<p><strong>ಕಣ್ತೆರೆಸುವ ಲೇಖನ</strong><br /> ಮೋಹನ್ ಕುಮಾರ್ ಅವರ `ಮನವೊಲಿಕೆ ಮಂತ್ರ ; ಕೆರೆ ಉಳಿಸುವ ತಂತ್ರ~ ಲೇಖನದ ಹಿಂದಿನ ಸತ್ಯವನ್ನು ಅರಿತು ಪ್ರತಿಯೊಬ್ಬರೂ ಸಕಲ ಜೀವರಾಶಿಗಳ ಆಧಾರವಾದ ನೀರಿನ ಸಂರಕ್ಷಣೆಗೆ ಟೊಂಕಕಟ್ಟಿ ನಿಲ್ಲಬೇಕು. <br /> </p>.<p>ಊರಿಗೊಂದು ಕೆರೆ, ನೀರಿಗಿಲ್ಲ ಬರ ಎಂಬ ಮಾತಿನಂತೆ ಪ್ರತಿಯೊಂದು ಕೆರೆಗಳ ಉಳಿವಿಗೆ ಕಾರಣರಾಗಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಕಡೆಗೆ ಗಮನ ಹರಿಸಬೇಕು. ಮುಖ್ಯವಾಗಿ ಪ್ರಜ್ಞಾವಂತ ಯುವಕರು ಈ ಕಾರ್ಯಕ್ಕೆ ಮುಂದಾಗಬೇಕು. ಒಟ್ಟಾರೆ ಇದು ಕಣ್ತೆರೆಸುವ ಲೇಖನ.<br /> <strong> -ನಾಗೇಶ್ ಕಾರ್ಯ,ನಂಜನಗೂಡು<br /> <br /> ಮಾದರಿ ಅಧಿಕಾರಿ<br /> </strong>ಸರ್ಕಾರಿ ಅಧಿಕಾರಿಗೆ ಕೆಲಸದಲ್ಲಿ ಬದ್ಧತೆ, ಅರ್ಪಣಾ ಮನೋಭಾವ ಹಾಗೂ ಆತ್ಮವಿಶ್ವಾಸವಿದ್ದಲ್ಲಿ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ಡಾ. ಉದಯ್ಕುಮಾರ್ ಶೆಟ್ಟಿಯವರೇ ಸಾಕ್ಷಿ. ಅವರ ಕಾರ್ಯತತ್ಪರತೆಗೆ ಅಭಿನಂದನೆಗಳು.<br /> <strong> -ಪಿ.ಎ.ಸುಧೀಂದ್ರ, ಬೆಂಗಳೂರು.<br /> <br /> ಉತ್ತಮ ನಿದರ್ಶನ</strong><br /> ಮಾ. 27ರಂದು ಪ್ರಕಟವಾದ `ಮನವೊಲಿಕೆ ಮಂತ್ರ; ಕೆರೆ ಉಳಿಸುವ ತಂತ್ರ~ ಗಮನ ಸೆಳೆಯಿತು. ರೈತರು ಸ್ವಯಂ ಪ್ರೇರಣೆಯಿಂದ `ಕೆರೆಯ ಉಳಿವಿಗಾಗಿ ಭೂಮಿ ಬಿಟ್ಟುಕೊಟ್ಟಿರುವುದು ಸಂತೋಷದ ಸಂಗತಿ. ಕೆರೆಗಳನ್ನು ಮುಚ್ಚಿ ಪರಿಸರ ಹಾಗೂ ಅಂತರ್ಜಲ ನಾಶ ಮಾಡುವವರಿಗೆ ಇದೊಂದು ಅನುಕರಣೀಯ. ಇಂತಹ ಲೇಖನಗಳು ಹೆಚ್ಚು ಪ್ರಕಟಗೊಳ್ಳಲಿ.