<p>ಬೆಂಗಳೂರು: `ಮೊದಲ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್) ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದೇವೆ. 2ನೇ ಸಮಾವೇಶದಲ್ಲಿ ಉನ್ನತ ಶ್ರೇಣಿಯಲ್ಲಿ(ಡಿಸ್ಟಿಂಕ್ಷನ್) ಉತ್ತೀರ್ಣರಾಗಲಿದ್ದೇವೆ~ ಎಂದು ಸಣ್ಣ ಕೈಗಾರಿಕಾ ಸಚಿವ ರಾಜುಗೌಡ ವಿಶ್ವಾಸ ವ್ಯಕ್ತಪಡಿಸಿದರು.<br /> <br /> ಬೆಂಗಳೂರು ಕೈಗಾರಿಕಾ ವಸ್ತುಪ್ರದರ್ಶನ ಕೇಂದ್ರದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದ (ಜಿಮ್) ವಸ್ತುಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, `ಜಿಮ್- 1ರ ಒಡಂಬಡಿಕೆಗಳಲ್ಲಿ ಅನುಷ್ಠಾನದಲ್ಲಿ ಶೇ 62ರಷ್ಟು ಫಲಿತಾಂಶ ಬಂದಿದೆ. ಜಿಮ್- 2ರಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕ ಪಡೆಯಲಿದ್ದೇವೆ~ ಎಂದರು.<br /> <br /> ಸಮಾವೇಶದಲ್ಲಿ ಸಣ್ಣ ಕೈಗಾರಿಕಾ ಕ್ಷೇತ್ರ ಸೇರಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, `ನೀವೆಲ್ಲ (ಮುಖ್ಯಮಂತ್ರಿ, ಭಾರಿ ಕೈಗಾರಿಕಾ ಸಚಿವರು) ಹೆಲಿಕಾಪ್ಟರ್, ಏರೋಪ್ಲೇನ್ನಲ್ಲಿ ಹೋಗುತ್ತಿದ್ದೀರಿ. ಬಸ್ನಲ್ಲಿ ಹೋಗುತ್ತಿದ್ದ ನಮ್ಮನ್ನು ಬಿಟ್ಟು ಬಿಡುತ್ತೀರಿ ಎಂದುಕೊಂಡಿದ್ದೆ. ಆದರೆ ನಮ್ಮ ಇಲಾಖೆಯನ್ನೂ ನಿಮ್ಮ ಜತೆಗೆ ಕರೆದೊಯುತ್ತಿದ್ದೀರಿ. ಖುಷಿಯಾಗಿದೆ~ ಎಂದರು.<br /> <br /> `ವಿದೇಶಿ ಕಂಪೆನಿಗಳ ಹೂಡಿಕೆಯಿಂದ ರಾಜ್ಯದಲ್ಲಿ ಕಾರ್ಖಾನೆಗಳು ಸ್ಥಾಪನೆಯಾಗಬೇಕು.ಅದರಿಂದ ರಾಜ್ಯದ ಶೇ80ರಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು ಎಂಬ ಸರ್ಕಾರದ ಕನಸು ಸಮಾವೇಶದಿಂದ ನನಸಾಗಲಿದೆ~ ಎಂದರು.<br /> <br /> ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಅಧ್ಯಕ್ಷ ಪ್ರಕಾಶ್ ಎನ್.ರಾಯ್ಕರ್ ಮಾತನಾಡಿ, `ಜಾಗತಿಕ ಆರ್ಥಿಕ ಕುಸಿತದ ಈಗಿನ ಸಂದರ್ಭದಲ್ಲಿ ನಗರದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿರುವುದು ಸೂಕ್ತವಾಗಿದೆ. ಹೆಚ್ಚು ಹೂಡಿಕೆ ನಿರೀಕ್ಷಿಸಲು ಇದು ಸರಿಯಾದ ಕಾಲ~ ಎಂದು ಅಭಿಪ್ರಾಯಪಟ್ಟರು.<br /> <br /> ಭಾರತೀಯ ವಾಣಿಜ್ಯೋದ್ಯಮಗಳ ಮಹಾಸಂಸ್ಥೆ ಸಹ ಅಧ್ಯಕ್ಷ ಜೆ.ಕ್ರಾಸ್ತಾ, `ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಕ್ಷೇತ್ರಕ್ಕೆ ಜಿಮ್ ಸುವರ್ಣಾವಕಾಶ ಒದಗಿಸಲಿದೆ~ ಎಂದರು.<br /> <br /> ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಭಾರತದಲ್ಲಿನ ರುವಾಂಡ ರಾಯಭಾರಿ ವಿಲಿಯಮ್ಸ, ಗೌರವ ಕಾನ್ಸುಲ್ ಮೋಹನ್ ಸುರೇಶ್, ಲಘು ಉದ್ಯೋಗ ಭಾರತಿ ಸಂಸ್ಥೆ ಅಧ್ಯಕ್ಷ ಟಿ.