<p>ಇಂದಿನ ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸುವುದರ ಜತೆಗೆ ಸ್ವಾತಂತ್ರ್ಯಕ್ಕಾಗಿ ಮಡಿದ ಕ್ರಾಂತಿವೀರರ ಆದರ್ಶಗಳನ್ನು ಬಿತ್ತಲು ನಿರಂತರವಾಗಿ ಶ್ರಮಿಸುತ್ತಿದೆ `ರಾಷ್ಟ್ರಗೌರವ ಸಂರಕ್ಷಣಾ ಪರಿಷತ್~.<br /> <br /> ಇದೊಂದು ಸ್ವಯಂ ಸೇವಾ ಸಂಸ್ಥೆ. ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಟಿ.ಎನ್. ರಾಮಕೃಷ್ಣ ಎಂಬುವವರು ಇದರ ಸ್ಥಾಪಕರು. <br /> <br /> ಇವರು ತುಮಕೂರು ಜಿಲ್ಲೆಯ ತಿಪಟೂರಿನವರು. ತಂದೆ ತಾಯಿ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು. ತಂದೆ ಟಿ.ನಾರಾಯಣ ಶಾಸ್ತ್ರಿಗಳು `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ~ ಚಳವಳಿಯಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿದವರು. ಇಂತಹ ಕೌಟುಂಬಿಕ ವಾತಾವರಣದಲ್ಲಿ ಬೆಳೆದ ಇವರಿಗೂ ತಂದೆಯಂತೆ ದೇಶದ ಬಗ್ಗೆ ಅತೀವ ಕಾಳಜಿ.<br /> <br /> ಓದಿದ್ದು ಕಾನೂನು ಪದವಿ. ಆದರೆ ವಕೀಲಿ ವೃತ್ತಿಗಿಂತ ದೇಶಪ್ರೇಮ ಬಿತ್ತುವುದರಲ್ಲೇ ಅತೀವ ಆಸಕ್ತಿ. ಆದ್ದರಿಂದಲೇ ಸ್ವಾತಂತ್ರ್ಯ ಹೋರಾಟಕ್ಕಾಗಿ ಮಡಿದ ಮಹನೀಯರ ಚರಿತ್ರೆಯ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಉಚಿತ ಉಪನ್ಯಾಸ ನೀಡುತ್ತ ಬಂದಿದ್ದಾರೆ. <br /> <br /> ಈಗಾಗಲೇ ರಾಜ್ಯದ 250 ಕ್ಕೂ ಹೆಚ್ಚು ಶಾಲಾ ಕಾಲೇಜುಗಳು ಮಾತ್ರವಲ್ಲದೆ ಹೊರ ರಾಜ್ಯಗಳ ಕಾಲೇಜುಗಳಲ್ಲೂ ಉಪನ್ಯಾಸ ನೀಡಿದ್ದಾರೆ.<br /> <br /> <strong>ಅಕ್ಷರ ಮಾಲೆ: </strong>ಇವರ ವಿಶೇಷ ಎಂದರೆ ಕನ್ನಡ ಮತ್ತು ಆಂಗ್ಲ ಭಾಷೆ ವರ್ಣಮಾಲೆಯ ಕೋಷ್ಟಕ ತಯಾರಿಸಿದ್ದಾರೆ. ಪ್ರತಿಯೊಂದು ವರ್ಣ ಮಾಲೆಯಲ್ಲಿ ಆಯಾ ಅಕ್ಷರದಿಂದ ಆರಂಭವಾಗುವ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಕಲೆ ಹಾಕಿ ದಾಖಲಿಸಿದ್ದಾರೆ. <br /> <br /> ಅಲ್ಲದೆ ಕ್ಯಾಲೆಂಡರ್ ಸಹ ಹೊರತಂದಿದ್ದಾರೆ. ಇದರಲ್ಲಿ ನಾಯಕರ ಜನ್ಮ ದಿನ, ಆ ದಿನದ ಮಹತ್ವದ ಮಾಹಿತಿ ನೀಡಿದ್ದಾರೆ. ಇದನ್ನು ಶಾಲೆ, ಕಾಲೇಜು, ನಗರದ ಪ್ರಮುಖ ಗ್ರಂಥಾಲಯಗಳಿಗೆ ಪುಕ್ಕಟೆಯಾಗಿ ವಿತರಿಸಿ ಸಾರ್ವಜನಿಕರಲ್ಲೂ ರಾಷ್ಟ್ರಪ್ರೇಮ ಬೆಳೆಸಲು ಶ್ರಮಿಸುತ್ತಿದ್ದಾರೆ. <br /> <br /> ದೇಶಾಭಿಮಾನ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಇವರಿಗೆ ಸ್ಫೂರ್ತಿ ನೀಡಿದ್ದು `ದಿ ಲೆಜೆಂಡ್ ಆಫ್ ಭಗತ್ ಸಿಂಗ್~ ಸಿನಿಮಾ.<br /> <br /> ನಿಮ್ಮ ಶಾಲೆ ಕಾಲೇಜುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಉಚಿತ ಉಪನ್ಯಾಸ ಏರ್ಪಡಿಸಲು 98456 72560 ಸಂಖ್ಯೆಯಲ್ಲಿ ರಾಮಕೃಷ್ಣ ಅವರನ್ನು ಸಂಪರ್ಕಿಸಬಹುದು. ಮಾಹಿತಿಗಾಗಿ <a href="http://www.rgspbharath.com">www.rgspbharath.com</a>. