<p><strong>ಯಾದಗಿರಿ: </strong>ಕೇವಲ ಎರಡು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಶಹಾಪುರ ತಾಲ್ಲೂಕಿನ ಚಿಕ್ಕ ಗ್ರಾಮ ಪಂಚಾಯಿತಿ ತಡಿಬಿಡಿ. ಹುಂಡೆಕಲ್ ಮತ್ತು ತಡಿಬಿಡಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಈ ಪಂಚಾಯಿತಿಯಲ್ಲಿ 13 ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ, ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ತರಕಾರಿ ಮಾರುಕಟ್ಟೆ ಇಲ್ಲದೇ ಇರುವುದರಿಂದ ವ್ಯಾಪಾರಕ್ಕಾಗಿ ಬರುವ ವರ್ತಕರು ರಸ್ತೆಯ ಮೇಲೆಯೇ ತರಕಾರಿ ಮಾರುವಂತಾಗಿದೆ.<br /> <br /> ಪ್ರತಿ ಬುಧವಾರ ಗ್ರಾಮದಲ್ಲಿ ಸಂತೆ ನಡೆಯುತ್ತದೆ. ರೈತರು ತಾವು ಬೆಳೆದ ತರಕಾರಿ, ದವಸ– ಧಾನ್ಯಗಳನ್ನು ಮಾರಾಟ ಮಾಡಲು ಇಲ್ಲಿಗೆ ಬರುತ್ತಾರೆ. ಆದರೆ ಮಾರಾಟಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. ಬಿಸಿಲು–ಮಳೆ ಎನ್ನದೇ ರಸ್ತೆಯ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುವಂತಾಗಿದೆ.<br /> <br /> ಸುತ್ತಲಿನ ಗ್ರಾಮಸ್ಥರು ಮತ್ತು ಗ್ರಾಮದವರು ವಾರಕ್ಕೆ ಬೇಕಾದಷ್ಟು ತರಕಾರಿ ಹಾಗೂ ದಿನಸಿಯನ್ನು ಖರೀದಿಸಲು ಈ ಸಂತೆಗೆ ಬರುತ್ತಾರೆ. ಎಲ್ಲೆಡೆ ಸಂತೆಯು ಬೆಳಿಗ್ಗೆಯಿಂದ ಆರಂಭವಾದರೆ, ಈ ಗ್ರಾಮದಲ್ಲಿ ಮಾತ್ರ ಮಧ್ಯಾಹ್ನದ ನಂತರ ಸಂತೆ ಶುರುವಾಗುತ್ತದೆ.<br /> ಸ್ಥಳದ ಅಭಾವ, ಖಾಸಗಿ ವ್ಯಕ್ತಿಗಳ ಸ್ಥಳಗಳಲ್ಲಿ ತಾವು ತಂದ ತರಕಾರಿ, ದಿನಸಿಗಳನ್ನು ಬುಟ್ಟಿಯಲ್ಲಿ ಚೀಲದಲ್ಲಿ ಇಟ್ಟುಕೊಂಡು ವ್ಯಾಪಾರವನ್ನು ಮಾಡುವ ದುಃಸ್ಥಿತಿ ಬಂದಿದೆ.<br /> <br /> ‘ಸ್ಥಳವನ್ನು ನೀಡಿದ ಖಾಸಗಿ ವ್ಯಕ್ತಿಗಳು, ಒಂದು ಬುಟ್ಟಿಯಿಂದ ಕನಿಷ್ಠವೆಂದರೂ ₨ 10 ವಸೂಲಿ ಮಾಡುತ್ತಾರೆ. ಹತ್ತು ರೂಪಾಯಿ ಹೋದರೂ ಚಿಂತೆ ಇಲ್ಲ, ನಮಗೆ ಕುಳಿತುಕೊಂಡು ವ್ಯಾಪಾರವನ್ನು ಮಾಡಲು ಅವಕಾಶ ಕೊಡುತ್ತಾರಲ್ಲ ಅಷ್ಟೆ ಸಾಕು’ ಎಂದು ತರಕಾರಿ ಮಾರುವ ಕ್ಯಾತನಾಳ ಗ್ರಾಮದ ಮಲ್ಲಮ್ಮ ಹೇಳುತ್ತಾರೆ.