<p><strong>ಬೆಂಗಳೂರು: </strong>ಜೈನ್ ವಿಶ್ವವಿದ್ಯಾನಿಲಯ ತಂಡದವರು ಭುವನೇಶ್ವರದಲ್ಲಿ ನಡೆದ ‘ಕೆಪಿಎಲ್-2014’ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು.<br /> <br /> ಕೆಐಐಟಿ ವಿವಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ಜೈನ್ ತಂಡ 53 ರನ್ಗಳಿಂದ ಆಂಧ್ರ ವಿವಿ ತಂಡವನ್ನು ಮಣಿಸಿತು.<br /> ಮೊದಲು ಬ್ಯಾಟ್ ಮಾಡಿದ ಜೈನ್ ತಂಡ ಸಮರ್ಥ್ (68) ಗಳಿಸಿದ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ಗೆ 162 ರನ್ ಪೇರಿಸಿತು. ಚಿರಂಜೀವಿ ಅವರು 38 ರನ್ ಗಳಿಸಿದರು.<br /> <br /> ಆಂಧ್ರ ತಂಡ 19.1 ಓವರ್ಗಳಲ್ಲಿ 109 ರನ್ಗಳಿಗೆ ಆಲೌಟಾಯಿತು. ಸಿ.ಎ. ಕಾರ್ತಿಕ್ (16ಕ್ಕೆ 3) ಮತ್ತು ಸಮರ್ಥ್ (20ಕ್ಕೆ 2) ವಿಜೇತ ತಂಡದ ಪರ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದರು. ಜೈನ್ ತಂಡ ₨ 2 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡಿತು. ಸಮರ್ಥ್ ಅವರು ಫೈನಲ್ನಲ್ಲಿ ‘ಪಂದ್ಯಶ್ರೇಷ್ಠ’ ಎನಿಸಿಕೊಂಡರಲ್ಲದೆ, ‘ಸರಣಿ ಶ್ರೇಷ್ಠ’ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.<br /> <br /> <strong>ಸಂಕ್ಷಿಪ್ತ ಸ್ಕೋರ್: ಜೈನ್ ವಿವಿ: </strong>20 ಓವರ್ಗಳಲ್ಲಿ 6 ವಿಕೆಟ್ಗೆ 162 (ಸಮರ್ಥ್ 68, ಚಿರಂಜೀವಿ 38) ಆಂಧ್ರ ವಿವಿ: 19.1 ಓವರ್ಗಳಲ್ಲಿ 109 (ಸಿ.ಎ. ಕಾರ್ತಿಕ್ 16ಕ್ಕೆ 3, ಸಮರ್ಥ್ 20ಕ್ಕೆ 2)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಜೈನ್ ವಿಶ್ವವಿದ್ಯಾನಿಲಯ ತಂಡದವರು ಭುವನೇಶ್ವರದಲ್ಲಿ ನಡೆದ ‘ಕೆಪಿಎಲ್-2014’ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು.<br /> <br /> ಕೆಐಐಟಿ ವಿವಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ಜೈನ್ ತಂಡ 53 ರನ್ಗಳಿಂದ ಆಂಧ್ರ ವಿವಿ ತಂಡವನ್ನು ಮಣಿಸಿತು.<br /> ಮೊದಲು ಬ್ಯಾಟ್ ಮಾಡಿದ ಜೈನ್ ತಂಡ ಸಮರ್ಥ್ (68) ಗಳಿಸಿದ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ಗೆ 162 ರನ್ ಪೇರಿಸಿತು. ಚಿರಂಜೀವಿ ಅವರು 38 ರನ್ ಗಳಿಸಿದರು.<br /> <br /> ಆಂಧ್ರ ತಂಡ 19.1 ಓವರ್ಗಳಲ್ಲಿ 109 ರನ್ಗಳಿಗೆ ಆಲೌಟಾಯಿತು. ಸಿ.ಎ. ಕಾರ್ತಿಕ್ (16ಕ್ಕೆ 3) ಮತ್ತು ಸಮರ್ಥ್ (20ಕ್ಕೆ 2) ವಿಜೇತ ತಂಡದ ಪರ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದರು. ಜೈನ್ ತಂಡ ₨ 2 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡಿತು. ಸಮರ್ಥ್ ಅವರು ಫೈನಲ್ನಲ್ಲಿ ‘ಪಂದ್ಯಶ್ರೇಷ್ಠ’ ಎನಿಸಿಕೊಂಡರಲ್ಲದೆ, ‘ಸರಣಿ ಶ್ರೇಷ್ಠ’ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.<br /> <br /> <strong>ಸಂಕ್ಷಿಪ್ತ ಸ್ಕೋರ್: ಜೈನ್ ವಿವಿ: </strong>20 ಓವರ್ಗಳಲ್ಲಿ 6 ವಿಕೆಟ್ಗೆ 162 (ಸಮರ್ಥ್ 68, ಚಿರಂಜೀವಿ 38) ಆಂಧ್ರ ವಿವಿ: 19.1 ಓವರ್ಗಳಲ್ಲಿ 109 (ಸಿ.ಎ. ಕಾರ್ತಿಕ್ 16ಕ್ಕೆ 3, ಸಮರ್ಥ್ 20ಕ್ಕೆ 2)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>