<p>ಗುಂಡ್ಲುಪೇಟೆ: ಗಿರಿಜನರು ದಂಟಿನ ಬೀಜದ ಕೃಷಿಯನ್ನು ಅಳವಡಿಸಿಕೊಂಡು ಬೀಜವನ್ನು ಸ್ವತ: ಆಹಾರದಲ್ಲಿ ಉಪಯೋಗಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ. ಶಿವಶಂಕರಸ್ವಾಮಿ ಹೇಳಿದರು. <br /> <br /> ತಾಲ್ಲೂಕಿನ ಹಗ್ಗದಹಳ್ಳ ಗ್ರಾಮದ ಗಿರಿಜನರ ಪೋಡಿನಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಪರಿಷತ್ಗಳು ಸಂಯುಕ್ತವಾಗಿ ಬುಧವಾರ ಹಮ್ಮಿಕೊಂಡಿದ್ದ ಬೀಜದ ದಂಟು ಬೆಳೆಯ ಬೇಸಾಯ, ಪೌಷ್ಟಿಕತೆ ಮತ್ತು ಮೌಲ್ಯವರ್ಧನೆ ಕುರಿತ ಒಂದು ದಿನದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, `ಮನುಷ್ಯರಿಗೆ ಸೊಪ್ಪಿನ ತರಕಾರಿಗಳು ಬಹಳ ಅವಶ್ಯಕ, ಆದರೆ ಈ ಬೇಸಾಯದ ಬಗ್ಗೆ ಎಲ್ಲೆಡೆ ನಿರ್ಲಕ್ಷ ಇದೆ. ಇದನ್ನು ತೊಡೆದು ಹಾಕಿ ನಿಮ್ಮಲ್ಲಿರುವ ಸ್ಥಳಾವಕಾಶದಲ್ಲಿ ದಂಟಿನ ಬೆಳೆಯನ್ನು ಬೆಳೆಯಲು ಮುಂದಾಗಬೇಕು~ ಎಂದು ಸಲಹೆ ನೀಡಿದರು.<br /> <br /> ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ನಿರಂಜನಮೂರ್ತಿ ಮಾತನಾಡಿ, `ದಂಟಿನ ಬೆಳೆಯಿಂದ ಅನೇಕ ಪ್ರಯೋಜನಗಳಿವೆ, ಗಿರಿಜನರಾದ ನೀವು ಈ ಬೆಳೆಯನ್ನು ಬೆಳೆದು ಪಟ್ಟಣ ಪ್ರದೇಶಗಳಲ್ಲಿ ಮಾರಾಟ ಮಾಡಬಹುದು. <br /> <br /> ಕಾಡಂಚಿನ ಪ್ರದೇಶದಲ್ಲಿರುವ ನಿಮಗೆ ಲಭ್ಯವಿರುವ ಜಮೀನಿನಲ್ಲಿ ಮತ್ತು ಕೈತೋಟದ ಮೂಲಕ ಬೆಳೆಯಬಹುದು~ ಎಂದು ಸಲಹೆ ನೀಡಿದರು.<br /> <br /> ವಲಯ ಅರಣ್ಯಾಧಿಕಾರಿ ಶಶಿಧರ್, ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಂಜಯ್ಯ, ಎಂ. ಶ್ರೀಧರ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಂಡ್ಲುಪೇಟೆ: ಗಿರಿಜನರು ದಂಟಿನ ಬೀಜದ ಕೃಷಿಯನ್ನು ಅಳವಡಿಸಿಕೊಂಡು ಬೀಜವನ್ನು ಸ್ವತ: ಆಹಾರದಲ್ಲಿ ಉಪಯೋಗಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ. ಶಿವಶಂಕರಸ್ವಾಮಿ ಹೇಳಿದರು. <br /> <br /> ತಾಲ್ಲೂಕಿನ ಹಗ್ಗದಹಳ್ಳ ಗ್ರಾಮದ ಗಿರಿಜನರ ಪೋಡಿನಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಪರಿಷತ್ಗಳು ಸಂಯುಕ್ತವಾಗಿ ಬುಧವಾರ ಹಮ್ಮಿಕೊಂಡಿದ್ದ ಬೀಜದ ದಂಟು ಬೆಳೆಯ ಬೇಸಾಯ, ಪೌಷ್ಟಿಕತೆ ಮತ್ತು ಮೌಲ್ಯವರ್ಧನೆ ಕುರಿತ ಒಂದು ದಿನದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, `ಮನುಷ್ಯರಿಗೆ ಸೊಪ್ಪಿನ ತರಕಾರಿಗಳು ಬಹಳ ಅವಶ್ಯಕ, ಆದರೆ ಈ ಬೇಸಾಯದ ಬಗ್ಗೆ ಎಲ್ಲೆಡೆ ನಿರ್ಲಕ್ಷ ಇದೆ. ಇದನ್ನು ತೊಡೆದು ಹಾಕಿ ನಿಮ್ಮಲ್ಲಿರುವ ಸ್ಥಳಾವಕಾಶದಲ್ಲಿ ದಂಟಿನ ಬೆಳೆಯನ್ನು ಬೆಳೆಯಲು ಮುಂದಾಗಬೇಕು~ ಎಂದು ಸಲಹೆ ನೀಡಿದರು.<br /> <br /> ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ನಿರಂಜನಮೂರ್ತಿ ಮಾತನಾಡಿ, `ದಂಟಿನ ಬೆಳೆಯಿಂದ ಅನೇಕ ಪ್ರಯೋಜನಗಳಿವೆ, ಗಿರಿಜನರಾದ ನೀವು ಈ ಬೆಳೆಯನ್ನು ಬೆಳೆದು ಪಟ್ಟಣ ಪ್ರದೇಶಗಳಲ್ಲಿ ಮಾರಾಟ ಮಾಡಬಹುದು. <br /> <br /> ಕಾಡಂಚಿನ ಪ್ರದೇಶದಲ್ಲಿರುವ ನಿಮಗೆ ಲಭ್ಯವಿರುವ ಜಮೀನಿನಲ್ಲಿ ಮತ್ತು ಕೈತೋಟದ ಮೂಲಕ ಬೆಳೆಯಬಹುದು~ ಎಂದು ಸಲಹೆ ನೀಡಿದರು.<br /> <br /> ವಲಯ ಅರಣ್ಯಾಧಿಕಾರಿ ಶಶಿಧರ್, ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಂಜಯ್ಯ, ಎಂ. ಶ್ರೀಧರ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>