<p><strong>ಚಿಕ್ಕನಾಯಕನಹಳ್ಳಿ: </strong>ಅಬ್ಬಿಗೆ ಬೆಟ್ಟ ಪ್ರದೇಶದ ಅಬ್ಬಿಗೆ ಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಸಾರ್ವಜನಿಕರು ಹೋಗಲು ಈಗಲೂ ಗಣಿಧಣಿಗಳ ಅಪ್ಪಣೆ ಪಡೆಯಬೇಕಿದೆ.<br /> <br /> ಈ ಭಾಗದ ಗಣಿ ಪ್ರದೇಶದಲ್ಲಿ ಅಬ್ಬಿಗೆ ಗುಡ್ಡ ಸಾಲಿನಲ್ಲಿರುವ ಮಲ್ಲೇಶ್ವರಸ್ವಾಮಿ ದೇವಾಲಯ ಪ್ರಾಮುಖ್ಯತೆ ಪಡೆದಿದೆ. ಗಣಿ ಚಟುವಟಿಕೆ ಆರಂಭಗೊಂಡ ಮೊದಲಿಗೆ ದೇಗುಲಕ್ಕೆ ಹೋಗಿ ಬರಲು ಭಕ್ತರಿಗೆ ಯಾವುದೇ ಅಡೆತಡೆ ಇರಲಿಲ್ಲ. ನಂತರ ಗಣಿ ಚಟುವಟಿಕೆ ದೇಗುಲದ ಸಮೀಪಕ್ಕೆ ಬಂದು ನಿಂತಿತ್ತು.</p>.<p>ಎತ್ತರ ಪ್ರದೇಶದ ನೆತ್ತಿಯಲ್ಲಿರುವ ದೇಗುಲದ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಗುಣಮಟ್ಟದ ಕಬ್ಬಿಣದ ಅದಿರು ಇರುವುದರಿಂದ ದೇಗುಲವನ್ನೇ ಸ್ಥಳಾಂತರಿಸುವ ಗಣಿ ಕಂಪನಿಗಳ ಹುನ್ನಾರಕ್ಕೆ ವ್ಯಾಪಕ ಪ್ರತಿಭಟನೆ ಬಂದ ಕಾರಣ ತಡೆ ನೀಡಲಾಯಿತು. <br /> <br /> ದೇಗುಲದ ಸುತ್ತ 200 ಮೀ. ವ್ಯಾಪ್ತಿ ಗಣಿ ಚಟುವಟಿಕೆಗೆ ನಿಷೇಧವಿದೆ. ಅಂದಿನಿಂದ ದೇಗುಲದ ವ್ಯಾಪ್ತಿಯಲ್ಲಿ ಬರುವ ಸುರೇಂದ್ರನಾಥ್ ಸಿಂಗ್, ಗಣಪತಿಸಿಂಗ್ ಹಾಗೂ ಪೊದ್ದಾರ್ ಮಿನರಲ್ಸ್ ಕಂಪನಿಯವರು ದೇವಾಲಯದ ರಸ್ತೆಯನ್ನು ನಿರ್ಬಂಧಿಸಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.</p>.<p>ದೇವಾಲಯಕ್ಕೆ ಬರುವ ಭಕ್ತರನ್ನು ಇಲ್ಲಿನ ಭದ್ರತಾ ಸಿಬ್ಬಂದಿ ತಡೆಯುತ್ತಾರೆ. ನಂತರ ತನ್ನ ಮಾಲಿಕರಿಗೆ ವಾಕಿಟಾಕಿಯಲ್ಲಿ ಸಂಪರ್ಕಿಸಿ ಅವರ ಒಪ್ಪಿಗೆಯ ನಂತರ ಒಳಕ್ಕೆ ಬಿಡುವ ಪರಿಪಾಟ ಕಳೆದೈದು ವರ್ಷದಿಂದ ಮುಂದುವರೆದಿದೆ. <br /> <br /> ಆದರೆ ಈಚೆಗೆ ಕೇಂದ್ರ ತನಿಖಾ ತಂಡ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಗಣಿ ಅಕ್ರಮಗಳ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ನಂತರ, ಗಣಿ ಚಟುವಟಿಕೆಗೆ ನಿಷೇಧವಿದ್ದರೂ ದೇವಾಲಯಕ್ಕೆ ಹೋಗಲು ಭಕ್ತರಿಗೆ ಗಣಿಧಣಿಗಳ ಪರವಾನಗಿ ಕಡ್ಡಾಯ ವಾಗಿದೆ.</p>.<p>ಆದರೆ ಇಲ್ಲಿಗೆ ಪ್ರಕೃತಿ ಸೌಂದರ್ಯ ಸವಿಯುವ ಇಲ್ಲವೆ ಗಣಿ ಪ್ರದೇಶವನ್ನು ವೀಕ್ಷಿಸುವವರಿಗೆ ಬ್ಲಾಕ್ ಕಮಾಂಡೊ ಮಾದರಿಯ ಭದ್ರತಾ ಸಿಬ್ಬಂದಿ ಒಳಕ್ಕೆ ಬಿಡುವುದಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕನಾಯಕನಹಳ್ಳಿ: </strong>ಅಬ್ಬಿಗೆ ಬೆಟ್ಟ ಪ್ರದೇಶದ ಅಬ್ಬಿಗೆ ಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಸಾರ್ವಜನಿಕರು ಹೋಗಲು ಈಗಲೂ ಗಣಿಧಣಿಗಳ ಅಪ್ಪಣೆ ಪಡೆಯಬೇಕಿದೆ.