<p><strong>ಚೆನ್ನೈ: </strong>ಫೈನಲ್ನಲ್ಲಿ ಕ್ರಿಸ್ ಗೇಲ್ ಆಟ ನಡೆಯಲಿಲ್ಲ. ಹಾಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲಿಲ್ಲ! ಚಾಂಪಿಯನ್ ಆಗುವ ಭರವಸೆಯೊಂದಿಗೆ ಕಣಕ್ಕಿಳಿದಿದ್ದ ವಿಜಯ್ ಮಲ್ಯ ಮಾಲೀಕತ್ವದ ಆರ್ಸಿಬಿ ಫೈನಲ್ನಲ್ಲಿ ಠುಸ್ ಆಯಿತು.<br /> <br /> ಆದರೆ ಫೈನಲ್ನಲ್ಲಿ ಅದೃಷ್ಟ ಒಲಿದಿದ್ದು ಮುಂಬೈ ಇಂಡಿಯನ್ಸ್ಗೆ. ಹಾಗಾಗಿ ಮುಖೇಶ್ ಅಂಬಾನಿ ಒಡೆತನದ ಈ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ನೂತನ ಚಾಂಪಿಯನ್. ಗಾಯದ ಕಾರಣ ಆಡದಿದ್ದರೂ ತಂಡದೊಂದಿಗಿದ್ದ ಸಚಿನ್ ತೆಂಡೂಲ್ಕರ್ ಅವರ ಮಾರ್ಗದರ್ಶನ ಹಾಗೂ ಹರಭಜನ್ ಸಿಂಗ್ ಅವರ ಚಾಣಾಕ್ಷತನದ ನಾಯಕತ್ವ ಮುಂಬೈ ಇಂಡಿಯನ್ಸ್ಗೆ ವರದಾನವಾಗಿ ಪರಿಣಮಿಸಿತು. <br /> <br /> ಈ ಟೂರ್ನಿಯ ಫೈನಲ್ನಲ್ಲಿ 31 ರನ್ಗಳಿಂದ ಆರ್ಸಿಬಿ ತಂಡವನ್ನು ಬಗ್ಗುಬಡಿದ ಮುಂಬೈ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಟ್ರೋಫಿ ಎತ್ತಿ ಹಿಡಿಯಿತು. <br /> <br /> ಭಜ್ಜಿ ಪಡೆ ಪೇರಿಸಿದ್ದ 139 ರನ್ಗಳ ಮೊತ್ತ ಬೆಂಗಳೂರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತು. ಸೆಮಿಫೈನಲ್ ಹಾಗೂ ಅದಕ್ಕೂ ಮೊದಲಿನ ಲೀಗ್ ಪಂದ್ಯದಲ್ಲಿ 200ಕ್ಕೂ ಅಧಿಕ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿದ್ದ ಆರ್ಸಿಬಿ ಫೈನಲ್ನಲ್ಲಿ ಅಲ್ಪ ಗುರಿ ಎದುರು ಎಡವಿತು. <br /> <br /> ಈ ಗುರಿಯನ್ನು ಆದಷ್ಟು ಬೇಗನೆ ಮುಟ್ಟಬೇಕು ಎನ್ನುವ ಅವಸರದಲ್ಲಿ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಅವರ ವಿಕೆಟ್ಅನ್ನು ಬೇಗನೇ ಕಳೆದುಕೊಂಡಿತು. ಇವರಿಬ್ಬರ ವಿಕೆಟ್ ಪತನ ಈ ತಂಡವನ್ನು ಸೋಲಿನ ಹಾದಿ ಹಿಡಿಸಿತು. <br /> ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ಗೆ ಮುಂದಾದ ಮುಂಬೈ ಕೂಡ ವೇಗವಾಗಿ ರನ್ ಗಳಿಸುವ ಆತುರದಲ್ಲಿ ವಿಕೆಟ್ ಒಪ್ಪಿಸಿದ್ದೇ ಹೆಚ್ಚು. ಈ ಪರಿಣಾಮ ಮುಂಬೈ 20 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಗಳಿಸಿದ್ದು 139 ರನ್ ಮಾತ್ರ. <br /> <br /> ಈ ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಡೇನಿಯಲ್ ವೆಟೋರಿ ಪಡೆಯ ಬೌಲಿಂಗ್ ಅಷ್ಟೊಂದು ಪರಿಣಾಮಕಾರಿ ಎನಿಸಿರಲಿಲ್ಲ. ಆದರೆ ಫೈನಲ್ ಪಂದ್ಯದಲ್ಲಿ ಹಾಗಾಗಲಿಲ್ಲ. ಆರ್ಸಿಬಿ ಬೌಲರ್ಗಳು ಆರಂಭದಿಂದಲೇ ಬಿಗುವಿನ ದಾಳಿ ನಡೆಸಿದರು. <br /> <br /> ಮೂರನೇ ವಿಕೆಟ್ಗೆ ಅಂಬಟಿ ರಾಯಡು (22, 21ಎಸೆತ, 1ಬೌಂ, 1ಸಿಕ್ಸರ್) ಹಾಗೂ ಜೇಮ್ಸ ಫ್ರಾಂಕ್ಲಿನ್ 41 ರನ್ಗಳ ಜೊತೆಯಾಟವಾಡಿ ತಂಡವನ್ನು ಆಪತ್ತಿನಿಂದ ಪಾರು ಮಾಡಿದರು. ಸೊಗಸಾದ ಬ್ಯಾಟಿಂಗ್ ಮಾಡಿದ ಫ್ರಾಂಕ್ಲಿನ್ ಕೇವಲ 29 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ 41 ರನ್ ಗಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ: </strong>ಫೈನಲ್ನಲ್ಲಿ ಕ್ರಿಸ್ ಗೇಲ್ ಆಟ ನಡೆಯಲಿಲ್ಲ. ಹಾಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲಿಲ್ಲ! ಚಾಂಪಿಯನ್ ಆಗುವ ಭರವಸೆಯೊಂದಿಗೆ ಕಣಕ್ಕಿಳಿದಿದ್ದ ವಿಜಯ್ ಮಲ್ಯ ಮಾಲೀಕತ್ವದ ಆರ್ಸಿಬಿ ಫೈನಲ್ನಲ್ಲಿ ಠುಸ್ ಆಯಿತು.