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂದಿನ ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸುವುದರ ಜತೆಗೆ ಸ್ವಾತಂತ್ರ್ಯಕ್ಕಾಗಿ ಮಡಿದ ಕ್ರಾಂತಿವೀರರ ಆದರ್ಶಗಳನ್ನು ಬಿತ್ತಲು ನಿರಂತರವಾಗಿ ಶ್ರಮಿಸುತ್ತಿದೆ `ರಾಷ್ಟ್ರಗೌರವ ಸಂರಕ್ಷಣಾ ಪರಿಷತ್~.<br /> <br /> ಇದೊಂದು ಸ್ವಯಂ ಸೇವಾ ಸಂಸ್ಥೆ. ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಟಿ.ಎನ್. ರಾಮಕೃಷ್ಣ ಎಂಬುವವರು ಇದರ ಸ್ಥಾಪಕರು. <br /> <br /> ಇವರು ತುಮಕೂರು ಜಿಲ್ಲೆಯ ತಿಪಟೂರಿನವರು. ತಂದೆ ತಾಯಿ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು. ತಂದೆ ಟಿ.ನಾರಾಯಣ ಶಾಸ್ತ್ರಿಗಳು `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ~ ಚಳವಳಿಯಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿದವರು. ಇಂತಹ ಕೌಟುಂಬಿಕ ವಾತಾವರಣದಲ್ಲಿ ಬೆಳೆದ ಇವರಿಗೂ ತಂದೆಯಂತೆ ದೇಶದ ಬಗ್ಗೆ ಅತೀವ ಕಾಳಜಿ.<br /> <br /> ಓದಿದ್ದು ಕಾನೂನು ಪದವಿ. ಆದರೆ ವಕೀಲಿ ವೃತ್ತಿಗಿಂತ ದೇಶಪ್ರೇಮ ಬಿತ್ತುವುದರಲ್ಲೇ ಅತೀವ ಆಸಕ್ತಿ. ಆದ್ದರಿಂದಲೇ ಸ್ವಾತಂತ್ರ್ಯ ಹೋರಾಟಕ್ಕಾಗಿ ಮಡಿದ ಮಹನೀಯರ ಚರಿತ್ರೆಯ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಉಚಿತ ಉಪನ್ಯಾಸ ನೀಡುತ್ತ ಬಂದಿದ್ದಾರೆ. <br /> <br /> ಈಗಾಗಲೇ ರಾಜ್ಯದ 250 ಕ್ಕೂ ಹೆಚ್ಚು ಶಾಲಾ ಕಾಲೇಜುಗಳು ಮಾತ್ರವಲ್ಲದೆ ಹೊರ ರಾಜ್ಯಗಳ ಕಾಲೇಜುಗಳಲ್ಲೂ ಉಪನ್ಯಾಸ ನೀಡಿದ್ದಾರೆ.<br /> <br /> <strong>ಅಕ್ಷರ ಮಾಲೆ: </strong>ಇವರ ವಿಶೇಷ ಎಂದರೆ ಕನ್ನಡ ಮತ್ತು ಆಂಗ್ಲ ಭಾಷೆ ವರ್ಣಮಾಲೆಯ ಕೋಷ್ಟಕ ತಯಾರಿಸಿದ್ದಾರೆ. ಪ್ರತಿಯೊಂದು ವರ್ಣ ಮಾಲೆಯಲ್ಲಿ ಆಯಾ ಅಕ್ಷರದಿಂದ ಆರಂಭವಾಗುವ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಕಲೆ ಹಾಕಿ ದಾಖಲಿಸಿದ್ದಾರೆ. <br /> <br /> ಅಲ್ಲದೆ ಕ್ಯಾಲೆಂಡರ್ ಸಹ ಹೊರತಂದಿದ್ದಾರೆ. ಇದರಲ್ಲಿ ನಾಯಕರ ಜನ್ಮ ದಿನ, ಆ ದಿನದ ಮಹತ್ವದ ಮಾಹಿತಿ ನೀಡಿದ್ದಾರೆ. ಇದನ್ನು ಶಾಲೆ, ಕಾಲೇಜು, ನಗರದ ಪ್ರಮುಖ ಗ್ರಂಥಾಲಯಗಳಿಗೆ ಪುಕ್ಕಟೆಯಾಗಿ ವಿತರಿಸಿ ಸಾರ್ವಜನಿಕರಲ್ಲೂ ರಾಷ್ಟ್ರಪ್ರೇಮ ಬೆಳೆಸಲು ಶ್ರಮಿಸುತ್ತಿದ್ದಾರೆ. <br /> <br /> ದೇಶಾಭಿಮಾನ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಇವರಿಗೆ ಸ್ಫೂರ್ತಿ ನೀಡಿದ್ದು `ದಿ ಲೆಜೆಂಡ್ ಆಫ್ ಭಗತ್ ಸಿಂಗ್~ ಸಿನಿಮಾ.<br /> <br /> ನಿಮ್ಮ ಶಾಲೆ ಕಾಲೇಜುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಉಚಿತ ಉಪನ್ಯಾಸ ಏರ್ಪಡಿಸಲು 98456 72560 ಸಂಖ್ಯೆಯಲ್ಲಿ ರಾಮಕೃಷ್ಣ ಅವರನ್ನು ಸಂಪರ್ಕಿಸಬಹುದು. ಮಾಹಿತಿಗಾಗಿ <a href="http://www.rgspbharath.com">www.rgspbharath.com</a>. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>