<p><strong>ಧರ್ಮಶಾಲಾ (ಹಿಮಾಚಲ ಪ್ರದೇಶ) (ಐಎಎನ್ಎಸ್):</strong> ಟಿಬೆಟ್ನಿಂದ ಹೊರಗಿದ್ದು ‘ತ್ರಿಶಂಕು ಸರ್ಕಾರ’ ನಡೆಸುತ್ತಿರುವ ದೇಶಭ್ರಷ್ಟ ಟಿಬೆಟನ್ನರು ಭಾನುವಾರ ತಮ್ಮ ‘ಹೊಸ ಪ್ರಧಾನಿ’ಯ (ಕಲೊನ್ ತ್ರಿಪಾ) ಆಯ್ಕೆಗೆ ಮತ ಚಲಾಯಿಸಲಿದ್ದಾರೆ. ಪ್ರಧಾನಿಯಾಗಿ ಆಯ್ಕೆಯಾಗುವ ವ್ಯಕ್ತಿ ದಲೈಲಾಮ ಅವರ ಉತ್ತರಾಧಿಕಾರಿಯಾಗಲಿದ್ದಾರೆ.<br /> <br /> ಗಡೀಪಾರು ಸ್ಥಿತಿಯಲ್ಲಿರುವ ಈ ಜನರು ಈಗ ಹೊಸ ಆಡಳಿತದ ನಿರೀಕ್ಷೆಯಲ್ಲಿದ್ದಾರೆ. ಸಮರ್ಥ, ಸುಸಂಸ್ಕೃತ, ಪಾಶ್ಚಾತ್ಯ ಶಿಕ್ಷಣ ಪಡೆದ ಯುವಕರು ನಾಯಕರಾಗಲಿ ಎಂದು ಹಾರೈಸುತ್ತಿದ್ದಾರೆ. ಲಾಬ್ಸಾಂಗ್ ಸಾಂಗೆ, ಟೆನ್ಜಿನ್ ನಮ್ಗಿಯಾಲ್ ಟೆತಾಂಗ್, ತಾಷಿ ನಮ್ಗಿಯಾಲ್ ವಾಂಗ್ಡಿ ಈ ಬಾರಿ ಪ್ರಧಾನಿ ಹುದ್ದೆಯ ಸ್ಪರ್ಧಾ ಕಣದಲ್ಲಿದ್ದಾರೆ. <br /> <br /> ಗಡೀಪಾರಾದ ಟಿಬೆಟನ್ನರು ಭಾರತ, ನೇಪಾಳ, ಅಮೆರಿಕ, ಯೂರೋಪ್ ದೇಶಗಳು, ಆಸ್ಟ್ರೇಲಿಯಾ ಮುಂತಾದೆಡೆ ನೆಲೆಸಿದ್ದು ಒಟ್ಟು 85,000 ಮತದಾರರಿದ್ದಾರೆ. ಒಟ್ಟು 86 ಪ್ರಾದೇಶಿಕ ಚುನಾವಣಾ ಕಚೇರಿಗಳನ್ನು ತೆರೆಯಲಾಗಿದೆ.ದಲೈಲಾಮ ಸ್ಪಷ್ಟನೆ: ರಾಜಕೀಯ ನಿವೃತ್ತಿಯ ನಿರ್ಧಾರವನ್ನು ಪುನರ್ಪರಿಶೀಲಿಸಬೇಕು ಎಂಬ ದೇಶಭ್ರಷ್ಟ ಟಿಬೆಟ್ ಸಂಸತ್ತಿನ ಕೋರಿಕೆಯನ್ನು ತಳ್ಳಿಹಾಕಿರುವ ದಲೈಲಾಮ ಅವರು, ತಮ್ಮ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧರ್ಮಶಾಲಾ (ಹಿಮಾಚಲ ಪ್ರದೇಶ) (ಐಎಎನ್ಎಸ್):</strong> ಟಿಬೆಟ್ನಿಂದ ಹೊರಗಿದ್ದು ‘ತ್ರಿಶಂಕು ಸರ್ಕಾರ’ ನಡೆಸುತ್ತಿರುವ ದೇಶಭ್ರಷ್ಟ ಟಿಬೆಟನ್ನರು ಭಾನುವಾರ ತಮ್ಮ ‘ಹೊಸ ಪ್ರಧಾನಿ’ಯ (ಕಲೊನ್ ತ್ರಿಪಾ) ಆಯ್ಕೆಗೆ ಮತ ಚಲಾಯಿಸಲಿದ್ದಾರೆ. ಪ್ರಧಾನಿಯಾಗಿ ಆಯ್ಕೆಯಾಗುವ ವ್ಯಕ್ತಿ ದಲೈಲಾಮ ಅವರ ಉತ್ತರಾಧಿಕಾರಿಯಾಗಲಿದ್ದಾರೆ.<br /> <br /> ಗಡೀಪಾರು ಸ್ಥಿತಿಯಲ್ಲಿರುವ ಈ ಜನರು ಈಗ ಹೊಸ ಆಡಳಿತದ ನಿರೀಕ್ಷೆಯಲ್ಲಿದ್ದಾರೆ. ಸಮರ್ಥ, ಸುಸಂಸ್ಕೃತ, ಪಾಶ್ಚಾತ್ಯ ಶಿಕ್ಷಣ ಪಡೆದ ಯುವಕರು ನಾಯಕರಾಗಲಿ ಎಂದು ಹಾರೈಸುತ್ತಿದ್ದಾರೆ. ಲಾಬ್ಸಾಂಗ್ ಸಾಂಗೆ, ಟೆನ್ಜಿನ್ ನಮ್ಗಿಯಾಲ್ ಟೆತಾಂಗ್, ತಾಷಿ ನಮ್ಗಿಯಾಲ್ ವಾಂಗ್ಡಿ ಈ ಬಾರಿ ಪ್ರಧಾನಿ ಹುದ್ದೆಯ ಸ್ಪರ್ಧಾ ಕಣದಲ್ಲಿದ್ದಾರೆ. <br /> <br /> ಗಡೀಪಾರಾದ ಟಿಬೆಟನ್ನರು ಭಾರತ, ನೇಪಾಳ, ಅಮೆರಿಕ, ಯೂರೋಪ್ ದೇಶಗಳು, ಆಸ್ಟ್ರೇಲಿಯಾ ಮುಂತಾದೆಡೆ ನೆಲೆಸಿದ್ದು ಒಟ್ಟು 85,000 ಮತದಾರರಿದ್ದಾರೆ. ಒಟ್ಟು 86 ಪ್ರಾದೇಶಿಕ ಚುನಾವಣಾ ಕಚೇರಿಗಳನ್ನು ತೆರೆಯಲಾಗಿದೆ.ದಲೈಲಾಮ ಸ್ಪಷ್ಟನೆ: ರಾಜಕೀಯ ನಿವೃತ್ತಿಯ ನಿರ್ಧಾರವನ್ನು ಪುನರ್ಪರಿಶೀಲಿಸಬೇಕು ಎಂಬ ದೇಶಭ್ರಷ್ಟ ಟಿಬೆಟ್ ಸಂಸತ್ತಿನ ಕೋರಿಕೆಯನ್ನು ತಳ್ಳಿಹಾಕಿರುವ ದಲೈಲಾಮ ಅವರು, ತಮ್ಮ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>