<p><strong>ತಾಳಿಕೋಟೆ:</strong> ಇಲ್ಲಿಯ ಶರಣ ಮುತ್ಯಾನ ದೇವಸ್ಥಾನದ ಮೈದಾನ ದಲ್ಲಿ ಇತ್ತೀಚೆಗೆ ಮುಗಿದ ಕುರಾನ್ ಪ್ರವಚನ ಕಾರ್ಯಕ್ರಮ ಭಕ್ತಿಭಾವ ಮೂಡಿಸಿತು. ಎಲ್ಲಿ ನೋಡಿದರೂ ಜನ ಸಾಗರವೇ ಇತ್ತು. ಎಷ್ಟು ಬೇಗ ಪ್ರವಚನ ಮುಗಿದುಹೋಯಿತಲ್ಲ ಎಂದು ಜನರು ಹಳಹಳಿಸು ವಂತಾಯಿತು.<br /> <br /> ಸ್ಥಳೀಯ ಜಮಾತೆ ಇಸ್ಲಾಮೀ ಹಿಂದ್ ವತಿಯಿಂದ ಮೂರು ದಿನಗಳವರೆಗೆ ಏರ್ಪಡಿಸಲಾಗಿದ್ದ ಈ ಪ್ರವಚನಕ್ಕೆ ಜಾತಿಭೇದ ಮರೆತು ಪ್ರತಿದಿನ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಆಗಮಿಸುತ್ತಿದ್ದರು. ಕನ್ನಡದಲ್ಲಿಯೇ ಪ್ರವಚನ ನಡೆಯು ತ್ತಿದ್ದುದರಿಂದ ಜನ ಸಾಮಾನ್ಯರಿಗೂ ಸರಳವಾಗಿ ಅರ್ಥವಾಗುತ್ತಿತ್ತು. ಹೀಗಾಗಿ ವಿವಿಧ ಧರ್ಮಗಳಿಗೆ ಸೇರಿದ ಜನರು ಪ್ರವಚನ ಕೇಳಲು ಬರುತ್ತಿ ದ್ದರು.<br /> <br /> ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನದ ನಂತರ ಇಷ್ಟೊಂದು ಜನ ಸಾಗರ ಸೇರಿರಲಿಲ್ಲ. ಈ ನಶ್ವರ ಜಗತ್ತಿನಲ್ಲಿ `ಮಾನವೀಯತೆಯೇ ಅಂತಿಮ~ ಎಂಬ ಸತ್ಯದರ್ಶನ ಈ ಪ್ರವಚನದಲ್ಲಿ ಆಯಿತು. ಶರಣ ಮುತ್ಯಾ ದೇವಸ್ಥಾನದ ಮೈದಾನವು ಕೋಮು ಸೌಹಾರ್ದತೆಗೆ ಸಾಕ್ಷಿ ಯಾಗಿತ್ತು.<br /> <br /> ಹಿಂದೂ-ಮುಸ್ಲಿಂ ಭಾಯಿ, ಭಾಯಿ~ ಎಂದ ಗಾಂಧೀಜಿ, `ಮಾನ ವೀಯತೆಯೇ ದೊಡ್ಡದು~ ಎಂದ ಡಾ.ಅಂಬೇಡ್ಕರ್, `ಇವನಾರವ, ಇವನಾರವನೆನ್ನದೆ ಇವ ನಮ್ಮವನೆನ್ನಿರಿ~ ಎಂದ ಬಸವಣ್ಣ, `ಆಗು ನಿ ಅನಿಕೇತನ~ ಎಂದ ಕುವೆಂಪು ಮುಂತಾದ ಮಹನೀಯರ ಮಾತುಗಳಲ್ಲಿ ಪ್ರವಚನಲ್ಲಿ ಅನುರಣಿಸಿದವು.<br /> <br /> ಪ್ರೀತಿ, ದಯೆ, ಕರುಣೆ, ಸಮಾನತೆ, ಮಾನವತೆ, ಸಹಬಾಳ್ವೆಗಳೇ ಮಾನವ ಕುಲವನ್ನು ಉಳಿಸುವಂಥವು ಹಾಗೂ ಅಂತಿಮವಾಗಿ ಉಳಿಯುವುದು ಮಾನವ ಪ್ರೀತಿಯೆಂಬ ಸತ್ಯ. ಉಳಿದೆಲ್ಲವೂ ಮಿಥ್ಯ ಮತ್ತು ಕ್ಷಣಿಕ. ಎಲ್ಲ ಜನಾಂಗಗಳ ಮನುಷ್ಯರು ಇದನ್ನೇ ಸಾಧಿಸಲು, ಉಳಿಸಲು ಪ್ರಯತ್ನಿಸಿದರು ಎಂಬುದೇ ಪ್ರವಚನದ ಸಂದೇಶವಾಗಿತ್ತು.