ಶ್ರೀನಿವಾಸನ್, ಎಫ್ಕೆಸಿಸಿಐ ಅಧ್ಯಕ್ಷ ಜೆ.ಆರ್.ಬಂಗೇರಾ ಮಾತನಾಡಿದರು.<br /> <br /> ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್, ಎಂಎಂ ಆಕ್ಟಿವ್ ಎಂಡಿ ಜಗದೀಶ್ ಪಾಠಂಕರ್, ಕೈಗಾರಿಕೆ-ವಾಣಿಜ್ಯ ಇಲಾಖೆ ಆಯುಕ್ತ ಎಂ.ಮಹೇಶ್ವರ ರಾವ್ ಇದ್ದರು.<br /> <br /> ನಿರಾಣಿ ವಿಶ್ವಾಸ: ಈ ಬಾರಿಯ `ಜಿಮ್~ನಲ್ಲಿ ವಿದ್ಯುತ್ ಕ್ಷೇತ್ರಕ್ಕೆ ಅತಿ ಹೆಚ್ಚಿನ ಹೂಡಿಕೆಯಾಗುವ ಸಾಧ್ಯತೆ ಇದೆ~ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.<br /> <br /> ವಸ್ತು ಪ್ರದರ್ಶನ ಉದ್ಘಾಟನೆ ನಂತರ ಪತ್ರಕರ್ತರ ಜತೆ ಮಾತನಾಡಿದ ಅವರು, `ರೂ. 6 ಲಕ್ಷ ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ವಿದ್ಯುತ್, ಮೂಲಸೌಕರ್ಯ, ಐಟಿ-ಬಿಟಿ, ವೈಮಾನಿಕ ಕ್ಷೇತ್ರ, ಆಟೊಮೊಬೈಲ್ ಉದ್ಯಮಗಳಲ್ಲಿ ಹೆಚ್ಚು ಹೂಡಿಕೆಯಾಗಲಿದೆ. ಮಧ್ಯಮ-ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ರೂ. 1 ಲಕ್ಷ ಕೋಟಿ ಹೂಡಿಕೆಯಾಗಲಿದೆ. `ಜಿಮ್ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಲಿದೆ~ ಎಂದು ಆಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಮೊದಲ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್) ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದೇವೆ. 2ನೇ ಸಮಾವೇಶದಲ್ಲಿ ಉನ್ನತ ಶ್ರೇಣಿಯಲ್ಲಿ(ಡಿಸ್ಟಿಂಕ್ಷನ್) ಉತ್ತೀರ್ಣರಾಗಲಿದ್ದೇವೆ~ ಎಂದು ಸಣ್ಣ ಕೈಗಾರಿಕಾ ಸಚಿವ ರಾಜುಗೌಡ ವಿಶ್ವಾಸ ವ್ಯಕ್ತಪಡಿಸಿದರು.<br /> <br /> ಬೆಂಗಳೂರು ಕೈಗಾರಿಕಾ ವಸ್ತುಪ್ರದರ್ಶನ ಕೇಂದ್ರದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದ (ಜಿಮ್) ವಸ್ತುಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, `ಜಿಮ್- 1ರ ಒಡಂಬಡಿಕೆಗಳಲ್ಲಿ ಅನುಷ್ಠಾನದಲ್ಲಿ ಶೇ 62ರಷ್ಟು ಫಲಿತಾಂಶ ಬಂದಿದೆ. ಜಿಮ್- 2ರಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕ ಪಡೆಯಲಿದ್ದೇವೆ~ ಎಂದರು.<br /> <br /> ಸಮಾವೇಶದಲ್ಲಿ ಸಣ್ಣ ಕೈಗಾರಿಕಾ ಕ್ಷೇತ್ರ ಸೇರಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, `ನೀವೆಲ್ಲ (ಮುಖ್ಯಮಂತ್ರಿ, ಭಾರಿ ಕೈಗಾರಿಕಾ ಸಚಿವರು) ಹೆಲಿಕಾಪ್ಟರ್, ಏರೋಪ್ಲೇನ್ನಲ್ಲಿ ಹೋಗುತ್ತಿದ್ದೀರಿ. ಬಸ್ನಲ್ಲಿ ಹೋಗುತ್ತಿದ್ದ ನಮ್ಮನ್ನು ಬಿಟ್ಟು ಬಿಡುತ್ತೀರಿ ಎಂದುಕೊಂಡಿದ್ದೆ. ಆದರೆ ನಮ್ಮ ಇಲಾಖೆಯನ್ನೂ ನಿಮ್ಮ ಜತೆಗೆ ಕರೆದೊಯುತ್ತಿದ್ದೀರಿ. ಖುಷಿಯಾಗಿದೆ~ ಎಂದರು.