<p><strong>ರಾಮನಗರ:</strong> ‘ಕನಕಪುರ ತಹಶೀಲ್ದಾರ್ಗೆ ದುರಹಂಕಾರ ಜಾಸ್ತಿಯಾಗಿದೆ. ನಾನು ಎಷ್ಟು ಬಾರಿ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಬದಲಿಗೆ ಉದ್ಧಟತನದಿಂದ ಕರೆಯನ್ನೇ ಸ್ಥಗಿತಗೊಳಿಸುತ್ತಿದ್ದಾರೆ. ಇದು ಒಳ್ಳೆ ಲಕ್ಷಣವಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.<br /> <br /> ಗೃಹ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ತಹಶೀಲ್ದಾರ್ ವಿರುದ್ಧ ಅವರು ಹೀಗೆ ಹರಿಹಾಯ್ದರು. ಇದು ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಆಸ್ಪದ ನೀಡಿತು.<br /> <br /> ‘ನಿಮ್ಮ ಹಿನ್ನೆಲೆ ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಸಹಾಯ ಕೇಳಿ ಎಷ್ಟು ಬಾರಿ ನೀವು ನನ್ನ ಮನೆಗೆ ಬಂದಿದ್ದೀರ ಎಂಬುದೂ ಗೊತ್ತಿದೆ. ಈಗ ನಾನು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ಎಂದರೆ ಏನರ್ಥ ? ಇದು ನಿಮ್ಮ ದುರಹಂಕಾರ ತೋರಿಸುತ್ತದೆಯಲ್ಲವೇ’ ಎಂದು ಕುಮಾರಸ್ವಾಮಿ ಕಿಡಿಕಾರಿದರು.<br /> <br /> ಆಗ ಪ್ರತಿಕ್ರಿಯಿಸಿದ ಕನಕಪುರ ತಹಶೀಲ್ದಾರ್ ದಾಕ್ಷಾಯಿಣಿ ಅವರು, ‘ನನಗೆ ನೀವು ಒಮ್ಮೆ ಮಾತ್ರ ಕರೆ ಮಾಡಿದ್ದು’ ಎಂದು ಹೇಳಿದರು.<br /> ‘ಒಮ್ಮೆ ನಿಮ್ಮ ಆಪ್ತ ಸಹಾಯಕರು (ಪಿ.ಎ) ಕರೆ ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಎಚ್.ಡಿ. ಕುಮಾರಸ್ವಾಮಿ ಅವರು ನಿಮಗೆ ಕರೆ ಮಾಡುತ್ತಾರೆ, ನೀವು ಅದನ್ನು ಸ್ವೀಕರಿಸಬೇಡಿ ಎಂದು ಹೇಳಿದ್ದರು’ ಎಂದು ಅವರು ಸಭೆಗೆ ತಿಳಿಸಿದರು.<br /> <br /> ಇದರಿಂದ ಅವಕ್ಕಾದ ಕುಮಾರ ಸ್ವಾಮಿ ಅವರು ‘ಆ ಪಿ.ಎ ಯಾರು ? ಅವರೇಕೆ ಹಾಗೆ ಹೇಳುತ್ತಾರೆ ?’ ಎಂದು ಪ್ರಶ್ನಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ.ರಾಜಣ್ಣ ಅವರು ‘ಹಾಗೆ ಹೇಳಿದ ಪಿ.ಎ ದೂರವಾಣಿ ಸಂಖ್ಯೆ ಮತ್ತು ಹೆಸರನ್ನು ತಿಳಿಸಿ’ ಎಂದು ಒತ್ತಾಯಿಸಿದರು.<br /> <br /> ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ‘ತಹಶೀಲ್ದಾರ್ ಅವರು ಪಿ.ಎ ಮಾತು ಕೇಳುತ್ತಾರೋ, ಶಾಸಕರ ಮಾತನ್ನು ಕೇಳುತ್ತಾರೋ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಆಗ ಮಧ್ಯ ಪ್ರವೇಶಿಸಿದ ಸಚಿವ ಕೆ.