<p><strong>ನವದೆಹಲಿ (ಪಿಟಿಐ): </strong>ಉಭಯ ದೇಶಗಳ ಬಂಡವಾಳ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸುವ ಸಲುವಾಗಿ, ಎರಡೂ ಕಡೆ ತೆರಿಗೆ ಪಾವತಿಸುವುದನ್ನು ತಪ್ಪಿಸುವ ಒಪ್ಪಂದ(ಡಬಲ್ ಟ್ಯಾಕ್ಸೇಷನ್ ಅವಾಯ್ಡೆನ್ಸ್ ಅಗ್ರಿಮೆಂಟ್-ಡಿಟಿಎಎ)ದಲ್ಲಿ ಬದಲಾವಣೆ ತರುವ ಪ್ರಕ್ರಿಯೆ ಚುರುಕುಗೊಳಿಸುವಂತೆ ಕೊಲಂಬಿಯಾವನ್ನು ಭಾರತ ಕೋರಿದೆ.<br /> <br /> ಸದ್ಯ ಕೊಲಂಬಿಯಾ ಪ್ರವಾಸದಲ್ಲಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ನಿಯೋಗ ಅಲ್ಲಿನ ಸರ್ಕಾರಕ್ಕೆ ಈ ಕೋರಿಕೆ ಸಲ್ಲಿಸಿದ್ದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ.<br /> <br /> ಕೊಲಂಬಿಯಾದ ವಾಣಿಜ್ಯ ಖಾತೆ ಉಪ ಸಚಿವ ಕಾರ್ಲೋಸ್ ಡೆ ಹರ್ಟ್ ಸಹ ತಮ್ಮ ದೇಶದ ಸಂಸತ್ತು `ಡಿಟಿಎಎ~ ಬದಲಾವಣೆ ಕುರಿತು ಈ ವರ್ಷಾಂತ್ಯದೊಳಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ತಿಳಿಸಿದರು ಎಂದೂ ಪ್ರಕಟಣೆ ತಿಳಿಸಿದೆ.<br /> <br /> ಕೊಲಂಬಿಯಾ, ವೆನೆಜುವೆಲಾ ಮತ್ತು ಕ್ಯೂಬಾ ಜತೆಗಿನ ವಾಣಿಜ್ಯ ಮತ್ತು ಬಂಡವಾಳ ಹೂಡಿಕೆ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ ಭಾರತೀಯ ವಾಣಿಜ್ಯೋದ್ಯಮಿಗಳ ನಿಯೋಗ ಮೂರೂ ದೇಶಗಳ ಪ್ರವಾಸ ಹಮ್ಮಿಕೊಂಡಿದೆ. <br /> <br /> ಭಾರತೀಯ ಉದ್ಯಮಗಳ ಒಕ್ಕೂಟ(ಸಿಐಐ) ಸಹಭಾಗಿತ್ವದ ಈ ವಾಣಿಜ್ಯ ಪ್ರವಾಸ ಎಂಟು ದಿನಗಳ ಅವಧಿಯದಾಗಿದೆ. ಎಲ್ ಅಂಡ್ ಟಿ, ಗೋದ್ರೆಜ್, ಮಹೀಂದ್ರಾ-ಮಹೀಂದ್ರಾ, ಒಎನ್ಜಿಸಿ ವಿದೇಶ ಮತ್ತು ಅಪೊಲೊ ಇಂಟರ್ನ್ಯಾಷನಲ್ ಕಂಪೆನಿಯ ಪ್ರತಿನಿಧಿಗಳು ಸೇರಿದಂತೆ 25 ಉದ್ಯಮಿಗಳು ತಂಡದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಉಭಯ ದೇಶಗಳ ಬಂಡವಾಳ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸುವ ಸಲುವಾಗಿ, ಎರಡೂ ಕಡೆ ತೆರಿಗೆ ಪಾವತಿಸುವುದನ್ನು ತಪ್ಪಿಸುವ ಒಪ್ಪಂದ(ಡಬಲ್ ಟ್ಯಾಕ್ಸೇಷನ್ ಅವಾಯ್ಡೆನ್ಸ್ ಅಗ್ರಿಮೆಂಟ್-ಡಿಟಿಎಎ)ದಲ್ಲಿ ಬದಲಾವಣೆ ತರುವ ಪ್ರಕ್ರಿಯೆ ಚುರುಕುಗೊಳಿಸುವಂತೆ ಕೊಲಂಬಿಯಾವನ್ನು ಭಾರತ ಕೋರಿದೆ.<br /> <br /> ಸದ್ಯ ಕೊಲಂಬಿಯಾ ಪ್ರವಾಸದಲ್ಲಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ನಿಯೋಗ ಅಲ್ಲಿನ ಸರ್ಕಾರಕ್ಕೆ ಈ ಕೋರಿಕೆ ಸಲ್ಲಿಸಿದ್ದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ.<br /> <br /> ಕೊಲಂಬಿಯಾದ ವಾಣಿಜ್ಯ ಖಾತೆ ಉಪ ಸಚಿವ ಕಾರ್ಲೋಸ್ ಡೆ ಹರ್ಟ್ ಸಹ ತಮ್ಮ ದೇಶದ ಸಂಸತ್ತು `ಡಿಟಿಎಎ~ ಬದಲಾವಣೆ ಕುರಿತು ಈ ವರ್ಷಾಂತ್ಯದೊಳಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ತಿಳಿಸಿದರು ಎಂದೂ ಪ್ರಕಟಣೆ ತಿಳಿಸಿದೆ.<br /> <br /> ಕೊಲಂಬಿಯಾ, ವೆನೆಜುವೆಲಾ ಮತ್ತು ಕ್ಯೂಬಾ ಜತೆಗಿನ ವಾಣಿಜ್ಯ ಮತ್ತು ಬಂಡವಾಳ ಹೂಡಿಕೆ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ ಭಾರತೀಯ ವಾಣಿಜ್ಯೋದ್ಯಮಿಗಳ ನಿಯೋಗ ಮೂರೂ ದೇಶಗಳ ಪ್ರವಾಸ ಹಮ್ಮಿಕೊಂಡಿದೆ. <br /> <br /> ಭಾರತೀಯ ಉದ್ಯಮಗಳ ಒಕ್ಕೂಟ(ಸಿಐಐ) ಸಹಭಾಗಿತ್ವದ ಈ ವಾಣಿಜ್ಯ ಪ್ರವಾಸ ಎಂಟು ದಿನಗಳ ಅವಧಿಯದಾಗಿದೆ. ಎಲ್ ಅಂಡ್ ಟಿ, ಗೋದ್ರೆಜ್, ಮಹೀಂದ್ರಾ-ಮಹೀಂದ್ರಾ, ಒಎನ್ಜಿಸಿ ವಿದೇಶ ಮತ್ತು ಅಪೊಲೊ ಇಂಟರ್ನ್ಯಾಷನಲ್ ಕಂಪೆನಿಯ ಪ್ರತಿನಿಧಿಗಳು ಸೇರಿದಂತೆ 25 ಉದ್ಯಮಿಗಳು ತಂಡದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>