<p><strong>ಚಾಮರಾಜನಗರ: </strong>ಚಿತ್ರನಟ ಶಿವರಾಜ್ಕುಮಾರ್ ಸಮಾವೇಶದ ಕೇಂದ್ರಬಿಂದು ವಾಗಿದ್ದರು. ಜನಪದ ಕಲಾ ತಂಡಗಳ ಮೆರವಣಿಗೆಯಲ್ಲಿ ಪಾಲ್ಗೊಂಡು ಜನರತ್ತ ಕೈಬೀಸಿದರು. ರಸ್ತೆಯ ಇಕ್ಕೆಲ ಗಳಲ್ಲಿ ನಿಂತಿದ್ದ ನಾಗರಿಕರು ಶಿವಣ್ಣ ಅವರತ್ತ ಕೈಬೀಸಿ ಪುಳಕಿತರಾದರು. <br /> <br /> ಮೆರವಣಿಗೆಯು ವೇದಿಕೆ ಬಳಿಗೆ ಬಂದಾಗ ಸೂರ್ಯ ಕಾದು ಕೆಂಡವಾಗಿದ್ದ. ಬಿಸಿಲಿನ ಝಳ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಕುರ್ಚಿಗಳಲ್ಲಿ ಆಸೀನರಾಗಿದ್ದರು. ಶಿವಣ್ಣ ಭಾಷಣ ಮಾಡಲು ಮೈಕ್ ಹಿಡಿದಾಗ ಸಭಿಕರ ಸಂತಸವೂ ಎಲ್ಲೆ ಮೀರಿತು. <br /> <br /> `ತಮಿಳುನಾಡಿನ ಚೆನ್ನೈನಲ್ಲಿ ಸಿನಿಮಾ ಇಂಡಸ್ಟ್ರಿ ಕೇಂದ್ರೀಕೃತವಾಗಿತ್ತು. ಹೀಗಾಗಿ, ಅಪ್ಪಾಜಿ ಕೂಡ ಅಲ್ಲಿಯೇ ಇದ್ದರು. ನಾನು ಚೆನ್ನೈನಲ್ಲಿಯೇ ವಿದ್ಯಾಭ್ಯಾಸ ಮಾಡಿದೆ. ತಮಿಳು ಮತ್ತು ಕನ್ನಡ ಭಾಷೆ ಎರಡನ್ನೂ ಚೆನ್ನಾಗಿ ಓದಿ ಬರೆಯಬಲ್ಲೆ. ತಾಳವಾಡಿ ಸಮೀಪದ ಗಾಜನೂರಿಗೆ ರಜೆಯಲ್ಲಿ ಬರುತ್ತಿದ್ದೆವು.<br /> <br /> ಹಲವು ದಿನಗಳವರೆಗೆ ಅಲ್ಲಿಯೇ ವಾಸ್ತವ್ಯ ಹೂಡುತ್ತಿದ್ದೆವು. ತಾಳವಾಡಿ ಸಂಪೂರ್ಣವಾಗಿ ನನಗೆ ಗೊತ್ತಿದೆ. ಇಲ್ಲಿ ಎಂದಿಗೂ ಜಗಳ ನಡೆದಿಲ್ಲ. ಅದನ್ನು ನಾನು ಕೇಳಿಯೂ ಇಲ್ಲ~ ಎಂದಾಗ ಸಭಿಕರ ಕರತಾಡನ ಮುಗಿಲು ಮುಟ್ಟಿತು.<br /> ಬಳಿಕ ಶಿವಣ್ಣನ ಭಾಷಣ ಭಾಷಾ ಸಾಮರಸ್ಯ ಕಾಪಾಡುವತ್ತ ಹೊರಳಿತು. <br /> <br /> `ರಾಜಕಾರಣಿಗಳು ನದಿ ನೀರು ಹಂಚಿಕೆ ಇತ್ಯಾದಿ ಸಮಸ್ಯೆ ಬಗೆಹರಿಸಿಕೊಳ್ಳು ತ್ತಾರೆ. ಅದರ ಬಗ್ಗೆ ನಾವು ತಲೆಕೆಡಿಸಿ ಕೊಳ್ಳಬೇಕಿಲ್ಲ. ಎಲ್ಲರೂ ಒಂದಾಗಿ ಬದುಕುವುದು ಮುಖ್ಯ~ ಎಂದರು.