<p><strong>ಲಂಡನ್ (ಪಿಟಿಐ):</strong> ವೈಭವೋಪೇತ ಹಡಗು ಟೈಟಾನಿಕ್ನ ದುರಂತದಲ್ಲಿ ಭೂಮಿಯ ಉಪಗ್ರಹವಾದ ಚಂದ್ರನ ಪಾತ್ರವೂ ಮಹತ್ವದ್ದಾಗಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ!<br /> <br /> ಸೌದಾಂಪ್ಟ್ಯನ್ನಿಂದ ನ್ಯೂಯಾರ್ಕ್ಗೆ ತೆರಳುತ್ತಿದ್ದ ಹಡಗು 1912ರ ಏಪ್ರಿಲ್ 14ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿ ದುರಂತ ಸಂಭವಿಸಿತ್ತು. ಟೆಕ್ಸಾಸ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ತಜ್ಞರ ಪ್ರಕಾರ, ಆ ಸಂದರ್ಭದಲ್ಲಿ, ಚಂದ್ರನು 1400 ವರ್ಷಗಳಲ್ಲೇ ಮೊದಲ ಬಾರಿಗೆ ಭೂಮಿಯ ಅತ್ಯಂತ ಸಮೀಪಕ್ಕೆ ಬಂದಿದ್ದ. ಹೀಗಾಗಿ ದುರಂತಕ್ಕೆ ಮೂರು ತಿಂಗಳ ಮುನ್ನ, 1912ರ ಜನವರಿ 12ರಂದು ಸಾಗರದಲ್ಲಿ ಪ್ರಚಂಡ ಎತ್ತರದ ಅಲೆಗಳು ಉದ್ಭವವಾಗಿ ಅದರ ಹೊಡೆತಕ್ಕೆ ಸಿಲುಕಿ ಹಿಮಗುಡ್ಡದ ಶಿರೋಭಾಗಗಳು ಪುಡಿಪುಡಿಯಾಗಿದ್ದವು. <br /> <br /> ಇವು ಶೀಘ್ರ ಕರಗದೆ ಕೆಲವು ತಿಂಗಳುಗಳ ನಂತರವೂ ಹಾಗೆಯೇ ಉಳಿದಿದ್ದವು. ಟೈಟಾನಿಕ್, ಹೀಗೆ ಮಂಜಿನ ಹೆಪ್ಪುಗಳು ದಟ್ಟೈಸಿದ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿತ್ತು. ಇದರಿಂದಾಗಿ ಜೀವರಕ್ಷಕ ದೋಣಿಗಳಿಗೆ ಕೂಡ ಸಕಾಲದಲ್ಲಿ ಸ್ಥಳಕ್ಕೆ ತೆರಳುವುದು ಕಷ್ಟವಾಯಿತು ಎಂದು ಸಂಶೋಧಕರು ವಿವರಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್ (ಪಿಟಿಐ):</strong> ವೈಭವೋಪೇತ ಹಡಗು ಟೈಟಾನಿಕ್ನ ದುರಂತದಲ್ಲಿ ಭೂಮಿಯ ಉಪಗ್ರಹವಾದ ಚಂದ್ರನ ಪಾತ್ರವೂ ಮಹತ್ವದ್ದಾಗಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ!<br /> <br /> ಸೌದಾಂಪ್ಟ್ಯನ್ನಿಂದ ನ್ಯೂಯಾರ್ಕ್ಗೆ ತೆರಳುತ್ತಿದ್ದ ಹಡಗು 1912ರ ಏಪ್ರಿಲ್ 14ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿ ದುರಂತ ಸಂಭವಿಸಿತ್ತು. ಟೆಕ್ಸಾಸ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ತಜ್ಞರ ಪ್ರಕಾರ, ಆ ಸಂದರ್ಭದಲ್ಲಿ, ಚಂದ್ರನು 1400 ವರ್ಷಗಳಲ್ಲೇ ಮೊದಲ ಬಾರಿಗೆ ಭೂಮಿಯ ಅತ್ಯಂತ ಸಮೀಪಕ್ಕೆ ಬಂದಿದ್ದ. ಹೀಗಾಗಿ ದುರಂತಕ್ಕೆ ಮೂರು ತಿಂಗಳ ಮುನ್ನ, 1912ರ ಜನವರಿ 12ರಂದು ಸಾಗರದಲ್ಲಿ ಪ್ರಚಂಡ ಎತ್ತರದ ಅಲೆಗಳು ಉದ್ಭವವಾಗಿ ಅದರ ಹೊಡೆತಕ್ಕೆ ಸಿಲುಕಿ ಹಿಮಗುಡ್ಡದ ಶಿರೋಭಾಗಗಳು ಪುಡಿಪುಡಿಯಾಗಿದ್ದವು. <br /> <br /> ಇವು ಶೀಘ್ರ ಕರಗದೆ ಕೆಲವು ತಿಂಗಳುಗಳ ನಂತರವೂ ಹಾಗೆಯೇ ಉಳಿದಿದ್ದವು. ಟೈಟಾನಿಕ್, ಹೀಗೆ ಮಂಜಿನ ಹೆಪ್ಪುಗಳು ದಟ್ಟೈಸಿದ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿತ್ತು. ಇದರಿಂದಾಗಿ ಜೀವರಕ್ಷಕ ದೋಣಿಗಳಿಗೆ ಕೂಡ ಸಕಾಲದಲ್ಲಿ ಸ್ಥಳಕ್ಕೆ ತೆರಳುವುದು ಕಷ್ಟವಾಯಿತು ಎಂದು ಸಂಶೋಧಕರು ವಿವರಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>