<p><span style="font-size: 26px;"><strong>ಮೈಸೂರು: </strong>ವಿವೇಕಾನಂದ ಇನ್ಸ್ಟಿಟ್ಯೂಟ್ ಫಾರ್ ಲೀಡರ್ಶಿಪ್ ಡೆವಲೆಪ್ಮೆಂಟ್ (ವಿ-ಲೀಡ್) ವತಿಯಿಂದ ಪ್ರಜಾಪ್ರಭುತ್ವ ಸಬಲೀಕರಣ ಅಂಗವಾಗಿ ಬಸವೇಶ್ವರ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಜನಜಾಗೃತಿ ರಥ, ಬೀದಿ ನಾಟಕ ಹಾಗೂ ಭಿತ್ತಿಪತ್ರಗಳ ಹಂಚಿಕೆ ಅಭಿಯಾನಕ್ಕೆ ಪತ್ರಕರ್ತ ಕೃಷ್ಣವಟ್ಟಂ ಚಾಲನೆ ನೀಡಿದರು.</span><br /> <br /> `ನಾನು ನನ್ನ ಜೀವನದಲ್ಲಿ ಪಾರದರ್ಶಕವಾಗಿರುತ್ತೇನೆ, ನಾನು ಮಾಡುವ ಎಲ್ಲ ಕೆಲಸಗಳ ಬಗ್ಗೆ ಉತ್ತರದಾಯಿ ಆಗಿರುತ್ತೇನೆ ಹಾಗೂ ನನ್ನ ಜವಾಬ್ದಾರಿಗಳಲ್ಲಿ ಭಾಗವಹಿಸು ತ್ತೇನೆ', `ನಾನು ನನ್ನ ಮಗುವಿನ ಭವಿಷ್ಯಕ್ಕಾಗಿ ಮತ ಚಲಾಯಿಸಲು ಹೋಗು ತ್ತಿದ್ದೇನೆ' ಎಂಬ ಭಿತ್ತಿಪತ್ರ ಗಳನ್ನು ಸಾರ್ವಜನಿಕರಿಗೆ ವಿತರಿಸ ಲಾಯಿತು.<br /> <br /> ಮೈಸೂರಿನಿಂದ ಹೊರಟಿರುವ ಜಾಥಾ ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮೈಸೂರು ಗ್ರಾಮೀಣ, ನಂಜನಗೂಡು, ಪಿರಿಯಾಪಟ್ಟಣ, ತಿ.ನರಸೀಪುರ ತಾಲ್ಲೂಕುಗಳಲ್ಲಿ ಸಂಚರಿಸಲಿದೆ.<br /> <br /> ಬಳಿಕ ಮಾತನಾಡಿದ ಕೃಷ್ಣವಟ್ಟಂ, `ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಭಾಗಕ್ಕಿಂತ ನಗರ ವಾಸಿಗಳಿಗೇ ಮತದಾನದ ಅರಿವು ಮೂಡಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಗ್ರಾಮೀಣರಲ್ಲಿ ಮತದಾನದ ಬಗ್ಗೆ ಅರಿವು ಇರಲಿಲ್ಲ. ಆದರೆ, ಇಂದು ಹಳ್ಳಿ ಜನರೇ ನಗರವಾಸಿಗಳಿಗೆ ಮತದಾನದ ಮಹತ್ವ ತಿಳಿಸುವಂತಾಗಿದೆ.<br /> <br /> ಹಿಂದೆ ಜಾತಿ ಆಧಾರಿತ ಮತದಾನವಿರಲಿಲ್ಲ. ಆದರೆ, ಇಂದು ನೂರಾರು ಜಾತಿಗಳು ಹುಟ್ಟಿಕೊಂಡಿದ್ದು, ಜಾತಿ ಆಧಾರದ ಮೇಲೆ ಚುನಾವಣೆ ನಡೆಯುತ್ತಿವೆ, ಹೀಗಾಗಬಾರದು' ಎಂದು ಹೇಳಿದರು.<br /> <br /> ವಿ-ಲೀಡ್ ಸಂಸ್ಥಾಪಕ ಅಧ್ಯಕ್ಷ ಡಾ.ಆರ್.