<p><strong>ಚಿಟಗುಪ್ಪಾ:</strong> ಹತ್ತಿರದ ಸುಕ್ಷೇತ್ರ ಚಾಂಗಲೇರಾದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸ ನಿಮಿತ್ತ ಹಲವು ಭಕ್ತಿಪರ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗುತ್ತಲಿವೆ.</p>.<p>ದಿನಂ ಪ್ರತಿ ತ್ರಿಕಾಲ ಸಂಗೀತ ರುದ್ರಾಭಿಷೇಕ ಪೂಜೆ ದೇವರಿಗೆ ನಡೆಯುತ್ತಲಿದೆ, ಜಂಗಮ ಪಾದ ಪೂಜೆ, ಭಕ್ತರಿಂದ ಜರುಗುತ್ತಿದೆ. ದಿನಾಲೂ ದೇವಾಲಯಕ್ಕೆ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ವಿಶೇಷ ದಾಸೋಹ ವ್ಯವಸ್ತೆ ಕಲ್ಪಿಸಲಾಗಿದೆ.</p>.<p>ದಿನದ 24 ಗಂಟೆ ದೇವಾಲಯದಲ್ಲಿ ಸಪ್ತಾಹ ಭಜನೆ ನಡೆಯುತ್ತಿದೆ. ಸರದಿಯಂತೆ ಚಾಂಗಲೇರಾ, ಬಸಿಲಾಪೂರ್, ಮೀನಕೇರಾ, ಮುತ್ತಂಗಿ ಇತರೆಡೆಗಳಿಂದ ಭಜನಾ ತಂಡದವರು ಆಗಮಿಸಿ ಸಪ್ತಾಹದಲ್ಲಿ ಭಕ್ತಿಯ ಸೇವೆ ಸಲ್ಲಿಸುತ್ತಲಿದ್ದಾರೆ.</p>.<p>ದಿನಾಲೂ ದರ್ಶನಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ದರ್ಶನಕ್ಕಾಗಿ ವಿಶೇಷ ಸಾಲುಗಳ ವ್ಯವಸ್ಥೆ ನಿರ್ಮಿಸಲಾಗಿದೆ. ಸಪ್ತಾಹ ಜೊತೆಗೆ ಹಲವು ಸಂಗೀತ ಕಲಾವಿದರಿಂದ ಭಜನ ಸಂಗೀತವೂ ನಡೆಯುತ್ತಿದೆ. ಈ ಬಾರಿಯ ಕಾರ್ಯಕ್ರಮಗಳು ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಮೈಮನ ತಣಿಸುವಂತಾಗಿರುವುದು ವಿಶೇಷತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಟಗುಪ್ಪಾ:</strong> ಹತ್ತಿರದ ಸುಕ್ಷೇತ್ರ ಚಾಂಗಲೇರಾದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸ ನಿಮಿತ್ತ ಹಲವು ಭಕ್ತಿಪರ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗುತ್ತಲಿವೆ.</p>.<p>ದಿನಂ ಪ್ರತಿ ತ್ರಿಕಾಲ ಸಂಗೀತ ರುದ್ರಾಭಿಷೇಕ ಪೂಜೆ ದೇವರಿಗೆ ನಡೆಯುತ್ತಲಿದೆ, ಜಂಗಮ ಪಾದ ಪೂಜೆ, ಭಕ್ತರಿಂದ ಜರುಗುತ್ತಿದೆ. ದಿನಾಲೂ ದೇವಾಲಯಕ್ಕೆ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ವಿಶೇಷ ದಾಸೋಹ ವ್ಯವಸ್ತೆ ಕಲ್ಪಿಸಲಾಗಿದೆ.</p>.<p>ದಿನದ 24 ಗಂಟೆ ದೇವಾಲಯದಲ್ಲಿ ಸಪ್ತಾಹ ಭಜನೆ ನಡೆಯುತ್ತಿದೆ. ಸರದಿಯಂತೆ ಚಾಂಗಲೇರಾ, ಬಸಿಲಾಪೂರ್, ಮೀನಕೇರಾ, ಮುತ್ತಂಗಿ ಇತರೆಡೆಗಳಿಂದ ಭಜನಾ ತಂಡದವರು ಆಗಮಿಸಿ ಸಪ್ತಾಹದಲ್ಲಿ ಭಕ್ತಿಯ ಸೇವೆ ಸಲ್ಲಿಸುತ್ತಲಿದ್ದಾರೆ.</p>.<p>ದಿನಾಲೂ ದರ್ಶನಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ದರ್ಶನಕ್ಕಾಗಿ ವಿಶೇಷ ಸಾಲುಗಳ ವ್ಯವಸ್ಥೆ ನಿರ್ಮಿಸಲಾಗಿದೆ. ಸಪ್ತಾಹ ಜೊತೆಗೆ ಹಲವು ಸಂಗೀತ ಕಲಾವಿದರಿಂದ ಭಜನ ಸಂಗೀತವೂ ನಡೆಯುತ್ತಿದೆ. ಈ ಬಾರಿಯ ಕಾರ್ಯಕ್ರಮಗಳು ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಮೈಮನ ತಣಿಸುವಂತಾಗಿರುವುದು ವಿಶೇಷತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>