<p>ಬಾಗಲಕೋಟೆ: ‘ಮುಳುಗಡೆ’ ನಗರದ ಇತ್ತೀಚಿನ ಚಿತ್ರಣಗಳು ಬೆರಗುಗೊಳಿಸುವಂತಿವೆ. ಹಳೆನಗರ, ನವನಗರ ಮತ್ತು ವಿದ್ಯಾಗಿರಿಯಲ್ಲಿ ಜನಸಂಖ್ಯೆಗಿಂತ ಅಧಿಕವಾಗಿ ಕಂಡುಬರುವ ಬಿಡಾಡಿ ಹಂದಿಗಳು, ನಾಯಿಗಳು ಇದೀಗ ಜಿಲ್ಲಾಡಳಿತ ಭವನವನಕ್ಕೆ ದಾಂಗುಡಿ ಇಟ್ಟಿವೆ.<br /> <br /> ಜಿಲ್ಲಾಡಳಿತ ಭವನದ ಆವರಣದಲ್ಲಿ ಬೆಳಸಲಾಗಿರುವ ಹೂವಿನಗಿಡಗಳನ್ನು ನಾಶ ಮಾಡಿವೆ. ನೌಕರರು ತಿಂದು ಬಿಸಾಡುವ ಎಂಜಲಿಗೆ ಮುತ್ತುತ್ತಿವೆ. ಪ್ಲಾಸ್ಟಿಕ್, ಕಾಗದ ಮತ್ತಿತರ ತ್ಯಾಜ್ಯವನ್ನು ಹರಡಿ ಇಡೀ ವಾತಾವರಣವನ್ನೇ ಮಲಿನಗೊಳಿಸತೊಡಗಿವೆ.<br /> <br /> ಜಿಲ್ಲಾಡಳಿತ ಭವನದ ಜಿಲ್ಲಾ ಖಜಾನೆಗೆ ಹೋಗುವ ಮಾರ್ಗದಲ್ಲಿ ಇರುವ ಕೊಳವೆಬಾವಿ ಇರುವ ಸ್ಥಳದಲ್ಲಿ ಸಂಗ್ರಹವಾಗುವ ನೀರಿನ ಗುಂಡಿಯಲ್ಲಿ ಹಂದಿಗಳು ಸ್ವಚ್ಛಂದವಾಗಿ ಮಲಗಿ ಕೆಸರಿನ ಗುಂಡಿ ಮಾಡಿವೆ.<br /> <br /> ಜಿಲ್ಲಾಡಳಿತ ಭವನದ ಮುಂಭಾಗದ ಉದ್ಯಾನವನದಲ್ಲಿ ವಿಶ್ರಾಂತಿ ಪಡೆಯಲು ಬರುವ ಸಾರ್ವಜನಿಕರಿಗೆ ಹಂದಿ ಕಾಟದಿಂದ ಬೇಸರ ಬಂದೊದಗಿದೆ. ಹಂದಿ ಹಾವಳಿ ನಿಯಂತ್ರಿಸಲು ಆಗದೇ ಕಾವಲುಗಾರ ಕಂಗಾಲಾಗಿದ್ದಾನೆ. <br /> <br /> ಹೀಗೆ ಬಿಟ್ಟರೇ ಶೀಘ್ರದಲ್ಲೇ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಗಳ ಒಳಗೂ ಹಂದಿಗಳು ಪ್ರವೇಶಿಸಿದರೇ ಆಶ್ಚರ್ಯವಿಲ್ಲ!