /> ಯಾವ ಭಾಷಿಕ ಜ್ಞಾನವರ್ಗದ ಉಪಾದಿಗಳ ಹಂಗೂ ಇಲ್ಲದಂತೆ ಲಕ್ಕನ ಅನುಭವದ ಜ್ಞಾನ ಸ್ಥಳೀಯ ಲೋಕಜ್ಞಾನವಾಗಿ ಅರಳುತ್ತದೆ. ಹೀಗೆ ವೆಂಕಟಸ್ವಾಮಿಯು ಚಂದುರಂಗರ ಕಥೆ, ಕಾದಂಬರಿಗಳ ಪಾತ್ರಗಳೊಂದಿಗೆ ಮುಖಾಮುಖಿಯಾಗುತ್ತಲೇ ಚದುರಂಗರ ಬದುಕು ಬರಹವನ್ನು ಅರಿಯಲು ಪ್ರಯತ್ನಿಸುತ್ತಾನೆ.<br /> <br /> ಚದುರಂಗರು ಕಲ್ಲಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಮುಂದೆ ಮೈಸೂರಿನಲ್ಲಿ ನೆಲೆ ನಿಂತರು. ಅವರ ಅನುಭವ ಜ್ಞಾನವೆಲ್ಲ ತಮ್ಮ ಊರಿನ ಸುತ್ತಮುತ್ತಲಿನದು. ಕಲ್ಲಹಳ್ಳಿಯ ಪಕ್ಕದ ಗುಡ್ಡದ ಬಳಿಯಲ್ಲಿಯೇ ಸರ್ವಮಂಗಳ ಕಾದಂಬರಿಯ ನಟರಾಜ ಹಾಗೂ ಸರ್ವಮಂಗಳ ಹಾಡುತ್ತಾ ನಲಿದದ್ದು.<br /> <br /> ಮಕ್ಕಳೆಲ್ಲಾ ಸಂತೋಷದಿಂದ ಆಡಿ ಕುಣಿದಾಡಿದ ಹೆಮ್ಮರವೇ ಹೆಜ್ಜಾಲ. `ಮುಳ್ಳಿನ ಕಥೆ~ಯ ರುಕ್ಮಿಣಿ ಇಲ್ಲಿಯವಳೆ. ಹೀಗೆ ನಾಟಕದಲ್ಲಿ ಚದುರಂಗರ ಕಥೆ ಕಾದಂಬರಿಯ ಪಾತ್ರ ಸನ್ನಿವೇಶಗಳ್ಲ್ಲೆಲ ಕಲ್ಲಹಳ್ಳಿಯ ಪರಿಸರದ್ದು.<br /> <br /> ನಾಟಕಕಾರರು ಚದುರಂಗರ ಬದುಕು ಮತ್ತು ಪಾತ್ರಗಳನ್ನು ಒಂದೇ ಸೂತ್ರದಲ್ಲಿ ಕಟ್ಟಿರುವುದರಿಂದ ಪ್ರೇಕ್ಷಕರಲ್ಲಿ ಗೊಂದಲವನ್ನುಂಟು ಮಾಡುತ್ತದೆ. ಹಳ್ಳಿಯ ಅನಕ್ಷರಸ್ಥ ಮುದುಕಿ ಚದುರಂಗರ ಸಾಹಿತ್ಯವನ್ನು ವಿಮರ್ಶೆ ಮಾಡುವುದು ಎಷ್ಟು ಸರಿ? ನಾಟಕ ರಚನಾಬಂಧ ಸಡಿಲವಾಗಿದ್ದು, ನೀರಸದಿಂದ ಬೇಸರವನ್ನುಂಟು ಮಾಡುತ್ತದೆ.