<p><strong>ಮುಂಬೈ (ಪಿಟಿಐ):</strong> `ಸುಖಾಸುಮ್ಮನೆ ನಮ್ಮ ಜೊತೆ ವೈರತ್ವ ಕಟ್ಟಿಕೊಳ್ಳಬೇಡಿ.~ ಇದು ಗಾಂಧಿವಾದಿ ಅಣ್ಣಾ ಹಜಾರೆ ಅವರಿಗೆ ಶಿವಸೇನಾ ಮುಖ್ಯಸ್ಥ ಬಾಳಾ ಸಾಹೇಬ್ ಠಾಕ್ರೆ ನೀಡಿರುವ ಎಚ್ಚರಿಕೆ.<br /> <br /> ಮಹಾರಾಷ್ಟ್ರದ ಈ ಎರಡೂ ಹಿರಿಯ `ಮರಾಠಿ ಮಾಣುಸ್~ (ಮರಾಠಿ ಮನುಷ್ಯ) ಗಳು ಈಗ ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದು ಮಹಾರಾಷ್ಟ್ರದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದಾರೆ.<br /> <br /> ದಸರಾ ಹಬ್ಬದ ಪ್ರಯುಕ್ತ ಗುರುವಾರ ಮುಂಬೈನಲ್ಲಿ ನಡೆದ ರ್ಯಾಲಿಯಲ್ಲಿ ಶಿವಸೇನಾ ಪ್ರಮುಖ ಬಾಳಾ ಠಾಕ್ರೆ ಅವರು ಅಣ್ಣಾ ಅವರನ್ನು ಕಟು ಮಾತುಗಳಿಂದ ಇರಿದಿದ್ದರು. <br /> <br /> ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟ `ಒಂದು ದೊಡ್ಡ ಜೋಕ್~ ಎಂದು ಬಣ್ಣಿಸಿದ್ದ ಠಾಕ್ರೆ, ಅಣ್ಣಾ ಅವರೇ ಈ ದೇಶದಲ್ಲಿ ಭ್ರಷ್ಟಾಚಾರ ಕೊನೆಗೊಳ್ಳುವುದಿಲ್ಲ. ಇದರಲ್ಲಿ ದೊಡ್ಡ ದೊಡ್ಡ ತಿಮಿಂಗಲುಗಳು ಸೇರಿಕೊಂಡಿವೆ. ಇವುಗಳನ್ನು ಹಿಡಿಯಲು ಹೋಗಿ ನಿಮ್ಮ ಬಲೆಯೇ ಹಾಳಾಗುತ್ತದೆ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಯಾಗಿ ಅಣ್ಣಾ ಅವರು, ಠಾಕ್ರೆ ಅವರಿಗೆ ವಯಸ್ಸಾಗುತ್ತಿದೆ. ಅದಕ್ಕೇ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹಂಗಿಸಿದ್ದರು. <br /> <br /> ಈ ಮಾತುಗಳನ್ನೇ ಗುರಿಯಾಗಿಸಿಕೊಂಡು ಶುಕ್ರವಾರ ಹೇಳಿಕೆಯೊಂದನ್ನು ಹೊರಡಿಸಿರುವ ಶಿವಸೇನೆ, ಅಣ್ಣಾ ಅವರಿಗೆ ನಾವು ತಕ್ಕ ಉತ್ತರ ಕೊಡಬಲ್ಲೆವು. ನಾವೇನೂ ಗಾಂಧಿವಾದಿಗಳಲ್ಲ ಎಂದು ಕ್ರೋಧ ವ್ಯಕ್ತಪಡಿಸಿದ್ದಾರೆ.<br /> <br /> `ಅಣ್ಣಾ ಅವರೇ ನೀವು ನನಗಿಂತಲೂ ಚಿಕ್ಕವರು. ಚಿಕ್ಕವರ ಈ ಹುಡುಗಾಟ ನನಗೆ ಹಿಡಿಸುವುದಿಲ್ಲ. ಸುಮ್ಮಸುಮ್ಮನೇ ನಮ್ಮ ಜೊತೆ ವೈರತ್ವ ಕಟ್ಟಿಕೊಳ್ಳಬೇಡಿ~ ಎಂದು ಎಚ್ಚರಿಸಿದ್ದಾರೆ.