<p><strong>ಯಳಂದೂರು:</strong> ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ನಿರ್ಮಿಸಿದ ಮೊದಲ ಓವರ್ಹೆಡ್ ಟ್ಯಾಂಕ್ ಶಿಥಿಲಗೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.<br /> <br /> ಪಟ್ಟಣದ ಬಿಎಸ್ಎನ್ಎಲ್ ಕಚೇರಿ ಬಳಿಯ ಈ ಟ್ಯಾಂಕ್ ನಿರ್ಮಾಣಗೊಂಡು ಹತ್ತಾರು ವರ್ಷ ಕಳೆದಿವೆ. ಆದರೆ, ಕಳೆದ ಕೆಲ ವರ್ಷಗಳಿಂದ ನೀರು ಸೋರಿಕೆಯಾಗುತ್ತಿದೆ. ಟ್ಯಾಂಕಿನ ಕಂಬಗಳು ಹಾಗೂ ತಳಭಾಗದಲ್ಲಿ ಕಬ್ಬಿಣ ಕಂಬಿ ಕಾಣಿಸಿಕೊಳ್ಳುತ್ತಿವೆ. ಆದರೂ, ಕೂಡ ಸಹ ನೀರು ತುಂಬಿಸಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ.<br /> <br /> ಟ್ಯಾಂಕ್ ತಳಭಾಗದಲ್ಲಿ ಕ್ಯಾಂಟೀನ್, ಪೆಟ್ಟಿಗೆ ಅಂಗಡಿಗಳಿವೆ. ನೂರಾರು ಜನ ವಿಶ್ರಾಂತಿ ಪಡೆಯುತ್ತಾರೆ. ಆದರೆ, ಆಗಾಗ ಗಾರೆಚೆಕ್ಕೆ ಉದುರಿ ಬೀಳುತ್ತಿವೆ. ಈ ಬಗ್ಗೆ ಹಲವು ಬಾರಿ ದಿನತ್ರಿಕೆಗಳಲ್ಲಿ ವರದಿ ಪ್ರಕಟವಾದರೂ ಸೂಕ್ತ ಕ್ರಮಕೈಗೊಂಡಿಲ್ಲ. ಟ್ಯಾಂಕ್ ನೆಲಸಮ ಮಾಡಲು ಈಗಾಗಲೇ ಸಮೀಕ್ಷೆ ಮಾಡಲಾಗಿದೆ. ಸರ್ಕಾರಿ ನಿಯಮಗಳು ಇದಕ್ಕೆ ಅಡ್ಡಿಯಾಗಿದ್ದು, ಶೀಘ್ರದಲ್ಲೇ ಕ್ರಮ ವಹಿಸುವ ಭರವಸೆ ಇಲ್ಲಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀಡುತ್ತಾರೆ.<br /> <br /> ತಳಭಾಗದ ಚರಂಡಿ ಸಾರ್ವಜನಿಕ ಮೂತ್ರಾಲಯವಾಗಿ ಮಾರ್ಪಟ್ಟಿದೆ. ಈ ಸ್ಥಳ ರೋಗ ಉಲ್ಬಣಕ್ಕೆ ಪೂರಕವಾವಾಗಿದ್ದರೂ ಸ್ಥಳೀಯ ಆಡಳಿತ ಕ್ರಮ ವಹಿಸಿಲ್ಲ. `ಈ ಟ್ಯಾಂಕ್ ಶಿಥಿಲವಾಗಿದ್ದು, ಅಪಾಯಕಾರಿ' ಎಂದು ನಾಮಫಲಕ ಅಳವಡಿಸಿದ್ದು ಬಿಟ್ಟರೆ ಈವರೆಗೂ ತೆರವಿಗೆ ಕ್ರಮಕೈಗೊಂಡಿಲ್ಲ.<br /> <br /> `ಆದಷ್ಟು ಬೇಗ ಇದನ್ನು ನೆಲಸಮ ಮಾಡದಿದ್ದರೆ ಅಪಾಯ ಖಚಿತ. ಇದಕ್ಕೆ ಪಟ್ಟಣ ಪಂಚಾಯಿತಿ ಹೊಣೆಯಾಗಲಿದೆ' ಎಂದು ದೂರುತ್ತಾರೆ ಸ್ಥಳೀಯರಾದ ಮಧು, ರಾಜೇಂದ್ರ.</p>.<p><strong>ಕಂಡೂ ಕಾಣದವರು</strong><br /> ಕುಡಿಯುವ ನೀರಿಗಾಗಿ ಸ್ಥಾಪಿಸಿದ ಈ ಟ್ಯಾಂಕ್ ಶಿಥಿಲವಾಗಿ ಹಲವು ವರ್ಷಗಳೇ ಉರುಳಿವೆ. ಕೂಗಳತೆ ದೂರದಲ್ಲಿ ಪಂಚಾಯಿತಿ ಆಡಳಿತ ಕಚೇರಿ ಇದೆ. ಅಧಿಕಾರಿಗಳು ಇದರ ಮುಂಭಾಗದಲ್ಲಿಯೇ ಸಂಚರಿಸುತ್ತಾರೆ. ಆದರೆ, ಇತ್ತ ಯಾರೂ ಗಮನ ಹರಿಸುತ್ತಿಲ್ಲ. ಆ ಕಾಳಜಿ ಯಾರಿಗೂ ಇದ್ದಂತಿಲ್ಲ<br /> ರಾಘವ, ಸ್ಥಳೀಯರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ನಿರ್ಮಿಸಿದ ಮೊದಲ ಓವರ್ಹೆಡ್ ಟ್ಯಾಂಕ್ ಶಿಥಿಲಗೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.