<p><strong>ತಾಂಬಾ:</strong> ಗ್ರಾಮದ ಪ್ರತಿಯೊಂದು ಮನೆಯಲ್ಲಿ ಮಹಿಳೆಯರು ಒಂದು ತಿಂಗಳವರೆಗೆ ಒಂದೇ ಹೊತ್ತು ಊಟ ಮಾಡುತ್ತಾರೆ. ಈ ವೈಶಿಷ್ಟ್ಯ ಇಲ್ಲಿನ ಶ್ರೀ ಗವಿಸಿದ್ದೇಶ್ವರನಿಗಾಗಿ ಕೈಗೊಳ್ಳುವ ಉಪವಾಸ ವ್ರತ.<br /> <br /> ಗ್ರಾಮದ ಗವಿಸಿದ್ದೇಶ್ವರ ಹೆಸರಿನಲ್ಲಿ ಹಿಂದು ಮತ್ತು ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಸರ್ವರ ಕಲ್ಯಾಣಕ್ಕಾಗಿ ಮಹಾನವಮಿ ಅಮವಾಸ್ಯೆಯಿಂದ ದೀಪಾವಳಿಯ ನರಕ ಚತುರ್ದಶಿಯವರೆಗೆ ಒಂದು ತಿಂಗಳ ಪರ್ಯಂತ ಎಲ್ಲರೂ ಉಪವಾಸ ಮಾಡುತ್ತಾರೆ. <br /> <br /> ದೀಪಾವಳಿಯ ಪ್ರತಿಪದೆ ಶ್ರೀ ಗವಿಸಿದ್ದೇಶ್ವರ ಮುಕ್ತಿ ಮಂದಿರದಲ್ಲಿ ಗ್ರಾಮದ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಭಕ್ತಾದಿಗಳು ಕೂಡಿ ಕೊಂಡು ವಿಶೇಷ ಪೂಜೆ ಉಪವಾಸ ವ್ರತವನ್ನು ಮುಕ್ತಾಯಗೊಳಿಸುತ್ತಾರೆ. <br /> <br /> ಈ ಕಾರ್ಯಕ್ರಮದ ಅಂಗವಾಗಿ ಮುಕ್ತಿ ಮಂದಿರದಲ್ಲಿ ಭಕ್ತಾದಿಗಳಿಗೆ ಸಜ್ಜೆಯ ಕಡಬು, ಬಾಳೆಹಣ್ಣು ಅಂಬಲಿ, ಸಜ್ಜುಕ, ಜಿಲೇಬಿ, ಬುಂದೆ ಮತ್ತು ಫೇಡೆ ಮಹಾಪ್ರಸಾದದ ವ್ಯವಸ್ಥೆ ಮಾಡಿರುತ್ತಾರೆ. ಉಪವಾಸ ವ್ರತ ಈ ವರ್ಷವೂ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. <br /> <br /> ಸಮಾರಂಭಕ್ಕೆ ಆಗಮಿಸಿದ ಸಿಂದಗಿ ಶಾಸಕ ರಮೇಶ ಭೂಸನೂರ, ದೇವಸ್ಥಾನದಲ್ಲಿ ಮಂಗಲ ಕಾರ್ಯಾಲಯಕ್ಕೆ ಶಾಸಕರ ನಿಧಿಯಿಂದ ರೂ 5 ಲಕ್ಷ ಕೊಡುವುದಾಗಿ ವಾಗ್ದಾನ ಮಾಡಿದರು. <br /> <br /> ತಾ.ಪಂ.ಸದಸ್ಯೆ ಗುರಲಿಂಗವ್ವ ಗಂಗನಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಮತಾಜ ಇಂಡಿ, ಎಸ್.ಎಸ್.ಕಲ್ಲೂರ, ಎಸ್. ಎಸ್. ಕನ್ನಾಳ, ಜೆ.ಆರ್.ಪೂಜಾರಿ, ಎಸ್. ಎನ್. ಮೂಲಿಮನಿ, ಎಸ್. ಎಸ್. ಹಿರೆಕುರಬರ, ಪರಸಪ್ಪ ಕನ್ನಾಳ, ಪೂಜಪ್ಪ ಸಿಂದಗಿ, ಚಂದ್ರಾಮ ಮೂಲಿಮನಿ, ಜಕ್ಕಪ್ಪ ಹತ್ತಳ್ಳಿ, ಮಾಳಪ ಪೂಜಾರಿ ಉಪಸ್ಥಿತರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾಂಬಾ:</strong> ಗ್ರಾಮದ ಪ್ರತಿಯೊಂದು ಮನೆಯಲ್ಲಿ ಮಹಿಳೆಯರು ಒಂದು ತಿಂಗಳವರೆಗೆ ಒಂದೇ ಹೊತ್ತು ಊಟ ಮಾಡುತ್ತಾರೆ. ಈ ವೈಶಿಷ್ಟ್ಯ ಇಲ್ಲಿನ ಶ್ರೀ ಗವಿಸಿದ್ದೇಶ್ವರನಿಗಾಗಿ ಕೈಗೊಳ್ಳುವ ಉಪವಾಸ ವ್ರತ.