<p><strong>ವರ್ನಾ, ಬಲ್ಗೇರಿಯ (ಪಿಟಿಐ): </strong>ಗ್ರ್ಯಾಂಡ್ ಮಾಸ್ಟರ್ ವಿದಿತ್ ಗುಜರಾತಿ ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಯುರೋಪ್ ಗೋಲ್ಡನ್ ಸ್ಯಾಂಡ್ಸ್ ಚೆಸ್ ಟೂರ್ನಿಯಲ್ಲಿ ಮೂರನೇ ಸುತ್ತಿನ ಆಟದ ಅಂತ್ಯಕ್ಕೆ ಜಂಟಿ ಅಗ್ರಸ್ಥಾನಲ್ಲಿದ್ದಾರೆ ಮುನ್ನಡೆದಿದ್ದಾರೆ.<br /> <br /> ಗುರುವಾರ ನಡೆದ ಪಂದ್ಯದಲ್ಲಿ ವಿದಿತ್ ಅಂತರರಾಷ್ಟ್ರೀಯ ಮಾಸ್ಟರ್ ಸರ್ಬಿಯಾದ ಜೊರಾನ್ ಅರ್ರೊವಿಕ್ ಎದುರು ಗೆಲುವು ಸಾಧಿಸಿದರು. ವಿದಿತ್ ಬಳಿ ಮೂರು ಪಾಯಿಂಟ್ಗಳಿವೆ. ಕಿರಿಯ ಗ್ರ್ಯಾಂಡ್ಮಾಸ್ಟರ್ ಸಹಜ್ ಗ್ರೋವರ್ ಕೂಡ ಮೂರು ಪಾಯಿಂಟ್ ಹೊಂದಿದ್ದಾರೆ. ಅವರು ಫ್ರಾನ್ಸ್ನ ಮ್ಯಾನುಯೆಲ್ ವೇಲ್ಸ್ ಎದುರು ಗೆದ್ದರು. ಎಂ.ಆರ್.ವೆಂಕಟೇಶ್ ಹಾಗೂ ಎಂ.ಶ್ಯಾಮ್ಸುಂದರ್ ಕೂಡ ಮೂರು ಪಾಯಿಂಟ್ ಹೊಂದಿದ್ದು ಜಂಟಿ ಅಗ್ರಸ್ಥಾನದಲ್ಲಿದ್ದಾರೆ.<br /> <br /> ಆದರೆ ಹಿಂದಿನ ಪಂದ್ಯಗಳಲ್ಲಿ ಅಚ್ಚರಿ ಗೆಲುವು ಸಾಧಿಸಿದ್ದ ಶಾರ್ದೂಲ್ ಗಾಗರೆ ಹಾಗೂ ಅನುರಾಗ್ ಮಹಾಮಲ್ ಮೂರನೇ ಸುತ್ತಿನ ಪಂದ್ಯಗಳಲ್ಲಿ ಆಘಾತ ಅನುಭವಿಸಿದರು. ದೀಪದಾಸ್ ಸೇನಾಗುಪ್ತಾ, ದೇವಾಶಿಸ್ ದಾಸ್, ಇಶಾ ಕಾರ್ವಾಡೆ, ಕಿರಣ್ ಮನೀಷ್ ಮೊಹಾಂತಿ, ಸಾಗರ್ ಷಾ ಗೆಲುವು ಸಾಧಿಸಿ ಪೂರ್ಣ ಪಾಯಿಂಟ್ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವರ್ನಾ, ಬಲ್ಗೇರಿಯ (ಪಿಟಿಐ): </strong>ಗ್ರ್ಯಾಂಡ್ ಮಾಸ್ಟರ್ ವಿದಿತ್ ಗುಜರಾತಿ ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಯುರೋಪ್ ಗೋಲ್ಡನ್ ಸ್ಯಾಂಡ್ಸ್ ಚೆಸ್ ಟೂರ್ನಿಯಲ್ಲಿ ಮೂರನೇ ಸುತ್ತಿನ ಆಟದ ಅಂತ್ಯಕ್ಕೆ ಜಂಟಿ ಅಗ್ರಸ್ಥಾನಲ್ಲಿದ್ದಾರೆ ಮುನ್ನಡೆದಿದ್ದಾರೆ.<br /> <br /> ಗುರುವಾರ ನಡೆದ ಪಂದ್ಯದಲ್ಲಿ ವಿದಿತ್ ಅಂತರರಾಷ್ಟ್ರೀಯ ಮಾಸ್ಟರ್ ಸರ್ಬಿಯಾದ ಜೊರಾನ್ ಅರ್ರೊವಿಕ್ ಎದುರು ಗೆಲುವು ಸಾಧಿಸಿದರು. ವಿದಿತ್ ಬಳಿ ಮೂರು ಪಾಯಿಂಟ್ಗಳಿವೆ. ಕಿರಿಯ ಗ್ರ್ಯಾಂಡ್ಮಾಸ್ಟರ್ ಸಹಜ್ ಗ್ರೋವರ್ ಕೂಡ ಮೂರು ಪಾಯಿಂಟ್ ಹೊಂದಿದ್ದಾರೆ. ಅವರು ಫ್ರಾನ್ಸ್ನ ಮ್ಯಾನುಯೆಲ್ ವೇಲ್ಸ್ ಎದುರು ಗೆದ್ದರು. ಎಂ.ಆರ್.ವೆಂಕಟೇಶ್ ಹಾಗೂ ಎಂ.ಶ್ಯಾಮ್ಸುಂದರ್ ಕೂಡ ಮೂರು ಪಾಯಿಂಟ್ ಹೊಂದಿದ್ದು ಜಂಟಿ ಅಗ್ರಸ್ಥಾನದಲ್ಲಿದ್ದಾರೆ.<br /> <br /> ಆದರೆ ಹಿಂದಿನ ಪಂದ್ಯಗಳಲ್ಲಿ ಅಚ್ಚರಿ ಗೆಲುವು ಸಾಧಿಸಿದ್ದ ಶಾರ್ದೂಲ್ ಗಾಗರೆ ಹಾಗೂ ಅನುರಾಗ್ ಮಹಾಮಲ್ ಮೂರನೇ ಸುತ್ತಿನ ಪಂದ್ಯಗಳಲ್ಲಿ ಆಘಾತ ಅನುಭವಿಸಿದರು. ದೀಪದಾಸ್ ಸೇನಾಗುಪ್ತಾ, ದೇವಾಶಿಸ್ ದಾಸ್, ಇಶಾ ಕಾರ್ವಾಡೆ, ಕಿರಣ್ ಮನೀಷ್ ಮೊಹಾಂತಿ, ಸಾಗರ್ ಷಾ ಗೆಲುವು ಸಾಧಿಸಿ ಪೂರ್ಣ ಪಾಯಿಂಟ್ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>