<p>ಇಪ್ಪತ್ತೈದು ದಿವಸಗಳ ಸತತ ಚಿತ್ರೀಕರಣದಲ್ಲಿ ನಿರತವಾಗಿತ್ತು `ಅಂದರ್ ಬಾಹರ್~ ತಂಡ. ಅಲ್ಲಿಗೆ ಮೊದಲನೇ ಹಂತದ ಚಿತ್ರೀಕರಣ ಮುಕ್ತಾಯವಾಗುವ ಸಮಯ ಬಂದಿತ್ತು. ಮೂರು ದಿನಗಳಿಂದ ಹೊಡೆದಾಟದ ದೃಶ್ಯವೊಂದನ್ನು ಚಿತ್ರೀಕರಿಸಲಾಗುತ್ತಿತ್ತು. ಸ್ಥಳ ಬೆಂಗಳೂರಿನ ಮೈಸೂರ್ ಲ್ಯಾಂಪ್ಸ್ ಕಾರ್ಖಾನೆಯ ಆವರಣ. <br /> <br /> ಚಿತ್ರಕ್ಕೆ ಸಂಭಾಷಣೆ ಬರೆದಿರುವ ಎಂ.ಎಸ್.ರಮೇಶ್, `ಶಿವರಾಜ್ಕುಮಾರ್ ಅವರ ಪಾತ್ರಕ್ಕೆ ಮೂರು ಆಯಾಮಗಳಿವೆ. ಚಿತ್ರದಲ್ಲಿ ಮೊದಲು ಅವರನ್ನು ನೋಡಿದಾಗ ದ್ವೇಷಿಸಬೇಕು ಅನ್ನಿಸುತ್ತದೆ. ನಂತರ ಆ ಪಾತ್ರದ ಬಗ್ಗೆ ಪ್ರೀತಿ ಮೊಳೆಯುತ್ತದೆ.<br /> <br /> ಆ ನಂತರ ಗೌರವ ಹುಟ್ಟುತ್ತದೆ~ ಎಂದರು. ಶಿವಣ್ಣ ಅವರದ್ದು ಚಿತ್ರದಲ್ಲಿ ಭೂಗತ ನಾಯಕನ ಪಾತ್ರ. ಆದರೂ ಚಿತ್ರದಲ್ಲಿ ಭಾವನೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಚಿತ್ರಕ್ಕೆ ಸಂಭಾಷಣೆ ಬರೆಯುವ ಕೆಲಸ ಅವರಿಗೆ ಸಾಕಷ್ಟು ತೃಪ್ತಿ ನೀಡಿದೆ. <br /> <br /> ನಿರ್ದೇಶಕ ಫಣೀಶ್ ಅನ್ಯಮನಸ್ಕರಾಗಿ ಕುಳಿತಿದ್ದರು. ಅದು ಅವರ ಚೊಚ್ಚಲ ಚಿತ್ರ. ಚಿತ್ರದ ಆತಂಕಗಳೆಲ್ಲಾ ಅವರನ್ನು ಆವರಿಸಿದ್ದವು.<br /> <br /> ಫಣೀಶ್ ಮಾತಿಗಿಳಿದಾಗ ಶಿವರಾಜ್ಕುಮಾರ್, ಶ್ರೀನಾಥ್, ಪಾರ್ವತಿ, ಅರುಂಧತಿ ನಾಗ್ ಅಭಿನಯವನ್ನು ಮನಸಾರೆ ಹೊಗಳಿದರು. ಅನುಭವಿ ನಟರಿಂದ ಕಲಿತ ಪಾಠಗಳನ್ನು ವಿವರಿಸಿದರು. ಛಾಯಾಗ್ರಾಹಕ ಶೇಖರ್ ಚಂದ್ರು ತಮ್ಮ ಕಲ್ಪನೆಗಳನ್ನು ವಾಸ್ತವವಾಗಿಸಿದ್ದಾರೆ ಎಂದು ಮೆಚ್ಚಿಕೊಂಡರು.<br /> <br /> ಅಂದುಕೊಂಡಂತೆ ಚಿತ್ರ ಮೂಡಿದೆ ಎಂಬ ತೃಪ್ತಿ ಅವರದು. ಬೆಂಗಳೂರಿನ ಸುತ್ತಮುತ್ತ ಮೊದಲನೇ ಹಂತದ ಚಿತ್ರೀಕರಣ ನಡೆಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಗೋಕರ್ಣ, ಗೋವಾ ಹಾಗೂ ಕಾರವಾರದತ್ತ ಮುಖ ಮಾಡಿದೆ. ಮೂರನೇ ಹಂತದಲ್ಲಿ ಹಾಡುಗಳ ಚಿತ್ರೀಕರಣ ನಡೆಸಲು ನಿರ್ದೇಶಕರು ತೀರ್ಮಾನಿಸಿದ್ದಾರೆ.