<br /> <br /> `ವಿದೇಶಿ ಕಂಪೆನಿಗಳ ಹೂಡಿಕೆಯಿಂದ ರಾಜ್ಯದಲ್ಲಿ ಕಾರ್ಖಾನೆಗಳು ಸ್ಥಾಪನೆಯಾಗಬೇಕು.ಅದರಿಂದ ರಾಜ್ಯದ ಶೇ80ರಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು ಎಂಬ ಸರ್ಕಾರದ ಕನಸು ಸಮಾವೇಶದಿಂದ ನನಸಾಗಲಿದೆ~ ಎಂದರು.<br /> <br /> ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಅಧ್ಯಕ್ಷ ಪ್ರಕಾಶ್ ಎನ್.ರಾಯ್ಕರ್ ಮಾತನಾಡಿ, `ಜಾಗತಿಕ ಆರ್ಥಿಕ ಕುಸಿತದ ಈಗಿನ ಸಂದರ್ಭದಲ್ಲಿ ನಗರದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿರುವುದು ಸೂಕ್ತವಾಗಿದೆ. ಹೆಚ್ಚು ಹೂಡಿಕೆ ನಿರೀಕ್ಷಿಸಲು ಇದು ಸರಿಯಾದ ಕಾಲ~ ಎಂದು ಅಭಿಪ್ರಾಯಪಟ್ಟರು.<br /> <br /> ಭಾರತೀಯ ವಾಣಿಜ್ಯೋದ್ಯಮಗಳ ಮಹಾಸಂಸ್ಥೆ ಸಹ ಅಧ್ಯಕ್ಷ ಜೆ.ಕ್ರಾಸ್ತಾ, `ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಕ್ಷೇತ್ರಕ್ಕೆ ಜಿಮ್ ಸುವರ್ಣಾವಕಾಶ ಒದಗಿಸಲಿದೆ~ ಎಂದರು.<br /> <br /> ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಭಾರತದಲ್ಲಿನ ರುವಾಂಡ ರಾಯಭಾರಿ ವಿಲಿಯಮ್ಸ, ಗೌರವ ಕಾನ್ಸುಲ್ ಮೋಹನ್ ಸುರೇಶ್, ಲಘು ಉದ್ಯೋಗ ಭಾರತಿ ಸಂಸ್ಥೆ ಅಧ್ಯಕ್ಷ ಟಿ.ಶ್ರೀನಿವಾಸನ್, ಎಫ್ಕೆಸಿಸಿಐ ಅಧ್ಯಕ್ಷ ಜೆ.ಆರ್.ಬಂಗೇರಾ ಮಾತನಾಡಿದರು.<br /> <br /> ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್, ಎಂಎಂ ಆಕ್ಟಿವ್ ಎಂಡಿ ಜಗದೀಶ್ ಪಾಠಂಕರ್, ಕೈಗಾರಿಕೆ-ವಾಣಿಜ್ಯ ಇಲಾಖೆ ಆಯುಕ್ತ ಎಂ.ಮಹೇಶ್ವರ ರಾವ್ ಇದ್ದರು.<br /> <br /> ನಿರಾಣಿ ವಿಶ್ವಾಸ: ಈ ಬಾರಿಯ `ಜಿಮ್~ನಲ್ಲಿ ವಿದ್ಯುತ್ ಕ್ಷೇತ್ರಕ್ಕೆ ಅತಿ ಹೆಚ್ಚಿನ ಹೂಡಿಕೆಯಾಗುವ ಸಾಧ್ಯತೆ ಇದೆ~ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.<br /> <br /> ವಸ್ತು ಪ್ರದರ್ಶನ ಉದ್ಘಾಟನೆ ನಂತರ ಪತ್ರಕರ್ತರ ಜತೆ ಮಾತನಾಡಿದ ಅವರು, `ರೂ. 6 ಲಕ್ಷ ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ವಿದ್ಯುತ್, ಮೂಲಸೌಕರ್ಯ, ಐಟಿ-ಬಿಟಿ, ವೈಮಾನಿಕ ಕ್ಷೇತ್ರ, ಆಟೊಮೊಬೈಲ್ ಉದ್ಯಮಗಳಲ್ಲಿ ಹೆಚ್ಚು ಹೂಡಿಕೆಯಾಗಲಿದೆ. ಮಧ್ಯಮ-ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ರೂ. 1 ಲಕ್ಷ ಕೋಟಿ ಹೂಡಿಕೆಯಾಗಲಿದೆ. `ಜಿಮ್ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಲಿದೆ~ ಎಂದು ಆಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>