<p><strong>ಮಂಗಳೂರು: </strong>ಬೆಂಗಳೂರಿನ ಎಂ.ಸಾತ್ವಿಕ್, ರಾಜ್ಯ 15 ವರ್ಷದೊಳಗಿನವರ ಫಿಡೆ ರೇಟೆಡ್ ಓಪನ್ ಚೆಸ್ ಟೂರ್ನಿಯ ಆರನೇ ಸುತ್ತಿನ ನಂತರ ಐದೂವರೆ ಪಾಯಿಂಟ್ಸ್ ಸಂಗ್ರಹಿಸಿದ್ದು, ಶುಕ್ರವಾರದ ಕೊನೆಗೆ ನಿಕಟ ಸ್ಪರ್ಧಿಗಳಿಗಿಂತ ಒಂದು ಪಾಯಿಂಟ್ ಮುನ್ನಡೆಯ ಅನುಕೂಲ ಸಾಧಿಸಿದ್ದಾರೆ.</p>.<p>ದ.ಕ. ಜಿಲ್ಲಾ ಚೆಸ್ ಸಂಸ್ಥೆ (ಎಸ್ಕೆಡಿಸಿಎ) ಆಶ್ರಯದಲ್ಲಿ ಕೊಡಿಯಾಲಬೈಲ್ನ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಸಾತ್ವಿಕ್ ಅವರನ್ನು ಮೂವರು ಹಿಂಬಾಲಿಸಿದ್ದಾರೆ. ಮಂಗಳೂರಿನ ಆಂಡ್ರಿಯಾ ಎಲ್.ಡಿಸೋಜ, ಕೊಡಗಿನ ಆಗಸ್ಟಿನ್ ಮತ್ತು ಶಿವಮೊಗ್ಗದ ನಿಖಿಲ್ ಆರ್.ಉಮೇಶ್ ತಲಾ ನಾಲ್ಕೂವರೆ ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.</p>.<p>ಮಂಗಳೂರಿನ ಶಾಬ್ಧಿಕ್ ವರ್ಮಾ, ಶರಣ್ ರಾವ್, ಬೆಂಗಳೂರಿನ ಪಾರ್ಥಸಾರಥಿ ತಲಾ ನಾಲ್ಕು ಪಾಯಿಂಟ್ಗಳೊಡನೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.</p>.<p>ಆರನೇ ಸುತ್ತಿನ ಮೊದಲ ಬೋರ್ಡ್ನ ಪಂದ್ಯ ಹೋರಾಟದಿಂದ ಕೂಡಿದ್ದರೂ ಎರಡನೇ ಶ್ರೇಯಾಂಕದ ಸಾತ್ವಿಕ್, ನಿಖಿಲ್ ಆರ್.ಉಮೇಶ್ ಜತೆ ಪಾಯಿಂಟ್ ಹಂಚಿಕೊಳ್ಳಬೇಕಾಯಿತು. ಆಂಡ್ರಿಯಾ ಡಿಸೋಜ ಮತ್ತು ಪಾರ್ಥಸಾರಥಿ ನಡುವಣ ಎರಡನೇ ಬೋರ್ಡ್ ಪಂದ್ಯವೂ ಡ್ರಾ ಆಯಿತು.</p>.<p>ಆರಂಭದ ಸುತ್ತುಗಳ ಹಿನ್ನಡೆಯಿಂದ ಚೇತರಿಸಿದ ಆಗಸ್ಟಿನ್, ಮೈಸೂರಿನ ಎಚ್.ಎ.ಅಮೋಘ (3.5) ವಿರುದ್ಧ 21 ನಡೆಗಳಲ್ಲಿ ಜಯಗಳಿಸಿದರೆ, ಮಂಗಳೂರಿನ ಪಿ.ಗೋಪಾಲಕೃಷ್ಣ ನಾಯಕ್ (3), ಶರಣ್ ರಾವ್ ಎದುರು ಶರಣಾದ. ವಿವೇಕರಾಜ್ (3), ಶಾಬ್ಧಿಕ್ ವರ್ಮಾ ಎದುರು ಸೋಲು ಕಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಬೆಂಗಳೂರಿನ ಎಂ.