<p><strong>ಸೋಚಿ, ರಷ್ಯಾ (ಪಿಟಿಐ):</strong> ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಚಳಿಗಾಲದ ಒಲಿಂಪಿಕ್ಸ್ ಶುಕ್ರವಾರ ಆರಂಭಗೊಂಡಿತು. ಆದರೆ ಇಲ್ಲಿನ ಫಿಸ್ಟ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಭಾರತದ ಸ್ಪರ್ಧಿಗಳ ತಂಡ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಿರಲಿಲ್ಲ !<br /> <br /> ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಭಾರತ ಒಲಿಂಪಿಕ್ ಸಂಸ್ಥೆ ನಡುವಣ ‘ಸಂಘರ್ಷ’ ಮುಗಿದಿಲ್ಲ. ಐಒಸಿಯ ಮಾರ್ಗದರ್ಶಿ ಸೂತ್ರಗಳನ್ನು ಕೆಲವು ವಿಷಯಗಳಿಗೆ ಅನ್ವಯಿಸಲು ಅಸಾಧ್ಯ ಎಂದು ಐಒಎ ಪಟ್ಟು ಹಿಡಿದಾಗ, 2012ರ ಡಿಸೆಂಬರ್ನಲ್ಲಿ ಐಒಎಯನ್ನು ಅಮಾನತ್ತುಗೊಳಿಸಲಾಯಿತು.</p>.<p>ಅಲ್ಲಿಂದ ಈವರೆಗೆ ಈ ಅಮಾನತ್ತನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಭಾರತ ಒಲಿಂಪಿಕ್ ಸಂಸ್ಥೆಯ ಆಡಳಿತಗಾರರು ಯಶಃ ಪಡೆದಿಲ್ಲ. ಯಾವುದೇ ದೇಶದ ಒಲಿಂಪಿಕ್ ಸಂಸ್ಥೆಯನ್ನು ಐಒಸಿ ಅಮಾನತುಗೊಳಿಸಿದರೆ, ಆ ದೇಶದ ಸಂಬಂಧಪಟ್ಟ ಕ್ರೀಡಾ ತಂಡ ಅಂತರ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಐಒಸಿ ಧ್ವಜವನ್ನು ಹಿಡಿದು ಸ್ಪರ್ಧಿಸ ಬೇಕಾಗುತ್ತದೆ. ಹೀಗಾಗಿ, ಇಲ್ಲಿ ಭಾರತದ ಸ್ಪರ್ಧಿಗಳು ತ್ರಿವರ್ಣ ಧ್ವಜ ಹಿಡಿದಿರಲಿಲ್ಲ.<br /> <br /> ಭಾರತದ ಶಿವಕೇಶವನ್, ಹಿಮಾಂಶು ಠಾಕೂರ್ ಮತ್ತು ನದೀಮ್ ಇಕ್ಬಾಲ್ ಅವರಿದ್ದ ಭಾರತ ತಂಡವನ್ನು ಐಒಸಿ ನಿಯಮದ ಪ್ರಕಾರ ಇಲ್ಲಿ ‘ಸ್ವತಂತ್ರ ಕ್ರೀಡಾಪಟು’ಗಳು ಎಂದು ಪರಿಗಣಿಸಲಾಗಿದೆ. ಒಲಿಂಪಿಕ್ಸ್ ಕೂಟದಂತಹ ಮಹತ್ವದ ಕ್ರೀಡಾಕೂಟದಲ್ಲಿ ಭಾರತ ಇಂತಹ ಅವಮಾನ ಅನುಭವಿಸಿದ್ದು ಇದೇ ಮೊದಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಚಿ, ರಷ್ಯಾ (ಪಿಟಿಐ):</strong> ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಚಳಿಗಾಲದ ಒಲಿಂಪಿಕ್ಸ್ ಶುಕ್ರವಾರ ಆರಂಭಗೊಂಡಿತು. ಆದರೆ ಇಲ್ಲಿನ ಫಿಸ್ಟ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಭಾರತದ ಸ್ಪರ್ಧಿಗಳ ತಂಡ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಿರಲಿಲ್ಲ !<br /> <br /> ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಭಾರತ ಒಲಿಂಪಿಕ್ ಸಂಸ್ಥೆ ನಡುವಣ ‘ಸಂಘರ್ಷ’ ಮುಗಿದಿಲ್ಲ. ಐಒಸಿಯ ಮಾರ್ಗದರ್ಶಿ ಸೂತ್ರಗಳನ್ನು ಕೆಲವು ವಿಷಯಗಳಿಗೆ ಅನ್ವಯಿಸಲು ಅಸಾಧ್ಯ ಎಂದು ಐಒಎ ಪಟ್ಟು ಹಿಡಿದಾಗ, 2012ರ ಡಿಸೆಂಬರ್ನಲ್ಲಿ ಐಒಎಯನ್ನು ಅಮಾನತ್ತುಗೊಳಿಸಲಾಯಿತು.</p>.<p>ಅಲ್ಲಿಂದ ಈವರೆಗೆ ಈ ಅಮಾನತ್ತನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಭಾರತ ಒಲಿಂಪಿಕ್ ಸಂಸ್ಥೆಯ ಆಡಳಿತಗಾರರು ಯಶಃ ಪಡೆದಿಲ್ಲ. ಯಾವುದೇ ದೇಶದ ಒಲಿಂಪಿಕ್ ಸಂಸ್ಥೆಯನ್ನು ಐಒಸಿ ಅಮಾನತುಗೊಳಿಸಿದರೆ, ಆ ದೇಶದ ಸಂಬಂಧಪಟ್ಟ ಕ್ರೀಡಾ ತಂಡ ಅಂತರ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಐಒಸಿ ಧ್ವಜವನ್ನು ಹಿಡಿದು ಸ್ಪರ್ಧಿಸ ಬೇಕಾಗುತ್ತದೆ. ಹೀಗಾಗಿ, ಇಲ್ಲಿ ಭಾರತದ ಸ್ಪರ್ಧಿಗಳು ತ್ರಿವರ್ಣ ಧ್ವಜ ಹಿಡಿದಿರಲಿಲ್ಲ.<br /> <br /> ಭಾರತದ ಶಿವಕೇಶವನ್, ಹಿಮಾಂಶು ಠಾಕೂರ್ ಮತ್ತು ನದೀಮ್ ಇಕ್ಬಾಲ್ ಅವರಿದ್ದ ಭಾರತ ತಂಡವನ್ನು ಐಒಸಿ ನಿಯಮದ ಪ್ರಕಾರ ಇಲ್ಲಿ ‘ಸ್ವತಂತ್ರ ಕ್ರೀಡಾಪಟು’ಗಳು ಎಂದು ಪರಿಗಣಿಸಲಾಗಿದೆ. ಒಲಿಂಪಿಕ್ಸ್ ಕೂಟದಂತಹ ಮಹತ್ವದ ಕ್ರೀಡಾಕೂಟದಲ್ಲಿ ಭಾರತ ಇಂತಹ ಅವಮಾನ ಅನುಭವಿಸಿದ್ದು ಇದೇ ಮೊದಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>