<br /> <strong> -ಅನಾರ್ಕಲಿ ಸಲೀಂ ಚಿಣ್ಯ, ಶ್ರೀರಂಗಪಟ್ಟಣ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಣ್ತೆರೆಸುವ ಲೇಖನ</strong><br /> ಮೋಹನ್ ಕುಮಾರ್ ಅವರ `ಮನವೊಲಿಕೆ ಮಂತ್ರ ; ಕೆರೆ ಉಳಿಸುವ ತಂತ್ರ~ ಲೇಖನದ ಹಿಂದಿನ ಸತ್ಯವನ್ನು ಅರಿತು ಪ್ರತಿಯೊಬ್ಬರೂ ಸಕಲ ಜೀವರಾಶಿಗಳ ಆಧಾರವಾದ ನೀರಿನ ಸಂರಕ್ಷಣೆಗೆ ಟೊಂಕಕಟ್ಟಿ ನಿಲ್ಲಬೇಕು. <br /> </p>.<p>ಊರಿಗೊಂದು ಕೆರೆ, ನೀರಿಗಿಲ್ಲ ಬರ ಎಂಬ ಮಾತಿನಂತೆ ಪ್ರತಿಯೊಂದು ಕೆರೆಗಳ ಉಳಿವಿಗೆ ಕಾರಣರಾಗಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಕಡೆಗೆ ಗಮನ ಹರಿಸಬೇಕು. ಮುಖ್ಯವಾಗಿ ಪ್ರಜ್ಞಾವಂತ ಯುವಕರು ಈ ಕಾರ್ಯಕ್ಕೆ ಮುಂದಾಗಬೇಕು. ಒಟ್ಟಾರೆ ಇದು ಕಣ್ತೆರೆಸುವ ಲೇಖನ.<br /> <strong> -ನಾಗೇಶ್ ಕಾರ್ಯ,ನಂಜನಗೂಡು<br /> <br /> ಮಾದರಿ ಅಧಿಕಾರಿ<br /> </strong>ಸರ್ಕಾರಿ ಅಧಿಕಾರಿಗೆ ಕೆಲಸದಲ್ಲಿ ಬದ್ಧತೆ, ಅರ್ಪಣಾ ಮನೋಭಾವ ಹಾಗೂ ಆತ್ಮವಿಶ್ವಾಸವಿದ್ದಲ್ಲಿ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ಡಾ. ಉದಯ್ಕುಮಾರ್ ಶೆಟ್ಟಿಯವರೇ ಸಾಕ್ಷಿ. ಅವರ ಕಾರ್ಯತತ್ಪರತೆಗೆ ಅಭಿನಂದನೆಗಳು.<br /> <strong> -ಪಿ.ಎ.ಸುಧೀಂದ್ರ, ಬೆಂಗಳೂರು.<br /> <br /> ಉತ್ತಮ ನಿದರ್ಶನ</strong><br /> ಮಾ. 27ರಂದು ಪ್ರಕಟವಾದ `ಮನವೊಲಿಕೆ ಮಂತ್ರ; ಕೆರೆ ಉಳಿಸುವ ತಂತ್ರ~ ಗಮನ ಸೆಳೆಯಿತು. ರೈತರು ಸ್ವಯಂ ಪ್ರೇರಣೆಯಿಂದ `ಕೆರೆಯ ಉಳಿವಿಗಾಗಿ ಭೂಮಿ ಬಿಟ್ಟುಕೊಟ್ಟಿರುವುದು ಸಂತೋಷದ ಸಂಗತಿ. ಕೆರೆಗಳನ್ನು ಮುಚ್ಚಿ ಪರಿಸರ ಹಾಗೂ ಅಂತರ್ಜಲ ನಾಶ ಮಾಡುವವರಿಗೆ ಇದೊಂದು ಅನುಕರಣೀಯ. ಇಂತಹ ಲೇಖನಗಳು ಹೆಚ್ಚು ಪ್ರಕಟಗೊಳ್ಳಲಿ.<br /> <strong> -ಅನಾರ್ಕಲಿ ಸಲೀಂ ಚಿಣ್ಯ, ಶ್ರೀರಂಗಪಟ್ಟಣ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>