<p><strong>ಹೈದರಾಬಾದ್: </strong>ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್. ಜಗನ್ಮೋಹನ್ ರೆಡ್ಡಿ ಆಪ್ತ ಮತ್ತು ಅವರ ಸಂಸ್ಥೆಗಳ ಲೆಕ್ಕಪತ್ರಗಳ ಪರಿಶೋಧಕ ವಿಜಯ್ ಸಾಯಿ ರೆಡ್ಡಿ ಇಲ್ಲಿನ ಸಿಬಿಐ ನ್ಯಾಯಾಲಯಕ್ಕೆ ಸೋಮವಾರ ಶರಣಾಗಿದ್ದಾರೆ.<br /> <br /> ಅಕ್ರಮ ಆಸ್ತಿ ಪ್ರಕರಣ ಕುರಿತಂತೆ ವಿಜಯ್ ಸಾಯಿ ರೆಡ್ಡಿಗೆ ನೀಡಲಾಗಿದ್ದ ಜಾಮೀನನ್ನು ಆಂಧ್ರ ಪ್ರದೇಶ ಹೈಕೋರ್ಟ್ ಎರಡು ದಿನಗಳ ಹಿಂದೆ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ಶರಣಾಗಿದ್ದಾರೆ.<br /> ಸಿಬಿಐ ನ್ಯಾಯಾಲಯವು ವಿಜಯ್ ಸಾಯಿ ರೆಡ್ಡಿ ಅವರನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.<br /> <br /> <strong>ಅಸ್ಸಾಂ: ಸರ್ಕಾರದ್ದೇ ವಾಹಿನಿ ಪ್ರಾರಂಭ?<br /> </strong><br /> <strong>ಗುವಾಹಟಿ (ಪಿಟಿಐ): </strong>ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅನುಸರಿಸಲು ಮುಂದಾಗಿರುವ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ `ತಮ್ಮ ಸರ್ಕಾರದಿಂದ ಟಿವಿ ವಾಹಿನಿಯನ್ನು ಪ್ರಾರಂಭಿಸುವ ಯೋಜನೆ ಇದೆ~ ಎಂದು ಸೋಮವಾರ ಹೇಳಿದ್ದಾರೆ.<br /> <br /> ವಿದ್ಯುನ್ಮಾನ ಮಾಧ್ಯಮಗಳು ಮಿತಿಮೀರಿ ವರ್ತಿಸುತ್ತಿದ್ದು, ಅವುಗಳು ಮಾಡುವ ವರದಿ ನಿಷ್ಪಕ್ಷಪಾತವಾಗಿಲ್ಲ. ಹೀಗಾಗಿ ಸರ್ಕಾರದ ಕಾರ್ಯವಿಧಾನಗಳ ಬಗ್ಗೆ ಅಧಿಕೃತ ಮಾಹಿತಿ ನೀಡುವ ವಾಹಿನಿಯಿದ್ದರೆ ಸುದ್ದಿಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಹಾಯವಾಗಬಲ್ಲುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. <br /> <br /> <strong>ಕಾನ್ಪುರದಲ್ಲಿ 200 ಅಂಗಡಿ ಭಸ್ಮ<br /> </strong><br /> <strong>ಕಾನ್ಪುರ (ಐಎಎನ್ಎಸ್): </strong>ಉತ್ತರ ಪ್ರದೇಶದ ಪ್ರಮುಖ ನಗರ ಕಾನ್ಪುರದ ಜನದಟ್ಟಣೆಯ ಪ್ರದೇಶದಲ್ಲಿ ಸೋಮವಾರ ಬೆಂಕಿ ತಗುಲಿ ಸುಮಾರು 200ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ನಗರದ ಬಾಕರ್ಗಂಜ್ ಪ್ರದೇಶದಲ್ಲಿ ಈ ಬೆಂಕಿ ಆಕಸ್ಮಿಕ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.