<p><strong>ನವದೆಹಲಿ (ಪಿಟಿಐ):</strong> ನಿವೃತ್ತಿಗೆ ಒತ್ತಡ ಹೆಚ್ಚಿಸುತ್ತಿರುವ ಟೀಕಾಕಾರರಿಗೆ ಶತಕಗಳ ಶತಕ ವೀರ ಸಚಿನ್ ತೆಂಡೂಲ್ಕರ್ ತಿರುಗೇಟು ನೀಡಿದ್ದಾರೆ. `ಟೀಕೆ ಮಾಡಿದವರೇನು ನನಗೆ ಕ್ರಿಕೆಟ್ ಆಟ ಕಲಿಸಿಕೊಟ್ಟಿಲ್ಲ~ ಎಂದು ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.<br /> <br /> ಆಟದ ಸತ್ವದ ಬಗ್ಗೆ ಅನುಮಾನ ಮೂಡಿದ ಕ್ಷಣವೇ ಆಡುವುದನ್ನು ನಿಲ್ಲಿಸುವುದಾಗಿ ಹೇಳಿರುವ ಅವರು `ಟೀಕೆ ಮಾಡುವವರು ನಾನೇನು ಮಾಡಬೇಕೆಂದು ಹೇಳಿಕೊಡುವ ಅಗತ್ಯವಿಲ್ಲ~ ಎಂದು ಸ್ಪಷ್ಟವಾಗಿ ನುಡಿದಿದ್ದಾರೆ.<br /> <br /> `ಸಹ ಆಟಗಾರರ ಜೊತೆಗೆ ಸಾಲಿನಲ್ಲಿ ನಿಂತು ರಾಷ್ಟ್ರಗೀತೆ ಹಾಡುವಾಗ ಈಗಲೂ ರೋಮಾಂಚನಗೊಳ್ಳುತ್ತೇನೆ. ದೇಶಕ್ಕಾಗಿ ಆಡಲು ಪ್ರತಿಯೊಂದು ಬಾರಿ ಬ್ಯಾಟ್ ಎತ್ತಿಕೊಂಡಾಗಲೂ ಅಂಥದೇ ಅನುಭವ ಆಗುತ್ತದೆ~ ಎಂದಿರುವ ತೆಂಡೂಲ್ಕರ್ `ಆ ಜನ (ಟೀಕಾಕಾರರು) ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಅವುಗಳಿಗೆ ಅವರ ಬಳಿಯೇ ಸರಿಯಾದ ಉತ್ತರ ಇಲ್ಲ. ನಾನು ಏನು ಯೋಚನೆ ಮಾಡುತ್ತಿದ್ದೇನೆ ಹಾಗೂ ಎಂಥ ಮನೋಭಾವ ಹೊಂದಿದ್ದೇನೆಂದು ಅರ್ಥ ಮಾಡಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ~ ಎಂದಿದ್ದಾರೆ.<br /> <br /> ಬಾಂಗ್ಲಾದೇಶದ ವಿರುದ್ಧ ಏಷ್ಯಾಕಪ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ನೂರನೇ ಅಂತರರಾಷ್ಟ್ರೀಯ ಶತಕ ಪೂರೈಸಿದ ಸಚಿನ್ `ಆ ನೂರು ಗಳಿಸುವುದು ಬಹಳ ಕಷ್ಟವೇ ಆಗಿತ್ತು. ಅದು ಏಕೆಂದು ನನಗೂ ಗೊತ್ತಿಲ್ಲ. ಒಟ್ಟಿನಲ್ಲಿ ದೀರ್ಘ ಕಾಲ ಪ್ರಯತ್ನ ಮಾಡಬೇಕಾಯಿತು~ ಎಂದು ಪ್ರತಿಕ್ರಿಯಿಸಿದ್ದಾರೆ.<br /> <br /> ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ಚಾಂಪಿಯನ್ ಆದ ನಂತರ ಏಕದಿನ ನಿವೃತ್ತಿ ಹೊಂದಬಹುದೆಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಸ್ವತಃ ಸಚಿನ್ ಆ ಬಗ್ಗೆ ಯೋಚನೆ ಮಾಡಿರಲೇ ಇಲ್ಲ. ಅದನ್ನು ಅವರೇ ತಿಳಿಸಿದ್ದಾರೆ.<br /> <br /> `ವಿಶ್ವಕಪ್ ನಂತರ ನನ್ನ ಅನೇಕ ಆತ್ಮೀಯ ಗೆಳೆಯರು ಕೂಡ ಈ ವಿಷವಾಗಿ ಕೇಳಿದ್ದರು. ಅವರ ಮಟ್ಟಿಗೆ ಆ ಪ್ರಶ್ನೆ ಸರಿ ಇರಬಹುದು. ಅದೊಂದು ಅದ್ದೂರಿ ವಿದಾಯ ಆಗುತ್ತದೆಂದು ಅವರೆಲ್ಲ ಅಂದುಕೊಂಡಿದ್ದೂ ಸಹಜ. ಆದರೆ ನನ್ನ ಮನದಲ್ಲಿ ಅಂಥ ವಿಚಾರ ಬಂದಿರಲೇ ಇಲ್ಲ~ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ನಿವೃತ್ತಿಗೆ ಒತ್ತಡ ಹೆಚ್ಚಿಸುತ್ತಿರುವ ಟೀಕಾಕಾರರಿಗೆ ಶತಕಗಳ ಶತಕ ವೀರ ಸಚಿನ್ ತೆಂಡೂಲ್ಕರ್ ತಿರುಗೇಟು ನೀಡಿದ್ದಾರೆ. `ಟೀಕೆ ಮಾಡಿದವರೇನು ನನಗೆ ಕ್ರಿಕೆಟ್ ಆಟ ಕಲಿಸಿಕೊಟ್ಟಿಲ್ಲ~ ಎಂದು ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.