ಸಾತ್ವಿಕ್, ರಾಜ್ಯ 15 ವರ್ಷದೊಳಗಿನವರ ಫಿಡೆ ರೇಟೆಡ್ ಓಪನ್ ಚೆಸ್ ಟೂರ್ನಿಯ ಆರನೇ ಸುತ್ತಿನ ನಂತರ ಐದೂವರೆ ಪಾಯಿಂಟ್ಸ್ ಸಂಗ್ರಹಿಸಿದ್ದು, ಶುಕ್ರವಾರದ ಕೊನೆಗೆ ನಿಕಟ ಸ್ಪರ್ಧಿಗಳಿಗಿಂತ ಒಂದು ಪಾಯಿಂಟ್ ಮುನ್ನಡೆಯ ಅನುಕೂಲ ಸಾಧಿಸಿದ್ದಾರೆ.</p>.<p>ದ.ಕ. ಜಿಲ್ಲಾ ಚೆಸ್ ಸಂಸ್ಥೆ (ಎಸ್ಕೆಡಿಸಿಎ) ಆಶ್ರಯದಲ್ಲಿ ಕೊಡಿಯಾಲಬೈಲ್ನ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಸಾತ್ವಿಕ್ ಅವರನ್ನು ಮೂವರು ಹಿಂಬಾಲಿಸಿದ್ದಾರೆ. ಮಂಗಳೂರಿನ ಆಂಡ್ರಿಯಾ ಎಲ್.ಡಿಸೋಜ, ಕೊಡಗಿನ ಆಗಸ್ಟಿನ್ ಮತ್ತು ಶಿವಮೊಗ್ಗದ ನಿಖಿಲ್ ಆರ್.ಉಮೇಶ್ ತಲಾ ನಾಲ್ಕೂವರೆ ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.</p>.<p>ಮಂಗಳೂರಿನ ಶಾಬ್ಧಿಕ್ ವರ್ಮಾ, ಶರಣ್ ರಾವ್, ಬೆಂಗಳೂರಿನ ಪಾರ್ಥಸಾರಥಿ ತಲಾ ನಾಲ್ಕು ಪಾಯಿಂಟ್ಗಳೊಡನೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.</p>.<p>ಆರನೇ ಸುತ್ತಿನ ಮೊದಲ ಬೋರ್ಡ್ನ ಪಂದ್ಯ ಹೋರಾಟದಿಂದ ಕೂಡಿದ್ದರೂ ಎರಡನೇ ಶ್ರೇಯಾಂಕದ ಸಾತ್ವಿಕ್, ನಿಖಿಲ್ ಆರ್.ಉಮೇಶ್ ಜತೆ ಪಾಯಿಂಟ್ ಹಂಚಿಕೊಳ್ಳಬೇಕಾಯಿತು. ಆಂಡ್ರಿಯಾ ಡಿಸೋಜ ಮತ್ತು ಪಾರ್ಥಸಾರಥಿ ನಡುವಣ ಎರಡನೇ ಬೋರ್ಡ್ ಪಂದ್ಯವೂ ಡ್ರಾ ಆಯಿತು.</p>.<p>ಆರಂಭದ ಸುತ್ತುಗಳ ಹಿನ್ನಡೆಯಿಂದ ಚೇತರಿಸಿದ ಆಗಸ್ಟಿನ್, ಮೈಸೂರಿನ ಎಚ್.ಎ.ಅಮೋಘ (3.5) ವಿರುದ್ಧ 21 ನಡೆಗಳಲ್ಲಿ ಜಯಗಳಿಸಿದರೆ, ಮಂಗಳೂರಿನ ಪಿ.ಗೋಪಾಲಕೃಷ್ಣ ನಾಯಕ್ (3), ಶರಣ್ ರಾವ್ ಎದುರು ಶರಣಾದ. ವಿವೇಕರಾಜ್ (3), ಶಾಬ್ಧಿಕ್ ವರ್ಮಾ ಎದುರು ಸೋಲು ಕಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>