<br /> <br /> <strong>ಟಿಕ್ಕು ಹತ್ಯೆ ಪ್ರಕರಣ: ಆರೋಪಿಗೆ ಸಹಕರಿಸಿದ ವ್ಯಕ್ತಿ ಬಂಧನ</strong><br /> <strong>ಮುಂಬೈ (ಪಿಟಿಐ): </strong>ದೆಹಲಿ ಮೂಲದ ಉದ್ಯಮಿ ಅರುಣ್ಕುಮಾರ ಟಿಕ್ಕು ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಜಯ್ ಪಲಾಂಡೆಗೆ ಸಹಾಯ ಮಾಡಿದ ಆರೋಪದ ಮೇಲೆ ಷೇರು ದಲ್ಲಾಳಿ ಗೌತಮ್ ವೋರಾನನ್ನು ಬಂಧಿಸಲಾಗಿದೆ.<br /> <br /> ಉದ್ಯಮಿ ಅರುಣ್ಕುಮಾರ (62) ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪಲಾಂಡೆಯನ್ನು ಏಪ್ರಿಲ್ 10ರಂದು ಪೊಲೀಸರು ಬಂಧಿಸಿದ್ದರು. ಆದರೆ, ಅದೇ ದಿನ ಸಂಜೆ ಪೊಲೀಸ್ ವಾಹನದಿಂದ ತಪ್ಪಿಸಿಕೊಂಡ ಪಲಾಂಡೆಗೆ ಅಡಗಿಕೊಳ್ಳಲು ವೋರಾ ಸಹಕರಿಸಿದ್ದ.<br /> <br /> ಏ.11 ರಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಥಾಯ್ಲೆಂಡ್ಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪಲಾಂಡ್ನನ್ನು ಮತ್ತೆ ಬಂಧಿಸಲಾಗಿತ್ತು. <br /> ಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಳ್ಳಲು ಸಹಕರಿಸಿದ್ದಕ್ಕೆ ವೋರಾನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್: </strong>ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್. ಜಗನ್ಮೋಹನ್ ರೆಡ್ಡಿ ಆಪ್ತ ಮತ್ತು ಅವರ ಸಂಸ್ಥೆಗಳ ಲೆಕ್ಕಪತ್ರಗಳ ಪರಿಶೋಧಕ ವಿಜಯ್ ಸಾಯಿ ರೆಡ್ಡಿ ಇಲ್ಲಿನ ಸಿಬಿಐ ನ್ಯಾಯಾಲಯಕ್ಕೆ ಸೋಮವಾರ ಶರಣಾಗಿದ್ದಾರೆ.<br /> <br /> ಅಕ್ರಮ ಆಸ್ತಿ ಪ್ರಕರಣ ಕುರಿತಂತೆ ವಿಜಯ್ ಸಾಯಿ ರೆಡ್ಡಿಗೆ ನೀಡಲಾಗಿದ್ದ ಜಾಮೀನನ್ನು ಆಂಧ್ರ ಪ್ರದೇಶ ಹೈಕೋರ್ಟ್ ಎರಡು ದಿನಗಳ ಹಿಂದೆ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ಶರಣಾಗಿದ್ದಾರೆ.<br /> ಸಿಬಿಐ ನ್ಯಾಯಾಲಯವು ವಿಜಯ್ ಸಾಯಿ ರೆಡ್ಡಿ ಅವರನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.<br /> <br /> <strong>ಅಸ್ಸಾಂ: ಸರ್ಕಾರದ್ದೇ ವಾಹಿನಿ ಪ್ರಾರಂಭ?<br /> </strong><br /> <strong>ಗುವಾಹಟಿ (ಪಿಟಿಐ): </strong>ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅನುಸರಿಸಲು ಮುಂದಾಗಿರುವ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ `ತಮ್ಮ ಸರ್ಕಾರದಿಂದ ಟಿವಿ ವಾಹಿನಿಯನ್ನು ಪ್ರಾರಂಭಿಸುವ ಯೋಜನೆ ಇದೆ~ ಎಂದು ಸೋಮವಾರ ಹೇಳಿದ್ದಾರೆ.