ಜೆ.ಜಾರ್ಜ್ ಅವರು, ‘ಪಿ.ಎ ಕರೆ ಮಾಡಿ ನಿಮ್ಮ ಕರೆ ಸ್ವೀಕರಿಸಬೇಡ ಎಂದು ಹೇಳಿದ್ದರು ಎಂಬುದನ್ನು ಕುಮಾರಸ್ವಾಮಿ ಅವರ ಗಮನಕ್ಕೆ ತಾರದೆ, ಈಗ ಸಭೆಯಲ್ಲಿ ಎಲ್ಲರ ಎದುರು ಹೀಗೆ ಹೇಳಿದರೆ ಹೇಗೆ’ ಎಂದು ತರಾಟೆಗೆ ತೆಗೆದುಕೊಂಡರು.<br /> <br /> ಈ ವಿಷಯವನ್ನು ಬೇರೆ ಕಡೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳು ವಂತೆ ಸಚಿವರು ಕುಮಾರಸ್ವಾಮಿ ಅವರಿಗೂ ಕಿವಿಮಾತು ಹೇಳಿದರು.<br /> ಇದಕ್ಕೂ ಮುನ್ನ, ‘ಅಧಿಕಾರಿಗಳು ಜನಪ್ರತಿನಿಧಿಗಳ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಕರೆ ಬಂದಿರುವುದು ಗೊತ್ತಿದ್ದರೂ ನಿರ್ಲಕ್ಷ್ಯ ತೋರುತ್ತಿ ದ್ದಾರೆ’ ಎಂದು ಮಾಗಡಿ ಶಾಸಕ ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದರು.<br /> <br /> ಖಂಡನೆ: ಕುಮಾರಸ್ವಾಮಿ ಅವರ ಆರೋಪವನ್ನು ದಲಿತ ಮುಖಂಡ ರಾಂಪುರ ನಾಗೇಶರ್ ತೀವ್ರವಾಗಿ ಖಂಡಿಸಿದ್ದಾರೆ. ದಲಿತ ಅಧಿಕಾರಿಯ ವಿರುದ್ಧ ಅವರು ದುರುದ್ದೇಶದಿಂದ ಆರೋಪ ಮಾಡಿದ್ದಾರೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ‘ಕನಕಪುರ ತಹಶೀಲ್ದಾರ್ಗೆ ದುರಹಂಕಾರ ಜಾಸ್ತಿಯಾಗಿದೆ. ನಾನು ಎಷ್ಟು ಬಾರಿ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಬದಲಿಗೆ ಉದ್ಧಟತನದಿಂದ ಕರೆಯನ್ನೇ ಸ್ಥಗಿತಗೊಳಿಸುತ್ತಿದ್ದಾರೆ. ಇದು ಒಳ್ಳೆ ಲಕ್ಷಣವಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.<br /> <br /> ಗೃಹ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ತಹಶೀಲ್ದಾರ್ ವಿರುದ್ಧ ಅವರು ಹೀಗೆ ಹರಿಹಾಯ್ದರು. ಇದು ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಆಸ್ಪದ ನೀಡಿತು.<br /> <br /> ‘ನಿಮ್ಮ ಹಿನ್ನೆಲೆ ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಸಹಾಯ ಕೇಳಿ ಎಷ್ಟು ಬಾರಿ ನೀವು ನನ್ನ ಮನೆಗೆ ಬಂದಿದ್ದೀರ ಎಂಬುದೂ ಗೊತ್ತಿದೆ. ಈಗ ನಾನು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ಎಂದರೆ ಏನರ್ಥ ? ಇದು ನಿಮ್ಮ ದುರಹಂಕಾರ ತೋರಿಸುತ್ತದೆಯಲ್ಲವೇ’ ಎಂದು ಕುಮಾರಸ್ವಾಮಿ ಕಿಡಿಕಾರಿದರು.