<br /> <br /> ಪಟ್ಟಣದ ಬಿಎಸ್ಎನ್ಎಲ್ ಕಚೇರಿ ಬಳಿಯ ಈ ಟ್ಯಾಂಕ್ ನಿರ್ಮಾಣಗೊಂಡು ಹತ್ತಾರು ವರ್ಷ ಕಳೆದಿವೆ. ಆದರೆ, ಕಳೆದ ಕೆಲ ವರ್ಷಗಳಿಂದ ನೀರು ಸೋರಿಕೆಯಾಗುತ್ತಿದೆ. ಟ್ಯಾಂಕಿನ ಕಂಬಗಳು ಹಾಗೂ ತಳಭಾಗದಲ್ಲಿ ಕಬ್ಬಿಣ ಕಂಬಿ ಕಾಣಿಸಿಕೊಳ್ಳುತ್ತಿವೆ. ಆದರೂ, ಕೂಡ ಸಹ ನೀರು ತುಂಬಿಸಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ.<br /> <br /> ಟ್ಯಾಂಕ್ ತಳಭಾಗದಲ್ಲಿ ಕ್ಯಾಂಟೀನ್, ಪೆಟ್ಟಿಗೆ ಅಂಗಡಿಗಳಿವೆ. ನೂರಾರು ಜನ ವಿಶ್ರಾಂತಿ ಪಡೆಯುತ್ತಾರೆ. ಆದರೆ, ಆಗಾಗ ಗಾರೆಚೆಕ್ಕೆ ಉದುರಿ ಬೀಳುತ್ತಿವೆ. ಈ ಬಗ್ಗೆ ಹಲವು ಬಾರಿ ದಿನತ್ರಿಕೆಗಳಲ್ಲಿ ವರದಿ ಪ್ರಕಟವಾದರೂ ಸೂಕ್ತ ಕ್ರಮಕೈಗೊಂಡಿಲ್ಲ. ಟ್ಯಾಂಕ್ ನೆಲಸಮ ಮಾಡಲು ಈಗಾಗಲೇ ಸಮೀಕ್ಷೆ ಮಾಡಲಾಗಿದೆ. ಸರ್ಕಾರಿ ನಿಯಮಗಳು ಇದಕ್ಕೆ ಅಡ್ಡಿಯಾಗಿದ್ದು, ಶೀಘ್ರದಲ್ಲೇ ಕ್ರಮ ವಹಿಸುವ ಭರವಸೆ ಇಲ್ಲಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀಡುತ್ತಾರೆ.<br /> <br /> ತಳಭಾಗದ ಚರಂಡಿ ಸಾರ್ವಜನಿಕ ಮೂತ್ರಾಲಯವಾಗಿ ಮಾರ್ಪಟ್ಟಿದೆ. ಈ ಸ್ಥಳ ರೋಗ ಉಲ್ಬಣಕ್ಕೆ ಪೂರಕವಾವಾಗಿದ್ದರೂ ಸ್ಥಳೀಯ ಆಡಳಿತ ಕ್ರಮ ವಹಿಸಿಲ್ಲ. `ಈ ಟ್ಯಾಂಕ್ ಶಿಥಿಲವಾಗಿದ್ದು, ಅಪಾಯಕಾರಿ' ಎಂದು ನಾಮಫಲಕ ಅಳವಡಿಸಿದ್ದು ಬಿಟ್ಟರೆ ಈವರೆಗೂ ತೆರವಿಗೆ ಕ್ರಮಕೈಗೊಂಡಿಲ್ಲ.<br /> <br /> `ಆದಷ್ಟು ಬೇಗ ಇದನ್ನು ನೆಲಸಮ ಮಾಡದಿದ್ದರೆ ಅಪಾಯ ಖಚಿತ. ಇದಕ್ಕೆ ಪಟ್ಟಣ ಪಂಚಾಯಿತಿ ಹೊಣೆಯಾಗಲಿದೆ' ಎಂದು ದೂರುತ್ತಾರೆ ಸ್ಥಳೀಯರಾದ ಮಧು, ರಾಜೇಂದ್ರ.</p>.<p><strong>ಕಂಡೂ ಕಾಣದವರು</strong><br /> ಕುಡಿಯುವ ನೀರಿಗಾಗಿ ಸ್ಥಾಪಿಸಿದ ಈ ಟ್ಯಾಂಕ್ ಶಿಥಿಲವಾಗಿ ಹಲವು ವರ್ಷಗಳೇ ಉರುಳಿವೆ. ಕೂಗಳತೆ ದೂರದಲ್ಲಿ ಪಂಚಾಯಿತಿ ಆಡಳಿತ ಕಚೇರಿ ಇದೆ. ಅಧಿಕಾರಿಗಳು ಇದರ ಮುಂಭಾಗದಲ್ಲಿಯೇ ಸಂಚರಿಸುತ್ತಾರೆ. ಆದರೆ, ಇತ್ತ ಯಾರೂ ಗಮನ ಹರಿಸುತ್ತಿಲ್ಲ. ಆ ಕಾಳಜಿ ಯಾರಿಗೂ ಇದ್ದಂತಿಲ್ಲ<br /> ರಾಘವ, ಸ್ಥಳೀಯರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>