<p><strong>ತಾಳಿಕೋಟೆ:</strong> ಸಮೀಪದ ಹಡಗಿನಾಳ ರಸ್ತೆಯಲ್ಲಿನ ಭಾಗಮ್ಮನ ದೇವಸ್ಥಾನದ ಬಳಿಯ ತಿರುವಿನಲ್ಲಿ ಶುಕ್ರವಾರ ಸಂಭವಿಸಿದ ಟ್ರ್ಯಾಕ್ಟರ್ ಅಪಘಾತದಲ್ಲಿ 24 ಮಹಿಳೆಯರು ಗಾಯಗೊಂಡ ಘಟನೆ ವರದಿಯಾಗಿದೆ.<br /> <br /> ಬಿಳೇಭಾವಿಯಲ್ಲಿ ಸಂಬಂಧಿಯೊಬ್ಬರ ಅಂತ್ಯ ಸಂಸ್ಕಾರಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಟ್ರ್ಯಾಕ್ಟರ್ ಟ್ರಾಲಿ ಕೊಂಡಿ ಕಳಚಿದ್ದರಿಂದ ಅಪಘಾತ ಸಂಭವಿಸಿದೆ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. <br /> <br /> ಗಾಯಾಳುಗಳೆಲ್ಲ ಮುದ್ದೇಬಿಹಾಳ ತಾಲ್ಲೂಕಿನ ಕಲದೇವನಹಳ್ಳಿಯವರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಳಿಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.<br /> <strong><br /> ಬಾಲಕ ನೀರು ಪಾಲು</strong><br /> <strong>ಆಲಮಟ್ಟಿ: </strong>ಇಲ್ಲಿಯ ಸುಪ್ರಸಿದ್ಧ ಚಂದ್ರಗಿರಿ ಚಂದ್ರಮ್ಮೋ ದೇವಿ ಜಾತ್ರೆಗೆ ಆಗಮಿಸಿದ್ದ ಮುದ್ದೇಬಿಹಾಳದ ಬಾಲಕನೊಬ್ಬ ಕೃಷ್ಣಾ ನದಿ ಪಾಲಾದ ಘಟನೆ ಸಂಭವಿಸಿದೆ.<br /> <br /> ಮುದ್ದೇಬಿಹಾಳ ಗ್ರಾಮದ ಮೌನೇಶ ರಾಮಚಂದ್ರ ಬಡಿಗೇರ (10) ಮೃತ ಬಾಲಕ.<br /> ಮೌನೇಶನ ಪಾಲಕರು ಗುರುವಾವೇ ಮುದ್ದೇಬಿಹಾಳಕ್ಕೆ ಹೋಗಿದ್ದರು. ಆಗಲೇ ಆತ ಕಾಣೆಯಾಗಿದ್ದು, ಬೆಳಿಗ್ಗೆ ಶವ ಪತ್ತೆಯಾದಾಗ ವಿಚಾರ ಗೊತ್ತಾಗಿದೆ. ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. <br /> <br /> ಆತ್ಮಹತ್ಯೆ: ಇಲ್ಲಿಯ ಚಂದ್ರಗಿರಿ ಚಂದ್ರಮ್ಮೋದೇವಿ ಜಾತ್ರೆಗೆ ಆಗಮಿಸಿದ್ದ ಬಬಲೇಶ್ವರ ಗ್ರಾಮದ ವ್ಯಕ್ತಿಯೊರ್ವ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಆಲಮಟ್ಟಿಯಲ್ಲಿ ಜರುಗಿದೆ.<br /> ಮೃತ ವ್ಯಕ್ತಿಯನ್ನು ವಿಜಾಪುರ ತಾಲ್ಲೂಕಿನ ಬಬಲೇಶ್ವರ ಗ್ರಾಮದ ರಾನಪ್ಪ ಮಾನಕಪ್ಪ ಹೊಸಮನಿ (40) ಎಂದು ಗುರುತಿಸಲಾಗಿದೆ.ಆಲಮಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.<br /> <br /> <strong>ಅಪಘಾತದಲ್ಲಿ ಸಾವು<br /> </strong><br /> <strong>ವಿಜಾಪುರ: </strong>ತಾಲ್ಲೂಕಿನ ತಿಕೋಟಾ ಹತ್ತಿರ ಟ್ರ್ಯಾಕ್ಟರ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್ ಸವಾರ ಬಾಬಾನಗರ ಗ್ರಾಮದ ಸಂಗಪ್ಪ ಸಿದ್ದಪ್ಪ ಮಾನೆಗೋಳ (25) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾಳಿಕೋಟೆ:</strong> ಸಮೀಪದ ಹಡಗಿನಾಳ ರಸ್ತೆಯಲ್ಲಿನ ಭಾಗಮ್ಮನ ದೇವಸ್ಥಾನದ ಬಳಿಯ ತಿರುವಿನಲ್ಲಿ ಶುಕ್ರವಾರ ಸಂಭವಿಸಿದ ಟ್ರ್ಯಾಕ್ಟರ್ ಅಪಘಾತದಲ್ಲಿ 24 ಮಹಿಳೆಯರು ಗಾಯಗೊಂಡ ಘಟನೆ ವರದಿಯಾಗಿದೆ.