<p>ಹೊಸಪೇಟೆ: ಭಾರತೀಯ ಸ್ಟೇಟ್ ಬ್ಯಾಂಕಿನ ಎಟಿಎಂಗೆ ಜಮಾ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ₨ 30 ಲಕ್ಷ ಮೊತ್ತವನ್ನು ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ದಾಖಲೆ ಇಲ್ಲದ ಕಾರಣ ಕಮಲಾಪುರ ಪೊಲೀಸರು ವಶಪಡಿಸಿಕೊಂಡು ದಾಖಲೆ ಒದಗಿಸಿದ ನಂತರ ಹಣ ಬಿಡುಗಡೆ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.<br /> <br /> ಎಸ್ಬಿಐ ಬ್ಯಾಂಕಿನ ಎಟಿಎಂಗಳಿಗೆ ಹಣ ರವಾನಿಸುವ ಖಾಸಗಿ ಸಂಸ್ಥೆ ಸಿಬ್ಬಂದಿ ಬಳಿ ದಾಖಲೆಗಳು ಇಲ್ಲದ ಕಾರಣ ಅನುಮಾನಗೊಂಡ ಪೊಲೀಸರು ವಾಹನ ಹಾಗೂ ಹಣವನ್ನು ತಮ್ಮ ವಶಕ್ಕೆ ಪಡೆದಿದ್ದರು.<br /> <br /> ನಂತರ ಹೊಸಪೇಟೆ ನಗರದ ಎಸ್ಬಿಐ ಮುಖ್ಯ ಶಾಖೆಯ ಹಿರಿಯ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ್ ಅವರು ಎಟಿಎಂಗಳಿಗೆ ಹಣ ಸಾಗಿಸುವ ಕುರಿತು ಸಮರ್ಪಕ ದಾಖಲೆ ಪೂರೈಸಿದ ನಂತರ ಚುನಾವಣಾಧಿಕಾರಿಗಳು ಹಣ ಬಿಡುಗಡೆ ಮಾಡಿದರು. <br /> <br /> ನಗರದ ಭಾರತೀಯ ಸ್ಟೇಟ್ ಬ್ಯಾಂಕಿನ ಎಟಿಎಂಗಳಿಗೆ ಹಣ ಜಮಾ ಮಾಡಲು ಹೊರಗುತ್ತಿಗೆ ಪಡೆದಿರುವ ಸಿಎಂಎಸ್ (ಕರೆಸ್ಸಿ ಮ್ಯಾನೇಜ್ಮೆಂಟ್ ಸರ್ವಿಸ್) ಸಂಸ್ಥೆ ಸಿಬ್ಬಂದಿ ಸಿಬ್ಬಂದಿ ₨ 45 ಲಕ್ಷವನ್ನು ಕಮಲಾಪುರ, ಗಂಗಾವತಿ ಹಾಗೂ ಕಾರಟಗಿ ಎಟಿಎಂಗಳಿಗೆ ಜಮಾ ಮಾಡಲು ಶುಕ್ರವಾರ ಮಧ್ಯಾಹ್ನ ತಮ್ಮ ಟಾಟಾ–207 ವಾಹನ (ಕೆಎ–08, 5078)ದಲ್ಲಿ ಹೊರಟಿದ್ದರು.<br /> <br /> ಕಮಲಾಪುರದಲ್ಲಿರುವ ಎಟಿಎಂಗೆ ₨ 15 ಲಕ್ಷ ಜಮಾ ಮಾಡಿ ಗಂಗಾವತಿಯತ್ತ ಸಾಗುತ್ತಿದ್ದ ವಾಹನವನ್ನು ತಡೆದ ಪೊಲೀಸರು ಪರಿಶೀಲನೆ ನಡೆಸಿದಾಗ ₨ 30 ಲಕ್ಷ ಇರುವುದು ಗೊತ್ತಾಗಿದೆ. ಪೊಲೀಸರು ಹಣಕ್ಕೆ ದಾಖಲೆ ಕೇಳಿದಾಗ ಸಿಎಂಎಸ್ ಸಿಬ್ಬಂದಿ ಬಳಿ ಹಣಕ್ಕೆ ಸಂಬಂಧಪಟ್ಟ ದಾಖಲೆಗಳು ಇರಲಿಲ್ಲ. ಈ ಕಾರಣದಿಂಧ ಪೊಲೀಸರು ಹಣ, ವಾಹನ ಹಾಗೂ ನಾಲ್ಕು ಮಂದಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ತಮ್ಮ ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಾದ ಉಪವಿಭಾಗಾಧಿಕಾರಿ ಪಿ.ಸುನೀಲಕುಮಾರ್, ತಹಶೀಲ್ದಾರ್ ರಮೇಶ ಕೋನರಡ್ಡಿ ಸೇರಿದಂತೆ ಆದಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.<br /> <br /> ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಶ್ರೀನಿವಾಸ್ ಅವರು, ‘ಎಟಿಎಂಗಳಿಗೆ ಹಣ ಸಾಗಿಸುವ ಕುರಿತು ಸಿಎಂಎಸ್ ಸಿಬ್ಬಂದಿ ಬ್ಯಾಂಕಿನ ಪರವಾನಿಗೆ ಇಟ್ಟುಕೊಳ್ಳಬೇಕಿತ್ತು. ಹಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪೂರೈಸಿದ್ದರಿಂದ ಪೊಲೀಸರು ಹಣ, ವಾಹನ ಹಾಗೂ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಪೇಟೆ: ಭಾರತೀಯ ಸ್ಟೇಟ್ ಬ್ಯಾಂಕಿನ ಎಟಿಎಂಗೆ ಜಮಾ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ₨ 30 ಲಕ್ಷ ಮೊತ್ತವನ್ನು ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ದಾಖಲೆ ಇಲ್ಲದ ಕಾರಣ ಕಮಲಾಪುರ ಪೊಲೀಸರು ವಶಪಡಿಸಿಕೊಂಡು ದಾಖಲೆ ಒದಗಿಸಿದ ನಂತರ ಹಣ ಬಿಡುಗಡೆ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.<br /> <br /> ಎಸ್ಬಿಐ ಬ್ಯಾಂಕಿನ ಎಟಿಎಂಗಳಿಗೆ ಹಣ ರವಾನಿಸುವ ಖಾಸಗಿ ಸಂಸ್ಥೆ ಸಿಬ್ಬಂದಿ ಬಳಿ ದಾಖಲೆಗಳು ಇಲ್ಲದ ಕಾರಣ ಅನುಮಾನಗೊಂಡ ಪೊಲೀಸರು ವಾಹನ ಹಾಗೂ ಹಣವನ್ನು ತಮ್ಮ ವಶಕ್ಕೆ ಪಡೆದಿದ್ದರು.<br /> <br /> ನಂತರ ಹೊಸಪೇಟೆ ನಗರದ ಎಸ್ಬಿಐ ಮುಖ್ಯ ಶಾಖೆಯ ಹಿರಿಯ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ್ ಅವರು ಎಟಿಎಂಗಳಿಗೆ ಹಣ ಸಾಗಿಸುವ ಕುರಿತು ಸಮರ್ಪಕ ದಾಖಲೆ ಪೂರೈಸಿದ ನಂತರ ಚುನಾವಣಾಧಿಕಾರಿಗಳು ಹಣ ಬಿಡುಗಡೆ ಮಾಡಿದರು. <br /> <br /> ನಗರದ ಭಾರತೀಯ ಸ್ಟೇಟ್ ಬ್ಯಾಂಕಿನ ಎಟಿಎಂಗಳಿಗೆ ಹಣ ಜಮಾ ಮಾಡಲು ಹೊರಗುತ್ತಿಗೆ ಪಡೆದಿರುವ ಸಿಎಂಎಸ್ (ಕರೆಸ್ಸಿ ಮ್ಯಾನೇಜ್ಮೆಂಟ್ ಸರ್ವಿಸ್) ಸಂಸ್ಥೆ ಸಿಬ್ಬಂದಿ ಸಿಬ್ಬಂದಿ ₨ 45 ಲಕ್ಷವನ್ನು ಕಮಲಾಪುರ, ಗಂಗಾವತಿ ಹಾಗೂ ಕಾರಟಗಿ ಎಟಿಎಂಗಳಿಗೆ ಜಮಾ ಮಾಡಲು ಶುಕ್ರವಾರ ಮಧ್ಯಾಹ್ನ ತಮ್ಮ ಟಾಟಾ–207 ವಾಹನ (ಕೆಎ–08, 5078)ದಲ್ಲಿ ಹೊರಟಿದ್ದರು.<br /> <br /> ಕಮಲಾಪುರದಲ್ಲಿರುವ ಎಟಿಎಂಗೆ ₨ 15 ಲಕ್ಷ ಜಮಾ ಮಾಡಿ ಗಂಗಾವತಿಯತ್ತ ಸಾಗುತ್ತಿದ್ದ ವಾಹನವನ್ನು ತಡೆದ ಪೊಲೀಸರು ಪರಿಶೀಲನೆ ನಡೆಸಿದಾಗ ₨ 30 ಲಕ್ಷ ಇರುವುದು ಗೊತ್ತಾಗಿದೆ. ಪೊಲೀಸರು ಹಣಕ್ಕೆ ದಾಖಲೆ ಕೇಳಿದಾಗ ಸಿಎಂಎಸ್ ಸಿಬ್ಬಂದಿ ಬಳಿ ಹಣಕ್ಕೆ ಸಂಬಂಧಪಟ್ಟ ದಾಖಲೆಗಳು ಇರಲಿಲ್ಲ. ಈ ಕಾರಣದಿಂಧ ಪೊಲೀಸರು ಹಣ, ವಾಹನ ಹಾಗೂ ನಾಲ್ಕು ಮಂದಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ತಮ್ಮ ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಾದ ಉಪವಿಭಾಗಾಧಿಕಾರಿ ಪಿ.ಸುನೀಲಕುಮಾರ್, ತಹಶೀಲ್ದಾರ್ ರಮೇಶ ಕೋನರಡ್ಡಿ ಸೇರಿದಂತೆ ಆದಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.<br /> <br /> ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಶ್ರೀನಿವಾಸ್ ಅವರು, ‘ಎಟಿಎಂಗಳಿಗೆ ಹಣ ಸಾಗಿಸುವ ಕುರಿತು ಸಿಎಂಎಸ್ ಸಿಬ್ಬಂದಿ ಬ್ಯಾಂಕಿನ ಪರವಾನಿಗೆ ಇಟ್ಟುಕೊಳ್ಳಬೇಕಿತ್ತು. ಹಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪೂರೈಸಿದ್ದರಿಂದ ಪೊಲೀಸರು ಹಣ, ವಾಹನ ಹಾಗೂ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>