<br /> <br /> `ಅಪ್ಪಾಜಿ ಗಾಜನೂರಿಗೆ ಕರೆದು ಕೊಂಡು ಹೋಗುವಂತೆ ಕೇಳುತ್ತಿದ್ದರು. ಅದು ಕೊನೆಯವರೆಗೂ ಸಾಧ್ಯವಾಗ ಲಿಲ್ಲ. ತಾಳವಾಡಿ ನನ್ನ ಮೆಚ್ಚಿನ ಊರು. ಈ ಸಮಾವೇಶ ಮುಗಿಸಿ ಬೆಂಗಳೂರಿಗೆ ಹೋಗಲು ದುಃಖವಾಗುತ್ತದೆ~ ಎಂದರು ಹ್ಯಾಟ್ರಿಕ್ ಹಿರೋ. <br /> <br /> ಜನರ ಒತ್ತಾಯದ ಮೇರೆಗೆ ಗಂಧದಗುಡಿ ಚಿತ್ರದ `ನಾವಾಡುವ ನುಡಿಯೇ ಕನ್ನಡ ನುಡಿ...~ ಹಾಡಿನ ಚರಣ ಹೇಳಿದರು. ಬಳಿಕ ಜನುಮದ ಜೋಡಿ ಚಿತ್ರದ `ಮಣಿ ಮಣಿಗೊಂದು ದಾರ...~ ಹಾಡು ಹಾಡಿದರು. ಸಭಿಕರ ಉತ್ಸಾಹ ಕಂಡು ಮೈಲಾರಿ ಚಿತ್ರದ ಟೈಟಲ್ ಸಾಂಗ್ ಕೂಡ ಹಾಡಿದರು. `ಕುರಿ, ಕೋಳಿನ ಶನಿವಾರ... ಕೊಯಂಗಿಲ್ಲ...~ ಎಂದಾಗ ನಾಗರಿಕರ ಚಪ್ಪಾಳೆ ಸದ್ದು ಅನುರಣಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಚಿತ್ರನಟ ಶಿವರಾಜ್ಕುಮಾರ್ ಸಮಾವೇಶದ ಕೇಂದ್ರಬಿಂದು ವಾಗಿದ್ದರು. ಜನಪದ ಕಲಾ ತಂಡಗಳ ಮೆರವಣಿಗೆಯಲ್ಲಿ ಪಾಲ್ಗೊಂಡು ಜನರತ್ತ ಕೈಬೀಸಿದರು. ರಸ್ತೆಯ ಇಕ್ಕೆಲ ಗಳಲ್ಲಿ ನಿಂತಿದ್ದ ನಾಗರಿಕರು ಶಿವಣ್ಣ ಅವರತ್ತ ಕೈಬೀಸಿ ಪುಳಕಿತರಾದರು. <br /> <br /> ಮೆರವಣಿಗೆಯು ವೇದಿಕೆ ಬಳಿಗೆ ಬಂದಾಗ ಸೂರ್ಯ ಕಾದು ಕೆಂಡವಾಗಿದ್ದ. ಬಿಸಿಲಿನ ಝಳ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಕುರ್ಚಿಗಳಲ್ಲಿ ಆಸೀನರಾಗಿದ್ದರು. ಶಿವಣ್ಣ ಭಾಷಣ ಮಾಡಲು ಮೈಕ್ ಹಿಡಿದಾಗ ಸಭಿಕರ ಸಂತಸವೂ ಎಲ್ಲೆ ಮೀರಿತು. <br /> <br /> `ತಮಿಳುನಾಡಿನ ಚೆನ್ನೈನಲ್ಲಿ ಸಿನಿಮಾ ಇಂಡಸ್ಟ್ರಿ ಕೇಂದ್ರೀಕೃತವಾಗಿತ್ತು. ಹೀಗಾಗಿ, ಅಪ್ಪಾಜಿ ಕೂಡ ಅಲ್ಲಿಯೇ ಇದ್ದರು. ನಾನು ಚೆನ್ನೈನಲ್ಲಿಯೇ ವಿದ್ಯಾಭ್ಯಾಸ ಮಾಡಿದೆ. ತಮಿಳು ಮತ್ತು ಕನ್ನಡ ಭಾಷೆ ಎರಡನ್ನೂ ಚೆನ್ನಾಗಿ ಓದಿ ಬರೆಯಬಲ್ಲೆ. ತಾಳವಾಡಿ ಸಮೀಪದ ಗಾಜನೂರಿಗೆ ರಜೆಯಲ್ಲಿ ಬರುತ್ತಿದ್ದೆವು.