<br /> <br /> ಬಿಳೇಭಾವಿಯಲ್ಲಿ ಸಂಬಂಧಿಯೊಬ್ಬರ ಅಂತ್ಯ ಸಂಸ್ಕಾರಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಟ್ರ್ಯಾಕ್ಟರ್ ಟ್ರಾಲಿ ಕೊಂಡಿ ಕಳಚಿದ್ದರಿಂದ ಅಪಘಾತ ಸಂಭವಿಸಿದೆ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. <br /> <br /> ಗಾಯಾಳುಗಳೆಲ್ಲ ಮುದ್ದೇಬಿಹಾಳ ತಾಲ್ಲೂಕಿನ ಕಲದೇವನಹಳ್ಳಿಯವರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಳಿಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.<br /> <strong><br /> ಬಾಲಕ ನೀರು ಪಾಲು</strong><br /> <strong>ಆಲಮಟ್ಟಿ: </strong>ಇಲ್ಲಿಯ ಸುಪ್ರಸಿದ್ಧ ಚಂದ್ರಗಿರಿ ಚಂದ್ರಮ್ಮೋ ದೇವಿ ಜಾತ್ರೆಗೆ ಆಗಮಿಸಿದ್ದ ಮುದ್ದೇಬಿಹಾಳದ ಬಾಲಕನೊಬ್ಬ ಕೃಷ್ಣಾ ನದಿ ಪಾಲಾದ ಘಟನೆ ಸಂಭವಿಸಿದೆ.<br /> <br /> ಮುದ್ದೇಬಿಹಾಳ ಗ್ರಾಮದ ಮೌನೇಶ ರಾಮಚಂದ್ರ ಬಡಿಗೇರ (10) ಮೃತ ಬಾಲಕ.<br /> ಮೌನೇಶನ ಪಾಲಕರು ಗುರುವಾವೇ ಮುದ್ದೇಬಿಹಾಳಕ್ಕೆ ಹೋಗಿದ್ದರು. ಆಗಲೇ ಆತ ಕಾಣೆಯಾಗಿದ್ದು, ಬೆಳಿಗ್ಗೆ ಶವ ಪತ್ತೆಯಾದಾಗ ವಿಚಾರ ಗೊತ್ತಾಗಿದೆ. ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. <br /> <br /> ಆತ್ಮಹತ್ಯೆ: ಇಲ್ಲಿಯ ಚಂದ್ರಗಿರಿ ಚಂದ್ರಮ್ಮೋದೇವಿ ಜಾತ್ರೆಗೆ ಆಗಮಿಸಿದ್ದ ಬಬಲೇಶ್ವರ ಗ್ರಾಮದ ವ್ಯಕ್ತಿಯೊರ್ವ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಆಲಮಟ್ಟಿಯಲ್ಲಿ ಜರುಗಿದೆ.<br /> ಮೃತ ವ್ಯಕ್ತಿಯನ್ನು ವಿಜಾಪುರ ತಾಲ್ಲೂಕಿನ ಬಬಲೇಶ್ವರ ಗ್ರಾಮದ ರಾನಪ್ಪ ಮಾನಕಪ್ಪ ಹೊಸಮನಿ (40) ಎಂದು ಗುರುತಿಸಲಾಗಿದೆ.ಆಲಮಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.<br /> <br /> <strong>ಅಪಘಾತದಲ್ಲಿ ಸಾವು<br /> </strong><br /> <strong>ವಿಜಾಪುರ: </strong>ತಾಲ್ಲೂಕಿನ ತಿಕೋಟಾ ಹತ್ತಿರ ಟ್ರ್ಯಾಕ್ಟರ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್ ಸವಾರ ಬಾಬಾನಗರ ಗ್ರಾಮದ ಸಂಗಪ್ಪ ಸಿದ್ದಪ್ಪ ಮಾನೆಗೋಳ (25) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>