<br /> ನಾಗಜ್ಜಿಯಾಗಿ ಹನುಮಕ್ಕ ಮರಿಯಮ್ಮನಳ್ಳಿಯವರ ಅಭಿನಯ ಅಭಿನಂದನೀಯ. <br /> <br /> ಹಳ್ಳಿಯ ಸೀದಾಸಾದಾ ಅಜ್ಜಿಯಂತೆ, ದೇವನೂರು ಮಹಾದೇವ ಅವರ ಸಾಕಜ್ಜಿಯಂತೆ ಕಾಣುತ್ತಾರೆ. ಹಕಲಯ್ಯನಾಗಿ ರಂಗಸ್ವಾಮಿ, ಹಲಗೆಗೌಡನಾಗಿ ಶಿವಕಾಗೇವಾಡಿ, ಅಭಿನಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಕ್ಕಳಾಗಿ ಗಣೇಶ್, ಮೇಘ, ವಾಸುದೇವ, ಚರಿತ್ರಾ ರಾವ್ ಮಕ್ಕಳಾಟದಲ್ಲಿ ಮನಗೆಲ್ಲುತ್ತಾರೆ. <br /> <br /> ನಟರಾಜ ಸರ್ವಮಂಗಳರಾಗಿ ಧನಂಜಯ್, ಸಾವಿತ್ರಿರಾವ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ವೆಂಕಟಸ್ವಾಮಿಯಾಗಿ ಗಣೇಶ್ ಇನ್ನೂ ಹೆಚ್ಚು ಮನಸ್ಸಿಟ್ಟು ಸಂಭಾಷಣೆ ನೀಡಿ, ಅಭಿನಯಿಸಿದ್ದರೆ ಚೆನ್ನಾಗಿರುತ್ತಿತ್ತು.<br /> <br /> ವಿಶ್ವವಿದ್ಯಾಲಯದ ಕೊಠಡಿ, ಹೆಜ್ಜಾಲ, ಗುಡ್ಡ, ಪುರಾತನ ಬಂಗಲೆ, ಹಳ್ಳಿ ಮೊದಲಾದ ಪರಿಸರವನ್ನು ಮಹೇಶ್, ಮಂಜುನಾರಾಯಣ್, ರಕ್ಷಿತ್, ದಿವಾಕರ್, ರಾಜಣ್ಣರವರು ರಂಗಸಜ್ಜಿಕೆಯಲ್ಲಿ ಯಶಸ್ವಿಯಾಗಿ ಮೂಡಿಸಿದ್ದಾರೆ. ಕೊಳಲಿನ ನಿನಾದದ ಮೂಲಕ ಇಸ್ಮಾಯಿಲ್ ಗೋನಾಳ್ ಹಿನ್ನೆಲೆ ಸಂಗೀತ ನೀಡಿದ್ದಾರೆ.<br /> <br /> `ಉಂಡಾಡ ಬಹುದು ಓಡಿ ಬಾ ಎನ್ನಪ್ಪ~, `ದೋಣಿಯೊಳಗೆ ನೀನು~, `ಮಲ್ಲಯ್ಯ ಮಲೇ ಸ್ವಾಮಿ~, `ನನ್ನವಳು ನನ್ನೆದೆಯ ಹೊನ್ನಾಡನಾಡುವಳು~, `ಲಕ್ಕಪ್ಪ ಲೋ ಲೋ~, `ತಾರೆಗಳ ದಾಟುವೆವು~ ಮೊದಲಾದ ಹಾಡುಗಳನ್ನು ವೆಂಕಟೇಶ್ ಜೋಶಿ, ಶಾಂತಾ ಕುಲಕರ್ಣಿ, ಆಶಿಶ್ ಜಿ. ನಾಯಕ್, ಶ್ರಿವಿದ್ಯಾ ಹಿಮ್ಮೇಳದಲ್ಲಿ ಸುಶ್ರಾವ್ಯವಾಗಿ ಹಾಡಿದ್ದಾರೆ. <br /> <br /> ನಾಟಕದಲ್ಲಿ ಚದುರಂಗರು ತಮ್ಮ ಚಲನಚಿತ್ರಗಳಲ್ಲಿ ಬಳಸಿಕೊಂಡ ಹಾಡುಗಳನ್ನು, ನರಸಿಂಹಸ್ವಾಮಿಯವರ ಹಾಡನ್ನು ಬಳಸಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ. <br /> <br /> ಮಾದೇವಸ್ವಾಮಿ ಅವರದು ಬೆಳಕು, ರಾಮಕೃಷ್ಣ ಬೆಳತ್ತೂರು ಅವರದು ಪ್ರಸಾಧನ. ಯುವ ನಿರ್ದೇಶಕ ಸಂಪತ್ಕುಮಾರ್ ನ. ಚದುರಂಗ ನಾಟಕವನ್ನು ವಿನ್ಯಾಸ ಮಾಡಿ ನಿರ್ದೇಶಿಸಿದ್ದು, ನಿರ್ಮಾಣ ಕರ್ನಾಟಕ ಕಲಾ ಸಂಭ್ರಮದ ಜೋಗಿಲ ಸಿದ್ಧರಾಜು ಅವರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚದುರಂಗ ಕಾವ್ಯನಾಮದಿಂದ ಪ್ರಸಿದ್ಧರಾದ ಸುಬ್ರಹ್ಮಣ್ಯರಾಜೇ ಅರಸ್ ಅವರು ಕಥೆ, ಕಾದಂಬರಿ, ಸಿನಿಮಾದ ಮೂಲಕ ಅನನ್ಯ ಸೃಜನಶೀಲ ಕವಿಯಾಗಿ ಹೆಸರಾದವರು. <br /> <br /> ಅವರ `ಸರ್ವಮಂಗಳ~, `ಉಯ್ಯೊಲೆ~, `ವೈಶಾಖ~, `ಹೆಜ್ಜಾಲ~ ಕಾದಂಬರಿಗಳು ಓದುಗರಲ್ಲಿ ಸಂಚಲನವನ್ನುಂಟು ಮಾಡಿದವು. `ಸರ್ವಮಂಗಳ~ ಮತ್ತು `ಉಯ್ಯೊಲೆ~ ಚಲನಚಿತ್ರಗಳಾಗಿಯೂ ಜನಮನ ಗೆದ್ದಿವೆ.<br /> <br /> ಚದುರಂಗರ ಕುರಿತು ಕಥೆಗಾರ ಕಾ.ತ. ಚಿಕ್ಕಣ್ಣ ರಚಿಸಿರುವ `ಚದುರಂಗ~ ನಾಟಕವನ್ನು `ಕರ್ನಾಟಕ ಕಲಾ ಸಂಭ್ರಮ~ ತಂಡ ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿತು.<br /> <br /> ಒಬ್ಬ ಕವಿಯನ್ನು ಕಂಡರೆ ಮತ್ತೊಬ್ಬ ಕವಿ ಮುನಿಯುವ, ಸಾಹಿತಿಗಳ ಗುಂಪುಗಾರಿಕೆಯ ನಡುವೆ ಒಬ್ಬ ಕವಿ ಮತ್ತೊಬ್ಬ ಕವಿಯನ್ನು ನಾಟಕದ ಮೂಲಕ ಅನುಸಂಧಾನ ಮಾಡುವುದು ನಿಜಕ್ಕೂ ಸಂತೋಷದ ಸಂಗತಿ. ಕನ್ನಡದಲ್ಲಿ ಪ್ರೊ. ಕಿ.ರಂ. ನಾಗರಾಜ ಅವರು ಸಂಸದ ಮೂಲಕ ಈ ರೀತಿಯ ಪ್ರಯೋಗವನ್ನು ಮಾಡಿದ್ದಾರೆ.<br /> <br /> ಇದೇ ರೀತಿಯಲ್ಲಿ ನರಸಿಂಹನ್ ಅವರು `ಟಿಪಿಕಲ್ ಕೈಲಾಸಂ~, ಸಿ.ಆರ್. ಸಿಂಹ ಅವರು `ರಸಋಷಿ ಕುವೆಂಪು~, ರಾಜೇಂದ್ರ ಕಾರಂತರವರು ಕೆ.ಎಸ್. ನರಸಿಂಹ ಸ್ವಾಮಿ ಅವರನ್ನು ಕುರಿತು `ಮೈಸೂರು ಮಲ್ಲಿಗೆ~ ನಾಟಕಗಳನ್ನು ಮಾಡಿದ್ದಾರೆ. ಇದೇ ಸಾಲಿನಲ್ಲಿ ಕಾ.