<p>ಕಠ್ಮಂಡು (ಪಿಟಿಐ): ಜನವರಿ ಮಧ್ಯಭಾಗದಲ್ಲಿ ಸೇನೆಯ ಎರಡು ತುಕಡಿಗಳು ದೆಹಲಿಯತ್ತ ದೌಡಾಯಿಸಿದ್ದವು ಎಂಬ ಸುದ್ದಿಯನ್ನು ಅಲ್ಲಗಳೆದಿರುವ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್, ಇದೊಂದು `ಶುದ್ಧ ಮೂರ್ಖತನ~ದಿಂದ ಕೂಡಿದ ವರದಿಯಾಗಿದೆ ಎಂದು ಖಂಡಿಸಿದ್ದಾರೆ.<br /> <br /> ಈ ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಇದೇ ಮೊದಲ ಬಾರಿ ಮೌನ ಮುರಿದ ವಿ.ಕೆ. ಸಿಂಗ್, ಸರ್ಕಾರ ಮತ್ತು ಸೇನೆಯ ಮೇಲೆ ಕೆಸರೆರೆಚುವ ಯತ್ನಗಳು ನಡೆಯುತ್ತಿವೆ ಎಂದು ಟೀಕಿಸಿದರು.<br /> <br /> ಸರ್ಕಾರ ಮತ್ತು ಸೇನೆಗೆ ಕಳಂಕ ಹಚ್ಚಲು ಕೆಲ ವ್ಯಕ್ತಿಗಳು ಯತ್ನಿಸುತ್ತಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕಿದೆ ಎಂದು ಅವರು ಹೇಳಿದರು.<br /> <br /> ಸಿಂಗ್ ಪ್ರಸ್ತುತ ಮೂರು ದಿನಗಳ ನೇಪಾಳ ಭೇಟಿಗಾಗಿ ಕಠ್ಮಂಡುಗೆ ಆಗಮಿಸಿದ್ದಾರೆ. `ನೈಸರ್ಗಿಕ ವಿಕೋಪ ನಿರ್ವಹಣೆ ಹಾಗೂ ಮಾನವೀಯ ನೆರವು~ ಕುರಿತಾದ ಪ್ರಾದೇಶಿಕ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದಾರೆ. <br /> <br /> `ಜನವರಿ 16-17ರ ಮಧ್ಯರಾತ್ರಿ ಹರಿಯಾಣಾದ ಹಿಸ್ಸಾರ್ನಿಂದ ಪದಾತಿ ದಳದ ಸೈನಿಕರು ಹಾಗೂ 50 ಪ್ಯಾರಾ ಬ್ರಿಗೇಡ್ನ ಕೆಲ ಸೈನಿಕರು ದೆಹಲಿಯತ್ತ ಧಾವಿಸಿದ್ದರು. ಇದರಿಂದ ಸರ್ಕಾರ ಗಾಬರಿಗೊಂಡಿತ್ತು~ ಎಂಬ ವರದಿ ದೆಹಲಿ ಮೂಲದ ಆಂಗ್ಲ ಪತ್ರಿಕೆಯಲ್ಲಿ ಬುಧವಾರ ಪ್ರಕಟಗೊಂಡಿತ್ತು.<br /> <br /> ಈ ವರದಿಯ ಕುರಿತು ಪ್ರತಿಕ್ರಿಯಿಸುವಂತೆ ಕೇಳಿದಾಗ, ಇದೊಂದು ಸಂಪೂರ್ಣ ಮೂರ್ಖತನದ ವರದಿ ಎಂದು ಕಿಡಿಕಾರಿದರು. ಸೇನಾ ಮುಖ್ಯಸ್ಥರ ವಿರುದ್ಧ ಸುದ್ದಿ ಹಬ್ಬಿಸುತ್ತಿರುವವರೆಲ್ಲ ಖಂಡನೆಗೆ ಅರ್ಹರು ಎಂದೂ ಸಿಂಗ್ ಹೇಳಿದರು.<br /> <br /> ಈ ಕುರಿತು ಬುಧವಾರ ಪ್ರತಿಕ್ರಿಯಿಸಿದ್ದ ಪ್ರಧಾನಿ ಮನಮೋಹನ್ಸಿಂಗ್ ಹಾಗೂ ಸೇನಾ ಅಧಿಕಾರಿಗಳು ಈ ವರದಿ ಕಳವಳಕ್ಕೆ ಕಾರಣವಾಗಿದೆ ಹಾಗೆಯೇ ಇದು ಸಂಪೂರ್ಣ ಆಧಾರರಹಿತವಾಗಿದೆ ಎಂದು ಖಂಡಿಸಿದ್ದರು.