<p><strong>ಹೈದರಾಬಾದ್ (ಪಿಟಿಐ):</strong> ಕರ್ನಾಟಕದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಷಾಮೀಲಾದ ಆರೋಪ ಎದುರಿಸುತ್ತಿರುವ ಒಬ್ಬ ಕಿರಿಯ ವಕೀಲ ಗುರುವಾರ ಭ್ರಷ್ಟಾಚಾರ ತಡೆ ಬ್ಯೂರೊ ನ್ಯಾಯಾಲಯಕ್ಕೆ ಶರಣಾದರು.</p>.<p>ಶರಣಾದ ವಕೀಲ ಆದಿತ್ಯ ಅವರನ್ನು ನ್ಯಾಯಾಲಯವು ಆ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜನಾರ್ದನ ರೆಡ್ಡಿ ಪರ ವಕೀಲರಾದ ಇ.ಉಮಾಮಹೇಶ್ವರ ರಾವ್ ಅವರೊಂದಿಗೆ ಈ ವಕೀಲ ಕೆಲಸ ಮಾಡುತ್ತಿದ್ದರು.</p>.<p>ಈ ಪ್ರಕರಣದ ಮತ್ತೊಬ್ಬ ಆರೋಪಿಯಾದ ರೌಡಿ ಶೀಟರ್ ಯಾದಗಿರಿ, ಪೊಲೀಸ್ ತನಿಖೆ ವೇಳೆ, ಆದಿತ್ಯ ಅವರಿಗೆ ರೂ 1 ಕೋಟಿ ನೀಡಿದ್ದಾಗಿ ತಿಳಿಸಿದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್ (ಪಿಟಿಐ):</strong> ಕರ್ನಾಟಕದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಷಾಮೀಲಾದ ಆರೋಪ ಎದುರಿಸುತ್ತಿರುವ ಒಬ್ಬ ಕಿರಿಯ ವಕೀಲ ಗುರುವಾರ ಭ್ರಷ್ಟಾಚಾರ ತಡೆ ಬ್ಯೂರೊ ನ್ಯಾಯಾಲಯಕ್ಕೆ ಶರಣಾದರು.</p>.<p>ಶರಣಾದ ವಕೀಲ ಆದಿತ್ಯ ಅವರನ್ನು ನ್ಯಾಯಾಲಯವು ಆ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜನಾರ್ದನ ರೆಡ್ಡಿ ಪರ ವಕೀಲರಾದ ಇ.ಉಮಾಮಹೇಶ್ವರ ರಾವ್ ಅವರೊಂದಿಗೆ ಈ ವಕೀಲ ಕೆಲಸ ಮಾಡುತ್ತಿದ್ದರು.</p>.<p>ಈ ಪ್ರಕರಣದ ಮತ್ತೊಬ್ಬ ಆರೋಪಿಯಾದ ರೌಡಿ ಶೀಟರ್ ಯಾದಗಿರಿ, ಪೊಲೀಸ್ ತನಿಖೆ ವೇಳೆ, ಆದಿತ್ಯ ಅವರಿಗೆ ರೂ 1 ಕೋಟಿ ನೀಡಿದ್ದಾಗಿ ತಿಳಿಸಿದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>