<p><strong>ಮುಂಬೈ (ಪಿಟಿಐ): </strong>ಶನಿವಾರ ನಿಧನರಾದ ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಭಾನುವಾರ ಮುಂಬೈ ಸೇರಿದಂತೆ ದೇಶದ ವಿವಿಧೆಡೆಯಿಂದ ಲಕ್ಷಾಂತರ ಅಭಿಮಾನಿಗಳು ಭಾಗವಹಿಸಿ `ಮಹಾರಾಷ್ಟ್ರದ ಹುಲಿ~ಗೆ ಅಂತಿಮ ನಮನ ಸಲ್ಲಿಸಿದರು.<br /> <br /> ಠಾಕ್ರೆ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮುಂಬೈ ನಗರದ ಗಲ್ಲಿ ಗಲ್ಲಿಗಳಲ್ಲಿನ ಜನರು ಸ್ವ-ಇಚ್ಚೆಯಿಂದ ತಮ್ಮ ನಿತ್ಯದ ಕಾರ್ಯಗಳನ್ನು ಸ್ಥಗಿತಗೊಳಿಸಿ, ಠಾಕ್ರೆಯವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು. <br /> <br /> ಈ ಸಮಯದಲ್ಲಿ ಮುಂಬೈ ನಗರವು ಬಹುತೇಕ ಸ್ಥಬ್ಧಗೊಂಡಿತ್ತು. ಅಂಗಡಿ, ಮಾರುಕಟ್ಟೆ ಹಾಗೂ ಟ್ಯಾಕ್ಸಿ , ಆಟೋ ಸೇರಿದಂತೆ ಸ್ಥಳೀಯ ಸಾರಿಗೆ ವ್ಯವಸ್ಥೆಯು ಸಂಪೂರ್ಣ ಸ್ಥಗಿತಗೊಂಡಿತ್ತು. ನಗರದ ಪ್ರಮುಖ ರಸ್ತೆಗಳು ಜನದಟ್ಟಣೆ ಇಲ್ಲದೆ ಬಿಕೋ ಎನ್ನುತ್ತಿದ್ದವು.<br /> <br /> ಶನಿವಾರ ಬಾಂದ್ರಾ ಉಪನಗರದಲ್ಲಿನ `ಮಾತೋಶ್ರೀ~ ನಿವಾಸದಲ್ಲಿ ಮೃತರಾದ ಬಾಳಾ ಸಾಹೇಬ್ ಠಾಕ್ರೆ ಅವರ ಪಾರ್ಥಿವ ಶರೀರವನ್ನು ಹೂವಿನ ಅಲಂಕಾರದೊಂದಿಗೆ ಭಾನುವಾರ ಬೆಳಿಗ್ಗೆ ಹೊರತಂದು, ಇಲ್ಲಿನ ಶಿವಾಜಿ ಪಾರ್ಕ್ನಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಅನುಕೂಲ ಮಾಡಿಕೊಡಲಾಯಿತು. ಅಂತ್ಯ ಸಂಸ್ಕಾರವನ್ನು ಸಂಜೆ 6 ಗಂಟೆಯ ವೇಳಗೆ ಇಲ್ಲಿನ ಶಿವಾಜಿ ಪಾರ್ಕ್ನಲ್ಲಿ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. <br /> <br /> ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಶಿವಸೇನಾ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಬಾಲಿವುಡ್ ನಟ, ನಟಿಯರು, ರಾಜಕಾರಣಿಗಳು ಸೇರಿದಂತೆ ಲಕ್ಷಾಂತರು ಜನರು ಶಿವಾಜಿ ಪಾರ್ಕ್ನೆಡೆಗೆ ಹೆಜ್ಜೆ ಹಾಕಿದ್ದಾರೆ.<br /> <br /> ~ಈಗಾಗಲೇ ಮುಂಬೈ ನಗರದಲ್ಲಿಯೇ ಸುಮಾರು 20 ಸಾವಿರಕ್ಕೂ ಅಧಿಕ ಪೋಲಿಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ. `ಮಾತೋಶ್ರೀ~ ಹಾಗೂ ಶಿವಾಜಿ ಪಾರ್ಕ್ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಅದರಲ್ಲಿಯೂ ಶಿವಾಜಿ ಪಾರ್ಕ್ನಲ್ಲಿಯೇ ಸಾವಿರಕ್ಕೂ ಅಧಿಕ ಪೋಲಿಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ~ ಎಂದು ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ. <br /> <br /> ಮಾತೋಶ್ರೀ ಹಾಗೂ ಶಿವಾಜಿ ಪಾರ್ಕ್ ಸುತ್ತಲು ಬಿಗಿ ಭದ್ರತೆಯನ್ನು ಮಾಡಲಾಗಿದ್ದು, ಈ ಭಾಗದ ಸುತ್ತಲೂ ಗಾಡಿಗಳನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ.<br /> <br /> ಠಾಕ್ರೆಯವರ ನಿಧನದಿಂದಾಗಿ ಈಗಾಗಲೇ ಮುಂಬೈ ನಗರ ಸೇರಿದಂತೆ ಥಾಣೆ ನಗರವು ಸ್ಥಬ್ಧಗೊಂಡಿದ್ದು, ಈ ನಗರಗಳಲ್ಲಿ ಪರೋಕ್ಷವಾಗಿ ಬಂದ್ನ ಮೌನ ಆವರಿಸಿದೆ!