<br /> <br /> ಆದರೆ ಫೈನಲ್ನಲ್ಲಿ ಅದೃಷ್ಟ ಒಲಿದಿದ್ದು ಮುಂಬೈ ಇಂಡಿಯನ್ಸ್ಗೆ. ಹಾಗಾಗಿ ಮುಖೇಶ್ ಅಂಬಾನಿ ಒಡೆತನದ ಈ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ನೂತನ ಚಾಂಪಿಯನ್. ಗಾಯದ ಕಾರಣ ಆಡದಿದ್ದರೂ ತಂಡದೊಂದಿಗಿದ್ದ ಸಚಿನ್ ತೆಂಡೂಲ್ಕರ್ ಅವರ ಮಾರ್ಗದರ್ಶನ ಹಾಗೂ ಹರಭಜನ್ ಸಿಂಗ್ ಅವರ ಚಾಣಾಕ್ಷತನದ ನಾಯಕತ್ವ ಮುಂಬೈ ಇಂಡಿಯನ್ಸ್ಗೆ ವರದಾನವಾಗಿ ಪರಿಣಮಿಸಿತು. <br /> <br /> ಈ ಟೂರ್ನಿಯ ಫೈನಲ್ನಲ್ಲಿ 31 ರನ್ಗಳಿಂದ ಆರ್ಸಿಬಿ ತಂಡವನ್ನು ಬಗ್ಗುಬಡಿದ ಮುಂಬೈ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಟ್ರೋಫಿ ಎತ್ತಿ ಹಿಡಿಯಿತು. <br /> <br /> ಭಜ್ಜಿ ಪಡೆ ಪೇರಿಸಿದ್ದ 139 ರನ್ಗಳ ಮೊತ್ತ ಬೆಂಗಳೂರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತು. ಸೆಮಿಫೈನಲ್ ಹಾಗೂ ಅದಕ್ಕೂ ಮೊದಲಿನ ಲೀಗ್ ಪಂದ್ಯದಲ್ಲಿ 200ಕ್ಕೂ ಅಧಿಕ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿದ್ದ ಆರ್ಸಿಬಿ ಫೈನಲ್ನಲ್ಲಿ ಅಲ್ಪ ಗುರಿ ಎದುರು ಎಡವಿತು. <br /> <br /> ಈ ಗುರಿಯನ್ನು ಆದಷ್ಟು ಬೇಗನೆ ಮುಟ್ಟಬೇಕು ಎನ್ನುವ ಅವಸರದಲ್ಲಿ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಅವರ ವಿಕೆಟ್ಅನ್ನು ಬೇಗನೇ ಕಳೆದುಕೊಂಡಿತು. ಇವರಿಬ್ಬರ ವಿಕೆಟ್ ಪತನ ಈ ತಂಡವನ್ನು ಸೋಲಿನ ಹಾದಿ ಹಿಡಿಸಿತು. <br /> ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ಗೆ ಮುಂದಾದ ಮುಂಬೈ ಕೂಡ ವೇಗವಾಗಿ ರನ್ ಗಳಿಸುವ ಆತುರದಲ್ಲಿ ವಿಕೆಟ್ ಒಪ್ಪಿಸಿದ್ದೇ ಹೆಚ್ಚು. ಈ ಪರಿಣಾಮ ಮುಂಬೈ 20 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಗಳಿಸಿದ್ದು 139 ರನ್ ಮಾತ್ರ. <br /> <br /> ಈ ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಡೇನಿಯಲ್ ವೆಟೋರಿ ಪಡೆಯ ಬೌಲಿಂಗ್ ಅಷ್ಟೊಂದು ಪರಿಣಾಮಕಾರಿ ಎನಿಸಿರಲಿಲ್ಲ. ಆದರೆ ಫೈನಲ್ ಪಂದ್ಯದಲ್ಲಿ ಹಾಗಾಗಲಿಲ್ಲ. ಆರ್ಸಿಬಿ ಬೌಲರ್ಗಳು ಆರಂಭದಿಂದಲೇ ಬಿಗುವಿನ ದಾಳಿ ನಡೆಸಿದರು. <br /> <br /> ಮೂರನೇ ವಿಕೆಟ್ಗೆ ಅಂಬಟಿ ರಾಯಡು (22, 21ಎಸೆತ, 1ಬೌಂ, 1ಸಿಕ್ಸರ್) ಹಾಗೂ ಜೇಮ್ಸ ಫ್ರಾಂಕ್ಲಿನ್ 41 ರನ್ಗಳ ಜೊತೆಯಾಟವಾಡಿ ತಂಡವನ್ನು ಆಪತ್ತಿನಿಂದ ಪಾರು ಮಾಡಿದರು. ಸೊಗಸಾದ ಬ್ಯಾಟಿಂಗ್ ಮಾಡಿದ ಫ್ರಾಂಕ್ಲಿನ್ ಕೇವಲ 29 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ 41 ರನ್ ಗಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>