<p><strong>ನವದೆಹಲಿ (ಪಿಟಿಐ):</strong> `ಕೇಂದ್ರದ ಯುಪಿಎ ಸರ್ಕಾರ ದುರ್ಬಲವಾಗಿರುವ ಕಾರಣ ದೇಶದ ರಾಜಕೀಯ ವಲಯದಲ್ಲಿ ಕ್ಷೋಭೆಯ ವಾತಾವರಣ ಸೃಷ್ಟಿಯಾಗಿದೆ, ಯಾವುದೇ ಸಂದರ್ಭದಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಇದೆ~ ಎಂದು ಯುಪಿಎ ಜತೆ ಬಹಿರಂಗ ಸಂಘರ್ಷಕ್ಕೆ ಇಳಿದಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗುರುವಾರ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದೆ. <br /> <br /> ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ಬಹಿರಂಗವಾಗಿ ಟೀಕೆಗಳ ಸುರಿಮಳೆಗರೆದಿದ್ದ ಟಿಎಂಸಿ ಸಂಸದ ಹಾಗೂ ರೈಲ್ವೆ ಸಚಿವ ದಿನೇಶ್ ತ್ರಿವೇದಿ, ಗುರುವಾರ ಅದಕ್ಕೆ ವ್ಯತಿರಿಕ್ತವಾದ ಸಮಜಾಯಿಷಿ ನೀಡಿದ್ದಾರೆ. ಮಧ್ಯಂತರ ಚುನಾವಣೆ ಬೇಕು ಎಂದಿದ್ದ ಅವರು ಇದೀಗ, `ದೇಶಕ್ಕೆ ಚುನಾವಣೆಗಳು ಅನಗತ್ಯ ಹೊರೆ~ ಎಂದು ಉಲ್ಟಾ ಹೊಡೆದಿದ್ದಾರೆ. <br /> <br /> `ಆರ್ಥಿಕ ತಜ್ಞರಾಗಿರುವ ಮನಮೋಹನ್ ಸಿಂಗ್ ಅವರಿಗಿಂತ ಉತ್ತಮ ಪ್ರಧಾನಿ ಸಿಗಲು ಸಾಧ್ಯವಿಲ್ಲ. ಅವರ ನೀತಿಗಳಿಂದಾಗಿಯೇ ಆರ್ಥಿಕ ಹಿಂಜರಿತದಂತಹ ಸಂದರ್ಭದಲ್ಲೂ ದೇಶ ಉತ್ತಮ ಆರ್ಥಿಕ ಬೆಳವಣಿಗೆ ಕಂಡಿದೆ~ ಎಂದು ಪ್ರಧಾನಿಯನ್ನು ಪ್ರಶಂಸಿಸಿದ್ದಾರೆ.<br /> <br /> `ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯಾಗಿ ದೇಶದ ರಾಜಕೀಯ ಸ್ಥಿತಿಯನ್ನು ವಿಶ್ಲೇಷಿಸಿದ್ದೇನೆ. ಇದರಿಂದ ಪಕ್ಷಕ್ಕೂ ಮತ್ತು ಯುಪಿಎ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಒಬ್ಬ ವ್ಯಕ್ತಿಯಾಗಿ ವಿಚಾರಗಳನ್ನು ತಿಳಿಸುವ, ರಾಜಕೀಯ ಪರಿಸ್ಥಿತಿ ವಿಶ್ಲೇಷಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೂ ಇದೆ. ನನ್ನ ಹೇಳಿಕೆಗೂ ನಾನು ಈಗಲೂ ಬದ್ಧ~ ಎಂದು ತ್ರಿವೇದಿ ಹೇಳಿದ್ದಾರೆ. <br /> <br /> ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು `ಯುಪಿಎ ಎಂಬ ಹಡಗನ್ನು ಮುಳುಗಿಸುವ ಅಥವಾ ಅದಕ್ಕೆ ರಂಧ್ರ ಕೊರೆಯುವಂತಹ ವ್ಯಕ್ತಿಯಲ್ಲ~ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. <br /> <br /> ಉತ್ತರ ಪ್ರದೇಶ ಚುನಾವಣಾ ಫಲಿತಾಂಶದ ನಂತರ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ತ್ರಿವೇದಿ, `ಈ ಫಲಿತಾಂಶದಿಂದ ಕೇವಲ ಸಮಾಜವಾದಿ ಪಕ್ಷಕ್ಕೆ ಮಾತ್ರವಲ್ಲ ಟಿಎಂಸಿಗೂ ಸಂತೋಷವಾಗಿದೆ. ಬಿಜೆಪಿ ಕೂಡ ಮಧ್ಯಂತರ ಚುನಾವಣೆ ಬಯಸುತ್ತದೆ~ ಎಂದಿದ್ದರು. <br /> <br /> `ಸಮಾಜವಾದಿ ಪಕ್ಷದಂತೆ ಟಿಎಂಸಿ ಕೂಡ ಲೋಕಸಭೆಗೆ ಮಧ್ಯಂತರ ಚುನಾವಣೆ ಎದುರು ನೋಡುತ್ತಿದೆ. <br /> ಎರಡು ವರ್ಷಗಳ ನಂತರ ನಡೆಯುವ ಚುನಾವಣೆ ಈಗಲೇ ನಡೆದಲ್ಲಿ ಉಭಯ ಪಕ್ಷಗಳಿಗೂ ಲೋಕಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಅವಕಾಶವಿದೆ~ ಎಂದಿದ್ದರು. ಆ ನಂತರ ಕೇಂದ್ರ ಬಜೆಟ್ ಸಂದರ್ಭದಲ್ಲಿ ಈ ರೀತಿಯ ವ್ಯತಿರಿಕ್ತ ಹೇಳಿಕೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮಮತಾ ಅವರ ಆಪ್ತ ವಲಯ ಅಸಮಾಧಾನ ವ್ಯಕ್ತಪಡಿಸಿತ್ತು. <br /> <br /> ಮಮತಾ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಕೋಲ್ಕತ್ತದಲ್ಲಿ ನಡೆಯಲಿರುವ ಟಿಎಂಸಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ಕುರಿತು ಚರ್ಚಿಸುವ ಸಾಧ್ಯತೆ ಇದೆ. `ಕೇಂದ್ರ ಯುಪಿಎ ಸರ್ಕಾರ ಸುಭದ್ರವಾಗಿದ್ದು ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಲಿದೆ. ಪೂರ್ವ ನಿಗದಿಯಂತೆ 2014ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ತನ್ನ ಎಲ್ಲ ಮಿತ್ರ ಪಕ್ಷಗಳೊಂದಿಗೆ ಕಾಂಗ್ರೆಸ್ ಉತ್ತಮ ಸಂಬಂಧ ಹೊಂದಿದೆ. <br /> <br /> ಮಧ್ಯಂತರ ಚುನಾವಣೆಯ ಭಯ ಬೇಡ~ ಎಂದು ಕಾಂಗ್ರೆಸ್ ನಾಯಕರಾದ ಜಯಂತಿ ನಟರಾಜನ್ ಮತ್ತು ರಾಜೀವ್ ಶುಕ್ಲ ಅವರು ತ್ರಿವೇದಿ ಅವರಿಗೆ ತಿರುಗೇಟು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> `ಕೇಂದ್ರದ ಯುಪಿಎ ಸರ್ಕಾರ ದುರ್ಬಲವಾಗಿರುವ ಕಾರಣ ದೇಶದ ರಾಜಕೀಯ ವಲಯದಲ್ಲಿ ಕ್ಷೋಭೆಯ ವಾತಾವರಣ ಸೃಷ್ಟಿಯಾಗಿದೆ, ಯಾವುದೇ ಸಂದರ್ಭದಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಇದೆ~ ಎಂದು ಯುಪಿಎ ಜತೆ ಬಹಿರಂಗ ಸಂಘರ್ಷಕ್ಕೆ ಇಳಿದಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗುರುವಾರ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದೆ. <br /> <br /> ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ಬಹಿರಂಗವಾಗಿ ಟೀಕೆಗಳ ಸುರಿಮಳೆಗರೆದಿದ್ದ ಟಿಎಂಸಿ ಸಂಸದ ಹಾಗೂ ರೈಲ್ವೆ ಸಚಿವ ದಿನೇಶ್ ತ್ರಿವೇದಿ, ಗುರುವಾರ ಅದಕ್ಕೆ ವ್ಯತಿರಿಕ್ತವಾದ ಸಮಜಾಯಿಷಿ ನೀಡಿದ್ದಾರೆ. ಮಧ್ಯಂತರ ಚುನಾವಣೆ ಬೇಕು ಎಂದಿದ್ದ ಅವರು ಇದೀಗ, `ದೇಶಕ್ಕೆ ಚುನಾವಣೆಗಳು ಅನಗತ್ಯ ಹೊರೆ~ ಎಂದು ಉಲ್ಟಾ ಹೊಡೆದಿದ್ದಾರೆ. <br /> <br /> `ಆರ್ಥಿಕ ತಜ್ಞರಾಗಿರುವ ಮನಮೋಹನ್ ಸಿಂಗ್ ಅವರಿಗಿಂತ ಉತ್ತಮ ಪ್ರಧಾನಿ ಸಿಗಲು ಸಾಧ್ಯವಿಲ್ಲ. ಅವರ ನೀತಿಗಳಿಂದಾಗಿಯೇ ಆರ್ಥಿಕ ಹಿಂಜರಿತದಂತಹ ಸಂದರ್ಭದಲ್ಲೂ ದೇಶ ಉತ್ತಮ ಆರ್ಥಿಕ ಬೆಳವಣಿಗೆ ಕಂಡಿದೆ~ ಎಂದು ಪ್ರಧಾನಿಯನ್ನು ಪ್ರಶಂಸಿಸಿದ್ದಾರೆ.