<p><strong>ಆಲೂರು: </strong>ತಾಲ್ಲೂಕಿನಲ್ಲಿ ನಡೆದ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ನಡೆದ ಕೆಲವು ಅಹಿತಕರ ಘಟನೆಗೆ ಕಾರಣರಾದವರನ್ನು ಖಂಡಿಸಿ ಇಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂಬ ನಿರ್ಣಯಕ್ಕೆ ಸರ್ವ ಪಕ್ಷದ ಮುಖಂಡರುಗಳು ಪಟ್ಟಣದ ಗಣಪತಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಸಮ್ಮತಿ ಸೂಚಿಸಿದರು.<br /> <br /> ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಚ್.ಪಿ.ಮೋಹನ್, ರಾಜಕಾರಣದಲ್ಲಿ ಈ ಹಿಂದೆಯೂ ಚಿಕ್ಕಪುಟ್ಟ ಗಲಭೆ ನಡೆದರೂ ಕೋರ್ಟು ಮೆಟ್ಟಿಲೇರದೇ ಸಂಧಾನದಲ್ಲಿ ಮುಕ್ತಾಯ ಗೊಳುತ್ತಿದ್ದವು. ಆದರೆ, ಈ ಬಾರಿ ಕೆಲ ರಾಜಕೀಯ ಮುಖಂಡರು ಚಿಕ್ಕ ಪುಟ್ಟ ಘಟನೆ ದೊಡ್ಡದು ಮಾಡಿ ಕೆಟ್ಟ ರಾಜಕೀಯ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ. ಇಂತವರನ್ನು ಎಲ್ಲರು ಖಂಡಿಸಬೇಕು ಎಂದರು.<br /> <br /> ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರವಾಗಿ ಕಾರ್ಯಕರ್ತರು ಕೆಲಸ ಮಾಡುವುದು ಸರ್ವೇಸಾಮಾನ್ಯ. ಚುನಾವಣೆ ನಂತರ ಎಲ್ಲರೂ ಅಣ್ಣ-ತಮ್ಮಂದಿರಂತೆ ಇರಬೇಕು. ದ್ವೇಷ ಸಾಧಿಸುವುದು ಸಮಾಜಕ್ಕೆ ಮಾರಕ. ಇನ್ನು ಮುಂದೆ ಈ ರೀತಿಯಾಗದಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದರು.<br /> <br /> ಬಿ.ಎಸ್.ಪಿ.ಮುಖಂಡ ಬಿ.ಸಿ.ಶಂಕರಾಚಾರ್, ಈವರೆಗೂ ತಾಲ್ಲೂಕಿನಲ್ಲಿ ಎಲ್ಲಾ ಪಕ್ಷದವರು ಸಹೋದರಂತೆ ಬಾಳುತಿದ್ದರು. ಆದರೆ ಈ ಬಾರಿ ಸೇಡಿನ ರಾಜಕಾರಣ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುವರ ವಿರುದ್ಧ ಹೊರಾಡಬೇಕಾಗಿದೆ ಎಂದರು. <br /> <br /> ಕಾಂಗ್ರೆಸ್ ಮುಖಂಡ ಹುಣಸವಳ್ಳಿ ಮಜುನಾಥ್ ಮಾತನಾಡಿ ಇಂತಹ ಕೃತ್ಯಗಳಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಯಾರು ಸಹ ಪ್ರಚೋದನೆಗಳಿಗೆ ಕಿವಿಗೊಡದೇ ಇರುವುದು ಸೂಕ್ತ ಎಂದರು. ಈ ಘಟನೆಗಳಲ್ಲಿ ತೊಂದರೆ ಅನುಭಸಿದವರು ಅಳಲನ್ನು ತೋಡಿಕೊಂಡರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎ.ಎಸ್.ನಿಂಗರಾಜ್, ಸದಸ್ಯ ಎಚ್.ಬಿ.ಧರ್ಮರಾಜ್, ಎ.ಎಚ್.ಲಕ್ಷ್ಮಣ್, ತಾ.ರೈತ ಸಂಘದ ಅಧ್ಯಕ್ಷ ಕಣಗಾಲ್ ಮೂರ್ತಿ, ಅಜ್ಜೇಗೌಡ, ಎಂ.ಬಿ.ಜಯಕಾಂತ್, ಕೆ.ಆರ್.ಲೋಕೇಶ್, ಜಿ.ಆರ್.