<p>ಜಮಖಂಡಿ: ಕರ್ನಾಟಕ ಇತಿಹಾಸ ಅಕಾಡೆಮಿ ಹಮ್ಮಿಕೊಂಡಿರುವ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಅಂಗವಾಗಿ ಸ್ಥಳೀಯ ಬಿಎಲ್ಡಿಇಎ ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಪರಂಪರೆ ಕೂಟ ಇವರ ಸಹಯೋಗದಲ್ಲಿ ಇಲ್ಲಿನ ರಾಮತೀರ್ಥ ಅರಮನೆಯ ಆವರಣದಲ್ಲಿರುವ ರಾಮೇಶ್ವರ ದೇವಸ್ಥಾನದ ಐತಿಹಾಸಿಕ ದೀಪಸ್ತಂಭ ರಕ್ಷಣೆ ಅಭಿಯಾನ ನಡೆಸಿದರು.<br /> <br /> ದೀಪಸ್ತಂಭದ ಮೇಲೆ ಬೆಳೆದ ಗಿಡಗಳನ್ನು ಎನ್ಎಸ್ಎಸ್ ಸ್ವಯಂ ಸೇವಕರು ಕಿತ್ತು ತೆಗೆದರು. ಬೇರುಗಳು ಮತ್ತೆ ಚಿಗುರದಂತೆ ಬೇರುಗಳ ಮೇಲೆ ಅಸಿಡ್ ಹಾಕಿದರು. ರಾಮೇಶ್ವರ ದೇವಸ್ಥಾನದ ಆವರಣ ಮತ್ತು ದೀಪಸ್ತಂಭದ ಸುತ್ತಲೂ ಸ್ವಚ್ಛತಾ ಅಭಿಯಾನ ಕೈಕೊಂಡರು.<br /> <br /> ಐತಿಹಾಸಿಕ ಸ್ಮಾರಕಗಳ ರಕ್ಷಣೆಯ ಮಹತ್ವ ಸಾರುವ ಭಿತ್ತಿಫಲಕಗಳನ್ನು ಅರಮನೆಯ ಆವರಣದಲ್ಲಿ ಅಲ್ಲಲ್ಲಿ ಅಂಟಿಸಿದರು. ಕೋಟೆ ಕೊತ್ತಲಗಳ ಕಲ್ಲು ಕಿತ್ತರೆ ಪ್ರಾಚೀನ ಪರಂಪರೆಯ ಪಂಚಾಂಗ ಕಿತ್ತಂತೆ ಎಂಬ ಸಂಗತಿಯನ್ನು ಅಲ್ಲಿನ ಸಾರ್ವಜನಿಕರ ಗಮನಕ್ಕೆ ತಂದರು.<br /> <br /> ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಎಸ್.ಎಸ್. ಸುವರ್ಣಖಂಡಿ ಮಾತನಾಡಿ, ಐತಿಹಾಸಿಕ ಸ್ಮಾರಕಗಳ ಮೇಲೆ ಹಾಗೂ ಯಾವುದೇ ಕಟ್ಟಡಗಳ ಮೇಲೆ ಗಿಡಗಳು ಬೆಳೆಯುವುದರಿಂದ ಕಟ್ಟಡದ ಕಲ್ಲುಗಳು ಸಡಿಲುಗೊಂಡು ಕಟ್ಟಡದ ಆಯುಷ್ಯ ಕಡಿಮೆಯಾಗುತ್ತದೆ. ಕಾರಣ ಕಟ್ಟಡಗಳ ಮೇಲೆ ಗಿಡಗಳು ಬೆಳೆಯದಂತೆ ಜಾಗೃತಿ ವಹಿಸಬೇಕು ಎಂದರು.<br /> <br /> ಎನ್ಎಸ್ಎಸ್ ಅಧಿಕಾರಿ ಪ್ರೊ. ಎ.ವಿ. ಸೂರ್ಯವಂಶಿ, ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯ, ಪರಂಪರೆ ಕೂಟದ ಸಂಚಾಲಕ ಪ್ರೊ. ಕೆ. ಚನ್ನಬಸಪ್ಪ ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಟಿ.ಪಿ. ಗಿರಡ್ಡಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಮಖಂಡಿ: ಕರ್ನಾಟಕ ಇತಿಹಾಸ ಅಕಾಡೆಮಿ ಹಮ್ಮಿಕೊಂಡಿರುವ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಅಂಗವಾಗಿ ಸ್ಥಳೀಯ ಬಿಎಲ್ಡಿಇಎ ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಪರಂಪರೆ ಕೂಟ ಇವರ ಸಹಯೋಗದಲ್ಲಿ ಇಲ್ಲಿನ ರಾಮತೀರ್ಥ ಅರಮನೆಯ ಆವರಣದಲ್ಲಿರುವ ರಾಮೇಶ್ವರ ದೇವಸ್ಥಾನದ ಐತಿಹಾಸಿಕ ದೀಪಸ್ತಂಭ ರಕ್ಷಣೆ ಅಭಿಯಾನ ನಡೆಸಿದರು.<br /> <br /> ದೀಪಸ್ತಂಭದ ಮೇಲೆ ಬೆಳೆದ ಗಿಡಗಳನ್ನು ಎನ್ಎಸ್ಎಸ್ ಸ್ವಯಂ ಸೇವಕರು ಕಿತ್ತು ತೆಗೆದರು. ಬೇರುಗಳು ಮತ್ತೆ ಚಿಗುರದಂತೆ ಬೇರುಗಳ ಮೇಲೆ ಅಸಿಡ್ ಹಾಕಿದರು. ರಾಮೇಶ್ವರ ದೇವಸ್ಥಾನದ ಆವರಣ ಮತ್ತು ದೀಪಸ್ತಂಭದ ಸುತ್ತಲೂ ಸ್ವಚ್ಛತಾ ಅಭಿಯಾನ ಕೈಕೊಂಡರು.<br /> <br /> ಐತಿಹಾಸಿಕ ಸ್ಮಾರಕಗಳ ರಕ್ಷಣೆಯ ಮಹತ್ವ ಸಾರುವ ಭಿತ್ತಿಫಲಕಗಳನ್ನು ಅರಮನೆಯ ಆವರಣದಲ್ಲಿ ಅಲ್ಲಲ್ಲಿ ಅಂಟಿಸಿದರು. ಕೋಟೆ ಕೊತ್ತಲಗಳ ಕಲ್ಲು ಕಿತ್ತರೆ ಪ್ರಾಚೀನ ಪರಂಪರೆಯ ಪಂಚಾಂಗ ಕಿತ್ತಂತೆ ಎಂಬ ಸಂಗತಿಯನ್ನು ಅಲ್ಲಿನ ಸಾರ್ವಜನಿಕರ ಗಮನಕ್ಕೆ ತಂದರು.<br /> <br /> ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಎಸ್.ಎಸ್. ಸುವರ್ಣಖಂಡಿ ಮಾತನಾಡಿ, ಐತಿಹಾಸಿಕ ಸ್ಮಾರಕಗಳ ಮೇಲೆ ಹಾಗೂ ಯಾವುದೇ ಕಟ್ಟಡಗಳ ಮೇಲೆ ಗಿಡಗಳು ಬೆಳೆಯುವುದರಿಂದ ಕಟ್ಟಡದ ಕಲ್ಲುಗಳು ಸಡಿಲುಗೊಂಡು ಕಟ್ಟಡದ ಆಯುಷ್ಯ ಕಡಿಮೆಯಾಗುತ್ತದೆ. ಕಾರಣ ಕಟ್ಟಡಗಳ ಮೇಲೆ ಗಿಡಗಳು ಬೆಳೆಯದಂತೆ ಜಾಗೃತಿ ವಹಿಸಬೇಕು ಎಂದರು.<br /> <br /> ಎನ್ಎಸ್ಎಸ್ ಅಧಿಕಾರಿ ಪ್ರೊ. ಎ.ವಿ. ಸೂರ್ಯವಂಶಿ, ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯ, ಪರಂಪರೆ ಕೂಟದ ಸಂಚಾಲಕ ಪ್ರೊ. ಕೆ. ಚನ್ನಬಸಪ್ಪ ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಟಿ.ಪಿ. ಗಿರಡ್ಡಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>