ಟಿಟಿ: ಅದಿತಿ, ಕೃಷ್ಣ ಚಾಂಪಿಯನ್
ಬೆಂಗಳೂರು: ಅದಿತಿ ನಂದಿ ಮತ್ತು ಕೃಷ್ಣ ರಂಗನಾಥ್ ಇಲ್ಲಿ ನಡೆಯುತ್ತಿರುವ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ `ಮಿನಿ ಕೆಡೆಟ್~ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.
ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿ ಹಾಲ್ನಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್ನಲ್ಲಿ ಸ್ಟಾರ್ ಅಕಾಡೆಮಿಯ ಕೃಷ್ಣ 11-9, 8-11, 11-6, 11-1 ರಲ್ಲಿ ಓಂ ಟೇಬಲ್ ಟೆನಿಸ್ ಇನ್ಸ್ಟಿಟ್ಯೂಟ್ನ ಧನುಷ್ ಎಲ್ ಕುಮಾರ್ ವಿರುದ್ಧ ಜಯ ಸಾಧಿಸಿದರು.
ಬಾಲಕಿಯರ ವಿಭಾಗದ ಫೈನಲ್ನಲ್ಲಿ ಬಿಎನ್ಎಂನ ಅದಿತಿ ನಂದಿ 11-8, 10-12, 11-6, 11-7 ರಲ್ಲಿ ಸಿಸಿಎನ ಅದಿತಿ ಜೋಶಿ ಅವರನ್ನು ಮಣಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ಅದಿತಿ ನಂದಿ 11-8, 11-5, 11-3 ರಲ್ಲಿ ಶರ್ವಾನಿ ಅಡಿಗ ಮೇಲೂ, ಅದಿತಿ ಜೋಶಿ 6-11, 11-9, 11-8, 11-8 ರಲ್ಲಿ ಕೆ. ನೈದಿಲೆ ಎದುರೂ ಜಯ ಪಡೆದಿದ್ದರು.
ತಂಡ ವಿಭಾಗದ ಫೈನಲ್ನಲ್ಲಿ ಎಸ್ಡಬ್ಲ್ಯುಆರ್ 3-1 ರಲ್ಲಿ ಬಿಎನ್ಎಂಇಐ ವಿರುದ್ಧ ಗೆಲುವು ಪಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.