<br /> <br /> ನಾಯಕ ಶಿವರಾಜ್ಕುಮಾರ್ ಅರುಂಧತಿ ನಾಗ್ ಅವರ ಅಭಿನಯವನ್ನು ಕೊಂಡಾಡಿದರು. ಅಂಥ ಹಿರಿಯ ನಟಿಯ ಜತೆ ಅಭಿನಯಿಸುವುದು ಒಳ್ಳೆಯ ಅನುಭವ ಎಂದರು. `ಜೋಗಿ~ ಚಿತ್ರದ ತಾಯಿ ಪಾತ್ರಕ್ಕಿಂತ ಇಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅರುಂಧತಿ. ಅವರದು ಹಾಸ್ಯಮಯ ಅಭಿನಯ. <br /> <br /> ಫಣೀಶ್ ಅವರ ಚಡಪಡಿಕೆಗಳ ಬಗ್ಗೆಯೂ ಒಂದೆರಡು ಮಾತುಗಳನ್ನಾಡಿದರು. ಚಿಕ್ಕ ಚಿಕ್ಕ ವಿಷಯಗಳಿಗೂ ಅವರು ಹೆಣಗುವ ರೀತಿಯನ್ನು ಉಲ್ಲೇಖಿಸಿದರು. ಹೊಸ ಕಲಾ ನಿರ್ದೇಶಕರ ಹುಡುಕಾಟದಲ್ಲಿರುವ ಚಿತ್ರಕ್ಕೆ ಸದ್ಯ ಕಲಾ ನಿರ್ದೇಶಕರಾಗಿರುವುದು ಫಣೀಶ್ ಎಂದರು.<br /> <br /> ಚಿತ್ರದಲ್ಲಿ ಶಶಿಕುಮಾರ್, ಚಸ್ವಾ ನೀನಾಸಂ ಕಾಣಿಸಿಕೊಳ್ಳುತ್ತಿದ್ದಾರೆ. ಶಶಿಕುಮಾರ್ ಪಾತ್ರದ ಚಿತ್ರೀಕರಣ ಇನ್ನಷ್ಟೇ ನಡೆಯಬೇಕಿದೆ. ಮೇ ಅಂತ್ಯದ ವೇಳೆಗೆ ಚಿತ್ರೀಕರಣ ಮುಕ್ತಾಯ ವಾಗಲಿದೆ. ನಿರ್ಮಾಪಕರಲ್ಲಿ ಒಬ್ಬರಾದ ಪ್ರಸಾದ್ ತಮ್ಮ ಚೊಚ್ಚಲ ಚಿತ್ರದ ಅನುಭವಗಳನ್ನು ಹಂಚಿಕೊಂಡರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಪ್ಪತ್ತೈದು ದಿವಸಗಳ ಸತತ ಚಿತ್ರೀಕರಣದಲ್ಲಿ ನಿರತವಾಗಿತ್ತು `ಅಂದರ್ ಬಾಹರ್~ ತಂಡ. ಅಲ್ಲಿಗೆ ಮೊದಲನೇ ಹಂತದ ಚಿತ್ರೀಕರಣ ಮುಕ್ತಾಯವಾಗುವ ಸಮಯ ಬಂದಿತ್ತು. ಮೂರು ದಿನಗಳಿಂದ ಹೊಡೆದಾಟದ ದೃಶ್ಯವೊಂದನ್ನು ಚಿತ್ರೀಕರಿಸಲಾಗುತ್ತಿತ್ತು. ಸ್ಥಳ ಬೆಂಗಳೂರಿನ ಮೈಸೂರ್ ಲ್ಯಾಂಪ್ಸ್ ಕಾರ್ಖಾನೆಯ ಆವರಣ. <br /> <br /> ಚಿತ್ರಕ್ಕೆ ಸಂಭಾಷಣೆ ಬರೆದಿರುವ ಎಂ.ಎಸ್.ರಮೇಶ್, `ಶಿವರಾಜ್ಕುಮಾರ್ ಅವರ ಪಾತ್ರಕ್ಕೆ ಮೂರು ಆಯಾಮಗಳಿವೆ. ಚಿತ್ರದಲ್ಲಿ ಮೊದಲು ಅವರನ್ನು ನೋಡಿದಾಗ ದ್ವೇಷಿಸಬೇಕು ಅನ್ನಿಸುತ್ತದೆ. ನಂತರ ಆ ಪಾತ್ರದ ಬಗ್ಗೆ ಪ್ರೀತಿ ಮೊಳೆಯುತ್ತದೆ.<br /> <br /> ಆ ನಂತರ ಗೌರವ ಹುಟ್ಟುತ್ತದೆ~ ಎಂದರು. ಶಿವಣ್ಣ ಅವರದ್ದು ಚಿತ್ರದಲ್ಲಿ ಭೂಗತ ನಾಯಕನ ಪಾತ್ರ. ಆದರೂ ಚಿತ್ರದಲ್ಲಿ ಭಾವನೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಚಿತ್ರಕ್ಕೆ ಸಂಭಾಷಣೆ ಬರೆಯುವ ಕೆಲಸ ಅವರಿಗೆ ಸಾಕಷ್ಟು ತೃಪ್ತಿ ನೀಡಿದೆ. <br /> <br /> ನಿರ್ದೇಶಕ ಫಣೀಶ್ ಅನ್ಯಮನಸ್ಕರಾಗಿ ಕುಳಿತಿದ್ದರು. ಅದು ಅವರ ಚೊಚ್ಚಲ ಚಿತ್ರ. ಚಿತ್ರದ ಆತಂಕಗಳೆಲ್ಲಾ ಅವರನ್ನು ಆವರಿಸಿದ್ದವು.