<br /> <br /> `ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯಾಗಿ ದೇಶದ ರಾಜಕೀಯ ಸ್ಥಿತಿಯನ್ನು ವಿಶ್ಲೇಷಿಸಿದ್ದೇನೆ. ಇದರಿಂದ ಪಕ್ಷಕ್ಕೂ ಮತ್ತು ಯುಪಿಎ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಒಬ್ಬ ವ್ಯಕ್ತಿಯಾಗಿ ವಿಚಾರಗಳನ್ನು ತಿಳಿಸುವ, ರಾಜಕೀಯ ಪರಿಸ್ಥಿತಿ ವಿಶ್ಲೇಷಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೂ ಇದೆ. ನನ್ನ ಹೇಳಿಕೆಗೂ ನಾನು ಈಗಲೂ ಬದ್ಧ~ ಎಂದು ತ್ರಿವೇದಿ ಹೇಳಿದ್ದಾರೆ. <br /> <br /> ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು `ಯುಪಿಎ ಎಂಬ ಹಡಗನ್ನು ಮುಳುಗಿಸುವ ಅಥವಾ ಅದಕ್ಕೆ ರಂಧ್ರ ಕೊರೆಯುವಂತಹ ವ್ಯಕ್ತಿಯಲ್ಲ~ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. <br /> <br /> ಉತ್ತರ ಪ್ರದೇಶ ಚುನಾವಣಾ ಫಲಿತಾಂಶದ ನಂತರ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ತ್ರಿವೇದಿ, `ಈ ಫಲಿತಾಂಶದಿಂದ ಕೇವಲ ಸಮಾಜವಾದಿ ಪಕ್ಷಕ್ಕೆ ಮಾತ್ರವಲ್ಲ ಟಿಎಂಸಿಗೂ ಸಂತೋಷವಾಗಿದೆ. ಬಿಜೆಪಿ ಕೂಡ ಮಧ್ಯಂತರ ಚುನಾವಣೆ ಬಯಸುತ್ತದೆ~ ಎಂದಿದ್ದರು. <br /> <br /> `ಸಮಾಜವಾದಿ ಪಕ್ಷದಂತೆ ಟಿಎಂಸಿ ಕೂಡ ಲೋಕಸಭೆಗೆ ಮಧ್ಯಂತರ ಚುನಾವಣೆ ಎದುರು ನೋಡುತ್ತಿದೆ. <br /> ಎರಡು ವರ್ಷಗಳ ನಂತರ ನಡೆಯುವ ಚುನಾವಣೆ ಈಗಲೇ ನಡೆದಲ್ಲಿ ಉಭಯ ಪಕ್ಷಗಳಿಗೂ ಲೋಕಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಅವಕಾಶವಿದೆ~ ಎಂದಿದ್ದರು. ಆ ನಂತರ ಕೇಂದ್ರ ಬಜೆಟ್ ಸಂದರ್ಭದಲ್ಲಿ ಈ ರೀತಿಯ ವ್ಯತಿರಿಕ್ತ ಹೇಳಿಕೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮಮತಾ ಅವರ ಆಪ್ತ ವಲಯ ಅಸಮಾಧಾನ ವ್ಯಕ್ತಪಡಿಸಿತ್ತು. <br /> <br /> ಮಮತಾ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಕೋಲ್ಕತ್ತದಲ್ಲಿ ನಡೆಯಲಿರುವ ಟಿಎಂಸಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ಕುರಿತು ಚರ್ಚಿಸುವ ಸಾಧ್ಯತೆ ಇದೆ. `ಕೇಂದ್ರ ಯುಪಿಎ ಸರ್ಕಾರ ಸುಭದ್ರವಾಗಿದ್ದು ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಲಿದೆ. ಪೂರ್ವ ನಿಗದಿಯಂತೆ 2014ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ತನ್ನ ಎಲ್ಲ ಮಿತ್ರ ಪಕ್ಷಗಳೊಂದಿಗೆ ಕಾಂಗ್ರೆಸ್ ಉತ್ತಮ ಸಂಬಂಧ ಹೊಂದಿದೆ. <br /> <br /> ಮಧ್ಯಂತರ ಚುನಾವಣೆಯ ಭಯ ಬೇಡ~ ಎಂದು ಕಾಂಗ್ರೆಸ್ ನಾಯಕರಾದ ಜಯಂತಿ ನಟರಾಜನ್ ಮತ್ತು ರಾಜೀವ್ ಶುಕ್ಲ ಅವರು ತ್ರಿವೇದಿ ಅವರಿಗೆ ತಿರುಗೇಟು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>