<br /> </p>.<p><strong>ನೇಪಾಳ ನಾಯಕರ ಭೇಟಿ</strong><br /> ಕಠ್ಮಂಡು (ಪಿಟಿಐ): ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್, ಗುರುವಾರ ನೇಪಾಳ ರಾಷ್ಟ್ರಪತಿ ಯಾದವ್ ಹಾಗೂ ಪ್ರಧಾನಿ ಬಾಬುರಾಮ್ ಭಟ್ಟಾರೈ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧ ಬಲಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.<br /> <br /> ರಾಷ್ಟ್ರಪತಿ ಯಾದವ್ ಜತೆಗಿನ ಭೇಟಿಯಲ್ಲಿ ಸಿಂಗ್ ನೇಪಾಳದ ಶಾಂತಿ ಮತ್ತು ಸಮೃದ್ಧಿಗಾಗಿ ಶುಭ ಹಾರೈಸಿದರು. <br /> ಪ್ರಧಾನಿ ಬಾಬುರಾಮ್ ಭಟ್ಟಾರೈ ಜತೆಗಿನ ಮಾತುಕತೆಯಲ್ಲಿ ಭಾರತ-ನೇಪಾಳ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚಿಸಲಾಯಿತು ಎಂದು ಸಿಂಗ್ ತಿಳಿಸಿದರು.<br /> <br /> ನೇಪಾಳದಲ್ಲಿ ಭಾರತದ ರಾಯಭಾರಿಯಾಗಿರುವ ಜಯಂತ್ ಪ್ರಸಾದ್ ಈ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಠ್ಮಂಡು (ಪಿಟಿಐ): ಜನವರಿ ಮಧ್ಯಭಾಗದಲ್ಲಿ ಸೇನೆಯ ಎರಡು ತುಕಡಿಗಳು ದೆಹಲಿಯತ್ತ ದೌಡಾಯಿಸಿದ್ದವು ಎಂಬ ಸುದ್ದಿಯನ್ನು ಅಲ್ಲಗಳೆದಿರುವ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್, ಇದೊಂದು `ಶುದ್ಧ ಮೂರ್ಖತನ~ದಿಂದ ಕೂಡಿದ ವರದಿಯಾಗಿದೆ ಎಂದು ಖಂಡಿಸಿದ್ದಾರೆ.<br /> <br /> ಈ ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಇದೇ ಮೊದಲ ಬಾರಿ ಮೌನ ಮುರಿದ ವಿ.ಕೆ. ಸಿಂಗ್, ಸರ್ಕಾರ ಮತ್ತು ಸೇನೆಯ ಮೇಲೆ ಕೆಸರೆರೆಚುವ ಯತ್ನಗಳು ನಡೆಯುತ್ತಿವೆ ಎಂದು ಟೀಕಿಸಿದರು.<br /> <br /> ಸರ್ಕಾರ ಮತ್ತು ಸೇನೆಗೆ ಕಳಂಕ ಹಚ್ಚಲು ಕೆಲ ವ್ಯಕ್ತಿಗಳು ಯತ್ನಿಸುತ್ತಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕಿದೆ ಎಂದು ಅವರು ಹೇಳಿದರು.