<br /> <br /> ಆದರೆ ತರಕಾರಿ ಮಾರಾಟಗಾರರಿಗೆ ಹಾಗೂ ದಿನಸಿ ಮಾರಾಟಗಾರರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕಾದ ಪಂಚಾಯಿತಿಯು ಇತ್ತ ಗಮನ ನೀಡುತ್ತಿಲ್ಲ. ಇದರಿಂದಾಗಿ ವಾರದ ಸಂತೆಗಾಗಿ ಈ ಗ್ರಾಮಕ್ಕೆ ಬರುವ ಜನರು ಹಾಗೂ ವ್ಯಾಪಾರಸ್ಥರು ತೊಂದರೆ ಎದುರಿಸುವಂತಾಗಿದೆ.<br /> <br /> ‘ನಾವು ಕಷ್ಟಪಟ್ಟು ಬೆಳೆದ ತರಕಾರಿಯನ್ನು ಈ ಸಂತೆಗೆ ತಂದು ಮಾರಾಟ ಮಾಡಬೇಕಾದರೆ ಸರಿಯಾದ ಸ್ಥಳವಿಲ್ಲ. ಇದರಿಂದಾಗಿ ವ್ಯಾಪಾರದಲ್ಲಿ ಸಾಕಷ್ಟು ನಷ್ಟವಾಗುತ್ತಿದೆ ಎಂದು ತರಕಾರಿ ವ್ಯಾಪಾರಿ ಶಂಕ್ರಪ್ಪ ಹೇಳುತ್ತಾರೆ.<br /> <br /> ಗ್ರಾಮ ಪಂಚಾಯಿತಿಯು ತರಕಾರಿ ಹಾಗೂ ದಿನಸಿ ಮಾರಾಟಗಾರರಿಗೆ ಸ್ಥಳವನ್ನು ಒದಗಿಸಿಕೊಡಬೇಕು. ಖಾಸಗಿ ವ್ಯಕ್ತಿಗಳಿಗೆ ಕೊಡುವ ಹಣವನ್ನು ವ್ಯಾಪಾರಸ್ಥರು ಪಂಚಾ-ಯಿತಿಯೇ ಆಕರಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂಬುದು ಗ್ರಾಮದ ಜನರ ಸಲಹೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ಕೇವಲ ಎರಡು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಶಹಾಪುರ ತಾಲ್ಲೂಕಿನ ಚಿಕ್ಕ ಗ್ರಾಮ ಪಂಚಾಯಿತಿ ತಡಿಬಿಡಿ. ಹುಂಡೆಕಲ್ ಮತ್ತು ತಡಿಬಿಡಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಈ ಪಂಚಾಯಿತಿಯಲ್ಲಿ 13 ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ, ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ತರಕಾರಿ ಮಾರುಕಟ್ಟೆ ಇಲ್ಲದೇ ಇರುವುದರಿಂದ ವ್ಯಾಪಾರಕ್ಕಾಗಿ ಬರುವ ವರ್ತಕರು ರಸ್ತೆಯ ಮೇಲೆಯೇ ತರಕಾರಿ ಮಾರುವಂತಾಗಿದೆ.<br /> <br /> ಪ್ರತಿ ಬುಧವಾರ ಗ್ರಾಮದಲ್ಲಿ ಸಂತೆ ನಡೆಯುತ್ತದೆ. ರೈತರು ತಾವು ಬೆಳೆದ ತರಕಾರಿ, ದವಸ– ಧಾನ್ಯಗಳನ್ನು ಮಾರಾಟ ಮಾಡಲು ಇಲ್ಲಿಗೆ ಬರುತ್ತಾರೆ. ಆದರೆ ಮಾರಾಟಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. ಬಿಸಿಲು–ಮಳೆ ಎನ್ನದೇ ರಸ್ತೆಯ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುವಂತಾಗಿದೆ.<br /> <br /> ಸುತ್ತಲಿನ ಗ್ರಾಮಸ್ಥರು ಮತ್ತು ಗ್ರಾಮದವರು ವಾರಕ್ಕೆ ಬೇಕಾದಷ್ಟು ತರಕಾರಿ ಹಾಗೂ ದಿನಸಿಯನ್ನು ಖರೀದಿಸಲು ಈ ಸಂತೆಗೆ ಬರುತ್ತಾರೆ. ಎಲ್ಲೆಡೆ ಸಂತೆಯು ಬೆಳಿಗ್ಗೆಯಿಂದ ಆರಂಭವಾದರೆ, ಈ ಗ್ರಾಮದಲ್ಲಿ ಮಾತ್ರ ಮಧ್ಯಾಹ್ನದ ನಂತರ ಸಂತೆ ಶುರುವಾಗುತ್ತದೆ.<br /> ಸ್ಥಳದ ಅಭಾವ, ಖಾಸಗಿ ವ್ಯಕ್ತಿಗಳ ಸ್ಥಳಗಳಲ್ಲಿ ತಾವು ತಂದ ತರಕಾರಿ, ದಿನಸಿಗಳನ್ನು ಬುಟ್ಟಿಯಲ್ಲಿ ಚೀಲದಲ್ಲಿ ಇಟ್ಟುಕೊಂಡು ವ್ಯಾಪಾರವನ್ನು ಮಾಡುವ ದುಃಸ್ಥಿತಿ ಬಂದಿದೆ.<br /> <br /> ‘ಸ್ಥಳವನ್ನು ನೀಡಿದ ಖಾಸಗಿ ವ್ಯಕ್ತಿಗಳು, ಒಂದು ಬುಟ್ಟಿಯಿಂದ ಕನಿಷ್ಠವೆಂದರೂ ₨ 10 ವಸೂಲಿ ಮಾಡುತ್ತಾರೆ. ಹತ್ತು ರೂಪಾಯಿ ಹೋದರೂ ಚಿಂತೆ ಇಲ್ಲ, ನಮಗೆ ಕುಳಿತುಕೊಂಡು ವ್ಯಾಪಾರವನ್ನು ಮಾಡಲು ಅವಕಾಶ ಕೊಡುತ್ತಾರಲ್ಲ ಅಷ್ಟೆ ಸಾಕು’ ಎಂದು ತರಕಾರಿ ಮಾರುವ ಕ್ಯಾತನಾಳ ಗ್ರಾಮದ ಮಲ್ಲಮ್ಮ ಹೇಳುತ್ತಾರೆ.<br /> <br /> ಆದರೆ ತರಕಾರಿ ಮಾರಾಟಗಾರರಿಗೆ ಹಾಗೂ ದಿನಸಿ ಮಾರಾಟಗಾರರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕಾದ ಪಂಚಾಯಿತಿಯು ಇತ್ತ ಗಮನ ನೀಡುತ್ತಿಲ್ಲ. ಇದರಿಂದಾಗಿ ವಾರದ ಸಂತೆಗಾಗಿ ಈ ಗ್ರಾಮಕ್ಕೆ ಬರುವ ಜನರು ಹಾಗೂ ವ್ಯಾಪಾರಸ್ಥರು ತೊಂದರೆ ಎದುರಿಸುವಂತಾಗಿದೆ.<br /> <br /> ‘ನಾವು ಕಷ್ಟಪಟ್ಟು ಬೆಳೆದ ತರಕಾರಿಯನ್ನು ಈ ಸಂತೆಗೆ ತಂದು ಮಾರಾಟ ಮಾಡಬೇಕಾದರೆ ಸರಿಯಾದ ಸ್ಥಳವಿಲ್ಲ. ಇದರಿಂದಾಗಿ ವ್ಯಾಪಾರದಲ್ಲಿ ಸಾಕಷ್ಟು ನಷ್ಟವಾಗುತ್ತಿದೆ ಎಂದು ತರಕಾರಿ ವ್ಯಾಪಾರಿ ಶಂಕ್ರಪ್ಪ ಹೇಳುತ್ತಾರೆ.<br /> <br /> ಗ್ರಾಮ ಪಂಚಾಯಿತಿಯು ತರಕಾರಿ ಹಾಗೂ ದಿನಸಿ ಮಾರಾಟಗಾರರಿಗೆ ಸ್ಥಳವನ್ನು ಒದಗಿಸಿಕೊಡಬೇಕು. ಖಾಸಗಿ ವ್ಯಕ್ತಿಗಳಿಗೆ ಕೊಡುವ ಹಣವನ್ನು ವ್ಯಾಪಾರಸ್ಥರು ಪಂಚಾ-ಯಿತಿಯೇ ಆಕರಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂಬುದು ಗ್ರಾಮದ ಜನರ ಸಲಹೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>