<p><span style="font-size: 26px;"><strong>ಹುಬ್ಬಳ್ಳಿ: </strong>ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜೂನ್ 16ರಂದು ಆಯೋಜಿಸಲಾಗಿದೆ.</span><br /> ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಈ ಸಮ್ಮೇಳನಕ್ಕಾಗಿ ಕೇಂದ್ರ ಕಸಾಪ ಘಟಕ ್ಙ 1ಲಕ್ಷ ಅನುದಾನ ನೀಡಿದೆ ಎಂದರು.<br /> <br /> ಯಾವುದೇ ಆಡಂಬರ ಇಲ್ಲದೇ ವೈಚಾರಿಕತೆ, ಸಂವಾದ, ಚರ್ಚೆಗಳಿಗೆ ಹೆಚ್ಚಿನ ಅವಕಾಶ ನೀಡಿ ಈ ಸಮ್ಮೇಳನವನ್ನು ರೂಪಿಸಲಾಗಿದೆ. ರಾಜಕಾರಣಿಗಳನ್ನು ಸಾಹಿತ್ಯ ವೇದಿಕೆಗೆ ಕರೆಯುವುದಾಗಲಿ, ಸಾಂಪ್ರದಾಯಿಕವಾಗಿ ನಡೆಯುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನಾಗಲಿ ಈ ಬಾರಿ ನಡೆಸುತ್ತಿಲ್ಲ ಎಂದು ಅವರು ತಿಳಿಸಿದರು.<br /> <br /> ಸಮ್ಮೇಳನಾಧ್ಯಕ್ಷರಾಗಿ ಎಂ.ಡಿ.ಗೋಗೇರಿ ಅವರನ್ನು ಆಯ್ಕೆ ಮಾಡಲಾಗಿದ್ದು, ಅಂದು ಬೆಳಿಗ್ಗೆ 9.30ಕ್ಕೆ ಸಾಹಿತಿ ವೀಣಾ ಬನ್ನಂಜೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಲೇಖಕ ಡಾ.ಪ್ರಹ್ಲಾದ ಅಗಸನಕಟ್ಟೆ ಆಶಯ ನುಡಿ ಆಡಲಿದ್ದು ನಿಕಟಪೂರ್ವ ಅಧ್ಯಕ್ಷ ಪ್ರೊ.ಶ್ರೀನಿವಾಸ ತೋಫಖಾನೆ ಅವರನ್ನು ಎಸ್.ಕೆ.ದೇಸಾಯಿ ಸ್ಮರಿಸಲಿದ್ದಾರೆ ಸಾಹಿತಿ ಕುಂ.ವೀರಭದ್ರಪ್ಪ ಸಮಾರೋಪದ ಮಾತುಗಳನ್ನಾಡಲಿದ್ದಾರೆ.<br /> <br /> ದಿನವಿಡೀ ನಡೆಯುವ ಈ ಸಮ್ಮೇಳನದಲ್ಲಿ ಒಟ್ಟಾರೆ ಮೂರು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಬಳಿಕ ಸಾಧಕರಿಗೆ ಗೌರವ, ಪುಸ್ತಕ ಅನಾವರಣ, ಸ್ಮರಣ ಸಂಚಿಕೆ ಬಿಡುಗಡೆ, ಸಂಜೆ ಪ್ರಹಸನ, ನೃತ್ಯ, ಹಾಸ್ಯ, ಕೋಲಾಟ ಮತ್ತು ರಸಮಂಜರಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.<br /> <br /> <strong>ಗೋಷ್ಠಿಗಳ ವಿವರ</strong><br /> ಮೊದಲ ಗೋಷ್ಠಿ- ಹುಬ್ಬಳ್ಳಿ ಮಜಲುಗಳು: ಬೆಳಿಗ್ಗೆ 11.15ರಿಂದ ಮಧ್ಯಾಹ್ನ 12.45ರವರೆಗೆ. `ಹುಬ್ಬಳ್ಳಿ ಸಾಹಿತ್ಯ ವಲಯ'-ನಿರಂಜನ ವಾಲಿಶೆಟ್ಟರ, `ಆ ಕಾಲದ ಹುಬ್ಬಳ್ಳಿ'-ನಾರಾಯಣ ಘಳಗಿ, `ಹುಬ್ಬಳ್ಳಿ ರಾಜಕೀಯ ದಿಕ್ಕು ದೆಸೆ'-ಡಾ.