<br /> <br /> `ಅಣ್ಣಾ ರಾಮಲೀಲಾ ಮೈದಾನದಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹ ಒಂದು ಪ್ರಹಸನ. ರಾಮಲೀಲಾ ಮೈದಾನದಲ್ಲಿ 35 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದು ಪಂಚತಾರಾ ಉಪವಾಸ! ಅಣ್ಣಾ ಏನೋ ಪ್ರಾಮಾಣಿಕವಾಗಿ ಭ್ರಷ್ಟಾಚಾರ ವಿರುದ್ಧ ಸತ್ಯಾಗ್ರಹ ನಡೆಸಬಹುದು. ಆದರೆ ಈ ದೇಶದಲ್ಲಿ ಭ್ರಷ್ಟಾಚಾರ ಕೊನೆಗೊಳ್ಳುವುದಿಲ್ಲ~ ಎಂದು ಠಾಕ್ರೆ ಹೇಳಿದ್ದಾರೆ.<br /> <br /> ರಾಳೆಗಣ ಸಿದ್ಧಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, `ಅವರು ಏನು ಹೇಳುತ್ತಿದ್ದಾರೊ ಅದು ಅವರಿಗೆ ಮಾತ್ರವೇ ಸರಿ ಎನಿಸಬಲ್ಲುದು. ಆದರೆ ನಾವು ನಮಗೆ ಏನು ಸರಿ ಎನಿಸುತ್ತಿದೆಯೊ ಅದನ್ನು ಮಾಡುತ್ತಿದ್ದೇವೆ ಅಷ್ಟೇ. ಪ್ರತಿಯೊಬ್ಬರಿಗೂ ಅವಮಾನಗಳನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕು~ ಎಂದು ನುಡಿದಿದ್ದಾರೆ.<br /> <br /> ವಿಚಿತ್ರವೆಂದರೆ ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಹೋರಾಟ ಆರಂಭಿಸಿದ ಮೊದಲ ದಿನಗಳಲ್ಲಿ ಶಿವಸೇನೆ ಅವರನ್ನು ಬೆಂಬಲಿಸಿತ್ತು. ಅಂದು ಅಣ್ಣಾ ಅವರು ಉಪವಾಸ ಕುಳಿತಿದ್ದ ರಾಮಲೀಲಾ ಮೈದಾನಕ್ಕೆ ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಕೂಡಾ ಭೇಟಿ ನೀಡಿ ಸಹಮತ ವ್ಯಕ್ತಪಡಿಸಿದ್ದರು.<br /> <br /> <strong>ಆರ್ಎಸ್ಎಸ್ ಸಂಪರ್ಕ ಇಲ್ಲ: ಅಣ್ಣಾ<br /> ರಾಳೆಗಣ ಸಿದ್ಧಿ/ನವದೆಹಲಿ:</strong> ತಮ್ಮ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಆರ್ಎಸ್ಎಸ್ ಕೈಜೋಡಿಸಿದೆ ಎಂಬ ಹೇಳಿಕೆಗಳನ್ನು ಗಾಂಧಿವಾದಿ ಅಣ್ಣಾ ಹಜಾರೆ ಅಲ್ಲಗಳೆದಿದ್ದಾರೆ.<br /> <br /> ದಸರಾ ಹಬ್ಬದ ಪ್ರಯುಕ್ತ ಗುರುವಾರ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್ ಅವರು, `ಸಂಘದ ಸ್ವಯಂ ಸೇವಕರು ಈ ದೇಶದ ಎಲ್ಲ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ~ ಎಂದು ಹೇಳಿದ್ದರು. <br /> <br /> ಇದನ್ನೇ ಗುರಿಯಾಗಿಸಿಕೊಂಡ ಕಾಂಗ್ರೆಸ್, `ನಾವು ಮೊದಲೇ ಹೇಳಿದಂತೆ ಅಣ್ಣಾ ಅವರ ಹೋರಾಟಗಳು ಆರ್ಎಸ್ಎಸ್ನ ಪೂರ್ವಯೋಜಿತ ಕಾರ್ಯಕ್ರಮಗಳು~ ಎಂದು ಪುನರುಚ್ಚರಿಸಿದೆ. ಆದರೆ ಅಣ್ಣಾ ಈ ಮಾತುಗಳನ್ನು ಬಲವಾಗಿ ಅಲ್ಲಗಳೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> `ಸುಖಾಸುಮ್ಮನೆ ನಮ್ಮ ಜೊತೆ ವೈರತ್ವ ಕಟ್ಟಿಕೊಳ್ಳಬೇಡಿ.