<br /> ತತ್ವ ಮತ್ತು ಆದರ್ಶಗಳನ್ನು ಮರೆತು ಮಾನವ ಪಂಗಡ ಕಟ್ಟಿ, ಸ್ವಾರ್ಥ ಮತ್ತು ದುರಾಸೆಯಿಂದ ವರ್ತಿಸುತ್ತಿರುವುದರಿಂದ ಮಾನವ ಕುಲ ನಾಶವಾಗುತ್ತಿದೆ. ಎಲ್ಲ ತಪ್ಪುಗಳನ್ನು ಮನಸ್ಸೆಂಬ ದೇವರೆದುರು ಒಪ್ಪಿಕೊಳ್ಳುತ್ತೇವೆ. ಶಿಕ್ಷೆ ಅನುಭವಿಸುತ್ತೇವೆ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞ ಅಭಿಪ್ರಾಯಪಟ್ಟರು.<br /> <br /> ವಿವಿಧ ಧರ್ಮಗುರುಗಳು ಈ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುರಾನ್ನಲ್ಲಿರುವ ಸಂದೇಶಗಳನ್ನು ಅವರು ವಿವರಿಸಿ ಹೇಳಿದರು. ಕುರಾನ್ ಕೇವಲ ಮುಸ್ಲಿಮರಿಗಷ್ಟೇ ಮಾತ್ರ ಸೀಮಿತವಲ್ಲ, ಇಡೀ ಮಾನವ ಜನಾಂಗಕ್ಕೆ ಸಂಬಂಧಿಸಿದ್ದು ಎಂದು ತಿಳಿಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾಳಿಕೋಟೆ:</strong> ಇಲ್ಲಿಯ ಶರಣ ಮುತ್ಯಾನ ದೇವಸ್ಥಾನದ ಮೈದಾನ ದಲ್ಲಿ ಇತ್ತೀಚೆಗೆ ಮುಗಿದ ಕುರಾನ್ ಪ್ರವಚನ ಕಾರ್ಯಕ್ರಮ ಭಕ್ತಿಭಾವ ಮೂಡಿಸಿತು. ಎಲ್ಲಿ ನೋಡಿದರೂ ಜನ ಸಾಗರವೇ ಇತ್ತು. ಎಷ್ಟು ಬೇಗ ಪ್ರವಚನ ಮುಗಿದುಹೋಯಿತಲ್ಲ ಎಂದು ಜನರು ಹಳಹಳಿಸು ವಂತಾಯಿತು.<br /> <br /> ಸ್ಥಳೀಯ ಜಮಾತೆ ಇಸ್ಲಾಮೀ ಹಿಂದ್ ವತಿಯಿಂದ ಮೂರು ದಿನಗಳವರೆಗೆ ಏರ್ಪಡಿಸಲಾಗಿದ್ದ ಈ ಪ್ರವಚನಕ್ಕೆ ಜಾತಿಭೇದ ಮರೆತು ಪ್ರತಿದಿನ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಆಗಮಿಸುತ್ತಿದ್ದರು. ಕನ್ನಡದಲ್ಲಿಯೇ ಪ್ರವಚನ ನಡೆಯು ತ್ತಿದ್ದುದರಿಂದ ಜನ ಸಾಮಾನ್ಯರಿಗೂ ಸರಳವಾಗಿ ಅರ್ಥವಾಗುತ್ತಿತ್ತು. ಹೀಗಾಗಿ ವಿವಿಧ ಧರ್ಮಗಳಿಗೆ ಸೇರಿದ ಜನರು ಪ್ರವಚನ ಕೇಳಲು ಬರುತ್ತಿ ದ್ದರು.