<br /> <br /> ಆಗ ಪ್ರತಿಕ್ರಿಯಿಸಿದ ಕನಕಪುರ ತಹಶೀಲ್ದಾರ್ ದಾಕ್ಷಾಯಿಣಿ ಅವರು, ‘ನನಗೆ ನೀವು ಒಮ್ಮೆ ಮಾತ್ರ ಕರೆ ಮಾಡಿದ್ದು’ ಎಂದು ಹೇಳಿದರು.<br /> ‘ಒಮ್ಮೆ ನಿಮ್ಮ ಆಪ್ತ ಸಹಾಯಕರು (ಪಿ.ಎ) ಕರೆ ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಎಚ್.ಡಿ. ಕುಮಾರಸ್ವಾಮಿ ಅವರು ನಿಮಗೆ ಕರೆ ಮಾಡುತ್ತಾರೆ, ನೀವು ಅದನ್ನು ಸ್ವೀಕರಿಸಬೇಡಿ ಎಂದು ಹೇಳಿದ್ದರು’ ಎಂದು ಅವರು ಸಭೆಗೆ ತಿಳಿಸಿದರು.<br /> <br /> ಇದರಿಂದ ಅವಕ್ಕಾದ ಕುಮಾರ ಸ್ವಾಮಿ ಅವರು ‘ಆ ಪಿ.ಎ ಯಾರು ? ಅವರೇಕೆ ಹಾಗೆ ಹೇಳುತ್ತಾರೆ ?’ ಎಂದು ಪ್ರಶ್ನಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ.ರಾಜಣ್ಣ ಅವರು ‘ಹಾಗೆ ಹೇಳಿದ ಪಿ.ಎ ದೂರವಾಣಿ ಸಂಖ್ಯೆ ಮತ್ತು ಹೆಸರನ್ನು ತಿಳಿಸಿ’ ಎಂದು ಒತ್ತಾಯಿಸಿದರು.<br /> <br /> ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ‘ತಹಶೀಲ್ದಾರ್ ಅವರು ಪಿ.ಎ ಮಾತು ಕೇಳುತ್ತಾರೋ, ಶಾಸಕರ ಮಾತನ್ನು ಕೇಳುತ್ತಾರೋ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಆಗ ಮಧ್ಯ ಪ್ರವೇಶಿಸಿದ ಸಚಿವ ಕೆ.ಜೆ.ಜಾರ್ಜ್ ಅವರು, ‘ಪಿ.ಎ ಕರೆ ಮಾಡಿ ನಿಮ್ಮ ಕರೆ ಸ್ವೀಕರಿಸಬೇಡ ಎಂದು ಹೇಳಿದ್ದರು ಎಂಬುದನ್ನು ಕುಮಾರಸ್ವಾಮಿ ಅವರ ಗಮನಕ್ಕೆ ತಾರದೆ, ಈಗ ಸಭೆಯಲ್ಲಿ ಎಲ್ಲರ ಎದುರು ಹೀಗೆ ಹೇಳಿದರೆ ಹೇಗೆ’ ಎಂದು ತರಾಟೆಗೆ ತೆಗೆದುಕೊಂಡರು.<br /> <br /> ಈ ವಿಷಯವನ್ನು ಬೇರೆ ಕಡೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳು ವಂತೆ ಸಚಿವರು ಕುಮಾರಸ್ವಾಮಿ ಅವರಿಗೂ ಕಿವಿಮಾತು ಹೇಳಿದರು.<br /> ಇದಕ್ಕೂ ಮುನ್ನ, ‘ಅಧಿಕಾರಿಗಳು ಜನಪ್ರತಿನಿಧಿಗಳ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಕರೆ ಬಂದಿರುವುದು ಗೊತ್ತಿದ್ದರೂ ನಿರ್ಲಕ್ಷ್ಯ ತೋರುತ್ತಿ ದ್ದಾರೆ’ ಎಂದು ಮಾಗಡಿ ಶಾಸಕ ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದರು.<br /> <br /> ಖಂಡನೆ: ಕುಮಾರಸ್ವಾಮಿ ಅವರ ಆರೋಪವನ್ನು ದಲಿತ ಮುಖಂಡ ರಾಂಪುರ ನಾಗೇಶರ್ ತೀವ್ರವಾಗಿ ಖಂಡಿಸಿದ್ದಾರೆ. ದಲಿತ ಅಧಿಕಾರಿಯ ವಿರುದ್ಧ ಅವರು ದುರುದ್ದೇಶದಿಂದ ಆರೋಪ ಮಾಡಿದ್ದಾರೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>