<br /> ನಗರಸಭೆ ಸಿಬ್ಬಂದಿ ಈಗಲಾದರೂ ಎಚ್ಚೆತ್ತುಕೊಳ್ಳುವ ಮೂಲಕ ನಗರದಲ್ಲಿ ಹೆಚ್ಚಿರುವ ಹಂದಿಗಳ ನಿಗ್ರಹಕ್ಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗಲಕೋಟೆ: ‘ಮುಳುಗಡೆ’ ನಗರದ ಇತ್ತೀಚಿನ ಚಿತ್ರಣಗಳು ಬೆರಗುಗೊಳಿಸುವಂತಿವೆ. ಹಳೆನಗರ, ನವನಗರ ಮತ್ತು ವಿದ್ಯಾಗಿರಿಯಲ್ಲಿ ಜನಸಂಖ್ಯೆಗಿಂತ ಅಧಿಕವಾಗಿ ಕಂಡುಬರುವ ಬಿಡಾಡಿ ಹಂದಿಗಳು, ನಾಯಿಗಳು ಇದೀಗ ಜಿಲ್ಲಾಡಳಿತ ಭವನವನಕ್ಕೆ ದಾಂಗುಡಿ ಇಟ್ಟಿವೆ.<br /> <br /> ಜಿಲ್ಲಾಡಳಿತ ಭವನದ ಆವರಣದಲ್ಲಿ ಬೆಳಸಲಾಗಿರುವ ಹೂವಿನಗಿಡಗಳನ್ನು ನಾಶ ಮಾಡಿವೆ. ನೌಕರರು ತಿಂದು ಬಿಸಾಡುವ ಎಂಜಲಿಗೆ ಮುತ್ತುತ್ತಿವೆ. ಪ್ಲಾಸ್ಟಿಕ್, ಕಾಗದ ಮತ್ತಿತರ ತ್ಯಾಜ್ಯವನ್ನು ಹರಡಿ ಇಡೀ ವಾತಾವರಣವನ್ನೇ ಮಲಿನಗೊಳಿಸತೊಡಗಿವೆ.<br /> <br /> ಜಿಲ್ಲಾಡಳಿತ ಭವನದ ಜಿಲ್ಲಾ ಖಜಾನೆಗೆ ಹೋಗುವ ಮಾರ್ಗದಲ್ಲಿ ಇರುವ ಕೊಳವೆಬಾವಿ ಇರುವ ಸ್ಥಳದಲ್ಲಿ ಸಂಗ್ರಹವಾಗುವ ನೀರಿನ ಗುಂಡಿಯಲ್ಲಿ ಹಂದಿಗಳು ಸ್ವಚ್ಛಂದವಾಗಿ ಮಲಗಿ ಕೆಸರಿನ ಗುಂಡಿ ಮಾಡಿವೆ.<br /> <br /> ಜಿಲ್ಲಾಡಳಿತ ಭವನದ ಮುಂಭಾಗದ ಉದ್ಯಾನವನದಲ್ಲಿ ವಿಶ್ರಾಂತಿ ಪಡೆಯಲು ಬರುವ ಸಾರ್ವಜನಿಕರಿಗೆ ಹಂದಿ ಕಾಟದಿಂದ ಬೇಸರ ಬಂದೊದಗಿದೆ. ಹಂದಿ ಹಾವಳಿ ನಿಯಂತ್ರಿಸಲು ಆಗದೇ ಕಾವಲುಗಾರ ಕಂಗಾಲಾಗಿದ್ದಾನೆ. <br /> <br /> ಹೀಗೆ ಬಿಟ್ಟರೇ ಶೀಘ್ರದಲ್ಲೇ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಗಳ ಒಳಗೂ ಹಂದಿಗಳು ಪ್ರವೇಶಿಸಿದರೇ ಆಶ್ಚರ್ಯವಿಲ್ಲ!<br /> ನಗರಸಭೆ ಸಿಬ್ಬಂದಿ ಈಗಲಾದರೂ ಎಚ್ಚೆತ್ತುಕೊಳ್ಳುವ ಮೂಲಕ ನಗರದಲ್ಲಿ ಹೆಚ್ಚಿರುವ ಹಂದಿಗಳ ನಿಗ್ರಹಕ್ಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>