ಪಾಂಡುರಂಗ ಪಾಟೀಲ, `ವಾಣಿಜ್ಯ ಕೇಂದ್ರವಾಗಿ ಹುಬ್ಬಳ್ಳಿ'-ಮದನ ದೇಸಾಯಿ, `ಹುಬ್ಬಳ್ಳಿಯ ನಾಟಕ ಕ್ಷೇತ್ರ'-ಡಾ.ಗೋವಿಂದ ಮಣ್ಣೂರು, `ಹುಬ್ಬಳ್ಳಿಯಲ್ಲಿ ಕ್ರೀಡೆ: ಹಿಂದೆ, ಇಂದು, ಮುಂದು, ಸುತ್ತ'- `ಪ್ರಜಾವಾಣಿ' ನಿವೃತ್ತ ಸಹ ಸಂಪಾದಕ ಗೋಪಾಲಕೃಷ್ಣ ಹೆಗಡೆ. ನಿರ್ವಹಣೆ-ಸುಭಾಶ ನರೇಂದ್ರ.<br /> <br /> ಎರಡನೇ ಗೋಷ್ಠಿ- ಕವಿ ಕಾವ್ಯ ಲಹರಿ: ಮಧ್ಯಾಹ್ನ 2 ರಿಂದ 3ರವರೆಗೆ.<br /> <br /> ಜಗದೀಶ ಮಂಗಳೂರಮಠ, ಕೆ.ಜಿ.ಭಟ್, ಹೇಮಾ ಪಟ್ಟಣಶೆಟ್ಟಿ, ರಾಮು ಮೂಲಗಿ, ಸಿ.ಎಂ.ಮುನಿಸ್ವಾಮಿ, ಡಾ.ಗೋವಿಂದ ಹೆಗಡೆ, ಸುಶಿಲೇಂದ್ರ ಕುಂದರಗಿ, ಎ.ಸಿ.ವಾಲಿ, ರಮಜಾನ್ ಕಿಲ್ಲೇದಾರ, ಶ್ವೇತಾ ಕರ್ಕಿ, ಎಸ್.ಆರ್. ಆಶಿ, ಎಸ್.ವಿ.ಪಟ್ಟಣಶೆಟ್ಟಿ, ರತ್ನಾ ಅಂಗಡಿ, ವಿರೂಪಾಕ್ಷ ಕಟ್ಟಿಮನಿ, ನಿರ್ವಹಣೆ: ಕವಿಮಾತು-ಕಿವಿಮಾತು-ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ.<br /> <br /> ಮೂರನೇ ಗೋಷ್ಠಿ: ನನ್ನ ಬರವಣಿಗೆ: ಮಧ್ಯಾಹ್ನ 3.15ರಿಂದ 4.15ರವರೆಗೆ.<br /> <br /> ನನ್ನ ಕತೆಗಳು-ಸುನಂದಾ ಕಡಮೆ, ನನ್ನ ಕಾದಂಬರಿ-ಡಾ.ರಮೇಶ ಬಾಬು, ನನ್ನ ಪ್ರಬಂಧಗಳು-ಆರೂರು ಲಕ್ಷ್ಮಣ ಶೇಟ್, ನನ್ನ ಕವಿತೆಗಳು-ಮಹಾಂತಪ್ಪ ನಂದೂರ.<br /> <br /> ವಿವಿಧ ಸಾಧಕರಿಗೆ ಸನ್ಮಾನ: ಶಿವಲಿಂಗಮ್ಮ ಕಟ್ಟಿ (ಸಾಹಿತ್ಯ), ಈರಣ್ಣ ಕಾಡಪ್ಪನವರ (ಕ್ರೀಡೆ), ಎಂ.ಎಂ.ಕನಕೇರಿ (ಪತ್ರಿಕೆ), ವಸಂತ ಕುಲಕರ್ಣಿ (ರಂಗಭೂಮಿ), ಸಾಧು ಕಠಾರೆ (ನಾಟಕ), ಎನ್.ಬಿ.ರಾಮಾಪುರ (ಸಾಹಿತ್ಯ ಸಂಘಟನೆ).<br /> <br /> ಪುಸ್ತಕ ಅನಾವರಣ: ಸ್ಮರಣ ಸಂಚಿಕೆ-ಕುಂ ವೀರಭದ್ರಪ್ಪ, ಎಂ.ಡಿ.ಗೋಗೇರಿ ಸಮಗ್ರ ಸಾಹಿತ್ಯ-ವೀಣಾ ಬನ್ನಂಜೆ, ಲೋಕಾಂತ ವೀಣಾ ಬನ್ನಂಜೆ-ಡಾ.ಕೊಟ್ಟೂರ ಸ್ವಾಮೀಜಿ, ಕಲ್ಮಠ, ಇತರ ಪುಸ್ತಕಗಳು-ರುದ್ರಾಕ್ಷಿಮಠದ ಬಸವಲಿಂಗಸ್ವಾಮೀಜಿ ಅನಾವರಣ ಮಾಡುವರು.<br /> <br /> ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೆ.ಎಸ್. ಕೌಜಲಗಿ, ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಎ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಹುಬ್ಬಳ್ಳಿ: </strong>ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜೂನ್ 16ರಂದು ಆಯೋಜಿಸಲಾಗಿದೆ.</span><br /> ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಈ ಸಮ್ಮೇಳನಕ್ಕಾಗಿ ಕೇಂದ್ರ ಕಸಾಪ ಘಟಕ ್ಙ 1ಲಕ್ಷ ಅನುದಾನ ನೀಡಿದೆ ಎಂದರು.<br /> <br /> ಯಾವುದೇ ಆಡಂಬರ ಇಲ್ಲದೇ ವೈಚಾರಿಕತೆ, ಸಂವಾದ, ಚರ್ಚೆಗಳಿಗೆ ಹೆಚ್ಚಿನ ಅವಕಾಶ ನೀಡಿ ಈ ಸಮ್ಮೇಳನವನ್ನು ರೂಪಿಸಲಾಗಿದೆ. ರಾಜಕಾರಣಿಗಳನ್ನು ಸಾಹಿತ್ಯ ವೇದಿಕೆಗೆ ಕರೆಯುವುದಾಗಲಿ, ಸಾಂಪ್ರದಾಯಿಕವಾಗಿ ನಡೆಯುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನಾಗಲಿ ಈ ಬಾರಿ ನಡೆಸುತ್ತಿಲ್ಲ ಎಂದು ಅವರು ತಿಳಿಸಿದರು.<br /> <br /> ಸಮ್ಮೇಳನಾಧ್ಯಕ್ಷರಾಗಿ ಎಂ.ಡಿ.ಗೋಗೇರಿ ಅವರನ್ನು ಆಯ್ಕೆ ಮಾಡಲಾಗಿದ್ದು, ಅಂದು ಬೆಳಿಗ್ಗೆ 9.30ಕ್ಕೆ ಸಾಹಿತಿ ವೀಣಾ ಬನ್ನಂಜೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಲೇಖಕ ಡಾ.ಪ್ರಹ್ಲಾದ ಅಗಸನಕಟ್ಟೆ ಆಶಯ ನುಡಿ ಆಡಲಿದ್ದು ನಿಕಟಪೂರ್ವ ಅಧ್ಯಕ್ಷ ಪ್ರೊ.ಶ್ರೀನಿವಾಸ ತೋಫಖಾನೆ ಅವರನ್ನು ಎಸ್.ಕೆ.ದೇಸಾಯಿ ಸ್ಮರಿಸಲಿದ್ದಾರೆ ಸಾಹಿತಿ ಕುಂ.ವೀರಭದ್ರಪ್ಪ ಸಮಾರೋಪದ ಮಾತುಗಳನ್ನಾಡಲಿದ್ದಾರೆ.<br /> <br /> ದಿನವಿಡೀ ನಡೆಯುವ ಈ ಸಮ್ಮೇಳನದಲ್ಲಿ ಒಟ್ಟಾರೆ ಮೂರು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಬಳಿಕ ಸಾಧಕರಿಗೆ ಗೌರವ, ಪುಸ್ತಕ ಅನಾವರಣ, ಸ್ಮರಣ ಸಂಚಿಕೆ ಬಿಡುಗಡೆ, ಸಂಜೆ ಪ್ರಹಸನ, ನೃತ್ಯ, ಹಾಸ್ಯ, ಕೋಲಾಟ ಮತ್ತು ರಸಮಂಜರಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.<br /> <br /> <strong>ಗೋಷ್ಠಿಗಳ ವಿವರ</strong><br /> ಮೊದಲ ಗೋಷ್ಠಿ- ಹುಬ್ಬಳ್ಳಿ ಮಜಲುಗಳು: ಬೆಳಿಗ್ಗೆ 11.15ರಿಂದ ಮಧ್ಯಾಹ್ನ 12.45ರವರೆಗೆ. `ಹುಬ್ಬಳ್ಳಿ ಸಾಹಿತ್ಯ ವಲಯ'-ನಿರಂಜನ ವಾಲಿಶೆಟ್ಟರ, `ಆ ಕಾಲದ ಹುಬ್ಬಳ್ಳಿ'-ನಾರಾಯಣ ಘಳಗಿ, `ಹುಬ್ಬಳ್ಳಿ ರಾಜಕೀಯ ದಿಕ್ಕು ದೆಸೆ'-ಡಾ.