<p><strong>ಶ್ರೀರಂಗಪಟ್ಟಣ:</strong> ತಾಲ್ಲೂಕಿನ ಶ್ರೀರಾಂಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮಿಳು, ತೆಲುಗು ಮಾತೃ ಭಾಷೆಯ ಮಕ್ಕಳು ಮಾತ್ರ ಇದ್ದು ಕನ್ನಡ ಭಾಷಿಕ ಮಕ್ಕಳಿಗಿಂತ ಉತ್ತಮ ಸಾಧನೆ ತೋರುತ್ತಿದ್ದಾರೆ.<br /> <br /> 26 ಮಕ್ಕಳ ಪೈಕಿ 15 ತಮಿಳು ಹಾಗೂ 10 ತೆಲುಗು ಭಾಷಿಕ ವಿದ್ಯಾರ್ಥಿಗಳಿದ್ದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಲಾಗುತ್ತಿದೆ. ಏಕೈಕ ಕನ್ನಡ ಭಾಷಿಕ ವಿದ್ಯಾರ್ಥಿ ಇದ್ದಾನೆ. 25 ಮನೆಗಳಿರುವ ಈ ಗ್ರಾಮದಲ್ಲಿ ತಮಿಳು ಮಾತನಾಡುವ ಕಲ್ಲು ಕುಟಿಕ ಜನರು (ಬೋವಿ ಜನಾಂಗ) ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದಾರೆ. <br /> <br /> ಈ ಊರಿನ 16 ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ. ಎರಡು ವರ್ಷಗಳ ಹಿಂದೆ ಜಲ್ಲಿ ಕ್ರಷರ್ನಲ್ಲಿ ಕೆಲಸಕ್ಕೆಂದು ಆಂಧ್ರಪ್ರದೇಶದಿಂದ ಬಂದ ತೆಲುಗು ಭಾಷಿಕರು ಸಮೀಪದಲ್ಲಿ ಬೀಡು ಬಿಟ್ಟಿದ್ದು, ಅಲ್ಲಿನ ಗುಡಿಸಲುಗಳಿಂದ 10 ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ಎಲ್ಲ ಮಕ್ಕಳು ಅಸ್ಖಲಿತವಾಗಿ ಕನ್ನಡ ಮಾತನಾಡುತ್ತಾರೆ.<br /> <br /> ತಮಿಳು, ತೆಲುಗು ಮಕ್ಕಳು ಸುಲಲಿತವಾಗಿ ಕನ್ನಡ ಕಲಿಯುತ್ತಿರುವುದು ಒಂದು ವಿಶೇಷವಾದರೆ, ಭೌತಿಕ ಪರಿಸರವೂ ಆಕರ್ಷಕವಾಗಿದೆ. ಹಣ್ಣು, ತರಕಾರಿ, ಸೊಪ್ಪಿನ ಮಡಿಗಳು ಶಾಲೆ ಕೈತೋಟದಲ್ಲಿವೆ. <br /> <br /> ಟೊಮೆಟೊ, ಈರುಳ್ಳಿ, ಬದನೆಕಾಯಿ, ಹೀರೆಕಾಯಿ, ಕುಂಬಳ, ಮೆಣಸಿನ ಕಾಯಿ ಗಿಡಗಳು ಫಲ ತುಂಬಿವೆ. ಕೀರೆ, ಸಬ್ಬಸಿಗೆ, ಕೊತ್ತಂಬರಿ ಸೊಪ್ಪು ಕೂಡ ಈ ಶಾಲೆಯ ತೋಟದಲ್ಲಿವೆ. ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾಗುವ ಎಲ್ಲ ತರಕಾರಿಗಳನ್ನು ಶಾಲೆಯ ಆವರಣದಲ್ಲೇ ಬೆಳೆಯಲಾಗುತ್ತಿದೆ.