<br /> <br /> ಫಣೀಶ್ ಮಾತಿಗಿಳಿದಾಗ ಶಿವರಾಜ್ಕುಮಾರ್, ಶ್ರೀನಾಥ್, ಪಾರ್ವತಿ, ಅರುಂಧತಿ ನಾಗ್ ಅಭಿನಯವನ್ನು ಮನಸಾರೆ ಹೊಗಳಿದರು. ಅನುಭವಿ ನಟರಿಂದ ಕಲಿತ ಪಾಠಗಳನ್ನು ವಿವರಿಸಿದರು. ಛಾಯಾಗ್ರಾಹಕ ಶೇಖರ್ ಚಂದ್ರು ತಮ್ಮ ಕಲ್ಪನೆಗಳನ್ನು ವಾಸ್ತವವಾಗಿಸಿದ್ದಾರೆ ಎಂದು ಮೆಚ್ಚಿಕೊಂಡರು.<br /> <br /> ಅಂದುಕೊಂಡಂತೆ ಚಿತ್ರ ಮೂಡಿದೆ ಎಂಬ ತೃಪ್ತಿ ಅವರದು. ಬೆಂಗಳೂರಿನ ಸುತ್ತಮುತ್ತ ಮೊದಲನೇ ಹಂತದ ಚಿತ್ರೀಕರಣ ನಡೆಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಗೋಕರ್ಣ, ಗೋವಾ ಹಾಗೂ ಕಾರವಾರದತ್ತ ಮುಖ ಮಾಡಿದೆ. ಮೂರನೇ ಹಂತದಲ್ಲಿ ಹಾಡುಗಳ ಚಿತ್ರೀಕರಣ ನಡೆಸಲು ನಿರ್ದೇಶಕರು ತೀರ್ಮಾನಿಸಿದ್ದಾರೆ.<br /> <br /> ನಾಯಕ ಶಿವರಾಜ್ಕುಮಾರ್ ಅರುಂಧತಿ ನಾಗ್ ಅವರ ಅಭಿನಯವನ್ನು ಕೊಂಡಾಡಿದರು. ಅಂಥ ಹಿರಿಯ ನಟಿಯ ಜತೆ ಅಭಿನಯಿಸುವುದು ಒಳ್ಳೆಯ ಅನುಭವ ಎಂದರು. `ಜೋಗಿ~ ಚಿತ್ರದ ತಾಯಿ ಪಾತ್ರಕ್ಕಿಂತ ಇಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅರುಂಧತಿ. ಅವರದು ಹಾಸ್ಯಮಯ ಅಭಿನಯ. <br /> <br /> ಫಣೀಶ್ ಅವರ ಚಡಪಡಿಕೆಗಳ ಬಗ್ಗೆಯೂ ಒಂದೆರಡು ಮಾತುಗಳನ್ನಾಡಿದರು. ಚಿಕ್ಕ ಚಿಕ್ಕ ವಿಷಯಗಳಿಗೂ ಅವರು ಹೆಣಗುವ ರೀತಿಯನ್ನು ಉಲ್ಲೇಖಿಸಿದರು. ಹೊಸ ಕಲಾ ನಿರ್ದೇಶಕರ ಹುಡುಕಾಟದಲ್ಲಿರುವ ಚಿತ್ರಕ್ಕೆ ಸದ್ಯ ಕಲಾ ನಿರ್ದೇಶಕರಾಗಿರುವುದು ಫಣೀಶ್ ಎಂದರು.<br /> <br /> ಚಿತ್ರದಲ್ಲಿ ಶಶಿಕುಮಾರ್, ಚಸ್ವಾ ನೀನಾಸಂ ಕಾಣಿಸಿಕೊಳ್ಳುತ್ತಿದ್ದಾರೆ. ಶಶಿಕುಮಾರ್ ಪಾತ್ರದ ಚಿತ್ರೀಕರಣ ಇನ್ನಷ್ಟೇ ನಡೆಯಬೇಕಿದೆ. ಮೇ ಅಂತ್ಯದ ವೇಳೆಗೆ ಚಿತ್ರೀಕರಣ ಮುಕ್ತಾಯ ವಾಗಲಿದೆ. ನಿರ್ಮಾಪಕರಲ್ಲಿ ಒಬ್ಬರಾದ ಪ್ರಸಾದ್ ತಮ್ಮ ಚೊಚ್ಚಲ ಚಿತ್ರದ ಅನುಭವಗಳನ್ನು ಹಂಚಿಕೊಂಡರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>