<br /> <br /> ಹಲವು ದಿನಗಳವರೆಗೆ ಅಲ್ಲಿಯೇ ವಾಸ್ತವ್ಯ ಹೂಡುತ್ತಿದ್ದೆವು. ತಾಳವಾಡಿ ಸಂಪೂರ್ಣವಾಗಿ ನನಗೆ ಗೊತ್ತಿದೆ. ಇಲ್ಲಿ ಎಂದಿಗೂ ಜಗಳ ನಡೆದಿಲ್ಲ. ಅದನ್ನು ನಾನು ಕೇಳಿಯೂ ಇಲ್ಲ~ ಎಂದಾಗ ಸಭಿಕರ ಕರತಾಡನ ಮುಗಿಲು ಮುಟ್ಟಿತು.<br /> ಬಳಿಕ ಶಿವಣ್ಣನ ಭಾಷಣ ಭಾಷಾ ಸಾಮರಸ್ಯ ಕಾಪಾಡುವತ್ತ ಹೊರಳಿತು. <br /> <br /> `ರಾಜಕಾರಣಿಗಳು ನದಿ ನೀರು ಹಂಚಿಕೆ ಇತ್ಯಾದಿ ಸಮಸ್ಯೆ ಬಗೆಹರಿಸಿಕೊಳ್ಳು ತ್ತಾರೆ. ಅದರ ಬಗ್ಗೆ ನಾವು ತಲೆಕೆಡಿಸಿ ಕೊಳ್ಳಬೇಕಿಲ್ಲ. ಎಲ್ಲರೂ ಒಂದಾಗಿ ಬದುಕುವುದು ಮುಖ್ಯ~ ಎಂದರು.<br /> <br /> `ಅಪ್ಪಾಜಿ ಗಾಜನೂರಿಗೆ ಕರೆದು ಕೊಂಡು ಹೋಗುವಂತೆ ಕೇಳುತ್ತಿದ್ದರು. ಅದು ಕೊನೆಯವರೆಗೂ ಸಾಧ್ಯವಾಗ ಲಿಲ್ಲ. ತಾಳವಾಡಿ ನನ್ನ ಮೆಚ್ಚಿನ ಊರು. ಈ ಸಮಾವೇಶ ಮುಗಿಸಿ ಬೆಂಗಳೂರಿಗೆ ಹೋಗಲು ದುಃಖವಾಗುತ್ತದೆ~ ಎಂದರು ಹ್ಯಾಟ್ರಿಕ್ ಹಿರೋ. <br /> <br /> ಜನರ ಒತ್ತಾಯದ ಮೇರೆಗೆ ಗಂಧದಗುಡಿ ಚಿತ್ರದ `ನಾವಾಡುವ ನುಡಿಯೇ ಕನ್ನಡ ನುಡಿ...~ ಹಾಡಿನ ಚರಣ ಹೇಳಿದರು. ಬಳಿಕ ಜನುಮದ ಜೋಡಿ ಚಿತ್ರದ `ಮಣಿ ಮಣಿಗೊಂದು ದಾರ...~ ಹಾಡು ಹಾಡಿದರು. ಸಭಿಕರ ಉತ್ಸಾಹ ಕಂಡು ಮೈಲಾರಿ ಚಿತ್ರದ ಟೈಟಲ್ ಸಾಂಗ್ ಕೂಡ ಹಾಡಿದರು. `ಕುರಿ, ಕೋಳಿನ ಶನಿವಾರ... ಕೊಯಂಗಿಲ್ಲ...~ ಎಂದಾಗ ನಾಗರಿಕರ ಚಪ್ಪಾಳೆ ಸದ್ದು ಅನುರಣಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>