<br /> <br /> 2000ನೇ ಇಸವಿಯಲ್ಲಿ ಆರಂಭವಾದ ಶಾಲೆಗೆ 2004ರಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಗೋಡೆಗಳ ಮೇಲಿನ ರಾಷ್ಟ್ರ ನಾಯಕರು, ವಿಜ್ಞಾನಿಗಳ ಚಿತ್ರಗಳು ಗಮನ ಸೆಳೆಯುತ್ತವೆ. ಕಮೋಡ್ ಶೌಚಾಲಯ, ಕುಡಿಯುವ ನೀರು, ನಳನಳಿಸುವ ಹೂದೋಟ ಈ ಶಾಲೆಯ ಆಕರ್ಷಣೆ. ಕೊಠಡಿಯ ಒಳಗೆ `ಆಡಿ ಕಲಿ- ನೋಡಿ ಕಲಿ~ ಕಲ್ಪನೆಗೆ ಪೂರಕ ಸನ್ನಿವೇಶ ಸೃಷ್ಟಿಸಲಾಗಿದೆ. ಶಾಲೆಯ ಇಬ್ಬರು ಶಿಕ್ಷಕರ ಪೈಕಿ ಸಿ.ಎನ್.ಶ್ರೀನಿವಾಸ್ ಜಿಲ್ಲಾ ಪ್ರಶಸ್ತಿ ಪಡೆದಿದ್ದರೆ, ನಟರಾಜ್ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. <br /> <br /> `ತಮಿಳು, ತೆಲುಗು ಮಾತೃಭಾಷೆ ಮಕ್ಕಳು ಕನ್ನಡ ಮಾಧ್ಯಮದಲ್ಲಿ ನಿರೀಕ್ಷೆ ಮೀರಿ ಕಲಿಯುತ್ತಿದ್ದಾರೆ. ಈ ಮಕ್ಕಳಿಗೆ ಕಲಿಸಲು ನಮಗೂ ಖುಷಿಯಾಗುತ್ತದೆ~ ಎಂದು ಶಿಕ್ಷಕ ಶ್ರೀನಿವಾಸ್ ಹೇಳುತ್ತಾರೆ. `ಶೈಕ್ಷಣಿಕ ಪ್ರಗತಿ ಹಾಗೂ ಶಾಲಾ ಪರಿಸರ ನಿರ್ವಹಣೆಯಲ್ಲಿ ಇದು ಅತ್ಯುತ್ತಮ ಶಾಲೆ~ ಎಂದು ಸಿಆರ್ಪಿ ಲಿಂಗರಾಜಪ್ಪ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ:</strong> ತಾಲ್ಲೂಕಿನ ಶ್ರೀರಾಂಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮಿಳು, ತೆಲುಗು ಮಾತೃ ಭಾಷೆಯ ಮಕ್ಕಳು ಮಾತ್ರ ಇದ್ದು ಕನ್ನಡ ಭಾಷಿಕ ಮಕ್ಕಳಿಗಿಂತ ಉತ್ತಮ ಸಾಧನೆ ತೋರುತ್ತಿದ್ದಾರೆ.<br /> <br /> 26 ಮಕ್ಕಳ ಪೈಕಿ 15 ತಮಿಳು ಹಾಗೂ 10 ತೆಲುಗು ಭಾಷಿಕ ವಿದ್ಯಾರ್ಥಿಗಳಿದ್ದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಲಾಗುತ್ತಿದೆ. ಏಕೈಕ ಕನ್ನಡ ಭಾಷಿಕ ವಿದ್ಯಾರ್ಥಿ ಇದ್ದಾನೆ. 25 ಮನೆಗಳಿರುವ ಈ ಗ್ರಾಮದಲ್ಲಿ ತಮಿಳು ಮಾತನಾಡುವ ಕಲ್ಲು ಕುಟಿಕ ಜನರು (ಬೋವಿ ಜನಾಂಗ) ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದಾರೆ. <br /> <br /> ಈ ಊರಿನ 16 ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ. ಎರಡು ವರ್ಷಗಳ ಹಿಂದೆ ಜಲ್ಲಿ ಕ್ರಷರ್ನಲ್ಲಿ ಕೆಲಸಕ್ಕೆಂದು ಆಂಧ್ರಪ್ರದೇಶದಿಂದ ಬಂದ ತೆಲುಗು ಭಾಷಿಕರು ಸಮೀಪದಲ್ಲಿ ಬೀಡು ಬಿಟ್ಟಿದ್ದು, ಅಲ್ಲಿನ ಗುಡಿಸಲುಗಳಿಂದ 10 ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ಎಲ್ಲ ಮಕ್ಕಳು ಅಸ್ಖಲಿತವಾಗಿ ಕನ್ನಡ ಮಾತನಾಡುತ್ತಾರೆ.