<p><strong>ಎಚ್.ಡಿ.ಕೋಟೆ: </strong>ಪಟ್ಟಣದ 1ನೇ ಮುಖ್ಯ ರಸ್ತೆ ಬದಿಯಲ್ಲಿದ್ದ ಭಾರಿ ಗಾತ್ರದ ಉಗಾಂಡ ದೇಶದ ಟೀಕ್ಮರವೊಂದು ಕೊಡಲಿ ಪೆಟ್ಟಿನಿಂದ ಬಚಾವ್ ಆಗಿದೆ.<br /> <br /> ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಚರಂಡಿ ನಿರ್ಮಾಣ ಮಾಡಲು ಕೊಂಚ ಅಡ್ಡವಾಗಿದ್ದ ಈ ಮರ ಉಳಿಸುವ ಬಗ್ಗೆ ಕಾಳಜಿಗಿಂತ ಕತ್ತರಿಸಲು ಒತ್ತಡ ತಂದವರೆ ಹೆಚ್ಚು. ಗುತ್ತಿಗೆದಾರರು ಈ ಮರದ ಬೇರು ಕತ್ತರಿಸದೆ ಅದರ ಕೆಳಭಾಗದಲ್ಲಿ ಅಗೆದು ಬುದ್ದಿವಂತಿಕೆಯ ಜಾಗರೂಕ ಕೆಲಸದಿಂದಾಗಿ ಈ ಮರ ಬಜಾವಾಗಿದೆ.<br /> <br /> ಇಂತಹ ಮರವನ್ನು ಬೆಳೆಸಲು ಬಹಳಷ್ಟು ವರ್ಷಗಳು ಬೇಕಾಗುತ್ತದೆ, ಪರಿಸರ ಉಳಿಸುವ ಕಾಳಜಿ ಇತ್ತೀಚೆಗೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ.<br /> <br /> ಈ ಮರವು ಉಗಾಂಡ ದೇಶದ ತಳಿಯಾಗಿದ್ದು , ಇಂತಹ ಮರ ನಮ್ಮ ರಾಜ್ಯದಲ್ಲಿ ಎಲ್ಲೂ ಕಾಣಸಿಗುವುದಿಲ್ಲ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ಕುಮಾರ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.<br /> <br /> ಮರವನ್ನು ರಸ್ತೆ ಅಗಲೀಕರಣ ನೆಪದಲ್ಲಿ ಕಡಿಮೆ ಬೆಲೆಗೆ ಹರಾಜು ಮಾಡಿಸಿ ತಮ್ಮದಾಗಿಸಿಕೊಳ್ಳುವಲ್ಲಿ ಕೆಲ ಮುಖಂಡರಿಗೆ ಹಿನ್ನಡೆಯಾಯಿತು. ಇಂತಹ ಮರವನ್ನು ಉಳಿಸುವಲ್ಲಿ ಚಾಣಾಕ್ಷತನ ಮೆರೆದ ಗುತ್ತಿಗೆದಾರ ಮತ್ತು ಅರಣ್ಯ ಇಲಾಖೆಯವರಿಗೆ ಪಟ್ಟಣದ ನಾಗರಿಕರು ಮೆಚ್ಚುಗೆ ಸೂಚಿಸಿದರು.<br /> <br /> ರಾಜ್ಯದ ಯಾವ ಮೂಲೆಯಲ್ಲೂ ಕಾಣಸಿಗದ ಇಂತಹ ಮರವನ್ನು ಹೇಗಾದರೂ ಮಾಡಿ ತಮ್ಮ ವಶಕ್ಕೆ ಪಡೆಯಬೇಕು ಎನ್ನುವ ಸ್ಥಳೀಯರ ಉದ್ದೇಶ ಕೈಗೂಡಿತು. <br /> <br /> ಯಾವುದೇ ಮರ ಕತ್ತರಿಸುವ ಮೊದಲು ಅದನ್ನು ಉಳಿಸಲು ಇರುವ ಮಾರ್ಗವನ್ನು ಹುಡುಕಿದರೆ ಅಭಿವೃದ್ಧಿ ಸಂದರ್ಭದಲ್ಲಿ ನೆಲಕ್ಕುರುಳುವ ಎಷ್ಟೋ ಮರಗಳು ಉಳಿದುಕೊಳ್ಳುತ್ತವೆ ಎನ್ನುವುದು ಪಟ್ಟಣದ ಪರಿಸರ ಪ್ರೇಮಿಗಳ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಚ್.