ಪಾಂಡುರಂಗ ಪಾಟೀಲ, `ವಾಣಿಜ್ಯ ಕೇಂದ್ರವಾಗಿ ಹುಬ್ಬಳ್ಳಿ'-ಮದನ ದೇಸಾಯಿ, `ಹುಬ್ಬಳ್ಳಿಯ ನಾಟಕ ಕ್ಷೇತ್ರ'-ಡಾ.ಗೋವಿಂದ ಮಣ್ಣೂರು, `ಹುಬ್ಬಳ್ಳಿಯಲ್ಲಿ ಕ್ರೀಡೆ: ಹಿಂದೆ, ಇಂದು, ಮುಂದು, ಸುತ್ತ'- `ಪ್ರಜಾವಾಣಿ' ನಿವೃತ್ತ ಸಹ ಸಂಪಾದಕ ಗೋಪಾಲಕೃಷ್ಣ ಹೆಗಡೆ. ನಿರ್ವಹಣೆ-ಸುಭಾಶ ನರೇಂದ್ರ.<br /> <br /> ಎರಡನೇ ಗೋಷ್ಠಿ- ಕವಿ ಕಾವ್ಯ ಲಹರಿ: ಮಧ್ಯಾಹ್ನ 2 ರಿಂದ 3ರವರೆಗೆ.<br /> <br /> ಜಗದೀಶ ಮಂಗಳೂರಮಠ, ಕೆ.ಜಿ.ಭಟ್, ಹೇಮಾ ಪಟ್ಟಣಶೆಟ್ಟಿ, ರಾಮು ಮೂಲಗಿ, ಸಿ.ಎಂ.ಮುನಿಸ್ವಾಮಿ, ಡಾ.ಗೋವಿಂದ ಹೆಗಡೆ, ಸುಶಿಲೇಂದ್ರ ಕುಂದರಗಿ, ಎ.ಸಿ.ವಾಲಿ, ರಮಜಾನ್ ಕಿಲ್ಲೇದಾರ, ಶ್ವೇತಾ ಕರ್ಕಿ, ಎಸ್.ಆರ್. ಆಶಿ, ಎಸ್.ವಿ.ಪಟ್ಟಣಶೆಟ್ಟಿ, ರತ್ನಾ ಅಂಗಡಿ, ವಿರೂಪಾಕ್ಷ ಕಟ್ಟಿಮನಿ, ನಿರ್ವಹಣೆ: ಕವಿಮಾತು-ಕಿವಿಮಾತು-ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ.<br /> <br /> ಮೂರನೇ ಗೋಷ್ಠಿ: ನನ್ನ ಬರವಣಿಗೆ: ಮಧ್ಯಾಹ್ನ 3.15ರಿಂದ 4.15ರವರೆಗೆ.<br /> <br /> ನನ್ನ ಕತೆಗಳು-ಸುನಂದಾ ಕಡಮೆ, ನನ್ನ ಕಾದಂಬರಿ-ಡಾ.ರಮೇಶ ಬಾಬು, ನನ್ನ ಪ್ರಬಂಧಗಳು-ಆರೂರು ಲಕ್ಷ್ಮಣ ಶೇಟ್, ನನ್ನ ಕವಿತೆಗಳು-ಮಹಾಂತಪ್ಪ ನಂದೂರ.<br /> <br /> ವಿವಿಧ ಸಾಧಕರಿಗೆ ಸನ್ಮಾನ: ಶಿವಲಿಂಗಮ್ಮ ಕಟ್ಟಿ (ಸಾಹಿತ್ಯ), ಈರಣ್ಣ ಕಾಡಪ್ಪನವರ (ಕ್ರೀಡೆ), ಎಂ.ಎಂ.ಕನಕೇರಿ (ಪತ್ರಿಕೆ), ವಸಂತ ಕುಲಕರ್ಣಿ (ರಂಗಭೂಮಿ), ಸಾಧು ಕಠಾರೆ (ನಾಟಕ), ಎನ್.ಬಿ.ರಾಮಾಪುರ (ಸಾಹಿತ್ಯ ಸಂಘಟನೆ).<br /> <br /> ಪುಸ್ತಕ ಅನಾವರಣ: ಸ್ಮರಣ ಸಂಚಿಕೆ-ಕುಂ ವೀರಭದ್ರಪ್ಪ, ಎಂ.ಡಿ.ಗೋಗೇರಿ ಸಮಗ್ರ ಸಾಹಿತ್ಯ-ವೀಣಾ ಬನ್ನಂಜೆ, ಲೋಕಾಂತ ವೀಣಾ ಬನ್ನಂಜೆ-ಡಾ.ಕೊಟ್ಟೂರ ಸ್ವಾಮೀಜಿ, ಕಲ್ಮಠ, ಇತರ ಪುಸ್ತಕಗಳು-ರುದ್ರಾಕ್ಷಿಮಠದ ಬಸವಲಿಂಗಸ್ವಾಮೀಜಿ ಅನಾವರಣ ಮಾಡುವರು.<br /> <br /> ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೆ.ಎಸ್. ಕೌಜಲಗಿ, ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಎ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>