<br /> <br /> ವಿದ್ಯುನ್ಮಾನ ಮಾಧ್ಯಮಗಳು ಮಿತಿಮೀರಿ ವರ್ತಿಸುತ್ತಿದ್ದು, ಅವುಗಳು ಮಾಡುವ ವರದಿ ನಿಷ್ಪಕ್ಷಪಾತವಾಗಿಲ್ಲ. ಹೀಗಾಗಿ ಸರ್ಕಾರದ ಕಾರ್ಯವಿಧಾನಗಳ ಬಗ್ಗೆ ಅಧಿಕೃತ ಮಾಹಿತಿ ನೀಡುವ ವಾಹಿನಿಯಿದ್ದರೆ ಸುದ್ದಿಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಹಾಯವಾಗಬಲ್ಲುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. <br /> <br /> <strong>ಕಾನ್ಪುರದಲ್ಲಿ 200 ಅಂಗಡಿ ಭಸ್ಮ<br /> </strong><br /> <strong>ಕಾನ್ಪುರ (ಐಎಎನ್ಎಸ್): </strong>ಉತ್ತರ ಪ್ರದೇಶದ ಪ್ರಮುಖ ನಗರ ಕಾನ್ಪುರದ ಜನದಟ್ಟಣೆಯ ಪ್ರದೇಶದಲ್ಲಿ ಸೋಮವಾರ ಬೆಂಕಿ ತಗುಲಿ ಸುಮಾರು 200ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ನಗರದ ಬಾಕರ್ಗಂಜ್ ಪ್ರದೇಶದಲ್ಲಿ ಈ ಬೆಂಕಿ ಆಕಸ್ಮಿಕ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.<br /> <br /> <strong>ಟಿಕ್ಕು ಹತ್ಯೆ ಪ್ರಕರಣ: ಆರೋಪಿಗೆ ಸಹಕರಿಸಿದ ವ್ಯಕ್ತಿ ಬಂಧನ</strong><br /> <strong>ಮುಂಬೈ (ಪಿಟಿಐ): </strong>ದೆಹಲಿ ಮೂಲದ ಉದ್ಯಮಿ ಅರುಣ್ಕುಮಾರ ಟಿಕ್ಕು ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಜಯ್ ಪಲಾಂಡೆಗೆ ಸಹಾಯ ಮಾಡಿದ ಆರೋಪದ ಮೇಲೆ ಷೇರು ದಲ್ಲಾಳಿ ಗೌತಮ್ ವೋರಾನನ್ನು ಬಂಧಿಸಲಾಗಿದೆ.<br /> <br /> ಉದ್ಯಮಿ ಅರುಣ್ಕುಮಾರ (62) ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪಲಾಂಡೆಯನ್ನು ಏಪ್ರಿಲ್ 10ರಂದು ಪೊಲೀಸರು ಬಂಧಿಸಿದ್ದರು. ಆದರೆ, ಅದೇ ದಿನ ಸಂಜೆ ಪೊಲೀಸ್ ವಾಹನದಿಂದ ತಪ್ಪಿಸಿಕೊಂಡ ಪಲಾಂಡೆಗೆ ಅಡಗಿಕೊಳ್ಳಲು ವೋರಾ ಸಹಕರಿಸಿದ್ದ.<br /> <br /> ಏ.11 ರಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಥಾಯ್ಲೆಂಡ್ಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪಲಾಂಡ್ನನ್ನು ಮತ್ತೆ ಬಂಧಿಸಲಾಗಿತ್ತು. <br /> ಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಳ್ಳಲು ಸಹಕರಿಸಿದ್ದಕ್ಕೆ ವೋರಾನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>