ಡಿ.ಕೋಟೆ: </strong>ಪಟ್ಟಣದ 1ನೇ ಮುಖ್ಯ ರಸ್ತೆ ಬದಿಯಲ್ಲಿದ್ದ ಭಾರಿ ಗಾತ್ರದ ಉಗಾಂಡ ದೇಶದ ಟೀಕ್ಮರವೊಂದು ಕೊಡಲಿ ಪೆಟ್ಟಿನಿಂದ ಬಚಾವ್ ಆಗಿದೆ.<br /> <br /> ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಚರಂಡಿ ನಿರ್ಮಾಣ ಮಾಡಲು ಕೊಂಚ ಅಡ್ಡವಾಗಿದ್ದ ಈ ಮರ ಉಳಿಸುವ ಬಗ್ಗೆ ಕಾಳಜಿಗಿಂತ ಕತ್ತರಿಸಲು ಒತ್ತಡ ತಂದವರೆ ಹೆಚ್ಚು. ಗುತ್ತಿಗೆದಾರರು ಈ ಮರದ ಬೇರು ಕತ್ತರಿಸದೆ ಅದರ ಕೆಳಭಾಗದಲ್ಲಿ ಅಗೆದು ಬುದ್ದಿವಂತಿಕೆಯ ಜಾಗರೂಕ ಕೆಲಸದಿಂದಾಗಿ ಈ ಮರ ಬಜಾವಾಗಿದೆ.<br /> <br /> ಇಂತಹ ಮರವನ್ನು ಬೆಳೆಸಲು ಬಹಳಷ್ಟು ವರ್ಷಗಳು ಬೇಕಾಗುತ್ತದೆ, ಪರಿಸರ ಉಳಿಸುವ ಕಾಳಜಿ ಇತ್ತೀಚೆಗೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ.<br /> <br /> ಈ ಮರವು ಉಗಾಂಡ ದೇಶದ ತಳಿಯಾಗಿದ್ದು , ಇಂತಹ ಮರ ನಮ್ಮ ರಾಜ್ಯದಲ್ಲಿ ಎಲ್ಲೂ ಕಾಣಸಿಗುವುದಿಲ್ಲ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ಕುಮಾರ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.<br /> <br /> ಮರವನ್ನು ರಸ್ತೆ ಅಗಲೀಕರಣ ನೆಪದಲ್ಲಿ ಕಡಿಮೆ ಬೆಲೆಗೆ ಹರಾಜು ಮಾಡಿಸಿ ತಮ್ಮದಾಗಿಸಿಕೊಳ್ಳುವಲ್ಲಿ ಕೆಲ ಮುಖಂಡರಿಗೆ ಹಿನ್ನಡೆಯಾಯಿತು. ಇಂತಹ ಮರವನ್ನು ಉಳಿಸುವಲ್ಲಿ ಚಾಣಾಕ್ಷತನ ಮೆರೆದ ಗುತ್ತಿಗೆದಾರ ಮತ್ತು ಅರಣ್ಯ ಇಲಾಖೆಯವರಿಗೆ ಪಟ್ಟಣದ ನಾಗರಿಕರು ಮೆಚ್ಚುಗೆ ಸೂಚಿಸಿದರು.<br /> <br /> ರಾಜ್ಯದ ಯಾವ ಮೂಲೆಯಲ್ಲೂ ಕಾಣಸಿಗದ ಇಂತಹ ಮರವನ್ನು ಹೇಗಾದರೂ ಮಾಡಿ ತಮ್ಮ ವಶಕ್ಕೆ ಪಡೆಯಬೇಕು ಎನ್ನುವ ಸ್ಥಳೀಯರ ಉದ್ದೇಶ ಕೈಗೂಡಿತು. <br /> <br /> ಯಾವುದೇ ಮರ ಕತ್ತರಿಸುವ ಮೊದಲು ಅದನ್ನು ಉಳಿಸಲು ಇರುವ ಮಾರ್ಗವನ್ನು ಹುಡುಕಿದರೆ ಅಭಿವೃದ್ಧಿ ಸಂದರ್ಭದಲ್ಲಿ ನೆಲಕ್ಕುರುಳುವ ಎಷ್ಟೋ ಮರಗಳು ಉಳಿದುಕೊಳ್ಳುತ್ತವೆ ಎನ್ನುವುದು ಪಟ್ಟಣದ ಪರಿಸರ ಪ್ರೇಮಿಗಳ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>