<br /> <br /> ತಮಿಳು, ತೆಲುಗು ಮಕ್ಕಳು ಸುಲಲಿತವಾಗಿ ಕನ್ನಡ ಕಲಿಯುತ್ತಿರುವುದು ಒಂದು ವಿಶೇಷವಾದರೆ, ಭೌತಿಕ ಪರಿಸರವೂ ಆಕರ್ಷಕವಾಗಿದೆ. ಹಣ್ಣು, ತರಕಾರಿ, ಸೊಪ್ಪಿನ ಮಡಿಗಳು ಶಾಲೆ ಕೈತೋಟದಲ್ಲಿವೆ. <br /> <br /> ಟೊಮೆಟೊ, ಈರುಳ್ಳಿ, ಬದನೆಕಾಯಿ, ಹೀರೆಕಾಯಿ, ಕುಂಬಳ, ಮೆಣಸಿನ ಕಾಯಿ ಗಿಡಗಳು ಫಲ ತುಂಬಿವೆ. ಕೀರೆ, ಸಬ್ಬಸಿಗೆ, ಕೊತ್ತಂಬರಿ ಸೊಪ್ಪು ಕೂಡ ಈ ಶಾಲೆಯ ತೋಟದಲ್ಲಿವೆ. ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾಗುವ ಎಲ್ಲ ತರಕಾರಿಗಳನ್ನು ಶಾಲೆಯ ಆವರಣದಲ್ಲೇ ಬೆಳೆಯಲಾಗುತ್ತಿದೆ.<br /> <br /> 2000ನೇ ಇಸವಿಯಲ್ಲಿ ಆರಂಭವಾದ ಶಾಲೆಗೆ 2004ರಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಗೋಡೆಗಳ ಮೇಲಿನ ರಾಷ್ಟ್ರ ನಾಯಕರು, ವಿಜ್ಞಾನಿಗಳ ಚಿತ್ರಗಳು ಗಮನ ಸೆಳೆಯುತ್ತವೆ. ಕಮೋಡ್ ಶೌಚಾಲಯ, ಕುಡಿಯುವ ನೀರು, ನಳನಳಿಸುವ ಹೂದೋಟ ಈ ಶಾಲೆಯ ಆಕರ್ಷಣೆ. ಕೊಠಡಿಯ ಒಳಗೆ `ಆಡಿ ಕಲಿ- ನೋಡಿ ಕಲಿ~ ಕಲ್ಪನೆಗೆ ಪೂರಕ ಸನ್ನಿವೇಶ ಸೃಷ್ಟಿಸಲಾಗಿದೆ. ಶಾಲೆಯ ಇಬ್ಬರು ಶಿಕ್ಷಕರ ಪೈಕಿ ಸಿ.ಎನ್.ಶ್ರೀನಿವಾಸ್ ಜಿಲ್ಲಾ ಪ್ರಶಸ್ತಿ ಪಡೆದಿದ್ದರೆ, ನಟರಾಜ್ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. <br /> <br /> `ತಮಿಳು, ತೆಲುಗು ಮಾತೃಭಾಷೆ ಮಕ್ಕಳು ಕನ್ನಡ ಮಾಧ್ಯಮದಲ್ಲಿ ನಿರೀಕ್ಷೆ ಮೀರಿ ಕಲಿಯುತ್ತಿದ್ದಾರೆ. ಈ ಮಕ್ಕಳಿಗೆ ಕಲಿಸಲು ನಮಗೂ ಖುಷಿಯಾಗುತ್ತದೆ~ ಎಂದು ಶಿಕ್ಷಕ ಶ್ರೀನಿವಾಸ್ ಹೇಳುತ್ತಾರೆ. `ಶೈಕ್ಷಣಿಕ ಪ್ರಗತಿ ಹಾಗೂ ಶಾಲಾ ಪರಿಸರ ನಿರ್ವಹಣೆಯಲ್ಲಿ ಇದು ಅತ್ಯುತ್ತಮ ಶಾಲೆ~ ಎಂದು ಸಿಆರ್ಪಿ ಲಿಂಗರಾಜಪ್ಪ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>