<br /> <br /> ಈ ಭಾಗದ ಗಣಿ ಪ್ರದೇಶದಲ್ಲಿ ಅಬ್ಬಿಗೆ ಗುಡ್ಡ ಸಾಲಿನಲ್ಲಿರುವ ಮಲ್ಲೇಶ್ವರಸ್ವಾಮಿ ದೇವಾಲಯ ಪ್ರಾಮುಖ್ಯತೆ ಪಡೆದಿದೆ. ಗಣಿ ಚಟುವಟಿಕೆ ಆರಂಭಗೊಂಡ ಮೊದಲಿಗೆ ದೇಗುಲಕ್ಕೆ ಹೋಗಿ ಬರಲು ಭಕ್ತರಿಗೆ ಯಾವುದೇ ಅಡೆತಡೆ ಇರಲಿಲ್ಲ. ನಂತರ ಗಣಿ ಚಟುವಟಿಕೆ ದೇಗುಲದ ಸಮೀಪಕ್ಕೆ ಬಂದು ನಿಂತಿತ್ತು.</p>.<p>ಎತ್ತರ ಪ್ರದೇಶದ ನೆತ್ತಿಯಲ್ಲಿರುವ ದೇಗುಲದ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಗುಣಮಟ್ಟದ ಕಬ್ಬಿಣದ ಅದಿರು ಇರುವುದರಿಂದ ದೇಗುಲವನ್ನೇ ಸ್ಥಳಾಂತರಿಸುವ ಗಣಿ ಕಂಪನಿಗಳ ಹುನ್ನಾರಕ್ಕೆ ವ್ಯಾಪಕ ಪ್ರತಿಭಟನೆ ಬಂದ ಕಾರಣ ತಡೆ ನೀಡಲಾಯಿತು. <br /> <br /> ದೇಗುಲದ ಸುತ್ತ 200 ಮೀ. ವ್ಯಾಪ್ತಿ ಗಣಿ ಚಟುವಟಿಕೆಗೆ ನಿಷೇಧವಿದೆ. ಅಂದಿನಿಂದ ದೇಗುಲದ ವ್ಯಾಪ್ತಿಯಲ್ಲಿ ಬರುವ ಸುರೇಂದ್ರನಾಥ್ ಸಿಂಗ್, ಗಣಪತಿಸಿಂಗ್ ಹಾಗೂ ಪೊದ್ದಾರ್ ಮಿನರಲ್ಸ್ ಕಂಪನಿಯವರು ದೇವಾಲಯದ ರಸ್ತೆಯನ್ನು ನಿರ್ಬಂಧಿಸಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.</p>.<p>ದೇವಾಲಯಕ್ಕೆ ಬರುವ ಭಕ್ತರನ್ನು ಇಲ್ಲಿನ ಭದ್ರತಾ ಸಿಬ್ಬಂದಿ ತಡೆಯುತ್ತಾರೆ. ನಂತರ ತನ್ನ ಮಾಲಿಕರಿಗೆ ವಾಕಿಟಾಕಿಯಲ್ಲಿ ಸಂಪರ್ಕಿಸಿ ಅವರ ಒಪ್ಪಿಗೆಯ ನಂತರ ಒಳಕ್ಕೆ ಬಿಡುವ ಪರಿಪಾಟ ಕಳೆದೈದು ವರ್ಷದಿಂದ ಮುಂದುವರೆದಿದೆ. <br /> <br /> ಆದರೆ ಈಚೆಗೆ ಕೇಂದ್ರ ತನಿಖಾ ತಂಡ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಗಣಿ ಅಕ್ರಮಗಳ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ನಂತರ, ಗಣಿ ಚಟುವಟಿಕೆಗೆ ನಿಷೇಧವಿದ್ದರೂ ದೇವಾಲಯಕ್ಕೆ ಹೋಗಲು ಭಕ್ತರಿಗೆ ಗಣಿಧಣಿಗಳ ಪರವಾನಗಿ ಕಡ್ಡಾಯ ವಾಗಿದೆ.</p>.<p>ಆದರೆ ಇಲ್ಲಿಗೆ ಪ್ರಕೃತಿ ಸೌಂದರ್ಯ ಸವಿಯುವ ಇಲ್ಲವೆ ಗಣಿ ಪ್ರದೇಶವನ್ನು ವೀಕ್ಷಿಸುವವರಿಗೆ ಬ್ಲಾಕ್ ಕಮಾಂಡೊ ಮಾದರಿಯ ಭದ್ರತಾ ಸಿಬ್ಬಂದಿ ಒಳಕ್ಕೆ ಬಿಡುವುದಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>