<p><strong>ಬೆಂಗಳೂರು: </strong>ಕನಕಪುರ ರಸ್ತೆಯ ಅಗರ ಬಳಿ ಇರುವ ಹತ್ತು ಎಕರೆ ಜಮೀನಿಗಾಗಿ ಪೊಲೀಸ್ ಪಡೆ ಹಾಗೂ ಬಾಬಾ ರಾಮದೇವ ಅವರ ಪತಂಜಲಿ ಯೋಗಾಶ್ರಮ ಟ್ರಸ್ಟ್ ನಡುವೆ ತೀವ್ರ ಪೈಪೋಟಿ ನಡೆದಿದೆ.<br /> <br /> ಆ ಜಾಗದಲ್ಲಿ ಗರುಡ ಪಡೆ ಕಮಾಂಡೊಗಳಿಗಾಗಿ ತರಬೇತಿ ಕೇಂದ್ರ ಆರಂಭಿಸಬೇಕು ಎಂಬುದು ಪೊಲೀಸ್ ಪಡೆಯ ಚಿಂತನೆಯಾದರೆ, ಯೋಗಾಶ್ರಮ ಸ್ಥಾಪಿಸಲು ಜಾಗವನ್ನು ತಮಗೆ ನೀಡಬೇಕು ಎಂದು ಆಶ್ರಮದ ಆಡಳಿತ ಮಂಡಳಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ.</p>.<p><br /> `ಸರ್ಕಾರದ ಭೂಮಿಗಾಗಿ ಆಶ್ರಮದೊಂದಿಗೆ ಪೈಪೋಟಿ ನಡೆಸುವಂತಹ ಪರಿಸ್ಥಿತಿ ಬಂದಿರುವುದು ದುರಾದೃಷ್ಟಕರ. ಆದರೆ, ನಾವು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಆ ಜಾಗವನ್ನು ಕೇಳುತ್ತಿಲ್ಲ ಎಂಬುದನ್ನು ಸರ್ಕಾರ ಅರಿಯಬೇಕು. ತರಬೇತಿ ಕೇಂದ್ರ ಆರಂಭಿಸಲು ಐಎಸ್ಡಿ ಬಿಜೆಪಿ ಸರ್ಕಾರಕ್ಕೆ 40 ಎಕರೆ ಜಾಗ ಕೇಳಿತ್ತು.</p>.<p>ಆಗ ಸರ್ಕಾರ, ತರಬೇತಿ ಕೇಂದ್ರಕ್ಕಾಗಿ ಕೇವಲ 29 ಎಕರೆ ಜಾಗವನ್ನು ಮಾತ್ರ ನೀಡಿತ್ತು. ಇನ್ನೂ ಹತ್ತು ಎಕರೆ ಜಾಗವನ್ನು ನೀಡುವಂತೆ ವರ್ಷದ ಹಿಂದೆಯೇ ಮನವಿ ಮಾಡಲಾಗಿದೆ' ಎಂದು ಆಂತರಿಕ ಭದ್ರತಾ ವಿಭಾಗದ ಐಜಿಪಿ ಭಾಸ್ಕರ್ ರಾವ್ ಹೇಳಿದರು.<br /> <br /> ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ರಾಷ್ಟ್ರೀಯ ಭದ್ರತೆಗೆ ಒತ್ತು ನೀಡುವ ಒತ್ತಾಸೆಯನ್ನು ಹೊಂದಿದೆ. ಸರ್ಕಾರಕ್ಕೆ ಮತ್ತೊಂದು ಮನವಿ ಸಲ್ಲಿಸಲಾಗುವುದು ಎಂದರು.<br /> <br /> ಸದ್ಯ ಗರುಡ ಪಡೆಯ ಕಮಾಂಡೊಗಳು ಕೂಡ್ಲುವಿನ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್ಆರ್ಪಿ) ಜಾಗದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸರ್ಕಾರ ಅಗರದಲ್ಲಿರುವ ಜಮೀನನ್ನು ನೀಡಿದರೆ ವ್ಯವಸ್ಥಿತ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕನಕಪುರ ರಸ್ತೆಯ ಅಗರ ಬಳಿ ಇರುವ ಹತ್ತು ಎಕರೆ ಜಮೀನಿಗಾಗಿ ಪೊಲೀಸ್ ಪಡೆ ಹಾಗೂ ಬಾಬಾ ರಾಮದೇವ ಅವರ ಪತಂಜಲಿ ಯೋಗಾಶ್ರಮ ಟ್ರಸ್ಟ್ ನಡುವೆ ತೀವ್ರ ಪೈಪೋಟಿ ನಡೆದಿದೆ.