ತ ಚಿಕ್ಕಣ್ಣ ಅವರ `ಚದುರಂಗ~ ನಾಟಕವು ಇತ್ತೀಚೆಗೆ ಸೇರ್ಪಡೆಗೊಂಡಿದೆ. <br /> <br /> ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಸಾಂಬಶಿವ, ವರದಪ್ಪ ಹಾಗೂ ಮಾದೇಗೌಡರೊಂದಿಗೆ ಸಂಶೋಧನ ವಿದ್ಯಾರ್ಥಿ ವೆಂಕಟಸ್ವಾಮಿ ತನ್ನ ಸಂಶೋಧನಾ ವಿಷಯವನ್ನು ಚರ್ಚಿಸುವುದರೊಂದಿಗೆ ಪ್ರಾರಂಭವಾಗುವ ನಾಟಕವು ಇತ್ತೀಚಿನ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಹಾಗೂ ಸಂಶೋಧನೆಯನ್ನು ಕುರಿತು ವಿಡಂಬಿಸುತ್ತಲೇ ಸಂಶೋಧನಾರ್ಥಿಗಳು ಎದುರಿಸುತ್ತಿರುವ ಸವಾಲುಗಳನ್ನು ತಿಳಿಸುತ್ತದೆ.<br /> <br /> ವೆಂಕಟಸ್ವಾಮಿ ತನ್ನ ಸಂಶೋಧನೆಯ ವಸ್ತುವಾದ ಚದುರಂಗರ ಬದುಕು-ಬರಹವನ್ನು ಕುರಿತು ಕ್ಷೇತ್ರಕಾರ್ಯಕ್ಕೆಂದು ಕಲ್ಲಹಳ್ಳಿಗೆ ಹೋದಾಗ ಚದುರಂಗರ ಕಥೆ-ಕಾದಂಬರಿಗಳ ಪಾತ್ರಧಾರಿಗಳಾದ ನಾಗಜ್ಜಿ, ಲಕ್ಕ, ಹಕಲಯ್ಯ, ಬೀರಲಿಂಗ, ರುಕ್ಮಿಣಿ, ನಟರಾಜ, ಸರ್ವಮಂಗಳ ಮೊದಲಾದವರನ್ನು ಮುಖಾಮುಖಿಯಾಗುತ್ತಾನೆ.<br /> <br /> ವೆಂಕಟಸ್ವಾಮಿಯ ಪುಸ್ತಕದ ತಿಳಿವಳಿಕೆಯ ಎದುರಿಗೆ ಲಕ್ಕನ ಅನುಭವದ ಜ್ಞಾನ ಮಾತನಾಡುತ್ತಾ ಹೋಗುತ್ತದೆ. ಲಕ್ಕನ ಅನುಭಾವಿಕ ಮಾತುಗಳಿಗೆ ವೆಂಕಟಸ್ವಾಮಿ ವಿದ್ವತ್ಲೋಕದ ಪರಿಭಾಷೆಗಳ ಉಪವ್ಯಾಖಾನ ನಡೆಯುತ್ತದೆ. <br /> <br /> ಯಾವ ಭಾಷಿಕ ಜ್ಞಾನವರ್ಗದ ಉಪಾದಿಗಳ ಹಂಗೂ ಇಲ್ಲದಂತೆ ಲಕ್ಕನ ಅನುಭವದ ಜ್ಞಾನ ಸ್ಥಳೀಯ ಲೋಕಜ್ಞಾನವಾಗಿ ಅರಳುತ್ತದೆ. ಹೀಗೆ ವೆಂಕಟಸ್ವಾಮಿಯು ಚಂದುರಂಗರ ಕಥೆ, ಕಾದಂಬರಿಗಳ ಪಾತ್ರಗಳೊಂದಿಗೆ ಮುಖಾಮುಖಿಯಾಗುತ್ತಲೇ ಚದುರಂಗರ ಬದುಕು ಬರಹವನ್ನು ಅರಿಯಲು ಪ್ರಯತ್ನಿಸುತ್ತಾನೆ.