ಬಾಲಸುಬ್ರಹ್ಮಣ್ಯಂ, ವಸಂತ ಕುಮಾರ್ ಮೈಸೂರುಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಮೈಸೂರು: </strong>ವಿವೇಕಾನಂದ ಇನ್ಸ್ಟಿಟ್ಯೂಟ್ ಫಾರ್ ಲೀಡರ್ಶಿಪ್ ಡೆವಲೆಪ್ಮೆಂಟ್ (ವಿ-ಲೀಡ್) ವತಿಯಿಂದ ಪ್ರಜಾಪ್ರಭುತ್ವ ಸಬಲೀಕರಣ ಅಂಗವಾಗಿ ಬಸವೇಶ್ವರ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಜನಜಾಗೃತಿ ರಥ, ಬೀದಿ ನಾಟಕ ಹಾಗೂ ಭಿತ್ತಿಪತ್ರಗಳ ಹಂಚಿಕೆ ಅಭಿಯಾನಕ್ಕೆ ಪತ್ರಕರ್ತ ಕೃಷ್ಣವಟ್ಟಂ ಚಾಲನೆ ನೀಡಿದರು.</span><br /> <br /> `ನಾನು ನನ್ನ ಜೀವನದಲ್ಲಿ ಪಾರದರ್ಶಕವಾಗಿರುತ್ತೇನೆ, ನಾನು ಮಾಡುವ ಎಲ್ಲ ಕೆಲಸಗಳ ಬಗ್ಗೆ ಉತ್ತರದಾಯಿ ಆಗಿರುತ್ತೇನೆ ಹಾಗೂ ನನ್ನ ಜವಾಬ್ದಾರಿಗಳಲ್ಲಿ ಭಾಗವಹಿಸು ತ್ತೇನೆ', `ನಾನು ನನ್ನ ಮಗುವಿನ ಭವಿಷ್ಯಕ್ಕಾಗಿ ಮತ ಚಲಾಯಿಸಲು ಹೋಗು ತ್ತಿದ್ದೇನೆ' ಎಂಬ ಭಿತ್ತಿಪತ್ರ ಗಳನ್ನು ಸಾರ್ವಜನಿಕರಿಗೆ ವಿತರಿಸ ಲಾಯಿತು.<br /> <br /> ಮೈಸೂರಿನಿಂದ ಹೊರಟಿರುವ ಜಾಥಾ ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮೈಸೂರು ಗ್ರಾಮೀಣ, ನಂಜನಗೂಡು, ಪಿರಿಯಾಪಟ್ಟಣ, ತಿ.ನರಸೀಪುರ ತಾಲ್ಲೂಕುಗಳಲ್ಲಿ ಸಂಚರಿಸಲಿದೆ.<br /> <br /> ಬಳಿಕ ಮಾತನಾಡಿದ ಕೃಷ್ಣವಟ್ಟಂ, `ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಭಾಗಕ್ಕಿಂತ ನಗರ ವಾಸಿಗಳಿಗೇ ಮತದಾನದ ಅರಿವು ಮೂಡಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಗ್ರಾಮೀಣರಲ್ಲಿ ಮತದಾನದ ಬಗ್ಗೆ ಅರಿವು ಇರಲಿಲ್ಲ. ಆದರೆ, ಇಂದು ಹಳ್ಳಿ ಜನರೇ ನಗರವಾಸಿಗಳಿಗೆ ಮತದಾನದ ಮಹತ್ವ ತಿಳಿಸುವಂತಾಗಿದೆ.<br /> <br /> ಹಿಂದೆ ಜಾತಿ ಆಧಾರಿತ ಮತದಾನವಿರಲಿಲ್ಲ. ಆದರೆ, ಇಂದು ನೂರಾರು ಜಾತಿಗಳು ಹುಟ್ಟಿಕೊಂಡಿದ್ದು, ಜಾತಿ ಆಧಾರದ ಮೇಲೆ ಚುನಾವಣೆ ನಡೆಯುತ್ತಿವೆ, ಹೀಗಾಗಬಾರದು' ಎಂದು ಹೇಳಿದರು.<br /> <br /> ವಿ-ಲೀಡ್ ಸಂಸ್ಥಾಪಕ ಅಧ್ಯಕ್ಷ ಡಾ.ಆರ್.ಬಾಲಸುಬ್ರಹ್ಮಣ್ಯಂ, ವಸಂತ ಕುಮಾರ್ ಮೈಸೂರುಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>