<br /> <br /> ಆ ಜಾಗದಲ್ಲಿ ಗರುಡ ಪಡೆ ಕಮಾಂಡೊಗಳಿಗಾಗಿ ತರಬೇತಿ ಕೇಂದ್ರ ಆರಂಭಿಸಬೇಕು ಎಂಬುದು ಪೊಲೀಸ್ ಪಡೆಯ ಚಿಂತನೆಯಾದರೆ, ಯೋಗಾಶ್ರಮ ಸ್ಥಾಪಿಸಲು ಜಾಗವನ್ನು ತಮಗೆ ನೀಡಬೇಕು ಎಂದು ಆಶ್ರಮದ ಆಡಳಿತ ಮಂಡಳಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ.</p>.<p><br /> `ಸರ್ಕಾರದ ಭೂಮಿಗಾಗಿ ಆಶ್ರಮದೊಂದಿಗೆ ಪೈಪೋಟಿ ನಡೆಸುವಂತಹ ಪರಿಸ್ಥಿತಿ ಬಂದಿರುವುದು ದುರಾದೃಷ್ಟಕರ. ಆದರೆ, ನಾವು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಆ ಜಾಗವನ್ನು ಕೇಳುತ್ತಿಲ್ಲ ಎಂಬುದನ್ನು ಸರ್ಕಾರ ಅರಿಯಬೇಕು. ತರಬೇತಿ ಕೇಂದ್ರ ಆರಂಭಿಸಲು ಐಎಸ್ಡಿ ಬಿಜೆಪಿ ಸರ್ಕಾರಕ್ಕೆ 40 ಎಕರೆ ಜಾಗ ಕೇಳಿತ್ತು.</p>.<p>ಆಗ ಸರ್ಕಾರ, ತರಬೇತಿ ಕೇಂದ್ರಕ್ಕಾಗಿ ಕೇವಲ 29 ಎಕರೆ ಜಾಗವನ್ನು ಮಾತ್ರ ನೀಡಿತ್ತು. ಇನ್ನೂ ಹತ್ತು ಎಕರೆ ಜಾಗವನ್ನು ನೀಡುವಂತೆ ವರ್ಷದ ಹಿಂದೆಯೇ ಮನವಿ ಮಾಡಲಾಗಿದೆ' ಎಂದು ಆಂತರಿಕ ಭದ್ರತಾ ವಿಭಾಗದ ಐಜಿಪಿ ಭಾಸ್ಕರ್ ರಾವ್ ಹೇಳಿದರು.<br /> <br /> ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ರಾಷ್ಟ್ರೀಯ ಭದ್ರತೆಗೆ ಒತ್ತು ನೀಡುವ ಒತ್ತಾಸೆಯನ್ನು ಹೊಂದಿದೆ. ಸರ್ಕಾರಕ್ಕೆ ಮತ್ತೊಂದು ಮನವಿ ಸಲ್ಲಿಸಲಾಗುವುದು ಎಂದರು.<br /> <br /> ಸದ್ಯ ಗರುಡ ಪಡೆಯ ಕಮಾಂಡೊಗಳು ಕೂಡ್ಲುವಿನ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್ಆರ್ಪಿ) ಜಾಗದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸರ್ಕಾರ ಅಗರದಲ್ಲಿರುವ ಜಮೀನನ್ನು ನೀಡಿದರೆ ವ್ಯವಸ್ಥಿತ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>