~ ಇದು ಗಾಂಧಿವಾದಿ ಅಣ್ಣಾ ಹಜಾರೆ ಅವರಿಗೆ ಶಿವಸೇನಾ ಮುಖ್ಯಸ್ಥ ಬಾಳಾ ಸಾಹೇಬ್ ಠಾಕ್ರೆ ನೀಡಿರುವ ಎಚ್ಚರಿಕೆ.<br /> <br /> ಮಹಾರಾಷ್ಟ್ರದ ಈ ಎರಡೂ ಹಿರಿಯ `ಮರಾಠಿ ಮಾಣುಸ್~ (ಮರಾಠಿ ಮನುಷ್ಯ) ಗಳು ಈಗ ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದು ಮಹಾರಾಷ್ಟ್ರದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದಾರೆ.<br /> <br /> ದಸರಾ ಹಬ್ಬದ ಪ್ರಯುಕ್ತ ಗುರುವಾರ ಮುಂಬೈನಲ್ಲಿ ನಡೆದ ರ್ಯಾಲಿಯಲ್ಲಿ ಶಿವಸೇನಾ ಪ್ರಮುಖ ಬಾಳಾ ಠಾಕ್ರೆ ಅವರು ಅಣ್ಣಾ ಅವರನ್ನು ಕಟು ಮಾತುಗಳಿಂದ ಇರಿದಿದ್ದರು. <br /> <br /> ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟ `ಒಂದು ದೊಡ್ಡ ಜೋಕ್~ ಎಂದು ಬಣ್ಣಿಸಿದ್ದ ಠಾಕ್ರೆ, ಅಣ್ಣಾ ಅವರೇ ಈ ದೇಶದಲ್ಲಿ ಭ್ರಷ್ಟಾಚಾರ ಕೊನೆಗೊಳ್ಳುವುದಿಲ್ಲ. ಇದರಲ್ಲಿ ದೊಡ್ಡ ದೊಡ್ಡ ತಿಮಿಂಗಲುಗಳು ಸೇರಿಕೊಂಡಿವೆ. ಇವುಗಳನ್ನು ಹಿಡಿಯಲು ಹೋಗಿ ನಿಮ್ಮ ಬಲೆಯೇ ಹಾಳಾಗುತ್ತದೆ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಯಾಗಿ ಅಣ್ಣಾ ಅವರು, ಠಾಕ್ರೆ ಅವರಿಗೆ ವಯಸ್ಸಾಗುತ್ತಿದೆ. ಅದಕ್ಕೇ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹಂಗಿಸಿದ್ದರು. <br /> <br /> ಈ ಮಾತುಗಳನ್ನೇ ಗುರಿಯಾಗಿಸಿಕೊಂಡು ಶುಕ್ರವಾರ ಹೇಳಿಕೆಯೊಂದನ್ನು ಹೊರಡಿಸಿರುವ ಶಿವಸೇನೆ, ಅಣ್ಣಾ ಅವರಿಗೆ ನಾವು ತಕ್ಕ ಉತ್ತರ ಕೊಡಬಲ್ಲೆವು. ನಾವೇನೂ ಗಾಂಧಿವಾದಿಗಳಲ್ಲ ಎಂದು ಕ್ರೋಧ ವ್ಯಕ್ತಪಡಿಸಿದ್ದಾರೆ.<br /> <br /> `ಅಣ್ಣಾ ಅವರೇ ನೀವು ನನಗಿಂತಲೂ ಚಿಕ್ಕವರು. ಚಿಕ್ಕವರ ಈ ಹುಡುಗಾಟ ನನಗೆ ಹಿಡಿಸುವುದಿಲ್ಲ. ಸುಮ್ಮಸುಮ್ಮನೇ ನಮ್ಮ ಜೊತೆ ವೈರತ್ವ ಕಟ್ಟಿಕೊಳ್ಳಬೇಡಿ~ ಎಂದು ಎಚ್ಚರಿಸಿದ್ದಾರೆ.