<p><strong>ಕಾರವಾರ:</strong> ಮುಂಗಾರು ಆರಂಭಗೊಂಡ ನಂತರ ಇದೇ ಮೊದಲ ಬಾರಿಗೆ ಭಾನುವಾರ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರದಲ್ಲಿ ಭರ್ಜರಿ ಮಳೆಯ ಅಭಿಷೇಕವಾಗಿದೆ.<br /> <br /> ಶಿರಸಿ, ಸಿದ್ದಾಪುರ ಯಲ್ಲಾಪುರ, ಹಳಿಯಾಳ, ಜೋಯಿಡಾ ಹಾಗೂ ಮುಂಡಗೋಡದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಉತ್ತಮ ಮಳೆಯಾಗಿದೆ.<br /> <br /> ನಗರದಲ್ಲಿ ಬೆಳಿಗ್ಗೆ ಬಲವಾದ ಗಾಳಿ ಬೀಸಿದ್ದರಿಂದ ಬೈತಖೋಲದಲ್ಲಿರುವ ಮೀನೆಣ್ಣೆ ಘಟಕದ ಚಿಮಣಿ ಮುರಿದು ಹಾನಿ ಸಂಭವಿಸಿದೆ. ಘಟನೆ ನಡೆದ ವೇಳೆ ಕಾರ್ಮಿಕನೊಬ್ಬ ಬಾಯ್ಲರ್ ನಿರ್ವಹಣೆ ಕಾರ್ಯದಲ್ಲಿ ನಿರತನಾಗಿದ್ದು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.<br /> <br /> ಬೆಳಿಗ್ಗೆ ಕೆಲಹೊತ್ತು ಧಾರಾಕಾರ ಮಳೆ ಸುರಿದ್ದರಿಂದ ರಾಷ್ಟ್ರೀಯ ಹೆದ್ದಾರಿ-17ರಲ್ಲಿ ವಾಹನಗಳು ಹೆಡ್ಲೈಟ್ ಹಾಕಿಕೊಂಡು ಸಂಚರಿಸಿದವು.<br /> <br /> <strong>ಸಂತೆ ಮಳೆಗೆ ಆಹುತಿ:</strong> ಮಳೆಯಿಂದಾಗಿ ಭಾನುವಾರದ ಸಂತೆ ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿತ್ತು. ಮಧ್ಯಾಹ್ನ 3-4 ಗಂಟೆಗಳ ಕಾಲ ಮಳೆ ಬಿಡುವು ನೀಡಿತ್ತು. ಆದರೆ, ಗ್ರಾಹಕರಿರಲಿಲ್ಲ. ಆದರೆ, ಸಂಜೆ ಹೊತ್ತು ಸಂತೆಯಲ್ಲಿ ಜನಜಂಗುಳಿ ಕಂಡುಬಂತು. ಪುನಃ 6.30ರ ಸಮಾರಿಗೆ ಮತ್ತೆ ಮಳೆ ಪ್ರಾರಂಭವಾಗಿದ್ದರಿಂದ ಆಹಾರ ಪದಾರ್ಥಗಳು ನೀರಿನಲ್ಲಿ ನೆನೆದಿದ್ದರಿಂದ ವ್ಯಾಪಾರಿಗಳು ನಷ್ಟ ಅನುಭವಿಸಬೇಕಾಯಿತು.<br /> <br /> ಮುಕ್ತಿ ಕಾಣದ ಸಮಸ್ಯೆ: ಎರಡು ಬದಿಯ ಗಟಾರು ಕಳೆದ ಅನೇಕ ವರ್ಷಗಳಿಂದ ಮುಚ್ಚಿಹೋಗಿದ್ದರಿಂದ ನಗರದ ಸಾಯಿಕಟ್ಟಾ ಕ್ರಾಸ್ ಬಳಿ ರಸ್ತೆಯ ಮೇಲೆ ನೀರು ನಿಂತು ವಾಹನ, ಸವಾರರು ಪಾದಚಾರಿಗಳು ತೊಂದರೆ ಅನುಭವಿಸಿದರು.