<br /> <br /> ಚದುರಂಗರು ಕಲ್ಲಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಮುಂದೆ ಮೈಸೂರಿನಲ್ಲಿ ನೆಲೆ ನಿಂತರು. ಅವರ ಅನುಭವ ಜ್ಞಾನವೆಲ್ಲ ತಮ್ಮ ಊರಿನ ಸುತ್ತಮುತ್ತಲಿನದು. ಕಲ್ಲಹಳ್ಳಿಯ ಪಕ್ಕದ ಗುಡ್ಡದ ಬಳಿಯಲ್ಲಿಯೇ ಸರ್ವಮಂಗಳ ಕಾದಂಬರಿಯ ನಟರಾಜ ಹಾಗೂ ಸರ್ವಮಂಗಳ ಹಾಡುತ್ತಾ ನಲಿದದ್ದು.<br /> <br /> ಮಕ್ಕಳೆಲ್ಲಾ ಸಂತೋಷದಿಂದ ಆಡಿ ಕುಣಿದಾಡಿದ ಹೆಮ್ಮರವೇ ಹೆಜ್ಜಾಲ. `ಮುಳ್ಳಿನ ಕಥೆ~ಯ ರುಕ್ಮಿಣಿ ಇಲ್ಲಿಯವಳೆ. ಹೀಗೆ ನಾಟಕದಲ್ಲಿ ಚದುರಂಗರ ಕಥೆ ಕಾದಂಬರಿಯ ಪಾತ್ರ ಸನ್ನಿವೇಶಗಳ್ಲ್ಲೆಲ ಕಲ್ಲಹಳ್ಳಿಯ ಪರಿಸರದ್ದು.<br /> <br /> ನಾಟಕಕಾರರು ಚದುರಂಗರ ಬದುಕು ಮತ್ತು ಪಾತ್ರಗಳನ್ನು ಒಂದೇ ಸೂತ್ರದಲ್ಲಿ ಕಟ್ಟಿರುವುದರಿಂದ ಪ್ರೇಕ್ಷಕರಲ್ಲಿ ಗೊಂದಲವನ್ನುಂಟು ಮಾಡುತ್ತದೆ. ಹಳ್ಳಿಯ ಅನಕ್ಷರಸ್ಥ ಮುದುಕಿ ಚದುರಂಗರ ಸಾಹಿತ್ಯವನ್ನು ವಿಮರ್ಶೆ ಮಾಡುವುದು ಎಷ್ಟು ಸರಿ? ನಾಟಕ ರಚನಾಬಂಧ ಸಡಿಲವಾಗಿದ್ದು, ನೀರಸದಿಂದ ಬೇಸರವನ್ನುಂಟು ಮಾಡುತ್ತದೆ.<br /> ನಾಗಜ್ಜಿಯಾಗಿ ಹನುಮಕ್ಕ ಮರಿಯಮ್ಮನಳ್ಳಿಯವರ ಅಭಿನಯ ಅಭಿನಂದನೀಯ. <br /> <br /> ಹಳ್ಳಿಯ ಸೀದಾಸಾದಾ ಅಜ್ಜಿಯಂತೆ, ದೇವನೂರು ಮಹಾದೇವ ಅವರ ಸಾಕಜ್ಜಿಯಂತೆ ಕಾಣುತ್ತಾರೆ. ಹಕಲಯ್ಯನಾಗಿ ರಂಗಸ್ವಾಮಿ, ಹಲಗೆಗೌಡನಾಗಿ ಶಿವಕಾಗೇವಾಡಿ, ಅಭಿನಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಕ್ಕಳಾಗಿ ಗಣೇಶ್, ಮೇಘ, ವಾಸುದೇವ, ಚರಿತ್ರಾ ರಾವ್ ಮಕ್ಕಳಾಟದಲ್ಲಿ ಮನಗೆಲ್ಲುತ್ತಾರೆ. <br /> <br /> ನಟರಾಜ ಸರ್ವಮಂಗಳರಾಗಿ ಧನಂಜಯ್, ಸಾವಿತ್ರಿರಾವ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ವೆಂಕಟಸ್ವಾಮಿಯಾಗಿ ಗಣೇಶ್ ಇನ್ನೂ ಹೆಚ್ಚು ಮನಸ್ಸಿಟ್ಟು ಸಂಭಾಷಣೆ ನೀಡಿ, ಅಭಿನಯಿಸಿದ್ದರೆ ಚೆನ್ನಾಗಿರುತ್ತಿತ್ತು.