<br /> <br /> ಗ್ರಾಮದ ಗವಿಸಿದ್ದೇಶ್ವರ ಹೆಸರಿನಲ್ಲಿ ಹಿಂದು ಮತ್ತು ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಸರ್ವರ ಕಲ್ಯಾಣಕ್ಕಾಗಿ ಮಹಾನವಮಿ ಅಮವಾಸ್ಯೆಯಿಂದ ದೀಪಾವಳಿಯ ನರಕ ಚತುರ್ದಶಿಯವರೆಗೆ ಒಂದು ತಿಂಗಳ ಪರ್ಯಂತ ಎಲ್ಲರೂ ಉಪವಾಸ ಮಾಡುತ್ತಾರೆ. <br /> <br /> ದೀಪಾವಳಿಯ ಪ್ರತಿಪದೆ ಶ್ರೀ ಗವಿಸಿದ್ದೇಶ್ವರ ಮುಕ್ತಿ ಮಂದಿರದಲ್ಲಿ ಗ್ರಾಮದ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಭಕ್ತಾದಿಗಳು ಕೂಡಿ ಕೊಂಡು ವಿಶೇಷ ಪೂಜೆ ಉಪವಾಸ ವ್ರತವನ್ನು ಮುಕ್ತಾಯಗೊಳಿಸುತ್ತಾರೆ. <br /> <br /> ಈ ಕಾರ್ಯಕ್ರಮದ ಅಂಗವಾಗಿ ಮುಕ್ತಿ ಮಂದಿರದಲ್ಲಿ ಭಕ್ತಾದಿಗಳಿಗೆ ಸಜ್ಜೆಯ ಕಡಬು, ಬಾಳೆಹಣ್ಣು ಅಂಬಲಿ, ಸಜ್ಜುಕ, ಜಿಲೇಬಿ, ಬುಂದೆ ಮತ್ತು ಫೇಡೆ ಮಹಾಪ್ರಸಾದದ ವ್ಯವಸ್ಥೆ ಮಾಡಿರುತ್ತಾರೆ. ಉಪವಾಸ ವ್ರತ ಈ ವರ್ಷವೂ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. <br /> <br /> ಸಮಾರಂಭಕ್ಕೆ ಆಗಮಿಸಿದ ಸಿಂದಗಿ ಶಾಸಕ ರಮೇಶ ಭೂಸನೂರ, ದೇವಸ್ಥಾನದಲ್ಲಿ ಮಂಗಲ ಕಾರ್ಯಾಲಯಕ್ಕೆ ಶಾಸಕರ ನಿಧಿಯಿಂದ ರೂ 5 ಲಕ್ಷ ಕೊಡುವುದಾಗಿ ವಾಗ್ದಾನ ಮಾಡಿದರು. <br /> <br /> ತಾ.ಪಂ.ಸದಸ್ಯೆ ಗುರಲಿಂಗವ್ವ ಗಂಗನಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಮತಾಜ ಇಂಡಿ, ಎಸ್.ಎಸ್.ಕಲ್ಲೂರ, ಎಸ್. ಎಸ್. ಕನ್ನಾಳ, ಜೆ.ಆರ್.ಪೂಜಾರಿ, ಎಸ್. ಎನ್. ಮೂಲಿಮನಿ, ಎಸ್. ಎಸ್. ಹಿರೆಕುರಬರ, ಪರಸಪ್ಪ ಕನ್ನಾಳ, ಪೂಜಪ್ಪ ಸಿಂದಗಿ, ಚಂದ್ರಾಮ ಮೂಲಿಮನಿ, ಜಕ್ಕಪ್ಪ ಹತ್ತಳ್ಳಿ, ಮಾಳಪ ಪೂಜಾರಿ ಉಪಸ್ಥಿತರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>