<br /> <br /> <strong>ಮನೆ ಆವರಣ ಗೋಡೆ ಕುಸಿತ</strong><br /> <strong>ಭಟ್ಕಳ:</strong> ಶನಿವಾರ ರಾತ್ರಿ ಸುರಿದ ಮಳೆಗೆ ಮನೆಯ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದಲ್ಲೆ ನಿಲ್ಲಿಸಿದ್ದ ಕಾರಿಗೂ ಹಾನಿಯಾದ ಘಟನೆ ತಾಲ್ಲೂಕಿನ ಜಾಲಿ ಗ್ರಾ.ಪಂ. ವ್ಯಾಪ್ಯಿಯ ಬೆಂಡೆಕಾನ್ನಲ್ಲಿ ನಡೆದಿದೆ.<br /> <br /> ಬೆಂಡೆಕಾನ್ನ ಮಹ್ಮದ್ ರಫೀಖ್ ಪಠಾಣ್ ಎಂಬವರಿಗೆ ಸೇರಿದ ಕಾರಿಗೆ ಹಾನಿಯಾಗಿದೆ. ಶನಿವಾರ ರಾತ್ರಿ ಭಾರೀ ಪ್ರಮಾಣದಲ್ಲಿ ಗಾಳಿ ಮಳೆ ಬಂದಿತ್ತು. ಈ ಸಂದರ್ಭದಲ್ಲಿ ಮನೆಯ ಆವರಣ ಗೋಡೆ ಕುಸಿದಿದ್ದಲ್ಲದೇ, ಗೋಡೆಯ ಕಲ್ಲುಗಳು ಕಾರಿನ ಮೇಲೆ ಬಿದ್ದು ಜಖಂಗೊಂಡು ಹಾನಿಯಾಗಿದೆ ಎನ್ನಲಾಗಿದೆ.<br /> <br /> ಶನಿವಾರ ರಾತ್ರಿಯಿಡೀ ಬಿದ್ದ ಮಳೆಗೆ ತಾಲ್ಲೂಕಿನಲ್ಲಿ ಬತ್ತಿಹೋಗಿದ್ದ ಬಾವಿಗಳಿಗೆಲ್ಲಾ ನೀರು ಬಂದಿದ್ದು, ನೀರಿನ ಬವಣೆ ಸಂಪೂರ್ಣ ನಿವಾರಣೆಯಾದಂತಾಗಿದೆ. ಮಳೆಯ ಕೆಂಪು ನೀರು ನದಿ, ಹಳ್ಳಕೊಳ್ಳಗಳಲ್ಲಿ ತುಂಬಿ ಹರಿಯುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಮುಂಗಾರು ಆರಂಭಗೊಂಡ ನಂತರ ಇದೇ ಮೊದಲ ಬಾರಿಗೆ ಭಾನುವಾರ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರದಲ್ಲಿ ಭರ್ಜರಿ ಮಳೆಯ ಅಭಿಷೇಕವಾಗಿದೆ.<br /> <br /> ಶಿರಸಿ, ಸಿದ್ದಾಪುರ ಯಲ್ಲಾಪುರ, ಹಳಿಯಾಳ, ಜೋಯಿಡಾ ಹಾಗೂ ಮುಂಡಗೋಡದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಉತ್ತಮ ಮಳೆಯಾಗಿದೆ.<br /> <br /> ನಗರದಲ್ಲಿ ಬೆಳಿಗ್ಗೆ ಬಲವಾದ ಗಾಳಿ ಬೀಸಿದ್ದರಿಂದ ಬೈತಖೋಲದಲ್ಲಿರುವ ಮೀನೆಣ್ಣೆ ಘಟಕದ ಚಿಮಣಿ ಮುರಿದು ಹಾನಿ ಸಂಭವಿಸಿದೆ. ಘಟನೆ ನಡೆದ ವೇಳೆ ಕಾರ್ಮಿಕನೊಬ್ಬ ಬಾಯ್ಲರ್ ನಿರ್ವಹಣೆ ಕಾರ್ಯದಲ್ಲಿ ನಿರತನಾಗಿದ್ದು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.<br /> <br /> ಬೆಳಿಗ್ಗೆ ಕೆಲಹೊತ್ತು ಧಾರಾಕಾರ ಮಳೆ ಸುರಿದ್ದರಿಂದ ರಾಷ್ಟ್ರೀಯ ಹೆದ್ದಾರಿ-17ರಲ್ಲಿ ವಾಹನಗಳು ಹೆಡ್ಲೈಟ್ ಹಾಕಿಕೊಂಡು ಸಂಚರಿಸಿದವು.