<br /> <br /> ವಿಶ್ವವಿದ್ಯಾಲಯದ ಕೊಠಡಿ, ಹೆಜ್ಜಾಲ, ಗುಡ್ಡ, ಪುರಾತನ ಬಂಗಲೆ, ಹಳ್ಳಿ ಮೊದಲಾದ ಪರಿಸರವನ್ನು ಮಹೇಶ್, ಮಂಜುನಾರಾಯಣ್, ರಕ್ಷಿತ್, ದಿವಾಕರ್, ರಾಜಣ್ಣರವರು ರಂಗಸಜ್ಜಿಕೆಯಲ್ಲಿ ಯಶಸ್ವಿಯಾಗಿ ಮೂಡಿಸಿದ್ದಾರೆ. ಕೊಳಲಿನ ನಿನಾದದ ಮೂಲಕ ಇಸ್ಮಾಯಿಲ್ ಗೋನಾಳ್ ಹಿನ್ನೆಲೆ ಸಂಗೀತ ನೀಡಿದ್ದಾರೆ.<br /> <br /> `ಉಂಡಾಡ ಬಹುದು ಓಡಿ ಬಾ ಎನ್ನಪ್ಪ~, `ದೋಣಿಯೊಳಗೆ ನೀನು~, `ಮಲ್ಲಯ್ಯ ಮಲೇ ಸ್ವಾಮಿ~, `ನನ್ನವಳು ನನ್ನೆದೆಯ ಹೊನ್ನಾಡನಾಡುವಳು~, `ಲಕ್ಕಪ್ಪ ಲೋ ಲೋ~, `ತಾರೆಗಳ ದಾಟುವೆವು~ ಮೊದಲಾದ ಹಾಡುಗಳನ್ನು ವೆಂಕಟೇಶ್ ಜೋಶಿ, ಶಾಂತಾ ಕುಲಕರ್ಣಿ, ಆಶಿಶ್ ಜಿ. ನಾಯಕ್, ಶ್ರಿವಿದ್ಯಾ ಹಿಮ್ಮೇಳದಲ್ಲಿ ಸುಶ್ರಾವ್ಯವಾಗಿ ಹಾಡಿದ್ದಾರೆ. <br /> <br /> ನಾಟಕದಲ್ಲಿ ಚದುರಂಗರು ತಮ್ಮ ಚಲನಚಿತ್ರಗಳಲ್ಲಿ ಬಳಸಿಕೊಂಡ ಹಾಡುಗಳನ್ನು, ನರಸಿಂಹಸ್ವಾಮಿಯವರ ಹಾಡನ್ನು ಬಳಸಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ. <br /> <br /> ಮಾದೇವಸ್ವಾಮಿ ಅವರದು ಬೆಳಕು, ರಾಮಕೃಷ್ಣ ಬೆಳತ್ತೂರು ಅವರದು ಪ್ರಸಾಧನ. ಯುವ ನಿರ್ದೇಶಕ ಸಂಪತ್ಕುಮಾರ್ ನ. ಚದುರಂಗ ನಾಟಕವನ್ನು ವಿನ್ಯಾಸ ಮಾಡಿ ನಿರ್ದೇಶಿಸಿದ್ದು, ನಿರ್ಮಾಣ ಕರ್ನಾಟಕ ಕಲಾ ಸಂಭ್ರಮದ ಜೋಗಿಲ ಸಿದ್ಧರಾಜು ಅವರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>