<p><strong>ನವದೆಹಲಿ:</strong> ಕಾಂಗ್ರೆಸ್ ಹಾಗೂ ಬಿಜೆಪಿ ಹೆಚ್ಚುಕಮ್ಮಿ ಸಮಬಲದತ್ತ ಸಾಗುವ ಮೂಲಕ ಉತ್ತರಾಖಂಡದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.<br /> <br /> ಒಟ್ಟು ಸ್ಥಾನಗಳ ಪೈಕಿ ಕಾಂಗ್ರೆಸ್ 32 ಹಾಗೂ ಬಿಜೆಪಿ 31 ಸ್ಥಾನಗಳಲ್ಲಿ ಗೆದ್ದಿವೆ. ಬಿಎಸ್ಪಿ 3 ಹಾಗೂ ಉತ್ತರಾಖಂಡ ಕ್ರಾಂತಿ ದಳ (ಪಿ) ಒಂದು ಸ್ಥಾನದಲ್ಲಿ ಜಯ ಗಳಿಸಿವೆ. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಯಾವ ಪಕ್ಷ ಬಹುಮತ ಕಾಯ್ದುಕೊಳ್ಳುತ್ತದೆ ಎನ್ನುವುದು ಕುತೂಹಲದ ಸಂಗತಿಯಾಗಿಯೇ ಉಳಿದಿದೆ.<br /> ಮೂರು ಸ್ಥಾನಗಳಲ್ಲಿ ಗೆದ್ದಿರುವ ಬಿಎಸ್ಪಿ ಯಾರ ಕಡೆ ಒಲವು ತೋರುತ್ತದೆ ಎನ್ನುವುದರತ್ತ ಈಗ ಎಲ್ಲರ ಗಮನ ನೆಟ್ಟಿದೆ.<br /> <br /> ಮುಖ್ಯಮಂತ್ರಿ ಬಿ.ಸಿ.ಖಂಡೂರಿ ಅವರು ಕಾಂಗ್ರೆಸ್ನ ಎಸ್. ಎಸ್.ನೇಗಿ ಅವರಿಂದ 4632 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.<br /> <br /> ಈ ನಡುವೆ ಕೇಂದ್ರ ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವ ಹರೀಶ್ ರಾವತ್ ಅವರು, ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.<br /> <br /> ಇನ್ನೊಂದೆಡೆ ಬಿ.ಸಿ.ಖಂಡೂರಿ ಅವರು, ತಮ್ಮ ಪಕ್ಷವೇ ಸರ್ಕಾರ ರಚಿಸುತ್ತದೆ ಎಂಬ ಆತ್ಮವಿಶ್ವಾಸ ಹೊಂದಿದ್ದಾರೆ. `ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ. ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ~ ಎಂದು ಖಂಡೂರಿ ಹೇಳಿದ್ದಾರೆ. ಆಂತರಿಕ ಕುತಂತ್ರದಿಂದಾಗಿಯೇ ಖಂಡೂರಿ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.</p>.<table align="center" border="1" cellpadding="1" cellspacing="1" width="200"> <tbody> <tr> <td bgcolor="#ff3333"> <p><strong>ಗೆದ್ದವರು...</strong></p> <p><span style="font-size: small">* ಮಾಜಿ ಮುಖ್ಯಮಂತ್ರಿ ರಮೇಶ್ ಪೋಖ್ರಿಯಾಲ್ ನಿಶಾಂಕ್ (ಬಿಜೆಪಿ-ದ್ವೈವಾಲಾ)<br /> * ಪ್ರವಾಸೋದ್ಯಮ ಸಚಿವ ಮದನ್ ಕೌಶಿಕ್ (ಹರಿದ್ವಾರ)<br /> * ಇಂದಿರಾ ಹೃದಯೇಶ್ (ಕಾಂಗ್ರೆಸ್-ಹಲ್ದ್ವಾನಿ)<br /> * ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಯಶ್ಪಾಲ್ ಆರ್ಯ (ಬಾಜ್ಪುರ)<br /> *ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಷನ್ ಸಿಂಗ್ ಶೌಫಾಲ್ (ದೀದಿಹಟ್)<br /> </span></p> </td> </tr> <tr> <td bgcolor="#f2f0f0"> <p><span style="font-size: small"><strong>ಬಿದ್ದವರು...</strong></span></p> <p><span style="font-size: small">* ಪ್ರಕಾಶ್ ಪಂತ್ (ಬಿಜೆಪಿ-ಪಿತೋಡ್ಗಡ)<br /> * ದಿವಾಕರ್ ಭಟ್ (ಬಿಜೆಪಿ-ದೇವಪ್ರಯಾಗ್)<br /> * ರಾಜ್ಕುಮಾರ್ (ಬಿಜೆಪಿ)<br /> </span></p> </td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕಾಂಗ್ರೆಸ್ ಹಾಗೂ ಬಿಜೆಪಿ ಹೆಚ್ಚುಕಮ್ಮಿ ಸಮಬಲದತ್ತ ಸಾಗುವ ಮೂಲಕ ಉತ್ತರಾಖಂಡದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.