<p>ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ (ಜಿ-ಕೆಟಗಿರಿ) ನಿವೇಶನ ಪಡೆದ ರಾಜ್ಯದ ಕಾನೂನು ಸಚಿವ ಸುರೇಶ್ಕುಮಾರ್ ರಾಜೀನಾಮೆ ಕೊಡಬೇಕಾಗಿ ಬಂದ ಸಂದರ್ಭ ಮತ್ತು ರಾಜೀನಾಮೆ ವಿಷಯದಲ್ಲಿ ಮುಖ್ಯವಾಗಿ ಪ್ರತಿಪಕ್ಷಗಳ ಪ್ರಮುಖರ ಹೇಳಿಕೆಗಳನ್ನು ಗಮನಿಸಿದಾಗ ಈ ರಾಜ್ಯದಲ್ಲಿ ಜನಪ್ರತಿನಿಧಿಗಳು ಎನಿಸಿಕೊಂಡವರು ಎಂಥ ದುರದೃಷ್ಟಕರ ಪ್ರಸಂಗಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆನ್ನುವುದು ಸ್ಪಷ್ಟವಾಗುತ್ತದೆ. <br /> <br /> ವಿವೇಚನಾ ಕೋಟಾದ ಅಡಿಯಲ್ಲಿ ನಿವೇಶನ ಪಡೆದಿರಬಹುದಾದ ಪ್ರತಿಪಕ್ಷಗಳವರೂ ಹಾಗೆ ಪಡೆಯುವ ವೇಳೆ, ಎಂದರೆ ನಿವೇಶನಕ್ಕೆ ಅರ್ಜಿ ಸಲ್ಲಿಸುವಾಗ, ಅದರೊಡನೆ ಸಲ್ಲಿಸಿದ ಪ್ರಮಾಣ ಪತ್ರದ ಸತ್ಯಾಸತ್ಯತೆಯ ಬಗೆಗೆ ಈಗ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯಬೇಕು.<br /> <br /> ಸುರೇಶ್ಕುಮಾರ್ ಪ್ರಕರಣದಲ್ಲಿ ಕಾನೂನಿನ ಸೂಕ್ಷಾಂಶಗಳು ಇರುವಂತಿವೆ; ತಾಂತ್ರಿಕ ಲೋಪಗಳಾಗಿದ್ದಿರಲೂಬಹುದು. ಒಂದು ವೇಳೆ ಪ್ರಕರಣ ನ್ಯಾಯಾಲಯದ ಮುಂದೆ ಬಂದರೆ ಈ ಎಲ್ಲವೂ ಅಲ್ಲಿ ವಾದ-ಪ್ರತಿವಾದಗಳಲ್ಲಿ ಕಾಣಿಸಿಕೊಳ್ಳುತ್ತವೆ; ಇದು ಬೇರೆ ವಿಷಯ. ಆದರೆ ನಮಗೆ, ಸಾರ್ವಜನಿಕರಿಗೆ, ತಿಳಿಯಬೇಕಾಗಿರುವುದು ಜಿ-ಕೆಟಗಿರಿಯಲ್ಲಿ ನಿವೇಶನ ಪಡೆದಿರುವ 165 ಶಾಸಕರು, ಮಂತ್ರಿಗಳು ಮತ್ತಿತರ ಗಣ್ಯವ್ಯಕ್ತಿಗಳು ನಿವೇಶನವನ್ನು ನ್ಯಾಯಯುತವಾಗಿಯೇ ಪಡೆದರು ಮತ್ತು ಹಾಗೆ ಪಡೆದ ಮೇಲಷ್ಟೆ ಅವರು ನಿವೇಶನದಂಥ ಸ್ಥಿರಾಸ್ತಿಯ ಒಡೆಯರಾದುದು ಪಾಪ, ಎನ್ನುವುದು. ಒಬ್ಬರ ವಿಷಯದಲ್ಲಿ ಈಗ ಹರಿಹಾಯ್ದಿರುವವರು ಇತರರದ್ದನ್ನೂ ಬಹಿರಂಗಗೊಳಿಸಬೇಕು. <br /> -ಸಾಮಗ ದತ್ತಾತ್ರಿ, ಬೆಂಗಳೂರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ (ಜಿ-ಕೆಟಗಿರಿ) ನಿವೇಶನ ಪಡೆದ ರಾಜ್ಯದ ಕಾನೂನು ಸಚಿವ ಸುರೇಶ್ಕುಮಾರ್ ರಾಜೀನಾಮೆ ಕೊಡಬೇಕಾಗಿ ಬಂದ ಸಂದರ್ಭ ಮತ್ತು ರಾಜೀನಾಮೆ ವಿಷಯದಲ್ಲಿ ಮುಖ್ಯವಾಗಿ ಪ್ರತಿಪಕ್ಷಗಳ ಪ್ರಮುಖರ ಹೇಳಿಕೆಗಳನ್ನು ಗಮನಿಸಿದಾಗ ಈ ರಾಜ್ಯದಲ್ಲಿ ಜನಪ್ರತಿನಿಧಿಗಳು ಎನಿಸಿಕೊಂಡವರು ಎಂಥ ದುರದೃಷ್ಟಕರ ಪ್ರಸಂಗಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆನ್ನುವುದು ಸ್ಪಷ್ಟವಾಗುತ್ತದೆ. <br /> <br /> ವಿವೇಚನಾ ಕೋಟಾದ ಅಡಿಯಲ್ಲಿ ನಿವೇಶನ ಪಡೆದಿರಬಹುದಾದ ಪ್ರತಿಪಕ್ಷಗಳವರೂ ಹಾಗೆ ಪಡೆಯುವ ವೇಳೆ, ಎಂದರೆ ನಿವೇಶನಕ್ಕೆ ಅರ್ಜಿ ಸಲ್ಲಿಸುವಾಗ, ಅದರೊಡನೆ ಸಲ್ಲಿಸಿದ ಪ್ರಮಾಣ ಪತ್ರದ ಸತ್ಯಾಸತ್ಯತೆಯ ಬಗೆಗೆ ಈಗ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯಬೇಕು.<br /> <br /> ಸುರೇಶ್ಕುಮಾರ್ ಪ್ರಕರಣದಲ್ಲಿ ಕಾನೂನಿನ ಸೂಕ್ಷಾಂಶಗಳು ಇರುವಂತಿವೆ; ತಾಂತ್ರಿಕ ಲೋಪಗಳಾಗಿದ್ದಿರಲೂಬಹುದು. ಒಂದು ವೇಳೆ ಪ್ರಕರಣ ನ್ಯಾಯಾಲಯದ ಮುಂದೆ ಬಂದರೆ ಈ ಎಲ್ಲವೂ ಅಲ್ಲಿ ವಾದ-ಪ್ರತಿವಾದಗಳಲ್ಲಿ ಕಾಣಿಸಿಕೊಳ್ಳುತ್ತವೆ; ಇದು ಬೇರೆ ವಿಷಯ. ಆದರೆ ನಮಗೆ, ಸಾರ್ವಜನಿಕರಿಗೆ, ತಿಳಿಯಬೇಕಾಗಿರುವುದು ಜಿ-ಕೆಟಗಿರಿಯಲ್ಲಿ ನಿವೇಶನ ಪಡೆದಿರುವ 165 ಶಾಸಕರು, ಮಂತ್ರಿಗಳು ಮತ್ತಿತರ ಗಣ್ಯವ್ಯಕ್ತಿಗಳು ನಿವೇಶನವನ್ನು ನ್ಯಾಯಯುತವಾಗಿಯೇ ಪಡೆದರು ಮತ್ತು ಹಾಗೆ ಪಡೆದ ಮೇಲಷ್ಟೆ ಅವರು ನಿವೇಶನದಂಥ ಸ್ಥಿರಾಸ್ತಿಯ ಒಡೆಯರಾದುದು ಪಾಪ, ಎನ್ನುವುದು. ಒಬ್ಬರ ವಿಷಯದಲ್ಲಿ ಈಗ ಹರಿಹಾಯ್ದಿರುವವರು ಇತರರದ್ದನ್ನೂ ಬಹಿರಂಗಗೊಳಿಸಬೇಕು. <br /> -ಸಾಮಗ ದತ್ತಾತ್ರಿ, ಬೆಂಗಳೂರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>