<br /> <br /> ಆಟದ ಸತ್ವದ ಬಗ್ಗೆ ಅನುಮಾನ ಮೂಡಿದ ಕ್ಷಣವೇ ಆಡುವುದನ್ನು ನಿಲ್ಲಿಸುವುದಾಗಿ ಹೇಳಿರುವ ಅವರು `ಟೀಕೆ ಮಾಡುವವರು ನಾನೇನು ಮಾಡಬೇಕೆಂದು ಹೇಳಿಕೊಡುವ ಅಗತ್ಯವಿಲ್ಲ~ ಎಂದು ಸ್ಪಷ್ಟವಾಗಿ ನುಡಿದಿದ್ದಾರೆ.<br /> <br /> `ಸಹ ಆಟಗಾರರ ಜೊತೆಗೆ ಸಾಲಿನಲ್ಲಿ ನಿಂತು ರಾಷ್ಟ್ರಗೀತೆ ಹಾಡುವಾಗ ಈಗಲೂ ರೋಮಾಂಚನಗೊಳ್ಳುತ್ತೇನೆ. ದೇಶಕ್ಕಾಗಿ ಆಡಲು ಪ್ರತಿಯೊಂದು ಬಾರಿ ಬ್ಯಾಟ್ ಎತ್ತಿಕೊಂಡಾಗಲೂ ಅಂಥದೇ ಅನುಭವ ಆಗುತ್ತದೆ~ ಎಂದಿರುವ ತೆಂಡೂಲ್ಕರ್ `ಆ ಜನ (ಟೀಕಾಕಾರರು) ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಅವುಗಳಿಗೆ ಅವರ ಬಳಿಯೇ ಸರಿಯಾದ ಉತ್ತರ ಇಲ್ಲ. ನಾನು ಏನು ಯೋಚನೆ ಮಾಡುತ್ತಿದ್ದೇನೆ ಹಾಗೂ ಎಂಥ ಮನೋಭಾವ ಹೊಂದಿದ್ದೇನೆಂದು ಅರ್ಥ ಮಾಡಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ~ ಎಂದಿದ್ದಾರೆ.<br /> <br /> ಬಾಂಗ್ಲಾದೇಶದ ವಿರುದ್ಧ ಏಷ್ಯಾಕಪ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ನೂರನೇ ಅಂತರರಾಷ್ಟ್ರೀಯ ಶತಕ ಪೂರೈಸಿದ ಸಚಿನ್ `ಆ ನೂರು ಗಳಿಸುವುದು ಬಹಳ ಕಷ್ಟವೇ ಆಗಿತ್ತು. ಅದು ಏಕೆಂದು ನನಗೂ ಗೊತ್ತಿಲ್ಲ. ಒಟ್ಟಿನಲ್ಲಿ ದೀರ್ಘ ಕಾಲ ಪ್ರಯತ್ನ ಮಾಡಬೇಕಾಯಿತು~ ಎಂದು ಪ್ರತಿಕ್ರಿಯಿಸಿದ್ದಾರೆ.<br /> <br /> ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ಚಾಂಪಿಯನ್ ಆದ ನಂತರ ಏಕದಿನ ನಿವೃತ್ತಿ ಹೊಂದಬಹುದೆಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಸ್ವತಃ ಸಚಿನ್ ಆ ಬಗ್ಗೆ ಯೋಚನೆ ಮಾಡಿರಲೇ ಇಲ್ಲ. ಅದನ್ನು ಅವರೇ ತಿಳಿಸಿದ್ದಾರೆ.<br /> <br /> `ವಿಶ್ವಕಪ್ ನಂತರ ನನ್ನ ಅನೇಕ ಆತ್ಮೀಯ ಗೆಳೆಯರು ಕೂಡ ಈ ವಿಷವಾಗಿ ಕೇಳಿದ್ದರು. ಅವರ ಮಟ್ಟಿಗೆ ಆ ಪ್ರಶ್ನೆ ಸರಿ ಇರಬಹುದು. ಅದೊಂದು ಅದ್ದೂರಿ ವಿದಾಯ ಆಗುತ್ತದೆಂದು ಅವರೆಲ್ಲ ಅಂದುಕೊಂಡಿದ್ದೂ ಸಹಜ. ಆದರೆ ನನ್ನ ಮನದಲ್ಲಿ ಅಂಥ ವಿಚಾರ ಬಂದಿರಲೇ ಇಲ್ಲ~ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>