<br /> <br /> `ಅಣ್ಣಾ ರಾಮಲೀಲಾ ಮೈದಾನದಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹ ಒಂದು ಪ್ರಹಸನ. ರಾಮಲೀಲಾ ಮೈದಾನದಲ್ಲಿ 35 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದು ಪಂಚತಾರಾ ಉಪವಾಸ! ಅಣ್ಣಾ ಏನೋ ಪ್ರಾಮಾಣಿಕವಾಗಿ ಭ್ರಷ್ಟಾಚಾರ ವಿರುದ್ಧ ಸತ್ಯಾಗ್ರಹ ನಡೆಸಬಹುದು. ಆದರೆ ಈ ದೇಶದಲ್ಲಿ ಭ್ರಷ್ಟಾಚಾರ ಕೊನೆಗೊಳ್ಳುವುದಿಲ್ಲ~ ಎಂದು ಠಾಕ್ರೆ ಹೇಳಿದ್ದಾರೆ.<br /> <br /> ರಾಳೆಗಣ ಸಿದ್ಧಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, `ಅವರು ಏನು ಹೇಳುತ್ತಿದ್ದಾರೊ ಅದು ಅವರಿಗೆ ಮಾತ್ರವೇ ಸರಿ ಎನಿಸಬಲ್ಲುದು. ಆದರೆ ನಾವು ನಮಗೆ ಏನು ಸರಿ ಎನಿಸುತ್ತಿದೆಯೊ ಅದನ್ನು ಮಾಡುತ್ತಿದ್ದೇವೆ ಅಷ್ಟೇ. ಪ್ರತಿಯೊಬ್ಬರಿಗೂ ಅವಮಾನಗಳನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕು~ ಎಂದು ನುಡಿದಿದ್ದಾರೆ.<br /> <br /> ವಿಚಿತ್ರವೆಂದರೆ ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಹೋರಾಟ ಆರಂಭಿಸಿದ ಮೊದಲ ದಿನಗಳಲ್ಲಿ ಶಿವಸೇನೆ ಅವರನ್ನು ಬೆಂಬಲಿಸಿತ್ತು. ಅಂದು ಅಣ್ಣಾ ಅವರು ಉಪವಾಸ ಕುಳಿತಿದ್ದ ರಾಮಲೀಲಾ ಮೈದಾನಕ್ಕೆ ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಕೂಡಾ ಭೇಟಿ ನೀಡಿ ಸಹಮತ ವ್ಯಕ್ತಪಡಿಸಿದ್ದರು.<br /> <br /> <strong>ಆರ್ಎಸ್ಎಸ್ ಸಂಪರ್ಕ ಇಲ್ಲ: ಅಣ್ಣಾ<br /> ರಾಳೆಗಣ ಸಿದ್ಧಿ/ನವದೆಹಲಿ:</strong> ತಮ್ಮ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಆರ್ಎಸ್ಎಸ್ ಕೈಜೋಡಿಸಿದೆ ಎಂಬ ಹೇಳಿಕೆಗಳನ್ನು ಗಾಂಧಿವಾದಿ ಅಣ್ಣಾ ಹಜಾರೆ ಅಲ್ಲಗಳೆದಿದ್ದಾರೆ.<br /> <br /> ದಸರಾ ಹಬ್ಬದ ಪ್ರಯುಕ್ತ ಗುರುವಾರ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್ ಅವರು, `ಸಂಘದ ಸ್ವಯಂ ಸೇವಕರು ಈ ದೇಶದ ಎಲ್ಲ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ~ ಎಂದು ಹೇಳಿದ್ದರು. <br /> <br /> ಇದನ್ನೇ ಗುರಿಯಾಗಿಸಿಕೊಂಡ ಕಾಂಗ್ರೆಸ್, `ನಾವು ಮೊದಲೇ ಹೇಳಿದಂತೆ ಅಣ್ಣಾ ಅವರ ಹೋರಾಟಗಳು ಆರ್ಎಸ್ಎಸ್ನ ಪೂರ್ವಯೋಜಿತ ಕಾರ್ಯಕ್ರಮಗಳು~ ಎಂದು ಪುನರುಚ್ಚರಿಸಿದೆ. ಆದರೆ ಅಣ್ಣಾ ಈ ಮಾತುಗಳನ್ನು ಬಲವಾಗಿ ಅಲ್ಲಗಳೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>