<br /> <br /> <strong>ಸಂತೆ ಮಳೆಗೆ ಆಹುತಿ:</strong> ಮಳೆಯಿಂದಾಗಿ ಭಾನುವಾರದ ಸಂತೆ ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿತ್ತು. ಮಧ್ಯಾಹ್ನ 3-4 ಗಂಟೆಗಳ ಕಾಲ ಮಳೆ ಬಿಡುವು ನೀಡಿತ್ತು. ಆದರೆ, ಗ್ರಾಹಕರಿರಲಿಲ್ಲ. ಆದರೆ, ಸಂಜೆ ಹೊತ್ತು ಸಂತೆಯಲ್ಲಿ ಜನಜಂಗುಳಿ ಕಂಡುಬಂತು. ಪುನಃ 6.30ರ ಸಮಾರಿಗೆ ಮತ್ತೆ ಮಳೆ ಪ್ರಾರಂಭವಾಗಿದ್ದರಿಂದ ಆಹಾರ ಪದಾರ್ಥಗಳು ನೀರಿನಲ್ಲಿ ನೆನೆದಿದ್ದರಿಂದ ವ್ಯಾಪಾರಿಗಳು ನಷ್ಟ ಅನುಭವಿಸಬೇಕಾಯಿತು.<br /> <br /> ಮುಕ್ತಿ ಕಾಣದ ಸಮಸ್ಯೆ: ಎರಡು ಬದಿಯ ಗಟಾರು ಕಳೆದ ಅನೇಕ ವರ್ಷಗಳಿಂದ ಮುಚ್ಚಿಹೋಗಿದ್ದರಿಂದ ನಗರದ ಸಾಯಿಕಟ್ಟಾ ಕ್ರಾಸ್ ಬಳಿ ರಸ್ತೆಯ ಮೇಲೆ ನೀರು ನಿಂತು ವಾಹನ, ಸವಾರರು ಪಾದಚಾರಿಗಳು ತೊಂದರೆ ಅನುಭವಿಸಿದರು.<br /> <br /> <strong>ಮನೆ ಆವರಣ ಗೋಡೆ ಕುಸಿತ</strong><br /> <strong>ಭಟ್ಕಳ:</strong> ಶನಿವಾರ ರಾತ್ರಿ ಸುರಿದ ಮಳೆಗೆ ಮನೆಯ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದಲ್ಲೆ ನಿಲ್ಲಿಸಿದ್ದ ಕಾರಿಗೂ ಹಾನಿಯಾದ ಘಟನೆ ತಾಲ್ಲೂಕಿನ ಜಾಲಿ ಗ್ರಾ.ಪಂ. ವ್ಯಾಪ್ಯಿಯ ಬೆಂಡೆಕಾನ್ನಲ್ಲಿ ನಡೆದಿದೆ.<br /> <br /> ಬೆಂಡೆಕಾನ್ನ ಮಹ್ಮದ್ ರಫೀಖ್ ಪಠಾಣ್ ಎಂಬವರಿಗೆ ಸೇರಿದ ಕಾರಿಗೆ ಹಾನಿಯಾಗಿದೆ. ಶನಿವಾರ ರಾತ್ರಿ ಭಾರೀ ಪ್ರಮಾಣದಲ್ಲಿ ಗಾಳಿ ಮಳೆ ಬಂದಿತ್ತು. ಈ ಸಂದರ್ಭದಲ್ಲಿ ಮನೆಯ ಆವರಣ ಗೋಡೆ ಕುಸಿದಿದ್ದಲ್ಲದೇ, ಗೋಡೆಯ ಕಲ್ಲುಗಳು ಕಾರಿನ ಮೇಲೆ ಬಿದ್ದು ಜಖಂಗೊಂಡು ಹಾನಿಯಾಗಿದೆ ಎನ್ನಲಾಗಿದೆ.<br /> <br /> ಶನಿವಾರ ರಾತ್ರಿಯಿಡೀ ಬಿದ್ದ ಮಳೆಗೆ ತಾಲ್ಲೂಕಿನಲ್ಲಿ ಬತ್ತಿಹೋಗಿದ್ದ ಬಾವಿಗಳಿಗೆಲ್ಲಾ ನೀರು ಬಂದಿದ್ದು, ನೀರಿನ ಬವಣೆ ಸಂಪೂರ್ಣ ನಿವಾರಣೆಯಾದಂತಾಗಿದೆ. ಮಳೆಯ ಕೆಂಪು ನೀರು ನದಿ, ಹಳ್ಳಕೊಳ್ಳಗಳಲ್ಲಿ ತುಂಬಿ ಹರಿಯುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>