<p>ಕಿಶ್ತ್ವಾರ್ (ಪಿಟಿಐ): `ನಮ್ಮ ಪುತ್ರನ ವಿರುದ್ಧ ತನಿಖೆ ನಡೆಸಿ, ಒಂದು ವೇಳೆ ಈ ಕೃತ್ಯದಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ ಆತನನ್ನು ಗಲ್ಲಿಗೇರಿಸಿ~ ಎಂದು ದೆಹಲಿ ಹೈಕೋರ್ಟ್ ಸ್ಫೋಟದ ಹೊಣೆ ಹೊತ್ತ ಇ-ಮೇಲ್ ಕಳುಹಿಸಿ ಬಂಧನಕ್ಕೆ ಒಳಗಾಗಿರುವ ಜಮ್ಮು ಕಾಶ್ಮೀರದ ಯುವಕನ ಪೋಷಕರು ಹೇಳಿದ್ದಾರೆ.<br /> <br /> ಆದರೆ ತಮ್ಮ ಪುತ್ರ ಈ ದುಷ್ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಸಹ ಇದೇ ವೇಳೆ ಅವರು ಸಮರ್ಥಿಸಿಕೊಂಡಿದ್ದಾರೆ.<br /> <br /> `ನಮ್ಮ ಮಗ ಮುಗ್ಧ, ಈ ಚಟುವಟಿಕೆಗಳಿಗೂ ಆತನಿಗೂ ಸಂಬಂಧ ಇಲ್ಲ~ ಎಂದು ಬಂಧಿತ ಯುವಕ ಶೋಯೆಬ್ನ ತಂದೆ ಮುಷ್ತಾಕ್ ಅಹಮದ್ ಶೇಖ್ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಿ.ಎ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಶೋಯೆಬ್ನನ್ನು ಕಿಶ್ತ್ವಾರ್ನ ಕಾಲೇಜೊಂದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬಂಧಿಸಿದ್ದರು. ನಂತರ ಇ-ಮೇಲ್ ಕಳುಹಿಸಿದ್ದ ಗ್ಲೋಬಲ್ ಸೈಬರ್ ಕೆಫೆಗೆ ಕರೆದುಕೊಂಡು ಹೋಗಿದ್ದರು. ಸೈಬರ್ ಕೆಫೆಯ ಮಾಲೀಕ ಸೇರಿದಂತೆ ಒಟ್ಟು ಐವರನ್ನು ಬಂಧಿಸಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಿಶ್ತ್ವಾರ್ (ಪಿಟಿಐ): `ನಮ್ಮ ಪುತ್ರನ ವಿರುದ್ಧ ತನಿಖೆ ನಡೆಸಿ, ಒಂದು ವೇಳೆ ಈ ಕೃತ್ಯದಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ ಆತನನ್ನು ಗಲ್ಲಿಗೇರಿಸಿ~ ಎಂದು ದೆಹಲಿ ಹೈಕೋರ್ಟ್ ಸ್ಫೋಟದ ಹೊಣೆ ಹೊತ್ತ ಇ-ಮೇಲ್ ಕಳುಹಿಸಿ ಬಂಧನಕ್ಕೆ ಒಳಗಾಗಿರುವ ಜಮ್ಮು ಕಾಶ್ಮೀರದ ಯುವಕನ ಪೋಷಕರು ಹೇಳಿದ್ದಾರೆ.<br /> <br /> ಆದರೆ ತಮ್ಮ ಪುತ್ರ ಈ ದುಷ್ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಸಹ ಇದೇ ವೇಳೆ ಅವರು ಸಮರ್ಥಿಸಿಕೊಂಡಿದ್ದಾರೆ.<br /> <br /> `ನಮ್ಮ ಮಗ ಮುಗ್ಧ, ಈ ಚಟುವಟಿಕೆಗಳಿಗೂ ಆತನಿಗೂ ಸಂಬಂಧ ಇಲ್ಲ~ ಎಂದು ಬಂಧಿತ ಯುವಕ ಶೋಯೆಬ್ನ ತಂದೆ ಮುಷ್ತಾಕ್ ಅಹಮದ್ ಶೇಖ್ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಿ.ಎ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಶೋಯೆಬ್ನನ್ನು ಕಿಶ್ತ್ವಾರ್ನ ಕಾಲೇಜೊಂದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬಂಧಿಸಿದ್ದರು. ನಂತರ ಇ-ಮೇಲ್ ಕಳುಹಿಸಿದ್ದ ಗ್ಲೋಬಲ್ ಸೈಬರ್ ಕೆಫೆಗೆ ಕರೆದುಕೊಂಡು ಹೋಗಿದ್ದರು. ಸೈಬರ್ ಕೆಫೆಯ ಮಾಲೀಕ ಸೇರಿದಂತೆ ಒಟ್ಟು ಐವರನ್ನು ಬಂಧಿಸಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>