ರಂಗನಾಥ್, ಪುರುಷೋತ್ತಮ್, ಶಾಂತಕೃಷ್ಣ, ಅಪ್ಪಾಜಿಗೌಡ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲೂರು: </strong>ತಾಲ್ಲೂಕಿನಲ್ಲಿ ನಡೆದ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ನಡೆದ ಕೆಲವು ಅಹಿತಕರ ಘಟನೆಗೆ ಕಾರಣರಾದವರನ್ನು ಖಂಡಿಸಿ ಇಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂಬ ನಿರ್ಣಯಕ್ಕೆ ಸರ್ವ ಪಕ್ಷದ ಮುಖಂಡರುಗಳು ಪಟ್ಟಣದ ಗಣಪತಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಸಮ್ಮತಿ ಸೂಚಿಸಿದರು.<br /> <br /> ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಚ್.ಪಿ.ಮೋಹನ್, ರಾಜಕಾರಣದಲ್ಲಿ ಈ ಹಿಂದೆಯೂ ಚಿಕ್ಕಪುಟ್ಟ ಗಲಭೆ ನಡೆದರೂ ಕೋರ್ಟು ಮೆಟ್ಟಿಲೇರದೇ ಸಂಧಾನದಲ್ಲಿ ಮುಕ್ತಾಯ ಗೊಳುತ್ತಿದ್ದವು. ಆದರೆ, ಈ ಬಾರಿ ಕೆಲ ರಾಜಕೀಯ ಮುಖಂಡರು ಚಿಕ್ಕ ಪುಟ್ಟ ಘಟನೆ ದೊಡ್ಡದು ಮಾಡಿ ಕೆಟ್ಟ ರಾಜಕೀಯ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ. ಇಂತವರನ್ನು ಎಲ್ಲರು ಖಂಡಿಸಬೇಕು ಎಂದರು.<br /> <br /> ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರವಾಗಿ ಕಾರ್ಯಕರ್ತರು ಕೆಲಸ ಮಾಡುವುದು ಸರ್ವೇಸಾಮಾನ್ಯ. ಚುನಾವಣೆ ನಂತರ ಎಲ್ಲರೂ ಅಣ್ಣ-ತಮ್ಮಂದಿರಂತೆ ಇರಬೇಕು. ದ್ವೇಷ ಸಾಧಿಸುವುದು ಸಮಾಜಕ್ಕೆ ಮಾರಕ. ಇನ್ನು ಮುಂದೆ ಈ ರೀತಿಯಾಗದಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದರು.<br /> <br /> ಬಿ.ಎಸ್.ಪಿ.ಮುಖಂಡ ಬಿ.ಸಿ.ಶಂಕರಾಚಾರ್, ಈವರೆಗೂ ತಾಲ್ಲೂಕಿನಲ್ಲಿ ಎಲ್ಲಾ ಪಕ್ಷದವರು ಸಹೋದರಂತೆ ಬಾಳುತಿದ್ದರು. ಆದರೆ ಈ ಬಾರಿ ಸೇಡಿನ ರಾಜಕಾರಣ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುವರ ವಿರುದ್ಧ ಹೊರಾಡಬೇಕಾಗಿದೆ ಎಂದರು. <br /> <br /> ಕಾಂಗ್ರೆಸ್ ಮುಖಂಡ ಹುಣಸವಳ್ಳಿ ಮಜುನಾಥ್ ಮಾತನಾಡಿ ಇಂತಹ ಕೃತ್ಯಗಳಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಯಾರು ಸಹ ಪ್ರಚೋದನೆಗಳಿಗೆ ಕಿವಿಗೊಡದೇ ಇರುವುದು ಸೂಕ್ತ ಎಂದರು. ಈ ಘಟನೆಗಳಲ್ಲಿ ತೊಂದರೆ ಅನುಭಸಿದವರು ಅಳಲನ್ನು ತೋಡಿಕೊಂಡರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎ.ಎಸ್.ನಿಂಗರಾಜ್, ಸದಸ್ಯ ಎಚ್.ಬಿ.ಧರ್ಮರಾಜ್, ಎ.ಎಚ್.ಲಕ್ಷ್ಮಣ್, ತಾ.ರೈತ ಸಂಘದ ಅಧ್ಯಕ್ಷ ಕಣಗಾಲ್ ಮೂರ್ತಿ, ಅಜ್ಜೇಗೌಡ, ಎಂ.ಬಿ.ಜಯಕಾಂತ್, ಕೆ.ಆರ್.ಲೋಕೇಶ್, ಜಿ.ಆರ್.ರಂಗನಾಥ್, ಪುರುಷೋತ್ತಮ್, ಶಾಂತಕೃಷ್ಣ, ಅಪ್ಪಾಜಿಗೌಡ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>