<br /> <br /> ಒಟ್ಟು ಸ್ಥಾನಗಳ ಪೈಕಿ ಕಾಂಗ್ರೆಸ್ 32 ಹಾಗೂ ಬಿಜೆಪಿ 31 ಸ್ಥಾನಗಳಲ್ಲಿ ಗೆದ್ದಿವೆ. ಬಿಎಸ್ಪಿ 3 ಹಾಗೂ ಉತ್ತರಾಖಂಡ ಕ್ರಾಂತಿ ದಳ (ಪಿ) ಒಂದು ಸ್ಥಾನದಲ್ಲಿ ಜಯ ಗಳಿಸಿವೆ. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಯಾವ ಪಕ್ಷ ಬಹುಮತ ಕಾಯ್ದುಕೊಳ್ಳುತ್ತದೆ ಎನ್ನುವುದು ಕುತೂಹಲದ ಸಂಗತಿಯಾಗಿಯೇ ಉಳಿದಿದೆ.<br /> ಮೂರು ಸ್ಥಾನಗಳಲ್ಲಿ ಗೆದ್ದಿರುವ ಬಿಎಸ್ಪಿ ಯಾರ ಕಡೆ ಒಲವು ತೋರುತ್ತದೆ ಎನ್ನುವುದರತ್ತ ಈಗ ಎಲ್ಲರ ಗಮನ ನೆಟ್ಟಿದೆ.<br /> <br /> ಮುಖ್ಯಮಂತ್ರಿ ಬಿ.ಸಿ.ಖಂಡೂರಿ ಅವರು ಕಾಂಗ್ರೆಸ್ನ ಎಸ್. ಎಸ್.ನೇಗಿ ಅವರಿಂದ 4632 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.<br /> <br /> ಈ ನಡುವೆ ಕೇಂದ್ರ ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವ ಹರೀಶ್ ರಾವತ್ ಅವರು, ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.<br /> <br /> ಇನ್ನೊಂದೆಡೆ ಬಿ.ಸಿ.ಖಂಡೂರಿ ಅವರು, ತಮ್ಮ ಪಕ್ಷವೇ ಸರ್ಕಾರ ರಚಿಸುತ್ತದೆ ಎಂಬ ಆತ್ಮವಿಶ್ವಾಸ ಹೊಂದಿದ್ದಾರೆ. `ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ. ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ~ ಎಂದು ಖಂಡೂರಿ ಹೇಳಿದ್ದಾರೆ. ಆಂತರಿಕ ಕುತಂತ್ರದಿಂದಾಗಿಯೇ ಖಂಡೂರಿ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.</p>.<table align="center" border="1" cellpadding="1" cellspacing="1" width="200"> <tbody> <tr> <td bgcolor="#ff3333"> <p><strong>ಗೆದ್ದವರು...</strong></p> <p><span style="font-size: small">* ಮಾಜಿ ಮುಖ್ಯಮಂತ್ರಿ ರಮೇಶ್ ಪೋಖ್ರಿಯಾಲ್ ನಿಶಾಂಕ್ (ಬಿಜೆಪಿ-ದ್ವೈವಾಲಾ)<br /> * ಪ್ರವಾಸೋದ್ಯಮ ಸಚಿವ ಮದನ್ ಕೌಶಿಕ್ (ಹರಿದ್ವಾರ)<br /> * ಇಂದಿರಾ ಹೃದಯೇಶ್ (ಕಾಂಗ್ರೆಸ್-ಹಲ್ದ್ವಾನಿ)<br /> * ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಯಶ್ಪಾಲ್ ಆರ್ಯ (ಬಾಜ್ಪುರ)<br /> *ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಷನ್ ಸಿಂಗ್ ಶೌಫಾಲ್ (ದೀದಿಹಟ್)<br /> </span></p> </td> </tr> <tr> <td bgcolor="#f2f0f0"> <p><span style="font-size: small"><strong>ಬಿದ್ದವರು...</strong></span></p> <p><span style="font-size: small">* ಪ್ರಕಾಶ್ ಪಂತ್ (ಬಿಜೆಪಿ-ಪಿತೋಡ್ಗಡ)<br /> * ದಿವಾಕರ್ ಭಟ್ (ಬಿಜೆಪಿ-ದೇವಪ್ರಯಾಗ್)<br /> * ರಾಜ್ಕುಮಾರ್ (ಬಿಜೆಪಿ)<br /> </span></p> </td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>