<br /> <br /> ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನದ ನಂತರ ಇಷ್ಟೊಂದು ಜನ ಸಾಗರ ಸೇರಿರಲಿಲ್ಲ. ಈ ನಶ್ವರ ಜಗತ್ತಿನಲ್ಲಿ `ಮಾನವೀಯತೆಯೇ ಅಂತಿಮ~ ಎಂಬ ಸತ್ಯದರ್ಶನ ಈ ಪ್ರವಚನದಲ್ಲಿ ಆಯಿತು. ಶರಣ ಮುತ್ಯಾ ದೇವಸ್ಥಾನದ ಮೈದಾನವು ಕೋಮು ಸೌಹಾರ್ದತೆಗೆ ಸಾಕ್ಷಿ ಯಾಗಿತ್ತು.<br /> <br /> ಹಿಂದೂ-ಮುಸ್ಲಿಂ ಭಾಯಿ, ಭಾಯಿ~ ಎಂದ ಗಾಂಧೀಜಿ, `ಮಾನ ವೀಯತೆಯೇ ದೊಡ್ಡದು~ ಎಂದ ಡಾ.ಅಂಬೇಡ್ಕರ್, `ಇವನಾರವ, ಇವನಾರವನೆನ್ನದೆ ಇವ ನಮ್ಮವನೆನ್ನಿರಿ~ ಎಂದ ಬಸವಣ್ಣ, `ಆಗು ನಿ ಅನಿಕೇತನ~ ಎಂದ ಕುವೆಂಪು ಮುಂತಾದ ಮಹನೀಯರ ಮಾತುಗಳಲ್ಲಿ ಪ್ರವಚನಲ್ಲಿ ಅನುರಣಿಸಿದವು.<br /> <br /> ಪ್ರೀತಿ, ದಯೆ, ಕರುಣೆ, ಸಮಾನತೆ, ಮಾನವತೆ, ಸಹಬಾಳ್ವೆಗಳೇ ಮಾನವ ಕುಲವನ್ನು ಉಳಿಸುವಂಥವು ಹಾಗೂ ಅಂತಿಮವಾಗಿ ಉಳಿಯುವುದು ಮಾನವ ಪ್ರೀತಿಯೆಂಬ ಸತ್ಯ. ಉಳಿದೆಲ್ಲವೂ ಮಿಥ್ಯ ಮತ್ತು ಕ್ಷಣಿಕ. ಎಲ್ಲ ಜನಾಂಗಗಳ ಮನುಷ್ಯರು ಇದನ್ನೇ ಸಾಧಿಸಲು, ಉಳಿಸಲು ಪ್ರಯತ್ನಿಸಿದರು ಎಂಬುದೇ ಪ್ರವಚನದ ಸಂದೇಶವಾಗಿತ್ತು.<br /> ತತ್ವ ಮತ್ತು ಆದರ್ಶಗಳನ್ನು ಮರೆತು ಮಾನವ ಪಂಗಡ ಕಟ್ಟಿ, ಸ್ವಾರ್ಥ ಮತ್ತು ದುರಾಸೆಯಿಂದ ವರ್ತಿಸುತ್ತಿರುವುದರಿಂದ ಮಾನವ ಕುಲ ನಾಶವಾಗುತ್ತಿದೆ. ಎಲ್ಲ ತಪ್ಪುಗಳನ್ನು ಮನಸ್ಸೆಂಬ ದೇವರೆದುರು ಒಪ್ಪಿಕೊಳ್ಳುತ್ತೇವೆ. ಶಿಕ್ಷೆ ಅನುಭವಿಸುತ್ತೇವೆ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞ ಅಭಿಪ್ರಾಯಪಟ್ಟರು.<br /> <br /> ವಿವಿಧ ಧರ್ಮಗುರುಗಳು ಈ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುರಾನ್ನಲ್ಲಿರುವ ಸಂದೇಶಗಳನ್ನು ಅವರು ವಿವರಿಸಿ ಹೇಳಿದರು. ಕುರಾನ್ ಕೇವಲ ಮುಸ್ಲಿಮರಿಗಷ್ಟೇ ಮಾತ್ರ ಸೀಮಿತವಲ್ಲ, ಇಡೀ ಮಾನವ ಜನಾಂಗಕ್ಕೆ ಸಂಬಂಧಿಸಿದ್ದು ಎಂದು ತಿಳಿಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>