<p><strong>ಬಳ್ಳಾರಿ: </strong>ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊದಲ ನಾಮಪತ್ರ ಸಲ್ಲಿಕೆಯಾಗಿದ್ದು, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯೂಸಿಐ)–ಸಿ ಪಕ್ಷದ ಅಭ್ಯರ್ಥಿಯಾಗಿ ಎ.ದೇವದಾಸ್ ಉಮೇದುವಾರಿಕೆ ಸಲ್ಲಿಸಿದರು.<br /> <br /> ನಗರದ ಒಡ್ಡರಬಂಡೆ ಪ್ರದೇಶದಲ್ಲಿರುವ ರಾಧಿಕಾ ಚಿತ್ರಮಂದಿರದ ಮುಂಭಾಗದಿಂದ ನಗರದ ಮುಖ್ಯ ರಸ್ತೆಗಳಲ್ಲಿ ಪಕ್ಷದ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಆಗಮಿಸಿದ ದೇವದಾಸ್, ನಾಲ್ವರು ಪ್ರಮುಖರೊಂದಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.<br /> <br /> ‘ಚುನಾವಣೆಗಳು ಬರುತ್ತಿವೆ, ಹೋಗುತ್ತಿವೆ. ಆದರೆ, ಜನತೆ ಎದುರಿಸುತ್ತಿರುವ ಸಮಸ್ಯೆಗಳು ಮಾತ್ರ ಮುಂದುವರಿದೇ ಇವೆ. ಈ ಹಿನ್ನೆಲೆಯಲ್ಲಿ ಕೇವಲ ಆಶ್ವಾಸನೆ ನೀಡಿ ಜನರಿಗೆ ಮೋಸ ಮಾಡುವ ಪಕ್ಷಗಳ ಅಭ್ಯರ್ಥಿಗಳನ್ನು ಮತದಾರರು ತಿರಸ್ಕರಿಸಬೇಕಿದೆ’ ಎಂದು ಅವರು ನಂತರ ಸುದ್ದಿಗಾರ ಎದುರು ಅಭಿಪ್ರಾಯಪಟ್ಟರು.<br /> <br /> ಜನರನ್ನು ಪ್ರತಿನಿಧಿಸುವವರು ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕು. ಜನವಿರೋಧಿ ನೀತಿ ಅನುಸರಿಸುವವರಿಗೆ ತಕ್ಕ ಪಾಠ ಕಲಿಸಬೇಕು. ಜನಪರ ಹೋರಾಟಗಳನ್ನು ರೂಪಿಸಿರುವ ಎಸ್ಯುಸಿಐ–ಸಿ ಪಕ್ಷ ಬೆಂಬಲಿಸುವ ಮೂಲಕ ಮತದಾರರು ತಮ್ಮ ಸೇವೆಗೆ ಅನುವು ಮಾಡಿಕೊಡಬೇಕು ಎಂದು ಅವರು ಕೋರಿದರು.<br /> <br /> ಪಕ್ಷದ ಮುಖಂಡರಾದ ಕೆ.ಸೋಮಶೇಖರ್, ಆರ್. ಸೋಮಶೇಖರಗೌಡ, ಎಂ.ಎನ್ ಮಂಜುಳಾ, ಜಿ.ಎಂ. ವೀರಭದ್ರಯ್ಯ, ಎಸ್.ಜಿ. ನಾಗರತ್ನಾ ಈ ಸಂದರ್ಭ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊದಲ ನಾಮಪತ್ರ ಸಲ್ಲಿಕೆಯಾಗಿದ್ದು, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯೂಸಿಐ)–ಸಿ ಪಕ್ಷದ ಅಭ್ಯರ್ಥಿಯಾಗಿ ಎ.ದೇವದಾಸ್ ಉಮೇದುವಾರಿಕೆ ಸಲ್ಲಿಸಿದರು.<br /> <br /> ನಗರದ ಒಡ್ಡರಬಂಡೆ ಪ್ರದೇಶದಲ್ಲಿರುವ ರಾಧಿಕಾ ಚಿತ್ರಮಂದಿರದ ಮುಂಭಾಗದಿಂದ ನಗರದ ಮುಖ್ಯ ರಸ್ತೆಗಳಲ್ಲಿ ಪಕ್ಷದ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಆಗಮಿಸಿದ ದೇವದಾಸ್, ನಾಲ್ವರು ಪ್ರಮುಖರೊಂದಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.<br /> <br /> ‘ಚುನಾವಣೆಗಳು ಬರುತ್ತಿವೆ, ಹೋಗುತ್ತಿವೆ. ಆದರೆ, ಜನತೆ ಎದುರಿಸುತ್ತಿರುವ ಸಮಸ್ಯೆಗಳು ಮಾತ್ರ ಮುಂದುವರಿದೇ ಇವೆ. ಈ ಹಿನ್ನೆಲೆಯಲ್ಲಿ ಕೇವಲ ಆಶ್ವಾಸನೆ ನೀಡಿ ಜನರಿಗೆ ಮೋಸ ಮಾಡುವ ಪಕ್ಷಗಳ ಅಭ್ಯರ್ಥಿಗಳನ್ನು ಮತದಾರರು ತಿರಸ್ಕರಿಸಬೇಕಿದೆ’ ಎಂದು ಅವರು ನಂತರ ಸುದ್ದಿಗಾರ ಎದುರು ಅಭಿಪ್ರಾಯಪಟ್ಟರು.<br /> <br /> ಜನರನ್ನು ಪ್ರತಿನಿಧಿಸುವವರು ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕು. ಜನವಿರೋಧಿ ನೀತಿ ಅನುಸರಿಸುವವರಿಗೆ ತಕ್ಕ ಪಾಠ ಕಲಿಸಬೇಕು. ಜನಪರ ಹೋರಾಟಗಳನ್ನು ರೂಪಿಸಿರುವ ಎಸ್ಯುಸಿಐ–ಸಿ ಪಕ್ಷ ಬೆಂಬಲಿಸುವ ಮೂಲಕ ಮತದಾರರು ತಮ್ಮ ಸೇವೆಗೆ ಅನುವು ಮಾಡಿಕೊಡಬೇಕು ಎಂದು ಅವರು ಕೋರಿದರು.<br /> <br /> ಪಕ್ಷದ ಮುಖಂಡರಾದ ಕೆ.ಸೋಮಶೇಖರ್, ಆರ್. ಸೋಮಶೇಖರಗೌಡ, ಎಂ.ಎನ್ ಮಂಜುಳಾ, ಜಿ.ಎಂ. ವೀರಭದ್ರಯ್ಯ, ಎಸ್.ಜಿ. ನಾಗರತ್ನಾ ಈ ಸಂದರ್ಭ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>