<p>ಚಿಟಗುಪ್ಪಾ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 9 ಅನ್ನು ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸುವ ಕಾರ್ಯವನ್ನು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಿದೆ.<br /> <br /> ಗಡಿ ಪ್ರವೇಶದ ಭಂಗೂರ ಗ್ರಾಮದಿಂದ ರಾಜೇಶ್ವರ ವರೆಗೆ ಹೆದ್ದಾರಿ ಅಕ್ಕಪಕ್ಕದಲ್ಲಿ ಬೆಳೆದಿರುವ ಮರಗಳನ್ನು ಕಡಿಯುವ ಕೆಲಸ ಭರದಿಂದ ಸಾಗಿದೆ. ಮಾವು, ಆಲ, ನೀಲಗಿರಿ ಜಾತಿಯ ಮರಗಳು ಧರೆಗುರುಳಿಸುತ್ತಿರುವುದು ಪರಿಸರ ಪ್ರೇಮಿಗಳಿಗೆ ನೋವುಂಟುಮಾಡಿದೆ.<br /> <br /> ಹೆದ್ದಾರಿ ಮಧ್ಯದಿಂದ 25 ಮೀಟರ್ ವಿಸ್ತೀರ್ಣದ ಅಂತರದಲ್ಲಿ ಬರುವ ಎರಡು ಬದಿಯ ಎಲ್ಲಾ ಮರಗಳನ್ನು ಕಡಿಯುವುದಕ್ಕೆ ಅರಣ್ಯ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಭಂಗೂರ ಗ್ರಾಮದಿಂದ ರಾಜೇಶ್ವರವರೆಗೆ ವಿವಿಧ ಬಗೆಯ ಮರಗಳನ್ನು ಕಡಿಯಲಾಗುತ್ತಿದೆ.<br /> <br /> 25 ಮೀಟರ್ ಅಂತರದಿಂದ ಹೊರಗೆ ಉಳಿದ ಮರಗಳು ಆ ಭೂಮಿ ಒಡೆತನದ ರೈತರಿಗೆ ಉಳಿಯಲಿವೆ’ ಎಂದು ಹುಮನಾಬಾದ್ ವಲಯ ಅರಣ್ಯ ಅಧಿಕಾರಿ ಚಿಕ್ಕಮಠ ಮಾಹಿತಿ ನೀಡಿದ್ದಾರೆ. ಚತುಷ್ಪಥ ರಸ್ತೆಯು ರಸ್ತೆ ನಿರ್ಮಾಣ ಕಾರ್ಯದ ಬಳಿಕ ಅರಣ್ಯ ಇಲಾಖೆಯು ಹೆದ್ದಾರಿಯ ಎರಡು ಬದಿಗಳಲ್ಲಿ ವಿವಿಧ ತಳಿಯ ಹೊಸ ಸಸಿಗಳು ನೆಡಲಾಗುತ್ತದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಟಗುಪ್ಪಾ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 9 ಅನ್ನು ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸುವ ಕಾರ್ಯವನ್ನು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಿದೆ.<br /> <br /> ಗಡಿ ಪ್ರವೇಶದ ಭಂಗೂರ ಗ್ರಾಮದಿಂದ ರಾಜೇಶ್ವರ ವರೆಗೆ ಹೆದ್ದಾರಿ ಅಕ್ಕಪಕ್ಕದಲ್ಲಿ ಬೆಳೆದಿರುವ ಮರಗಳನ್ನು ಕಡಿಯುವ ಕೆಲಸ ಭರದಿಂದ ಸಾಗಿದೆ. ಮಾವು, ಆಲ, ನೀಲಗಿರಿ ಜಾತಿಯ ಮರಗಳು ಧರೆಗುರುಳಿಸುತ್ತಿರುವುದು ಪರಿಸರ ಪ್ರೇಮಿಗಳಿಗೆ ನೋವುಂಟುಮಾಡಿದೆ.<br /> <br /> ಹೆದ್ದಾರಿ ಮಧ್ಯದಿಂದ 25 ಮೀಟರ್ ವಿಸ್ತೀರ್ಣದ ಅಂತರದಲ್ಲಿ ಬರುವ ಎರಡು ಬದಿಯ ಎಲ್ಲಾ ಮರಗಳನ್ನು ಕಡಿಯುವುದಕ್ಕೆ ಅರಣ್ಯ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಭಂಗೂರ ಗ್ರಾಮದಿಂದ ರಾಜೇಶ್ವರವರೆಗೆ ವಿವಿಧ ಬಗೆಯ ಮರಗಳನ್ನು ಕಡಿಯಲಾಗುತ್ತಿದೆ.<br /> <br /> 25 ಮೀಟರ್ ಅಂತರದಿಂದ ಹೊರಗೆ ಉಳಿದ ಮರಗಳು ಆ ಭೂಮಿ ಒಡೆತನದ ರೈತರಿಗೆ ಉಳಿಯಲಿವೆ’ ಎಂದು ಹುಮನಾಬಾದ್ ವಲಯ ಅರಣ್ಯ ಅಧಿಕಾರಿ ಚಿಕ್ಕಮಠ ಮಾಹಿತಿ ನೀಡಿದ್ದಾರೆ. ಚತುಷ್ಪಥ ರಸ್ತೆಯು ರಸ್ತೆ ನಿರ್ಮಾಣ ಕಾರ್ಯದ ಬಳಿಕ ಅರಣ್ಯ ಇಲಾಖೆಯು ಹೆದ್ದಾರಿಯ ಎರಡು ಬದಿಗಳಲ್ಲಿ ವಿವಿಧ ತಳಿಯ ಹೊಸ ಸಸಿಗಳು ನೆಡಲಾಗುತ್ತದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>