<br /> <br /> ಸಿಂಗ್ ಪ್ರಸ್ತುತ ಮೂರು ದಿನಗಳ ನೇಪಾಳ ಭೇಟಿಗಾಗಿ ಕಠ್ಮಂಡುಗೆ ಆಗಮಿಸಿದ್ದಾರೆ. `ನೈಸರ್ಗಿಕ ವಿಕೋಪ ನಿರ್ವಹಣೆ ಹಾಗೂ ಮಾನವೀಯ ನೆರವು~ ಕುರಿತಾದ ಪ್ರಾದೇಶಿಕ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದಾರೆ. <br /> <br /> `ಜನವರಿ 16-17ರ ಮಧ್ಯರಾತ್ರಿ ಹರಿಯಾಣಾದ ಹಿಸ್ಸಾರ್ನಿಂದ ಪದಾತಿ ದಳದ ಸೈನಿಕರು ಹಾಗೂ 50 ಪ್ಯಾರಾ ಬ್ರಿಗೇಡ್ನ ಕೆಲ ಸೈನಿಕರು ದೆಹಲಿಯತ್ತ ಧಾವಿಸಿದ್ದರು. ಇದರಿಂದ ಸರ್ಕಾರ ಗಾಬರಿಗೊಂಡಿತ್ತು~ ಎಂಬ ವರದಿ ದೆಹಲಿ ಮೂಲದ ಆಂಗ್ಲ ಪತ್ರಿಕೆಯಲ್ಲಿ ಬುಧವಾರ ಪ್ರಕಟಗೊಂಡಿತ್ತು.<br /> <br /> ಈ ವರದಿಯ ಕುರಿತು ಪ್ರತಿಕ್ರಿಯಿಸುವಂತೆ ಕೇಳಿದಾಗ, ಇದೊಂದು ಸಂಪೂರ್ಣ ಮೂರ್ಖತನದ ವರದಿ ಎಂದು ಕಿಡಿಕಾರಿದರು. ಸೇನಾ ಮುಖ್ಯಸ್ಥರ ವಿರುದ್ಧ ಸುದ್ದಿ ಹಬ್ಬಿಸುತ್ತಿರುವವರೆಲ್ಲ ಖಂಡನೆಗೆ ಅರ್ಹರು ಎಂದೂ ಸಿಂಗ್ ಹೇಳಿದರು.<br /> <br /> ಈ ಕುರಿತು ಬುಧವಾರ ಪ್ರತಿಕ್ರಿಯಿಸಿದ್ದ ಪ್ರಧಾನಿ ಮನಮೋಹನ್ಸಿಂಗ್ ಹಾಗೂ ಸೇನಾ ಅಧಿಕಾರಿಗಳು ಈ ವರದಿ ಕಳವಳಕ್ಕೆ ಕಾರಣವಾಗಿದೆ ಹಾಗೆಯೇ ಇದು ಸಂಪೂರ್ಣ ಆಧಾರರಹಿತವಾಗಿದೆ ಎಂದು ಖಂಡಿಸಿದ್ದರು.<br /> </p>.<p><strong>ನೇಪಾಳ ನಾಯಕರ ಭೇಟಿ</strong><br /> ಕಠ್ಮಂಡು (ಪಿಟಿಐ): ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್, ಗುರುವಾರ ನೇಪಾಳ ರಾಷ್ಟ್ರಪತಿ ಯಾದವ್ ಹಾಗೂ ಪ್ರಧಾನಿ ಬಾಬುರಾಮ್ ಭಟ್ಟಾರೈ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧ ಬಲಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.<br /> <br /> ರಾಷ್ಟ್ರಪತಿ ಯಾದವ್ ಜತೆಗಿನ ಭೇಟಿಯಲ್ಲಿ ಸಿಂಗ್ ನೇಪಾಳದ ಶಾಂತಿ ಮತ್ತು ಸಮೃದ್ಧಿಗಾಗಿ ಶುಭ ಹಾರೈಸಿದರು. <br /> ಪ್ರಧಾನಿ ಬಾಬುರಾಮ್ ಭಟ್ಟಾರೈ ಜತೆಗಿನ ಮಾತುಕತೆಯಲ್ಲಿ ಭಾರತ-ನೇಪಾಳ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚಿಸಲಾಯಿತು ಎಂದು ಸಿಂಗ್ ತಿಳಿಸಿದರು.<br /> <br /> ನೇಪಾಳದಲ್ಲಿ ಭಾರತದ ರಾಯಭಾರಿಯಾಗಿರುವ ಜಯಂತ್ ಪ್ರಸಾದ್ ಈ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>