<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ): </strong>ಶನಿವಾರ ನಿಧನರಾದ ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಭಾನುವಾರ ಮುಂಬೈ ಸೇರಿದಂತೆ ದೇಶದ ವಿವಿಧೆಡೆಯಿಂದ ಲಕ್ಷಾಂತರ ಅಭಿಮಾನಿಗಳು ಭಾಗವಹಿಸಿ `ಮಹಾರಾಷ್ಟ್ರದ ಹುಲಿ~ಗೆ ಅಂತಿಮ ನಮನ ಸಲ್ಲಿಸಿದರು.<br /> <br /> ಠಾಕ್ರೆ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮುಂಬೈ ನಗರದ ಗಲ್ಲಿ ಗಲ್ಲಿಗಳಲ್ಲಿನ ಜನರು ಸ್ವ-ಇಚ್ಚೆಯಿಂದ ತಮ್ಮ ನಿತ್ಯದ ಕಾರ್ಯಗಳನ್ನು ಸ್ಥಗಿತಗೊಳಿಸಿ, ಠಾಕ್ರೆಯವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು. <br /> <br /> ಈ ಸಮಯದಲ್ಲಿ ಮುಂಬೈ ನಗರವು ಬಹುತೇಕ ಸ್ಥಬ್ಧಗೊಂಡಿತ್ತು. ಅಂಗಡಿ, ಮಾರುಕಟ್ಟೆ ಹಾಗೂ ಟ್ಯಾಕ್ಸಿ , ಆಟೋ ಸೇರಿದಂತೆ ಸ್ಥಳೀಯ ಸಾರಿಗೆ ವ್ಯವಸ್ಥೆಯು ಸಂಪೂರ್ಣ ಸ್ಥಗಿತಗೊಂಡಿತ್ತು. ನಗರದ ಪ್ರಮುಖ ರಸ್ತೆಗಳು ಜನದಟ್ಟಣೆ ಇಲ್ಲದೆ ಬಿಕೋ ಎನ್ನುತ್ತಿದ್ದವು.<br /> <br /> ಶನಿವಾರ ಬಾಂದ್ರಾ ಉಪನಗರದಲ್ಲಿನ `ಮಾತೋಶ್ರೀ~ ನಿವಾಸದಲ್ಲಿ ಮೃತರಾದ ಬಾಳಾ ಸಾಹೇಬ್ ಠಾಕ್ರೆ ಅವರ ಪಾರ್ಥಿವ ಶರೀರವನ್ನು ಹೂವಿನ ಅಲಂಕಾರದೊಂದಿಗೆ ಭಾನುವಾರ ಬೆಳಿಗ್ಗೆ ಹೊರತಂದು, ಇಲ್ಲಿನ ಶಿವಾಜಿ ಪಾರ್ಕ್ನಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಅನುಕೂಲ ಮಾಡಿಕೊಡಲಾಯಿತು. ಅಂತ್ಯ ಸಂಸ್ಕಾರವನ್ನು ಸಂಜೆ 6 ಗಂಟೆಯ ವೇಳಗೆ ಇಲ್ಲಿನ ಶಿವಾಜಿ ಪಾರ್ಕ್ನಲ್ಲಿ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. <br /> <br /> ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಶಿವಸೇನಾ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಬಾಲಿವುಡ್ ನಟ, ನಟಿಯರು, ರಾಜಕಾರಣಿಗಳು ಸೇರಿದಂತೆ ಲಕ್ಷಾಂತರು ಜನರು ಶಿವಾಜಿ ಪಾರ್ಕ್ನೆಡೆಗೆ ಹೆಜ್ಜೆ ಹಾಕಿದ್ದಾರೆ.<br /> <br /> ~ಈಗಾಗಲೇ ಮುಂಬೈ ನಗರದಲ್ಲಿಯೇ ಸುಮಾರು 20 ಸಾವಿರಕ್ಕೂ ಅಧಿಕ ಪೋಲಿಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ. `ಮಾತೋಶ್ರೀ~ ಹಾಗೂ ಶಿವಾಜಿ ಪಾರ್ಕ್ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಅದರಲ್ಲಿಯೂ ಶಿವಾಜಿ ಪಾರ್ಕ್ನಲ್ಲಿಯೇ ಸಾವಿರಕ್ಕೂ ಅಧಿಕ ಪೋಲಿಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ~ ಎಂದು ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ. <br /> <br /> ಮಾತೋಶ್ರೀ ಹಾಗೂ ಶಿವಾಜಿ ಪಾರ್ಕ್ ಸುತ್ತಲು ಬಿಗಿ ಭದ್ರತೆಯನ್ನು ಮಾಡಲಾಗಿದ್ದು, ಈ ಭಾಗದ ಸುತ್ತಲೂ ಗಾಡಿಗಳನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ.<br /> <br /> ಠಾಕ್ರೆಯವರ ನಿಧನದಿಂದಾಗಿ ಈಗಾಗಲೇ ಮುಂಬೈ ನಗರ ಸೇರಿದಂತೆ ಥಾಣೆ ನಗರವು ಸ್ಥಬ್ಧಗೊಂಡಿದ್ದು, ಈ ನಗರಗಳಲ್ಲಿ ಪರೋಕ್ಷವಾಗಿ ಬಂದ್ನ ಮೌನ ಆವರಿಸಿದೆ!<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>